ತುಮಕೂರು : ಟಿ.ವಿ.ವರದಿಗಾರರೊಬ್ಬರು ಜಾತಿ ನಿಂಧನೆ ಮಾಡಿ ಅಟ್ರಾಸಿಟಿ ಕೇಸು ದಾಖಲಾಗಿ ಜೈಲು ಸೇರಿದ್ದಾರೆ, ಪತ್ರಕರ್ತನಾದವನು ಜಾತಿ ನಿಂದನೆ ಮಾಡಬಹುದೇ? ಹಾಗಾದರೆ ಸಮಾಜಕ್ಕೆ ಅವನು ಏನು ಹೇಳಬಹುದು, ಕೊಡಬಹುದು ಎಂಬುದು ಪ್ರಶ್ನೆಯಾಗಿದೆ.
ತುಮಕೂರಿನ ಪಬ್ಲಿಕ್ ಟಿ.ವಿ. ವರದಿಗಾರರಾದ ಮಂಜುನಾಥ ನಾಯಕ್ ತಾಳಮಕ್ಕಿ ತಮ್ಮ ಸಹದ್ಯೋಗಿ ಮಂಜುನಾಥ.ಜಿ.ಎನ್.(ಸಮಯ ಮಂಜು) ಅವರಿಗೆ ಜಾತಿ ನಿಂದನೆ ಮಾಡಿ, ಟಿವಿ ಲೋಗೋಯಿಂದ ತೀವ್ರತರವಾದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆಂದು ತಿಲಕ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸು ದಾಖಲಾಗಿ, ಮಂಜುನಾಥ ನಾಯಕ್ ತಾಳಮಕ್ಕಿ ಈಗ ಜೈಲು ಸೇರಿದ್ದಾರೆ.
ಎಫ್ಐಆರ್ ನಲ್ಲಿರುವ ವಿವರ : 2025ರ ಮೇ 21ರಂದು ಬೆಳಿಗ್ಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಇಡಿ ದಾಳಿಯ ವರದಿ ಮಾಡಲು ಜೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ಹೋಗಿದ್ದ ವೇಳೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಏನಲೇ ನೀನು ಬಂದಿದ್ದೀಯಾ.. ನಿನಗೆ ನೀನೆ ಮಹಾಬುದ್ಧಿವಂತ ಅಂಡ್ಕೊಂಡಿದ್ದೀಯಾ, ಏನೇ ಮಾಡಿದರೂ ಕೀಳು ಜಾತಿನೇ, ಕೀಳು ಜಾತಿ ಬುದ್ದಿ ಬಿಡಲ್ಲ,.. ಮಾದಿಗರ ಬುದ್ದಿ ಲದ್ದಿ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿ ಏಕಾಏಕಿ ಪಬ್ಲಿಕ್ ಟಿವಿ ಲೋಗೋದಲ್ಲಿ ತಲೆ ಮತ್ತು ಕಿವಿಗೆ ಹೊಡೆದಿದ್ದಾನೆ.

ಜಗಳ ಬಿಡಿಸಲು ಹೋದ ಕೆಲ ಪತ್ರಕರ್ತರಿಗೂ ರಕ್ತಗಾಯಗಳಾಗಿದ್ದು, ಝೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ಅವರಿಗೆ ಕಿವಿ, ಬಲ ಕುತ್ತಿಗೆಯ ಬಳಿ ರಕ್ತಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸುಧಾರಿಸಿಕೊಂಡು ತಿಲಕ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ದೂರು ನೀಡಿದ ನಂತರವೂ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ ನಾಯಕ್ ತಾಳಮಕ್ಕಿಯವರಿಗೆ ರಾಜೀ ಸಂಧಾನಕ್ಕೆ ಕೆಲವರು ಪ್ರಯತ್ನಿಸಿದರು ತಾನು ಮಾಡಿದ್ದೇ ಸರಿ ಎಂದು ವಾದ ಮಾಡಿದರೆನ್ನಲಾಗಿದೆ, ನಂತರ ಪೊಲೀಸರು ಮಂಜುನಾಥ ತಾಳಮಕ್ಕಿಯವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ, ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಈಗ ಇಲ್ಲಿ ಕಾಡುವ ಪ್ರಶ್ನೆಯೆಂದರೆ ಪತ್ರಕರ್ತರೆಂದರೆ ಸಮಾಜವನ್ನು ತಿದ್ದುವವರು, ಸಂವಿಧಾನದಡಿಯಲ್ಲಿ ಕರ್ತವ್ಯ ನಿರ್ವಹಿಸುವವರು, ಬಡವರ, ಶೋಷಿತರ ಪರವಾಗಿ ಧ್ವನಿ ಎತ್ತುವವರು ಎಂದುಕೊಳ್ಳಲಾಗಿದೆ. ಆದರೆ ಇಲ್ಲಿ ಒಬ್ಬ ಜವಬ್ದಾರಿ ಟಿವಿ ಚಾನಲ್ನ ವರದಿಗಾರನಾಗಿ ಮತ್ತೊಬ್ಬ ವರದಿಗಾರನ ಮೇಲೆ ಜಾತಿ ನಿಂದನೆ ಮಾಡಿ ಹಾಡು ಹಗಲೇ ತಮ್ಮ ಸಹಪಾಠಿ ವರದಿಗಾರರ ಸಮ್ಮುಖದಲ್ಲೆ ಲೋಗೋ ತೆಗೆದುಕೊಂಡು ತೀವ್ರತರ ಹಲ್ಲೆ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ.
ಕೆಳ ವರ್ಗದವರು, ಅಲ್ಪಸಂಖ್ಯಾತರು, ದಲಿತರು ಇತ್ತೀಚಿನ ದಿನಗಳಲ್ಲಿ ಅಕ್ಷರ ಪಡೆದು ಮೈನ್ ಸ್ಟ್ರೀಮ್ ಗಳಲ್ಲಿ ಬಂದ ಕೂಡಲೇ ಹಿಂದುತ್ವವನ್ನು ಪ್ರತಿಪಾದಿಸುವವರು, ಸಂವಿಧಾನ ಜಾರಿಯಾಗಿ 77 ವರ್ಷಗಳಾದರೂ ಜಾತಿ ನಾವು ಬಯಸಿದಂತೆ ಇರಬೇಕು ಎನ್ನುವವರು ಸಹಿಸಲು ಸಾಧ್ಯವಾಗುತ್ತಿಲ್ಲ.
ಒಂದು ಟಿವಿ ವರದಿಗಾರನಾದವನಿಗೆ ಒಬ್ಬ ಸಾಮನ್ಯ ಪ್ರಜೆಗೆ ಇರುವಷ್ಟೇ ಹಕ್ಕು, ರಕ್ಷಣೆ ನನಗೂ ಸಂವಿಧಾನದಡಿಯಲ್ಲಿದೆ, ನಾನು ಪತ್ರಕರ್ತನಾದ ಕೂಡಲೇ ಯಾವುದೇ ವಿಶೇಷವಾದ ಆರ್ಹತೆ, ಅಧಿಕಾರ ಇರುವುದಿಲ್ಲ. ಪತ್ರಕರ್ತನಾದವನು ಸಮಾಜದ ಒಳಿತನ್ನು ಬಯಸಬೇಕೆ ವಿನಃ ಕೆಳವರ್ಗದ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸಮಾಜಘಾತುಕಕ್ಕೆ ಪ್ರೇರಣೆಯಂತಹ ಸುದ್ದಿಯಾಗಲಿ, ಪ್ರಚಾರವಾಗಲಿ, ಪ್ರೇರೇಪಿಸುವುದಾಗಲಿ ಮಾಡುವುದು ಕಾನೂನಿನಲಿಲ್ಲ.
ಮಂಜುನಾಥ ತಾಳಮಕ್ಕಿ ತಮ್ಮಂತೆಯೇ ಪತ್ರಕರ್ತನಾದವನ ಮೇಲೆ ಜಾತಿಯ ಒಂದೇ ಕಾರಣಕ್ಕೆ ನಿಂಧಿಸಿ, ಹೀಯಾಳಿಸಿ ಹಲ್ಲೆಯನ್ನು ಮಾಡುವಂತಹ ಮನಸ್ಥಿತಿ ಬಂದಿದೆ ಅಂದ ಮೇಲೆ, ಅವರಿಗೆ ಈ ಪ್ರೇರಣೆ ಕೊಟ್ಟವರು, ಪ್ರೇರೇಪಿಸಿದವರು ಯಾರು? ಅವರು ಕೆಲಸ ಮಾಡುತ್ತಿದ್ದ ಟಿವಿ ಸಂಸ್ಥೆಯವರು ಇಂತಹವರಿಗೆ ಕೆಲ ಶಿಷ್ಟಚಾರಗಳನ್ನು ಹೇಳಿ ಕೊಡಬೇಕಾಗಿತ್ತು.
ಇಂತಹ ಪತ್ರಕರ್ತರಿಂದ ಸಮಾಜಕ್ಕೆ ತಪ್ಪು ಸಂದೇಶಗಳು ರವಾನೆಯಾಗುವುದಲ್ಲದೆ, ಇಂತಹವರನ್ನು ನೇಮಿಸಿಕೊಂಡ ಟಿವಿ ಚಾನಲ್ಗಳಿಗೆ, ಅದರ ಮುಖ್ಯಸ್ಥರಿಗೆ ಮಸಿ ಬಳಿಯುವುದಲ್ಲದೆ ಕೆಟ್ಟ ಹೆಸರನ್ನು ತರುತ್ತಾರೆ ಎಂಬ ಅರಿವು ಇರಬೇಕು.
ಮಂಜುನಾಥ ತಾಳಮಕ್ಕಿ ಒಂದು ಪಕ್ಷದ ಅಜೆಂಡದಡಿಯಂತೆ ಪತ್ರಿಕಾಗೋಷ್ಠಿಗಳಲ್ಲಿ ನಡೆದುಕೊಳ್ಳುತ್ತಿದ್ದನ್ನು ಕಂಡು ಹಲವಾರು ಸಲ ಪತ್ರಿಕಾಗೋಷ್ಠಿಗಳಲ್ಲಿ ನೀವು ಆ ಪಕ್ಷದ ವಕ್ತಾರರ ಎಂಬ ಮಾತುಗಳಿಗೆ ಗುರಿಯಾಗಿದ್ದೂ ಇದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಪತ್ರಕರ್ತರು ಸಹ ಜಾತಿಯ ಸಂಕೋಲೆಯಿಂದ ಹೊರಬರದೆ, ಕೆಳ ವರ್ಗದವರು ಮೈನ್ ಸ್ಟ್ರೀಮ್ ಗೆ ಬರ ಬಾರದು, ಬರದಂತೆ ತಡೆಯಬೇಕು, ಬಂದರೂ ಅವರನ್ನು ಆ ಕ್ಷೇತ್ರದಲ್ಲಿ ಬಹಳಷ್ಟು ದಿನ ಇರದಂತೆ ನೋಡಿಕೊಳ್ಳುವುದನ್ನು ಕಾಣುತ್ತಿದ್ದೇವೆ.
ಇಂದು ಒಬ್ಬ ಪತ್ರಕರ್ತನ ಮೇಲೆ ಮತ್ತೊಬ್ಬ ಪತ್ರಕರ್ತ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ ಎಂದ ಮೇಲೆ, ಸಮಾಜದ ಕಟ್ಟಕಡೆಯವರ ಮೇಲೆ, ಬಡವರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಹತ್ಯೆಗಳು ನಡೆಯುತ್ತಲೇ ಇವೆ.
ಅದೂ ಸುಭದ್ರವಾದ ಸಂವಿಧಾವಿದ್ದು ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ಕಲ್ಪಿಸಿದ್ದರೂ ಇಂತಹ ಘಟನೆಗಳನು ನಡೆಯುತ್ತಿರುವುದಕ್ಕೆ ಯಾರನ್ನು ಹೊಣೆ ಮಾಡಬೇಕು, ಹಲ್ಲೆಗೊಳಗಾದ ಪತ್ರಕರ್ತನ ಮಾನಸಿಕ ಸ್ಥಿತಿ ಏನಾಗಿರಬೇಡ, ಅಟ್ರಾಸಿಟಿ ಕೇಸು ದಾಖಲಾದ ನಂತರ ಆ ಇಬ್ಬರು ಪತ್ರಕರ್ತರನ್ನು ಸಮಾಜ ಹೇಗೆ ನೋಡುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ.
ಹಲ್ಲೆಗೊಳಗಾಗಿ ದೂರು ನೀಡಿರುವ ಮಂಜುನಾಥ ಜಿ.ಎನ್ (ಸಮಯ ಮಂಜು)ಗೆ ಮತ್ತೆ ಹಲ್ಲೆ, ದೌರ್ಜನ್ಯ ನಡೆಯುವುದಿಲ್ಲ ಎಂದು ರಕ್ಷಣೆ ಕೊಡುವವರು ಯಾರು?
ಹಲ್ಲೆ ಮಾಡಿದ ಪತ್ರಕರ್ತನಿಗೆ ಮಾನವೀಯ ನೆಲೆಯೊಳಗೆ ಬುದ್ದಿ ಹೇಳುವವರು ಯಾರು?