ಸಮುದಾಯ ಬಾನುಲಿಗಳು ಜನಸಮುದಾಯದ ಹಿತವನ್ನು ಕಾಯಬೇಕು- ಪ್ರೊ. ಬಿ. ಕೆ. ರವಿ.

ತುಮಕೂರು: ನಗರದ ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್, ತುಮಕೂರು ಮತ್ತು ಸಮುದಾಯ ರೇಡಿಯೋ ಸಂಘ-ಕರ್ನಾಟಕ ಜಂಟಿಯಾಗಿ ಇದೇ ಜುಲೈ 10 ಮತ್ತು 11ರಂದು 2 ದಿನಗಳ ‘ರೇಡಿಯೋ ಆಲಿಸುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಕುರಿತು ಕಾರ್ಯಾಗಾರವನ್ನು ಎಸ್‌ಎಸ್‌ಐಟಿ ಕ್ಯಾಂಪಸ್‌ನ ಪಿಜಿ ಸೆಮಿನಾರ್‌ನಲ್ಲಿ ಆಯೋಜಿಸಿತ್ತು.

ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಕೆ. ರವಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಸಮುದಾಯ ಬಾನುಲಿಯು ನಮಗೆ ಹೆಚ್ಚು ಸುಲಭವಾಗಿ ತಲುಪುವ ಮತ್ತು ಅತ್ಯಂತ ಶಕ್ತಿಶಾಲಿಯಾದ ಮಾಧ್ಯಮವಾಗಿದ್ದು, ಸಮುದಾಯ ಬಾನುಲಿಗಳು ಜನಸಮುದಾಯದ ಹಿತವನ್ನು ಕಾಯುವ ಮತ್ತು ಸ್ಥಳೀಯ ಸಂಸ್ಕೃತಿ, ಭಾಷೆ ಮತ್ತು ಇತಿಹಾಸವನ್ನು ಬಿಂಬಿಸುವ ಮುಖ್ಯ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಇತ್ತೀಚಿನ ತಂತ್ರಜ್ಞಾನದ ವೈಭವೀಕರಣ ಮತ್ತು ಮಾಹಿತಿಯ ವಿಪರೀತ ಲಭ್ಯತೆಯ ನಡುವೆ ಸಾಮಾಜಿಕ ಹೊಣೆಗಾರಿಕೆಯುಳ್ಳ ಮಾಧ್ಯಮಗಳ ಅವಶ್ಯಕತೆ ಹೆಚ್ಚಾಗಿದೆ. ಬಾನುಲಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಜನಸಮುದಾಯ ಪಾಲ್ಗೊಳ್ಳುವಂತೆ ಮಾಡಲು ಸರ್ಕಾರಗಳು ಸಮುದಾಯ ಬಾನುಲಿ ಕೇಂದ್ರಗಳನ್ನು ಬಲಪಡಿಸಬೇಕು. ಕೇವಲ ವಾಣಿಜ್ಯೀಕರಣದ ಭರಾಟೆಗೆ ಸಿಲುಕದೆ, ದೇಶ ಮತ್ತು ಸಮುದಾಯದ ಪ್ರಗತಿಗೆ ಪೂರಕವಾದ ಅಭಿವೃದ್ಧಿ ಆಧಾರಿತ ಸಂದೇಶಗಳನ್ನು ಬಾನುಲಿ ಮೂಲಕ ಜನರಿಗೆ ರವಾನಿಸಬೇಕು. ಇದು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಸಮುದಾಯಗಳ ಅಗತ್ಯಕ್ಕೆ ಬೇಕಿರುವ ಕೃಷಿ, ಶಿಕ್ಷಣ, ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಿಗೆ ಸಂಬAಧಿಸಿದ ನಿಖರ ಹಾಗೂ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾಮಾನ್ಯ ಜನರಿಗೆ ತಲುಪಿಸಲು ಸಮುದಾಯ ಬಾನುಲಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ರಾಜ್ಯದ ವಿವಿಧ ಸಮುದಾಯ ಬಾನುಲಿ ಕೇಂದ್ರಗಳಿAದ ಪ್ರತಿನಿಧಿಸಿದ ಸದ್ಯಸರಿಗೆ ಸಲಹೆ ನೀಡಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಆಕಾಶವಾಣಿ ನಿವೃತ್ತ ಸಹಾಯಕ ನಿರ್ದೇಶಕರು ಹಾಗೂ ಲೇಖಕರಾದ ಕಾನ್ಸೆಪ್ಟಾ ಫರ್ನಾಂಡಿಸ್ ಅವರು ಮಾತನಾಡಿ, ಜಾಗತೀಕರಣ ಮಟ್ಟದಲ್ಲಿ ಹವಾಮಾನ ವೈಪರೀತ್ಯ ಬಹಳ ವ್ಯತ್ಯಾಸವಿದೆ, ಅದರಲ್ಲಿಯೂ ಹಿಮ ಬಿಳುವ ಪ್ರದೇಶದಲ್ಲಿ ಹಿಮದ ವಾತಾವರಣ, ರಸ್ತೆ ಸಂಚಾರ ದಟ್ಟಣೆ, ಸೇರಿದಂತೆ ಅಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮುದಾಯ ಬಾನುಲಿಗಳಲ್ಲಿಯೇ ಪ್ರಸಾರ ಮಾಡಲಾಗುತ್ತದೆ. ಇದರಿಂದ ಸ್ಥಳೀಯವಾಗಿ ನಡೆಯುವ ಸಮಸ್ಯೆಗಳು ಅಥವಾ ಮಾಹಿತಿ ಹಂಚಿಕೆ ಎಲ್ಲವೂ ಸರಳವಾಗಿ ಬಾನುಲಿಯಲ್ಲಿ ಕೇಳಬಹುದು ಎಂದು ಅವರು ತಿಳಿಸಿದರು. ತಾವು ಸೇವೆ ಸಲ್ಲಿಸಿದ್ದ ರೇಡಿಯೋದ ಅನುಭವವನ್ನು ಸಂಪೂರ್ಣವಾಗಿ ವಿವರಿಸಿದರು.

ಬೆಂಗಳೂರು ವರ್ಪಾಸ್ ಮೀಡಿಯಾ ಟೆಕ್ನಾಲಜೀಸ್ ಪ್ರೆöÊವೇಟ್ ಲಿಮಿಟೆಡ್ ನಿರ್ದೇಶಕರಾದ ಆರ್. ನರಸಿಂಹಸ್ವಾಮಿ ಮಾತನಾಡಿ, ಇತ್ತೀಚಿನ ಸಮುದಾಯ ಬಾನುಲಿಗಳ ಸರ್ಕಾರ ನೀತಿಗಳ ಆಧುನೀಕರಣಗಳು, ಬಾನುಲಿಯ ತಾಂತ್ರಿಕ ಬಳಕೆ, ಕ್ಲೌಡ್ sಸ್ಟೋರೇಜ್‌ನಲ್ಲಿ ಕಡತಗಳು, ಆಡಿಯೋ ಸಂಗ್ರಹಣೆ ಮತ್ತು ಸಮುದಾಯ ಬಾನುಲಿಗಳ ತಾಂತ್ರಿಕ ಅಂಶಗಳು ಕುರಿತು ವಿವರಿಸಿದರು. ಗುರು ರೇಣುಕಾ ಪ್ರೊಡಕ್ಷನ್ಸ್ ನಟ ಮತ್ತು ನಿರ್ಮಾಪಕ ನವೀನ್ ಎನ್ ಜಿ ಸಂಪನ್ಮೂಲ ವ್ಯಕ್ತಿಯಾಗಿ ತಾಂತ್ರಿಕ ಸಂಕಲನ ಬಗ್ಗೆ ವಿವರಿಸಿದರು.

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷ ಕೆ ಎಚ್, ಅಖಂ- ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಖಂ ಕರ್ನಾಟಕ ಅಧ್ಯಾಯ ಅಧ್ಯಕ್ಷರಾದ ಡಾ. ರಶ್ಮಿ ಅಮ್ಮೆಂಬಳ, ಕಾರ್ಯದರ್ಶಿ ಭರತ್ .ಬಿ. ಬಡಿಗೇರ್, ರೇಡಿಯೋ ಸಿದ್ಧಾರ್ಥ 90.8 ಅಖS ನಿರ್ದೇಶಕರಾದ ಡಾ. ಬಿ.ಟಿ.ಮುದ್ದೇಶ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಬೋಧಕ ಸಿಬ್ಬಂದಿ ಡಾ.ಜ್ಯೋತಿ ಸಿ, ಶ್ವೇತ ಎಂ.ಪಿ, ಬೋಧಕೇತರ ಸಿಬ್ಬಂದಿ ಮಂಜುಳಾ ಟಿ ವಿ, ಶಿಲ್ಪ ಜಿ, ಹಾಗೂ ರೇಡಿಯೋ ಸಿದ್ಧಾರ್ಥ ಸಿಬ್ಬಂದಿ ರವಿಕುಮಾರ್ ಸಿ ಎಚ್, ಹರೀಶ್ ಎನ್, ಗೌತಮ್ ಎ ವಿ ಮತ್ತು ರಾಜ್ಯದ ವಿವಿಧ ಸಮುದಾಯ ಬಾನುಲಿಗಳ ಪ್ರತಿನಿಧಿನಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಂಜನಾ ವಿ ಪ್ರಾರ್ಥಿಸಿದರು, ಉಪನ್ಯಾಸಕರಾದ ಶ್ವೇತ ಎಂ ಪಿ. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *