ಸೆ.18ರಂದು ಪಿ.ಆರ್.ತಿಪ್ಪೇಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ

ತುಮಕೂರು : ಕನ್ನಡ ಪುಸ್ತಕ ಪ್ರಾಧಿಕಾರದಿಂದ ಜನಪದ ಕಲಾತಜ್ಞ ಕಲಾ ವಸ್ತು ಸಂಗ್ರಹಾಲಯಗಳ ರೂವಾರಿ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಪಿ.ಆರ್.ತಿಪ್ಪೇಸ್ವಾಮಿ ಅವರ ಜೀವನ, ಚಿಂತನೆ, ಕಲಾ ಸಾಧನೆಯನ್ನಾಧರಿಸಿ ಸಾಹಿತಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರು ರಚಿಸಿರುವ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆಯನ್ನು ಸೆಪ್ಟೆಂಬರ್ 18ರಂದು ಬೆಳಗ್ಗೆ 11.30ಕ್ಕೆ ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಾಧಿಕಾರವು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಲೋಕಾರ್ಪಣೆ ಸಮಾರಂಭದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿಗಳು ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ನೆರವೇರಿಸಿದರೆ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಸಮಗ್ರ ಸಂಪುಟಗಳ ಲೋಕಾರ್ಪಣೆ ಮಾಡಿ ಪಿಆರ್‍ಟಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ ಘನ ಉಪಸ್ಥಿತಿ ವಹಿಸುವರು. ಮುಖ್ಯ ಅತಿಥಿಗಳಾಗಿ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಸ್‍ಆರ್‍ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಾಧಿಕಾರದ ಕಾರ್ಯಗಳ ಬಗ್ಗೆ ವಿವರಿಸುತ್ತಾ, ಅನೇಕ ವರ್ಷಗಳಿಂದ ಪುಸ್ತಕ ಪ್ರಕಟಣೆ ಹಾಗೂ ಮಾರಾಟ ಮಾಡುತ್ತಾ ಬಂದಿರುವ ಪ್ರಾಧಿಕಾರವು ಪುಸ್ತಕ ಮೇಳಗಳ ಆಯೋಜನೆ, ಯುವ ಬರಹಗಾರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ, ನನ್ನ ಮೆಚ್ಚಿನ ಪುಸ್ತಕ ಹಾಗೂ ಅಂಗಳದಲ್ಲಿ ತಿಂಗಳ ಪುಸ್ತಕ  ಕಾರ್ಯಕ್ರಮ ಸೇರಿದಂತೆ ಮತ್ತಿತರ  ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಪ್ರಮುಖವಾಗಿ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ರೂಪಿಸಿ ಜನರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ಪ್ರಯುತ್ನದಲ್ಲಿ ನಿರತವಾಗಿದೆ. ಈಗಾಗಲೇ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿಯೂ ಗ್ರಂಥಾಲಯ ಅನುಷ್ಠಾನ ಸಮಿತಿಗಳನ್ನು ರಚಿಸುವ ಮೂಲಕ ಜನರಲ್ಲಿ ಪುಸ್ತಕಾಭಿರುಚಿಯನ್ನು ಬೆಳೆಸುವ ದಿಸೆಯಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. 

ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರ ಈವರೆಗೆ 769ಕ್ಕೂ ಹೆಚ್ಚು ಮೌಲಿಕ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದು, ಸಿರಿಗನ್ನಡ ಮಾರಾಟ ಮಳಿಗೆ ಹಾಗೂ ಆನ್‍ಲೈನ್ ಮೂಲಕವೂ ಪುಸ್ತಕ ಖರೀದಿಗೆ ವ್ಯವಸ್ಥೆ ಮಾಡಿದೆ. ಈವರೆಗೂ ಮೂಡ್ನಾಕೂಡು ಚಿನ್ನಸ್ವಾಮಿ, ಮುಳ್ಳೂರು ನಾಗರಾಜು, ಸತ್ಯಕಾಮ, ಕೋ.ಚೆನ್ನಬಸಪ್ಪ, ಡಾ. ಚಂದ್ರಶೇಖರ ಕಂಬಾರ, ಅನಕೃ, ಗೌರೀಶ ಕಾಯ್ಕಿಣಿ, ಡಾ. ಸಿದ್ದಲಿಂಗಯ್ಯ, ಪ್ರೊ. ಚೆನ್ನವೀರಕಣವಿ, ಡಾ. ಚಿದಾನಂದಮೂರ್ತಿ, ಎಸ್.ಆರ್.ಹಿರೇಮಠ ಸೇರಿ ಹಲವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಮಾಡಿದ್ದು, ಈ ಸಾಲಿಗೆ ತಿಪ್ಪೇಸ್ವಾಮಿ ಅವರ ಸಂಪುಟವೂ ಸೇರ್ಪಡೆಗೊಳ್ಳುತ್ತಿದೆ. ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಸಂಪುಟ ಮಾರಾಟಕ್ಕೂ ಲಭ್ಯವಿರಲಿದೆಯೆಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಚಿತ್ರ ಕಲಾವಿದರೊಬ್ಬರ ಕಲಾ ಜೀವನ, ಚಿಂತನೆಯ ಸಮಗ್ರ ಸಂಪುಟವನ್ನು ಪುಸ್ತಕ ಪ್ರಾಧಿಕಾರ ಹೊರತರುತ್ತಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ಕಲಾವಿದರು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. 
ಕಲಾವಿದರಾದ ಕೋಟೆ ಕುಮಾರ್ ಹಾಗೂ ಕಿಶೋರ್ ಕುಮಾರ್ ಅವರು ಮಾತನಾಡಿ ತಿಪ್ಪೇಸ್ವಾಮಿ ಅವರು ಕಲಾವಿದರμÉ್ಟೀ ಅಲ್ಲ, ಕಲಾ ಸಂಶೋಧಕರು ಅಲಕ್ಷಿತ ಚಿತ್ರಕಲೆಯನ್ನು ಹೊರಗಿನ ಪ್ರಪಂಚಕ್ಕೆ ತೋರಿಸಲು ಪಡುತ್ತಿದ್ದ ಶ್ರಮವನ್ನು ನೆನೆದು ಇಂತಹ ಅಭಿಜಾತ ಕಲಾವಿದರನ್ನು ಸಮಗ್ರ ಸಂಪುಟದ ಮೂಲಕ ನೆನೆಯುತ್ತಿರುವ ಕಾರ್ಯ ಶ್ಲಾಘಿಸಿದರು. 

    ಸಾಹಿತಿ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಿ, ಹಿರಿಯೂರು ತಾಲ್ಲೂಕು ಹರ್ತಿಕೋಟೆ ಮೂಲದ ಅಭಿಜಾತ ಕಲಾತಜ್ಞ ಪಿ.ಆರ್.ತಿಪ್ಪೇಸ್ವಾಮಿ ಅವರು ಚಿತ್ರಕಲಾವಿದರಾಗಿ, ಜನಪದ  ಕಲಾ ತಜ್ಞರಾಗಿ, ವಸ್ತು ಸಂಗ್ರಹಾಲಯಗಳ ರೂವಾರಿಯಾಗಿ, ಕಲಾಲೇಖನಗಳ ಸಾಹಿತಿಯಾಗಿ, ಮಹಾನ್ ಸಂಘಟಕರಾಗಿ ರಾಜ್ಯದ ಕೀರ್ತಿ ಬೆಳಗಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಭೂಗತರಾಗಿ ವ್ಯಂಗ್ಯ ಚಿತ್ರರಚನೆ ಮಾಡಿ ಆಳರಸರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದವರು. ಇಂತಹ ವಿಶೇಷ ವ್ಯಕ್ತಿತ್ವದ ಕಲಾತಜ್ಞರ ಕುರಿತಾಗಿ ಕಲಾವಿದನ ನೆನಪುಗಳು, ಪಿಆರ್‍ಟಿ ಕೃತಿ ದರ್ಶನ, ಕಲಾವಿದರ ಜೀವನ ಚರಿತ್ರೆಗಳು ಮತ್ತಿ ಪಿಆರ್‍ಟಿ ಲೇಖನ ಮಾಲೆ, ತಿಪ್ಪೇಸ್ವಾಮಿ ಅವರ ಸಂಸ್ಮರಣ ಗ್ರಂಥ ಭಾಗ 1 ಹಾಗೂ 2 ಶೀರ್ಷಿಕೆಯಡಿ ಸಮಗ್ರ ಸಾಹಿತ್ಯ ರಚಿಸಿದ್ದು, ಪುಸ್ತಕ ಪ್ರಾಧಿಕಾರ ಈ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಿ ಅಭಿಜಾತ ಕಲಾವಿದನಿಗೆ ಗೌರವ ನೀಡುತ್ತಿದೆಯೆಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *