ಮಾಚ್-12 ರಂದು ಒಳ ಮೀಸಲಾತಿಗಾಗಿ ಬೆಂಗಳೂರು ಚಲೋ

ತುಮಕೂರು: ಪ್ರಪಂಚದಲ್ಲಿ ಯಾರು ಮಾಡದಷ್ಟು ಹೋರಾಟವನ್ನು ಮಾದಿಗ ಸಮುದಾಯ ಮಾಡುತ್ತಿದ್ದರು ರಾಜಕೀಯ ಪಕ್ಷಗಳು ವಂಚಿಸುತ್ತಿವೆ ಎಂದು ಡಾ.ವೈ.ಕೆ.ಬಾಲಕೃಷ್ಣಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಸದಾಶಿವ ಆಯೋಗದ ವರದಿ ಜಾರಿಯಾಗಲಿಲ್ಲ, ವಿಧಾನಸಭೆ ಚುನಾವಣೆ ನಂತರ ಒಳ ಮೀಸಲಾತಿ ಜಾರಿಗೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿ ಈಗ ಯೂಟರ್ನ್ ಹೊಡೆದಿದೆ ಎಂದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಅನ್ವಯ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡಿ, ಕಾಯ್ದೆಗೆ ರಾಜ್ಯಪಾಲರು ಅಂಕಿತವಾದ ನಂತರ ನ್ಯಾಯಾಲಯದ ನೆಪ ಹೇಳಿ ಒಳ ಮೀಸಲಾತಿ ನೀಡದೇ ವಂಚಿಸುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರದ ಸರ್ಕಾರ ನೇಮಕಾತಿಗೆ ಮುಂದಾಗಿದೆ ಎಂದರು.
ನಿರುದ್ಯೋಗಿ ಪದವೀಧರರ ಒಂದು ದಿನದ ಹೋರಾಟಕ್ಕೆ ಮಣಿದಿರುವ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾವಂತರಿಗೆ ವಿಷವಿಕ್ಕಿದೆ. ಮಾ.12ರಂದು ಬೆಂಗಳೂರು ಚಲೋದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿರುವ ಎಲ್ಲ ಸಂಘಟನೆಗಳು, ಮುಖಂಡರು ಸ್ವಯಂಪ್ರೇರಿರಾಗಿ ಭಾಗವಹಿಸಲಿದ್ದಾರೆ ಎಂದರು.

ಚಿಂತಕ ಪೆÇ್ರ.ದೊರೈರಾಜು ಮಾತನಾಡಿ ಕಾಂಗ್ರೆಸ್ ಪಕ್ಷ ಒಳ ಮೀಸಲಾತಿ ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿ ಈಗ ನಂಬಿಸಿ ಕತ್ತು ಕುಯ್ಯುವ ಕೆಲಸವನ್ನು ಮಾಡುತ್ತಿದೆ. ಒಳ ಮೀಸಲಾತಿ ನೀಡಿ, ಒಳ ಮೀಸಲಾತಿ ನೀಡದೇ ನೇಮಕ ಮಾಡಲು ಹೊರಟಿರುವುದು ಸರ್ಕಾರದ ಇಬ್ಬಗೆಯ ನೀತಿ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ μÉಡ್ಯೂಲ್ 9ಕ್ಕೆ ಸೇರಿಸಲು ಒತ್ತಡ ಹಾಕಬೇಕಾದ ರಾಜ್ಯ ಸರ್ಕಾರ ಅದರ ಬಗ್ಗೆ ಉಸಿರೆತ್ತುತ್ತಿಲ್ಲ, ಕುದುರೆಗೆ ಹುಲ್ಲು ತೋರಿಸುವಂತೆ ಕಾಂಗ್ರೆಸ್ ಮಾದಿಗರಿಗೆ ಒಳ ಮೀಸಲಾತಿ ಜಾರಿ ಮಾಡುತ್ತದೆ ಎಂದು ಹೇಳುತ್ತಲೇ ವಂಚಿಸುತ್ತಿದೆ. ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಒಳ ಮೀಸಲಾತಿ ನೀಡದಿದ್ದರೆ ಜನವಿರೋಧಿ ಸರ್ಕಾರದ ವಿರುದ್ಧ ಅಂತಿಮ ಹೋರಾಟಕ್ಕೆ ತಯಾರಾಗಿದೆ ಎಂದರು.
ಒಳ ಮೀಸಲಾತಿ ಇರುವುದು ಅಂಬೇಡ್ಕರ್ ಚಿಂತನೆಯಲ್ಲಿದೆ. ಎಲ್ಲ 101 ಜಾತಿಗಳಿಗೂ ಮೀಸಲಾತಿ ದಕ್ಕಲಿ ಎನ್ನುವುದμÉ್ಟೀ ನಮ್ಮ ಬೇಡಿಕೆ, ನಮಗಿಂತ ಹಿಂದುಳಿದಿರುವ ಅಲೆಮಾರಿಗಳಿಗೂ ಮೀಸಲಾತಿ ಪಾಲು ಸಿಗಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.

ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ ಸರ್ಕಾರ ಮಾಡಿದ ಆಯೋಗದ ವರದಿಯನ್ನು ಸರ್ಕಾರದ ಪ್ರತಿನಿಧಿಗಳು ಅವೈಜ್ಞಾನಿಕ ಎನ್ನುತ್ತಾರೆ. ಮಾದಿಗ ಸಮುದಾಯದ ಯುವಕರ ಶಾಪ ಒಳ ಮೀಸಲಾತಿ ವಿರೋಧಿಗಳಿಗೆ ತಟ್ಟದೇ ಬಿಡುವುದಿಲ್ಲ ಎಂದರು.

ಜಿಲ್ಲಾ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ ಮಾ.12ರಂದು ಒಳ ಮೀಸಲಾತಿಗೆ ಗಡುವು ಇದೆ. ಸಂಜೆ ಸಚಿವ ಸಂಪುಟದಲ್ಲಿ ಸಮಾನತೆಗೆ ವಿರುದ್ಧ ತೀರ್ಮಾನ ಕೈಗೊಂಡರೆ, ಭೀಕರ ಪರಿಣಾಮ ಕಾಂಗ್ರೆಸ್ ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಜನಸಂಖ್ಯೆಗೆ ಅನುಗುಣವಾಗಿ ಶೇ.24ರಷ್ಟು ಅನುದಾನವನ್ನು ಸರ್ಕಾರ ನೀಡಿದೆ. ಮೀಸಲಾತಿ ಪ್ರಮಾಣದಲ್ಲಿ ಇಡಬ್ಲೂಎಸ್ ಗೆ ನೀಡಿರುವ ಶೇ.10ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ, ಪರಿಶಿಷ್ಟರ ಮೀಸಲಾತಿಯನ್ನು ಏಕೆ ಕಡಿತ ಗೊಳಿಸುತ್ತೀರಾ? ಬೇರೆ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಕಡಿತಗೊಳಿಸಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ವೇಳೆ ಚಿಂತಕ ಕೊಟ್ಟಶಂಕರ್, ನರಸೀಯಪ್ಪ, ಶಿವನಂಜಪ್ಪ, ನರಸಿಂಹಯ್ಯ, ರಂಜನ್, ಗಂಗಾಧರ್, ಹೊಳಕಲ್ಲು ಆಂಜಿನಪ್ಪ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *