ತುಮಕೂರು ; ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ತನ್ನ ಮತ ಗಳಿಕೆಯ ರಾಜಕಾರಣಕ್ಕಾಗಿ ಸಂವಿಧಾನ ವಿರೋಧಿ ಹಾಗೂ ವಿಭಜಕ ರಾಜಕಾರಣ ಮುಂದುವರಿಸುತ್ತಾ ವಕ್ಪ್ ತಿದ್ದುಪಡಿ ಕಾಯಿದೆ-2025 ಪ್ರಜಾಪಭುತ್ವ ವಿರೋಧಿಯಾಗಿ ಜಾರಿಗೊಳಿಸಿದೆ. ಇದು ಸಮಾನತೆ ಹಾಗೂ ಸಂವಿಧಾನದ ಆಶಯ ವಿರೋಧಿ ನಡೆ, ಹಾಗಾಗಿ ನಾಗರೀಕ ಸಮಾಜ ಇದನ್ನು ತಿರಸ್ಕರಿಸಬೇಕೆಂದು ಪಿಯುಸಿಎಲ್ನ ಜಿಲ್ಲಾಧ್ಯಕ್ಷರು ಪ್ರಗತಿ ಪರ ಚಿಂತಕರಾದ ಪೆÇ್ರ.ಕೆ.ದೊರೈರಾಜ್ ಅವರು ಅಭಿಪ್ರಾಯಪಟ್ಟರು
ಏಪ್ರಿಲ್ 21ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ವಕ್ಪ್ ಕಾಯಿದೆ ತಿದ್ದುಪಡಿ ಕುರಿತ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರಚೋದನೆ ನೀಡುವ, ತಮ್ಮ ರಾಜಕ್ರೀಯ ಲಾಭಕ್ಕೆ ಜನರ ವಿಭಜಿಸುವ ನಡೆಗಳಿಗೆ ಪ್ರಜಾಪ್ರಭುತ್ವ ನೆಲೆಯ ಶಾಂತಿಯುತ ಪ್ರತಿರೋಧ ಹಾಗೂ ಜನರಿಗೆ ಇದರ ನಿಜ ಉದ್ದೇಶಗಳನ್ನು ಅರ್ಥೈಸುವುದೇ ಸರಿಯಾದ ಮಾರ್ಗ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಚಿಂತಕ ಯತಿರಾಜು ಅವರು ಮಾತನಾಡಿ ಕೇಂದ್ರದಲ್ಲಿ ಅಧಿಕಾರಸ್ಥ ಪಕ್ಷ ಒಂದು ಪಕ್ಷ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸುತ್ತಿದೆ. ಆದರೆ ಹೀಗೆ ಆಪಾದಿಸುತ್ತಿರುವ ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ದ್ವೇಷ ರಾಜಕಾರಣವನ್ನ ಮಾಡುತ್ತಿದ್ದಾರೆ, ಅದು ನಾಗರೀಕ ಸಮಾಜ ಒಪ್ಪುವಂತಹದಲ್ಲ , ಓಲೈಕೆ ಸರಿಯಲ್ಲ, ಅದರೆ ದ್ವೇಷ ಅದಕ್ಕಿಂತ ಕೆಟ್ಟದ್ದು ಎಂದು ಅಭಿಪ್ರಾಯಪಟ್ಟರು.
ಯುವ ಮುಂದಾಳು ನಿಕೀತ್ ರಾಜ್ ಮೌರ್ಯ ಮಾತನಾಡಿ ಜನತೆಯ ಐಕ್ಯತೆ ಹೊಡೆಯುವ ಪ್ರಯತ್ನ ನಿರಂತರವಾಗಿದ್ದು ಮುಸ್ಲಿಂ ಸಮುದಾಯ ವಿವೇಕದ ಹಾಗೂ ಶಾಂತಿಯುತ ಪ್ರತಿರೋಧದ ನಡೆ ಅಗತ್ಯವೆಂದರು .
ಎಐಕೆಎಸ್ ನ ಕಂಬೇಗೌಡ ಅವರು ಮಾತನಾಡಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಒಂದೇ ಜನಾಂಗವನ್ನು ಗುರಿಯಾಗಿಟ್ಟುಕೊಂಡಂತೆ ದ್ವೇಷಕಾರುವ ನಡೆಗಳನ್ನು ನಾಗರಿಕ ಸಮಾಜ ಒಪ್ಪತಕ್ಕದ್ದಲ್ಲ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ವಕ್ಫ್ ಇರುವ ಧೀರ್ಫಇತಿಹಾಸ ವಿವರಿಸಿದರು. ಜನ ನಿರುದ್ಯೋಗ, ಬೆಲೆ ಏರಿಕೆ, ಹಸಿವಿನ ಸಾವುಗಳು, ದುಬಾರಿ ಶಿಕ್ಷಣ- ಆರೋಗ್ಯ ಸೇವೆಗಳು ಹೀಗೆ ಸಂಕಷ್ಟಗಳಿಗೆ ಕಾರಣವಾದ ನೀತಿಗಳನ್ನ ಬಗ್ಗೆ ಜನ ಸಿಟ್ಟು -ಆಕ್ರೋಶಗಳ ಮೂಡದಂತೆ ಜನರನ್ನು ವಿಭಜಕ ನೀತಿಗಳ ಮೂಲಕ ಕೇಂದ್ರ ಸರ್ಕಾರ ಗಮನವನ್ನು ಈ ಕಿತ್ತಾಟಕ್ಕೆ ಹಚ್ಚಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶ್ವಂತ್ ಅವರು ಮಾತನಾಡಿ ಈ ತಿದ್ದುಪಡಿಯು ಮುಂದಿನ ದಿನಗಳಲ್ಲಿ ಎಲ್ಲಾ ಧಾರ್ಮಿಕ – ಪಾರಂಪರಿಕ ಅಸ್ತಿಗಳ ನಿರ್ವಹಣೆಯಲ್ಲಿ ಅ ಧರ್ಮದಲ್ಲಿ ನಂಬಿಕೆ ಇಲ್ಲದೆ ಇರುವವರ ಮಧ್ಯಪ್ರವೇಶಕ್ಕೆ ಅವಕಾಶ ಕಲ್ಪಿಸುವ ಅವಕಾಶ-ಅಪಾಯವನ್ನು ಹೊಂದಿದೆ ಎಂದು ಎಚ್ಚರಿಸಿದರು.
ಸಮಾಜಸೇವಕ ತಾಜುದ್ದೀನ್ ಶರೀಪ್ ಅವರು ಮಾತನಾಡಿ ಪಾರ್ಲಿಮೆಂಟ್ ನಲ್ಲಿ ಈ ಕಾಯಿದೆಯನ್ನು ವಿರೋಧಿಸಿದವರು ಕೇವಲ ಮುಸ್ಲಿಂ ಸದಸ್ಯರು ಮಾತ್ರವಲ್ಲ ಅದರಲ್ಲಿ ಬಹುಪಾಲು ಸದಸ್ಯರು ಅನ್ಯ ಧರ್ಮಿಯರು ಇದ್ದರು ಇದೆ ನಿಜವಾದ ಭಾರತೀಯತೆ ಎಂದರು.
ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿಯ ಮಹಿಳಾ ಸಂಚಾಲಕಿ ಶ್ರೀಮತಿ ಅನುಪಮಾ, , ಮಹಾ ನಗರ ಪಾಲಿಕೆ ಮಾಜಿ ಸದಸ್ಯ ನಯಾಜ್ ಅಹಮದ್ , ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ, ಮಾನವ ಹಕ್ಕುಗಳ ಹೋರಾಟಗಾರ ಮುಕ್ರಮ್ ಸೈಯಿದ್. ಮೌಲಾನ ಉಮರ್ ಅಸಾರಿ ಇದ್ದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಬಿ ಉಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಭೆಯಲ್ಲಿ ಎಐಟಿಯುಸಿ ಗೀರಿಶ್, ಕಾರ್ಮಿಕ ಮುಂದಾಳು ಎನ್. ಕೆ. ಸುಬ್ರಮಣ್ಯ, ಪಂಡಿತ್ ಜವಾರ್ , ದಿಪೀಕಾ ಮರಳೂರು ಮತ್ತಿತರರು ಹಾಜರಿದ್ದರು.