ಜನತಾ ಚರ್ಚೆ:-ಡಾ.ಜಿ.ಪರಮೇಶ್ವರ್‍ರವರನ್ನು ಮೂಲೆ ಗುಂಪು ಮಾಡುವ ಹುನ್ನಾರ : ತುಮಕೂರು ಜಿಲ್ಲೆಯಲ್ಲಿ ಅವಸಾನದತ್ತ ಕಾಂಗ್ರೆಸ್-ನಗೆ ಪಾಟಿಲಿಗೆ ಗುರಿಯಾದ ಅಲ್ಪಸಂಖ್ಯಾರ ಸಮಾವೇಶ.

ಸಜ್ಜನ-ಸರಳ ಎಂದು ಹೆಸರು ಪಡೆದಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರನ್ನು ಕಾಂಗ್ರೆಸ್ ಪಕ್ಷವು ಮೂಲೆ ಗುಂಪು ಮಾಡಿದ ನಂತರ ಈಗ ಮಾಜಿ ಉಪ ಮುಖ್ಯಮಂತ್ರಿ, ಹೈಕಮಾಂಡ್ ಆಪ್ತರೆನಿಸಿಕೊಂಡಿರುವ ಡಾ.ಜಿ.ಪರಮೇಶ್ವರ್ ಅವರನ್ನು ಮೂಲೆ ಗುಂಪು ಮಾಡುವ ಹುನ್ನಾರ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಕಳೆದ ವಾರದಿಂದ ಜಿಲ್ಲೆಯಲ್ಲಿ ಚರ್ಚೆ ನಡೆಯುತಾ ಇದೆ.
ಕಳೆದ ಭಾನುವಾರ ತುಮಕೂರಿನಲ್ಲಿ ನಾಲ್ಕು ಸಮಾರಂಭಗಳು ನಡೆದವು ಅವುಗಳಲ್ಲಿ ಮಡಿವಾಳರ ರಾಜ್ಯ ಮಟ್ಟದ ಸಮಾವೇಶ ಮತ್ತು ಅಲ್ಪಸಂಖ್ಯಾತರ ಸಮಾವೇಶ ಬಹು ಮುಖ್ಯವಾದ ಸಮಾವೇಶಗಳಾಗಿದ್ದವು.

ಈ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಪ್ರಭಾವಿ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಡಾ.ಜಿ.ಪರಮೇಶ್ವರ್ ಅವರು ಈ ಎರಡೂ ಸಮಾರಂಭಗಳಿಂದ ದೂರ ಉಳಿಯುವಂತೆ ಮಾಡಿದ್ದು ಯಾರು, ಏಕೆ ಎಂಬ ಚರ್ಚೆಗಳು ಜನರ ನಡುವೆ ನಡೆಯುತ್ತಾ ಇದೆ.
ಈ ಎರಡು ಸಮಾರಂಭಗಳಿಗೆ ಡಾ.ಜಿ.ಪರಮೇಶ್ವರ್ ಗೈರು ಹಾಜರಿ 2023ರ ಚುನಾವಣೆಯ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ ಎನ್ನಲಾಗುತ್ತಿದ್ದು, ಪರಮೇಶ್ವರ್‍ರು ಈ ಬಾರಿ ಗೆದ್ದರೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳಿವೆ ಎಂಬ ಮಾಹಿತಿಯು ಇದ್ದು, ಅವರನ್ನು ಕಾಂಗ್ರೆಸ್‍ನಿಂದ ಮೂಲೆ ಗುಂಪು ಮಾಡುವುದಲ್ಲದೆ ಅವರು ಕೊರಟಗೆರೆ ಕ್ಷೇತ್ರದಲ್ಲಿ ಗೆಲ್ಲದಂತೆ ನೋಡಿಕೊಳ್ಳಬೇಕೆಂಬ ಹುನ್ನಾರವು ನಡೆಯುತಾ ಎನ್ನಲಾಗುತ್ತಿದೆ.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಮ್ಮ ಮಗ ಆರ್.ರಾಜೇಂದ್ರ ಅವರು ವಿಧಾನಪರಿಷತ್ ಸದಸ್ಯರಾಗುವ ತನಕ ಪರಮೇಶ್ವರ್ ಅವರ ಸುತ್ತಾ ಸುತ್ತಿ ಈಗ ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವುದರ ಮರ್ಮವೇನು? ಎಂಬ ಚರ್ಚೆಯು ಜನರಲ್ಲಿ ನಡೆಯುತ್ತಾ ಇದೆ.
ಇದಲ್ಲದೆ ಕಳೆದ ಭಾನುವಾರ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಎರಡು ಸಾವಿರದಷ್ಟು ಜನ ಸೇರಿಸಲು ವಿಫಲವಾಗಿದ್ದರ ಹಿನ್ನಲೆಯನ್ನು ಅವಲೋಕಿಸಿದರೆ, ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಾ ಇದೆ ಎನ್ನಲಾಗುತ್ತಿದ್ದು, ಬೇರೊಂದು ಪಕ್ಷದಿಂದ ಬಂದ ಅತೀಕ್ ಅಹಮದ್ ಅವರನ್ನು ಬಿಂಬಿಸಲು ಹೋಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷವು ನಗೆ ಪಾಟಲಿಗೆ ಗುರಿಯಾದಂತಾಗಿದೆ.
ಮುಸ್ಲಿಂ ಅಲ್ಪ ಸಂಖ್ಯಾತರ ರಾಜ್ಯ ಸಂಘಟನೆಯೆ ಇಲ್ಲದಂತಾಗಿದ್ದು, ಜಮೀರ್ ಅಹ್ಮದ್ ಅವರನ್ನು ಡಿ.ಕೆ.ಶಿವಕುಮಾರ್ ನಡೆಸಿಕೊಳ್ಳುತ್ತಿರುವ ರೀತಿ, ಸಿದ್ದರಾಮಯ್ಯ ಸಿ.ಎಂ.ಇಬ್ರಾಹಿಂರವರನ್ನು ಜೆ.ಡಿ.ಎಸ್.ಗೆ ಹೋಗಲು ಬಿಟ್ಟಿದ್ದು, ತನ್ವೀರ್ ಸೇಠ್‍ರ ನಿರ್ಲಿಪ್ತತೆ, ಯು.ಟಿ.ಖಾದರ್ ಕರಾವಳಿಗಷ್ಟೇ ಸೀಮಿತಾಗಿರುವುದು, ಇವುಗಳನ್ನೆಲ್ಲಾ ನೋಡಿದರೆ ಮುಸ್ಲಿಂ ನಾಯಕರನ್ನು ಒಗ್ಗೂಡಿಸಲು ಕಾಂಗ್ರೆಸ್ ವಿಫಲವಾಗಿದೆ ಎನ್ನಲಾಗುತ್ತಿದೆ.ಜಿಲ್ಲೆಯಲ್ಲಿ ಎರಡು ಲಕ್ಷದಷ್ಟು ಮುಸ್ಲಿಂ ಜನಾಂಗವಿದ್ದರೂ ಸಮಾವೇಶಕ್ಕೆ ಎರಡು ಸಾವಿರದಷ್ಟಾದರೂ ಜನರು ಬಾರದಿರುವುದು ಹಾಗೂ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಿ ತೀರ್ವ ಚರ್ಚೆಗೆ ಒಳಪಟ್ಟಿದ್ದು, ಪರಮೇಶ್ವರ್ ಕಾಂಗ್ರೆಸ್ ಬಿಡುತಾರ….! ಎಂಬ ಚರ್ಚೆಯು ನಡೆಯುತ್ತಿರುವುದು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಬಾವಿಯನ್ನು ತಾನೇ ತೋಡಿಕೊಳ್ಳುತ್ತಾ ಇದೆ ಎನ್ನಲಾಗುತ್ತಿದೆ.
ಇದೆ ರೀತಿಯಾದರೆ 2013ರಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತೆ ಸೋತರು ಸೋಲಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *