ತುಮಕೂರು : ವಿದ್ಯಾರ್ಥಿಗಳು ಮತ್ತು ಯುವ ಸಂಶೋಧನೆ ವಿದ್ವಾಂಸರಿಗೆ ತುಕ್ಕು ಇಡೀ ವಿಕೆಯ ಮೂಲಭೂತ ತತ್ವಗಳು ಮತ್ತು ಪ್ರಯೋಗಿಕ ಅಂಶಗಳು ಹಾಗೂ ಅದರ ಪರಿಣಾಮ ಮತ್ತು ರಕ್ಷಣಾ ಕ್ರಮಗಳೊಂದಿಗೆ ವಿದ್ವಾಂಸರೊಂದಿಗೆ ಚರ್ಚೆ ನಡೆಸಲು 9ನೇ ಅಂತರಾಷ್ಟ್ರೀಯ ತುಕ್ಕು ತಡೆಗಟ್ಟುವಿಕೆಯ ವಿಚಾರ ಸಂಕೀರ್ಣವನ್ನು ಜಿ.ಪಿ.ನೇಕ್ಸ್ ಸ್ ಆಡಿಟೋರಿಯಂ ಸರ್ ಎಂ ವಿ ಬ್ಲಾಕ್ ಇಲ್ಲಿ ಫೆಬ್ರವರಿ 21ರ ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ಎಸ್ ಎಸ್ ಐ ಟಿ ಪ್ರಾಂಶುಪಾಲರಾದ ಡಾ.ಮಹಾಂತೇಶ್ ಎಂ ನಡಕಟ್ಟಿ ಅವರು ತಿಳಿಸಿದ್ದಾರೆ.
ಈ ವಿಚಾರ ಸಂಕೀರ್ಣಕ್ಕೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಸಾಹೇ ವಿವಿ ಕುಲಾಧಿಪತಿಗಳು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಎಎಂಪಿ ಡೆಲಿಗೇಟ್ . ಎನ್ಮನೋಹರ್ ರಾವ್, ಸಾಹೇ ವಿವಿ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಆಶೋಕ್ಮೇಹ್ತಾ, ನಿವೃತ್ತ ಪ್ರಾಂಶುಪಾಲರಾದ ರವಿ ಪ್ರಕಾಶ್ ಸೇರಿದಂತೆ ತುಕ್ಕು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಶೈಕ್ಷಣಿಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಕೈಗಾರಿಕಾ ಪ್ರಯೋಗಾಲಯಗಳಿಂದ ಪಿಎಚ್ಡಿ ಹಾಗೂ ಸ್ನಾತಕೋತ್ತರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಸಂಘಟಕರು ಪಾಲುದಾರರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.