ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆ ಯಲ್ಲಿ ವಿಫಲ- ಶಾಸಕ ಸಿ.ಬಿ.ಸುರೇಶಬಾಬು

ಚಿಕ್ಕನಾಯಕನಹಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆ ಯಲ್ಲಿ ವಿಫಲವಾಗಿದೆ ಎಂದು ಜೆಡಿಎಲ್ ಪಿ ನಾಯಕರು ಸುರೇಶ್ ಬಾಬು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡಸಿದರು.

ಅವರಿಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಜೈಗೊಂಡಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದ ಕಾರಣ ಗ್ರಾಮ ಪಂಚಾಯತಿ, ತಾ.ಪಂ., ಜಿ.ಪಂ ಚುನಾವಣೆ ನಡೆಸದೆ ಇರುವುದರಿಂದ  ಗ್ರಾಮಾಂತರ ಪ್ರದೇಶದಲ್ಲಿ ಅಧಿಕಾರಿಗಳು, ನೌಕರರು ಮಾಡಿದ ವರದಿಯೇ ಬರದ ಲೆಕ್ಜ ಕೊಡುತ್ತಿದ್ದಾರೆ.

ಇದರಿಂದ ಜನ- ಜಾನುವಾರುಗಳಿಗೆ ನೀರು, ಮೇವು ಅವರುಗಳು ಹೇಳಿದಂತೆ ಸಚಿವರುಗಳು ಗಿಣಿಪಾಠ ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು ಕೂಡಲೇ ಸ್ಥಳೀಯ ಸಂಸ್ಥೆಯ ಚುನಾವಣೆ ಗಳನ್ನು ನಡೆಸುವಂತೆ ಒತ್ತಾಯಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬರದ ನಿರ್ವಹಣೆ ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ,ಸ್ಕೇರ್ ಸಿಟಿ ಬಗ್ಗೆ ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ,ಸದ್ಯ ಸರ್ಕಾರ ಒಂದು ಕ್ಷೇತ್ರಕ್ಕೆ ಒಂದು ಕೋಟಿ ಅಂತಾ ಬಿಡುಗಡೆ ಮಾಡಿದೆ,ಈ ಹಣ ಮೂಲಭೂತ ಸೌಕರ್ಯ ನಿವಾರಣೆ ಮಾಡಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಳಸಿಕೊಳ್ಳಲಾಗುವುದು..

15 ನೇ ಹಣಕಾಸು ಬಾರದ ಹಿನ್ನೆಲೆಯಲ್ಲಿ ಗ್ರಾಪಂ ನಲ್ಲಿ ಕೆಲಸ ಮಾಡಲು ಆಗ್ತಿಲ್ಲ,ಇದೆಲ್ಲವೂ ಕೂಡಲೇ ನಿವಾರಣೆ ಆಗಬೇಕು ಅಂತಾ ಒತ್ತಾಯಿಸಿದರು..

ಅಲ್ಲದೇ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತಿಲ್ಲ,ಕೋರ್ಟ್ ನಲ್ಲಿರುವ ಕಾರಣ ನಡೆಸುತ್ತಿಲ್ಲ ಅಂದಿದ್ದಾರೆ, ಕೋರ್ಟ್ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ,ನಾವು ಚುನಾವಣೆ ನಡೆಸಿ  ಅಂತಾ ಕೇಳಿದ್ದೇವೆ,ಆದರೆ ಸರ್ಕಾರ ನಡೆಸದೇ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ..ಬಿಬಿಎಮ್ ಪಿ, ಜಿಪಂ ,ತಾಪಂ ಗ್ರಾಪಂ ಚುನಾವಣೆ ನಡೆಸಿಲ್ಲ ಹೀಗಾಗಿ ಹಣಕಾಸು ಸಂಸ್ಥೆಗಳಿಗೆ  ಹಣ ಬರುವುದಕ್ಕೆ ಸಮಸ್ಯೆ ಆಗ್ತಿದೆ ಇದಕ್ಕೆ ನೇರಹೊಣೆ ಸರ್ಕಾರ ಎಂದು ಆರೋಪಿಸಿದರು..

 ರಾಜ್ಯದಲ್ಲಿ ಬರವಿದ್ದು ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ,ಕೇವಲ ಸಚಿವ ಸಂಪುಟ ರಚನೆ ಅವರಿಗೆ ಖಾತೆ ಹಂಚಿಕೆ ಮಾಡುವುದರಲ್ಲಿ ಬ್ಯುಸಿಯಾಗಿದೆ..ರಾಜ್ಯದಲ್ಲಿ ಸುಮಾರು 140-150 ಕ್ಷೇತ್ರದಲ್ಲಿ ಬರಪೀಡಿತ ಪ್ರದೇಶ ಇದೆ,ಈ ಬರಪೀಡಿತ ಕ್ಷೇತ್ರದಲ್ಲಿ ಮೇವು ಕುಡಿಯುವ ನೀರಿನ ವ್ಯವಸ್ಥೆ ಸರ್ಕಾರ ಕಲ್ಪಿಸಬೇಕು ಆದರೆ ಈ ವಿಚಾರದಲ್ಲಿ ಸರ್ಕಾರದ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಇನ್ನೂ ಕಾಂಗ್ರೆಸ್ ಸರ್ಕಾರ ಸಿಕ್ಕಿರುವ ಅವಕಾಶ ಬಳಸಿಕೊಂಡಿಲ್ಲ,ಬರ ನಿರ್ವಹಣೆ ಮಾಡೊದು ಬಿಟ್ಟು ಖಾತೆಯಲ್ಲಿ ಬೀದಿ ರಂಪಾಟ ಮಾಡಿಕೊಂಡಿದೆ..ಸಚಿವ ಸಂಪುಟ ರಚನೆಯಲ್ಲಿ ಕೂಡ ಅದೇ ಆಗಿತ್ತು,ಈಗಲೂ ಅದೇ ರೀತಿ ಮುಂದುವರೆದಿದೆ.ಇನ್ನೂ ಖಾತೆ ಹಂಚಿಕೆಯಲ್ಲಿ ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು  ಟೀಕಿಸಿದರು.

ಸ್ವತಂತ್ರ ಬಳಿಕ ಅತಿ ಹೆಚ್ಚು ಸರ್ಕಾರ ನಡೆಸಿರುವ ಅನುಭವ ಆ ಪಕ್ಷಕ್ಕೆ ಇದೆ ,ಎಷ್ಟು ವರ್ಷ ಅನುಭವ ಇದೆ,ಯಾರಿಗೆ ಏನು ಕೊಡಬೇಕು ಅಂತಾ ಗೊತ್ತಿಲ್ಲವಾ ಎಂದು ಪ್ರಶ್ನಿಸಿದ ಅವರು ಖಾತೆಗಳನ್ನು ವ್ಯಾಪಾರಕ್ಕೆ ಇಟ್ಟಿರುವ ಅನುಮಾನ ಇದೆ ಹೀಗಾಗಿ ತಡವಾಗುತ್ತಿರುಬಹುದು ಎಂದು ಹೇಳಿದರು.

ಹೇಮಾವತಿ ನೀರು ಹರಿಸುವ ವಿಚಾರದ ಬಗ್ಗೆ  ಪ್ರತಿಕ್ರಿಯೆ ನೀಡಿದ ಅವರು ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡರವರ ಬಳಿ ಮಾತಾನಾಡಿದ್ದೇನೆ,ಈಗಾಗಲೇ ಐಸಿಸಿ ಸಭೆ ಮಾಡಬೇಕಿತ್ತು ಆದರೆ ಸಭೆ ನಡೆಸಿಲ್ಲ,ನಮ್ಮ ಭಾಗಕ್ಕೆ ನೀರು ಹರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೇಳಿದರು.

ಇಂದು ಬರ ಪ್ರವಾಸಕ್ಕೆ ಬರುತ್ತಿರುವ ಕಂದಾಯ ಸಚಿವರು  ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಡಾ ಪರಮೇಶ್ವರ್ ಅವರಿಗೆ ಹೇಮಾವತಿ ಹರಿಸುವಂತೆ ಒತ್ತಾಯ ಮಾಡುತ್ತೇನೆ ಎಂದರು.

  ಆಡಳಿತ ಕುಸಿತದ  ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ, ಆಡಳಿತ ಸರಿಯಾಗಿ ಕೊಡಿ ಇಲ್ಲಾಂದ್ರೆ ನಿರ್ಗಮಿಸಿ, ಕಳೆದ ಫೆಬ್ರವರಿ ತಿಂಗಳಿನಿಂದ ಪರಿಷ್ಕರಣೆ ಹೆಸರಿನಲ್ಲಿ ಗೃಹ ಲಕ್ಷ್ಮೀ, ವೃದ್ಧಾಪ್ಯ ವೇತನ ,ವಿಧವಾ ವೇತನ ಬಂದಿಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಪರದಾಟ ನಡೆಸುವ ಪರಿಸ್ಥಿತಿ ಬಂದಿದೆ..

ಸರ್ಕಾರದಲ್ಲಿ ಹಣ ಇಲ್ಲ ಅಂದರೆ ಕೂಡಲೇ ಇಲ್ಲವೆಂದು ಘೋಷಣೆ. ಮಾಡಿ,ಇಲ್ಲಾಂದ್ರೆ ಶ್ವೇತ ಪತ್ರ ಹೊರಡಿಸಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನ ಬಳಸಿಕೊಂಡು ಬಿಟ್ಟು ಬಿಟ್ಟಿದೆ,ಮಂತ್ರಿ ಮಂಡಲ ಆದಾಗ ಅಸಮಾಧಾನ ಇರುವ ಬಗ್ಗೆ ಗೊತ್ತಾಗುತ್ತಿದೆ,ಪ್ರಮಾಣ ವಚನಕ್ಕೆ ಬಾರದೆ ಇದ್ದದ್ದು ಗೋಚರಿಸಿದೆ ಇದು ಕಾಂಗ್ರೆಸ್ ನ ಸಹಜ ಗುಣ ಎಂದು ತಿಳಿಸಿದರು..

ಬಿಡದಿ ಹೋರಾಟಕ್ಕೆ ಬಿಜೆಪಿ ಅಸಹಕಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು,

ಬಿಡದಿ ಹೋರಾಟಕ್ಕೆ ಬಿಜೆಪಿ ಸಹಕಾರ ನೀಡಿದೆ,ವಿಪಕ್ಷ ನಾಯಕರಾದ ಆರ್ ಅಶೋಕ್ ರವರು ಬಂದು ಮೊನ್ನೆ ಚಾಲನೆ ನೀಡಿದ್ದರು,ಅವರ ಸಹಕಾರ ಇದೆ.

ಬಿಡಿದಿಯಲ್ಲಿ ರೈತರು ಜಮೀನನ್ನ ನಂಬಿ ಜೀವನ ಸಾಗಿಸುತ್ತಿದ್ದಾರೆ,ಆದರೆ ಸರ್ಕಾರ ಯಾರಿಗೋಸ್ಕರ ಹೀಗೆ ಮಾಡ್ತಿದ್ದಾರೆ. ಯಾರಿಗೋ ಒಪ್ಪಂದ ಮಾಡಿಕೊಂಡು ಬಂದಿದ್ದಾರೋ ಗೊತ್ತಿಲ್ಲ ಹೀಗಾಗಿ ರೈತರನ್ನ ಒಕ್ಕಲೇಬ್ಬಿಸುವ ಕೆಲಸ ಸರ್ಕಾರ ಮಾಡ್ತಿದೆ..

ಬರಡು ಭೂಮಿ ಇರುವ ಕಡೆ ಯೋಜನೆ ಮಾಡಿಕೊಳ್ಳಲಿ ಆದರೆ ಬಿಡದಿಯಲ್ಲಿ ಬೇಡ ಹೀಗಾಗಿ ದೇವೇಗೌಡರು ಕುಮಾರಸ್ವಾಮಿ ಅವರು ಈ ಬಗ್ಗೆ ಹೇಳಿದ್ದಾರೆ ಆದರೆ ಸಿಎಂಗೆ ಇದರಲ್ಲಿ ವಿಶೇಷ ಇಂಟರ್ ರೆಸ್ಟ್ ಇದೆ ಅಂತಾ‌ ಕಾಣುತ್ತದೆ ಎಂದರು

Leave a Reply

Your email address will not be published. Required fields are marked *