ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಹೊಡೆತ ನೀಡುವ ತೆರವು ಕ್ರಮ ತಕ್ಷಣ ನಿಲ್ಲಿಸಲು ಆಗ್ರಹ

ತುಮಕೂರು ನಗರದಲ್ಲಿ ವರ್ಷಗಳಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ಬಡ ವ್ಯಾಪಾರಿಗಳನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸುತ್ತಿರುವ ಕ್ರಮವನ್ನು ತಕ್ಷಣ ನಿಲ್ಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಆಗ್ರಹಿಸಿದರು.

ಅವರು ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ತುಮಕೂರು ಮಹಾನಗರ ಪಾಲಿಕೆ ಎದುರು ನಡೆಸಿದ ಹೋರಾಟವನ್ನು ಉದ್ದೇಶಿಸಿ ಮಾತನಾಡಿದರು.ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬೀದಿ ಬದಿ ವ್ಯಾಪಾರವೇ ಪ್ರಮುಖ ಜೀವನೋಪಾಯವಾಗಿದೆ. ತರಕಾರಿ, ಹಣ್ಣು, ಆಹಾರ ಪದಾರ್ಥ, ಬಟ್ಟೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಈ ಸಣ್ಣ ವ್ಯಾಪಾರಿಗಳು ನಗರದ ಆರ್ಥಿಕ ಚಟುವಟಿಕೆಯ ಅವಿಭಾಜ್ಯ ಅಂಗವಾಗಿದ್ದಾರೆ. ನಗರದ ಅಭಿವೃದ್ಧಿ ಅಗತ್ಯ; ಆದರೆ ಬಡವರ ಬದುಕನ್ನು ಬಲಿಕೊಟ್ಟು ಅಭಿವೃದ್ಧಿ ಸಾಧಿಸುವುದು ಸಾಮಾಜಿಕ ನ್ಯಾಯವಲ್ಲ ಎಂದರು.

ಮಹದೇವ್ ಮಾತನಾಡಿ ಬೀದಿಬದಿಗಳಲ್ಲಿ ಲಿಡ್‍ಕರ್ ನೀಡಿರುವ ಚರ್ಮ ಕುಟೀರದಲ್ಲಿ ಚಪ್ಪಲಿ ರಿಪೇರಿ ಮತ್ತು ಪಾಲಿಶ್ ಮಾಡುವ ಕುಶಲಕರ್ಮಿಗಳಿಗೆ ಜನ ಸಂದಣಿ ಇರುವ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಅನ್ಯಾಯದ ತೆರವು ಕ್ರಮವನ್ನು ವಿರೋಧಿಸಿ ಸೆಪ್ಟೆಂಬರ್ 1ರಂದು ತುಮಕೂರು ಟೌನ್‍ಹಾಲ್‍ನಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಪಾಲಿಕೆ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಆಯುಕ್ತರ ಪರವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮನವಿ ಸ್ವೀಕರಿಸಿ ಮತನಾಡಿದ .ನಿಮ್ಮ ಸಮ್ಯಸೆಗಳ ಸಂಬಂದ ಸಭೆ ಯನ್ನು ಕರೆದು ಇಥ್ಯರ್ತ ಪಡಿಸಿಲಾಗುವುದು ಎಂದರು.

ಸಂಘದ ಮುಖಂಡರಾದ ಲಕ್ಷ್ಮಮ್ಮ ಮಾತನಾಡಿ ಫುಟ್‍ಪಾತ್‍ನಲ್ಲಿ ಸಂಚಾರಕ್ಕೆ ತೊಂದರೆ, ಸ್ವಚ್ಛತೆ ಅಥವಾ ನಗರ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ತೆರವುಗೊಳಿಸುವುದೇ ಏಕೈಕ ಪರಿಹಾರವಲ್ಲ. ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ, ವ್ಯವಸ್ಥಿತ ವ್ಯಾಪಾರ ವಲಯಗಳನ್ನು ನಿರ್ಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರ ಮತ್ತು ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ ಹೇಳಿದರು.

2014ರ ಕಾಯ್ದೆ ಜಾರಿಗೊಳಿಸಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಹಕ್ಕುಗಳ ರಕ್ಷಣೆಗೆ Street Vendors (Protection of Livelihood and Regulation of Street Vending) Act, 2014 ಕಾನೂನು ಚೌಕಟ್ಟನ್ನು ಒದಗಿಸಿದೆ. ಇದರ ಆಶಯದಂತೆ ಸರ್ವೇ, ಗುರುತಿನ ಚೀಟಿ, ವ್ಯಾಪಾರ ವಲಯಗಳ ಗುರುತಿಸುವಿಕೆ ಮತ್ತು ನಿಯಮಿತ ವ್ಯಾಪಾರ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಲಕ್ಷ್ಮಿಕಾಂತ್, ರಂಜಿತ ,ನಜೀಮಾ, ಆನಂದ, ರವಿ, ನಾಗಣ್ಣ, ಕೃಷ್ಣಮೂರ್ತಿ, ಚರ್ಮ ಕುಟಿರ ಮಹದೇವ, ಆನಂದ, ಕೃಷ್ಣ.ದೇವಮ್ಮ, ಸುದೀರ್,ಇಂತಿಯಾಜಪಾಷ್ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *