ಪ್ರಶಸ್ತಿ ಪುರಸ್ಕøತರಾದ ಹೊನ್ನೂರು, ಪುಟ್ಟಲಿಂಗಯ್ಯ, ವಿರೂಪಾಕ್ಷರವರಿಗೆ ಮೈತ್ರಿನ್ಯೂಸ್ ಪತ್ರಿಕೆ ಬಳಗದ ಅಭಿನಂದನೆ

ತುಮಕೂರು : ರಾಜ್ಯ ಕೆಯುಡಬ್ಲ್ಯುಜೆ ಪ್ರಶಸ್ತಿಗೆ ಭಾಜನವಾಗಿರುವ ಕೋಲಾರವಾಣಿ ವರದಿಗಾರರಾದ ಹೆಚ್.ಕೆ.ರವೀಂದ್ರನಾಥ ಹೊನ್ನೂರು, ರಾಜ್ಯ ಪತ್ರಿಕೆ ಉದಯಕಾಲ ಸಂಪಾದಕರಾದ ಕೆ.ಎನ್.ಪುಟ್ಟಲಿಂಗಯ್ಯ ಮತ್ತು ಪ್ರಜಾಪ್ರಗತಿ ಶಿರಾ ವರದಿಗಾರರಾದ ವಿರೂಪಾಕ್ಷ ಬರಗೂರು ಅವರನ್ನು ಮೈತ್ರಿನ್ಯೂಸ್ ಪತ್ರಿಕಾ ಬಳಗ ಅಭಿನಂದಿಸಿದೆ.

ಹೆಚ್.ಕೆ.ರವೀಂದ್ರನಾಥ ಹೊನ್ನೂರು:


ಹೆಚ್.ಕೆ. ರವೀಂದ್ರನಾಥ ಹೊನ್ನೂರು ಅವರು ತುಮಕೂರು ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದು, 1976 ರಿಂದ 1980 ‘ಲೋಕವಾಣಿ’ ಕನ್ನಡ ದಿನಪತ್ರಿಕೆ, ಬೆಂಗಳೂರು ಕಾರ್ಯನಿರ್ವಹಣೆ 1981‘ಹಿರಿಯೂರು ವಾರಪತ್ರಿಕೆ’, ಹಿರಿಯೂರು

ನಂತರ ಉಪ ಸಂಪಾದಕ ‘ಮುಸುಕು ಮುಂಜಾನೆ’ ವಾರಪತ್ರಿಕೆ, ತುಮಕೂರು, ನಂತರ ಬೆಂಗಳೂರಿ£ಂದ ಪ್ರಕಟಗೊಳ್ಳುತ್ತಿದ್ದ “ಸಂಜೆ ನುಡಿ”, ‘ಇಂದುಸಂಜೆ’, ‘ಉತ್ತರ ಕರ್ನಾಟಕ’ ದಿನಪತ್ರಿಕೆಗಳ ತುಮಕೂರು ಜಿಲ್ಲಾ ವರದಿಗಾರರಾಗಿದ್ದರು. 1996 ರಿಂದ 2011ರವರೆಗೆ ಬೆಂಗಳೂರಿನ ಹೊಸದಿಗಂತ ಪತ್ರಿಕೆಯ ತುಮಕೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿರುವ ಹೆಚ್.ಕೆ. ರವೀಂದ್ರನಾಥ ಹೊನ್ನೂರು ಅವರು ಪ್ರಸ್ತುತ ತುಮಕೂರಿನಿಂದ ಪ್ರಕಟಗೊಳ್ಳುವ “ಸತ್ಯದರ್ಶಿನಿ” ದಿನಪತ್ರಿಕೆಯ ಸಹಸಂಪಾದಕ ಹಾಗೂ ಬೆಂಗಳೂರಿ£ಂದ ಪ್ರಕಟಗೊಳ್ಳುತ್ತಿರುವ “ಕೋಲಾರವಾಣಿ” ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ತುಮಕೂರು ಜಿಲ್ಲೆಯ ಮುಖ್ಯ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದಲ್ಲಿ ನಿರ್ದೇಶಕನಾಗಿ, ಕಾರ್ಯದರ್ಶಿಯಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ, ತುಮಕೂರು ಜಿಲ್ಲಾ ವರದಿಗಾರ ಕೂಟದ ಖಜಾಂಚಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ವರದಿಗಾರರ ಕೂಟದ ಅಧ್ಯಕ್ಷನಾಗಿ ಕಾರ್ಯರ್ವಹಿಸುತ್ತಿದ್ದಾರೆ. ತುಮಕೂರು ಜಿಲ್ಲಾ 2014-15ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಇದೀಗ ಇವರಿಗೆ ಕೆಯುಡಬ್ಲ್ಯುಜೆಯ ರಾಜ್ಯ ಸಂಘವು ಅತ್ಯುತ್ತಮ ಪುಟ ವಿನ್ಯಾಸ (ಡೆಸ್ಕ್) ನೀಡಿ ಪುರಸ್ಕರಿಸಿದೆ.

ಕೆ.ಎನ್.ಪುಟ್ಟಲಿಂಗಯ್ಯ :

ಪುಟ್ಟಲಿಂಗಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತರ ಪದವಿ ಪಡೆದಿದ್ದು, ಉದಯ ಟಿ.ವಿ., ಟೈಮ್ಸ್ ಆಫ್ ಇಂಡಿಯಾ ಕನ್ನಡ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆ ನಂತರ ತುಮಕೂರಿನ ‘ತುಮಕೂರು ವಾರ್ತೆ’ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜ್ಯಮಟ್ಟದ ಉದಯಕಾಲ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಎನ್.ಪುಟ್ಟಲಿಂಗಯ್ಯನವರಿಗೆ ಕೆಯುಡಬ್ಲ್ಯುಜೆಯ ರಾಜ್ಯ ಸಂಘವು ಬದರೀನಾಥ ಹೊಂಬಾಳೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಬರಗೂರು ವಿರೂಪಾಕ್ಷ :

ಬರಗೂರು ವಿರೂಪಾಕ್ಷ ಅವರು ಶಿರಾ ತಾಲೂಕಿನ ಬರಗೂರು ಗ್ರಾಮದವರಾಗಿದ್ದು ಸ್ನಾತಕೋತ್ತರ ಪದವಿಯನ್ನು ಮಹಾರಾಷ್ಟ್ರ ಶಿವಾಜಿ ವಿ.ವಿ.ಯಲ್ಲಿ ಪಡೆದಿದ್ದು, ಕಳೆದ 30 ವರ್ಷಗಳಿಂದ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರೆ. 2014-15 ರಲ್ಲಿ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2014-15ರಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2016-17 ರಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಕೊಡಮಾಡುವ ವೈ.ಕೆ.ರಾಮಯ್ಯ ಪ್ರಶಸ್ತಿ, 2022-23ರಲ್ಲಿ ದಿ.ಹೆಚ್.ಜಿ.ಗುಂಡೂರಾವ್ ಜಿಲ್ಲಾ ಪ್ರಶಸ್ತಿ ಪರಸ್ಕøತರಾಗಿದ್ದು, ಇದೀಗ ಕೆಯುಡಬ್ಲ್ಯುಜೆ ನೀಡುತ್ತಿರುವ 2022-23ನೇ ಸಾಲಿನ ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ರಾಜ್ಯ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.

ಪ್ರಶಸ್ತಿ ಪುರಸ್ಕøತರನ್ನು ಮೈತ್ರಿನ್ಯೂಸ್ ಪತ್ರಿಕಾ ಬಳಗವು ಅಭಿನಂದಿಸಿದೆ. ಪ್ರಶಸ್ತಿಯನ್ನು ಫೆಬ್ರವರಿ 4ರಂದು ದಾವಣಗೆರೆಯಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ರಾಜ್ಯ ಸಂಘದ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು.

Leave a Reply

Your email address will not be published. Required fields are marked *