ತುಮಕೂರು: ಕೇಂದ್ರದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳನ್ನು ಐ.ಟಿ., ಇ.ಡಿಗಳನ್ನು ದುರ್ಬಳಕೆ ಮಾಡಿ ಸರ್ಕಾರದ ವಿರುದ್ಧ ಮಾತನಾಡಿದವರಿಗೆ ಜೈಲಿಗೆ ಕಳಸುವ ಸಂಸ್ಕøತಿ ಬೆಳಸಿಕೊಂಡಿದೆ ಇದನ್ನ ಬಂಡವಾಳ ಮಾಡಿಕೊಂಡು ಜನರಿಗೆ ಮುಂಕು ಬೂದಿ ಎರಚಿ ಅಧಿಕಾರಕ್ಕೆ ಬಂದಿದ್ದಾರೆ ಹೀಗಾಗಿ ಇಂತಹ ಪಕ್ಷಕ್ಕೆ ಜನರು ಮತ ನೀಡಬಾರದು ಎಂದು ಮಾಜಿ ಅಡ್ವಕೇಟ್ ಪೆÇ್ರೀ.ರವಿಕುಮಾರ್ವರ್ಮ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಾಗೃತ ಮತದಾರರ ಬಳಗ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು
ಪ್ರಪಂಚದಲ್ಲಿ ಕೇಳಿ ಅರಿಯದ ಬೃಹತ್ ಭ್ರಷ್ಠಚಾರದಲ್ಲಿ ತೊಡಗಿರುವ ಬಿಜೆಪಿ ಪಕ್ಷÀಕ್ಕೆ ಎಚ್ಚೆತ್ತ ಮತದಾರರು ಯಾವುದೇ ಕಾರಣಕ್ಕೂ ಮತ ನೀಡ ಬಾರದು ಮನವಿ ಮಾಡುತ್ತೇನೆ, ಕೇಂದ್ರ ಸರ್ಕಾರ ಕಿತ್ತೊಗೆಯರಿ ಭಾಜಪಾ ಪಕ್ಷ ಭ್ರμÁ್ಟಚಾರ ತೊಡಗಿದವರಿಗೆ ಅಧಿಕಾರ ಕೊಟ್ಟಿದ್ದಾರೆ ಎಡಿಎ ಒಕ್ಕೂಟ ದಲ್ಲಿ ಜೊತೆಯಲ್ಲಿ ಇರುವ ಆರವತ್ತು ಭಷ್ಟಚಾರಿಗಳಿಗೆ ಗುರ್ತಿಸಿ ಅಧಿಕಾರ ನೀಡಿದ್ದಾರೆ ಎಂದು ಗುಡುಗಿದರು.
ಇಡೀ ವಿಶ್ವದಲ್ಲೇ ಭ್ರಷ್ಟಚಾರದಲ್ಲಿ ತೊಡಗಿರುವ ಐತಿಹಾಸಿಕ ಸರ್ಕಾರ ಬಿಜೆಪಿ ಪಕ್ಷ ವಾಗಿದ್ದು ಜಾತ್ಯಾತೀತ ನಾಯಕ ದೇವೆಗೌಡ ಅವರು ಕೂಡಾ ಬಿಜೆಪಿ ದುರಾಡಳಿತಕ್ಕೆ ಮಾರು ಹೋಗಿ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ ತನ್ನ ಕುಟುಂಬ ರಾಜಕಾರಣ ಉಳಿಸಿ ಕೊಳ್ಳಲು ಸಹಸ್ರ ಸಹಸ್ರ ಕಾರ್ಯಕರ್ತರಿಗೆ ಮೊಸ ಮಾಡಿದ್ದಾರೆ ಒಂದು ಬಾರಿ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಭೆಗೆ ಕರೆದುಕೊಂಡು ಹೋದರು ನಾನು ಕೂಡಾ ಹೋಗಿದ್ದೆ, ಅನೇಕ ವಿಚಾರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು ಮಾತನಾಡುತ
ಚುನಾವಣೆ ಯಾದ ನಂತರ ಮೋದಿ ಜೊತೆಗೆ ಕೈ ಜೊಡಿಸುತ್ತಿರಿ ಎಂಬ ವಿಚಾರಕ್ಕೆ ದೇವೆಗೌಡ ಅವರು ಗೆಲ್ಲಲಿ ಸೋಲಲಿ ಮೋದಿ ಸರ್ಕಾರ ಬೆಂಬಲಿಸುವುದಿಲ್ಲ ಎಂದ ಅವರು ಇವತ್ತು ಸುಳ್ಳುಗಾರರಾಗಿ ಅವಕಾಶವಾದಿ ರಾಜಕಾರಣಿಯಾಗಿ ಲೋಕಸಭಾ ಎಲ್ಲಾ ಟಿಕೆಟ್ ಕುಟುಂಬಕ್ಕೆ ನೀಡಿದ್ದಾರೆ ತುಮಕೂರು ಜಿಲ್ಲೆ ಜೆಡಿಎಸ್ ಭದ್ರ ಕೋಟೆಯಾಗಿತ್ತು, ಆದರೆ ಯಾರಿಗೂ ಟಿಕೆಟ್ ನಿಡಿಲಿಲ್ಲ ಹಾಗಾಗಿ ಇಂತಹ ಪಕ್ಷದ ಜೊತೆಗೆ ಹೋಗಿರುವ ಇವರಿಗೆ ಹಾಗೂ ಬಿಜೆಪಿಗೆ ಸಹ ಮತ ನೀಡಬೇಡಿ ಎಂದರು.
ಎಲೆಕ್ಟ್ರೋಲ್ ಬಾಂಡ್ ದೊಡ್ಡ ಹಗರಣವಾಗಿದ್ದು, ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಈ ಬಾಂಡ್ಗಳನ್ನು ಬಯಲಿಗೆಳೆಯದಿದ್ದರೆ ಇದು ಬೆಳಕಿಗೆ ಬರುತ್ತಿರಲಿಲ್ಲ, ಈ ಬಾಂಡ್ಗಳ ಮೂಲಕ ಸಂಗ್ರಹಿಸಿರುವ ಹಣವನ್ನು ಬಿಜೆಪಿ ಪಕ್ಷವು ಪ್ರತಿ ಲೋಕಸಭಾ ಕ್ಷೇತ್ರಕ್ಕೆ 25ಕೋಟಿಗಳಂತೆ ಖರ್ಚು ಮಾಡಲು ಮುಂದಾಗಿದೆ, ಅದೇ ರೀತಿ ಕೋವಿಡ್ ಕಿಟ್ ಮತ್ತು ಕೋವಿಡ್ ವಾಕ್ಸಿನ್ಗಳಲ್ಲೂ ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಿದರು.
ನಮ್ಮ ದೇಶದಲ್ಲಿ ಅನೇಕ ಪ್ರಧಾನಿಗಳು ದೇಶಕ್ಕೆ ಅಚ್ಚುಮೆಚ್ಚಿನ ಕೊಡುಗೆ ನೀಡಿದ್ದಾರೆ ಮೋದಿಯವರು ಸಣ್ಣ ಪ್ರಮಾಣದ ಸಹಾಯ ಮಾಡಿ ನಾನು ವಿಶ್ವ ನಾಯಕನೆಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ, ಆದರೆ ಈ ಹಿಂದೆ ದೇಶ ಆಳಿದ ಅನೇಕ ಪ್ರಧಾನಿಗಳು ಅವರೆಲ್ಲರೂ ಬೆಸ್ಟ್ ಪ್ರಧಾನಿಗಳಾಗಿದ್ದಾರೆ ಅದರೆ ಜನರಿಗೆ ಮಂಕು ಬೂದಿ ಎರಚಿ ಕೋಮುವಾದಕ್ಕೆ ಬೆಂಬಲಿಸುವ ಬಿಜೆಪಿ ಪಕ್ಷವನ್ನು ಯಾವುದೇ ಕಾರಣದಿಂದಲೂ ಅಧಿಕಾರಕ್ಕೆ ತರಬಾರದು ಮತ್ತು ಮತ ಹಾಕಬಾರದು ಬಿಜೆಪಿಯ ವಿರುದ್ಧವಾಗಿ ಮತ ಚಲಾಯಿಸ ಬೇಕು ಎಂದರು.
74 ವರ್ಷಗಳ ಐತಿಹಾಸಿಕ ಇತಿಹಾಸ ಹೊಂದಿರುವ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಯನ್ನ ನೀಡಿರುವ ಬಿಜೆಪಿಗರು ಮನುಸ್ಮೃತಿ ಅಧಿಕಾರಕ್ಕೆ ತರಲು ಅವಹಣಿಸುತ್ತಿದ್ದಾರೆ ಮನು ಸ್ಮೃತಿ ಅಧಿಕಾರಕ್ಕೆ ಬಂದರೆ À ದುಡಿಯುವ ವರ್ಗಕ್ಕೆ ಶಿಕ್ಷಣ ಇಲ್ಲದಂತೆ ಮಾಡಿ, ಮಹಿಳೆಯರ ಸ್ವಾತಂತ್ರ್ಯ ತೆಗೆದು ಅಡಿಯಾಳಗಿ ದುಡುಸಿಕೊಳ್ಳುವ ಕಾನೂನು ಮಾಡುವರು, ಮಹಿಳೆಯ ಸಮಾನತೆ ಕಳೆಯುವುದು ಇದರ ಉದ್ದೇಶ ಅದಕ್ಕಾಗಿ ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ ಎಂದರು.
ದ್ವೇಷದ ರಾಜಕಾರಣ ಮಾಡುವ ಬಿಜೆಪಿ ಸರ್ಕಾರ ದೆಹಲಿಯಲ್ಲಿರುವ ಮುಖ್ಯಮಂತ್ರಿಗಳಾದ ಅರವಿಂದ್ ಕೆಜ್ರಿವಾಲ್ ಅವರನ್ನ ತಿಹಾರ್ ಜೈಲಿ ಕಳಿಸಿದ್ದಾರೆ, ಇಡಿ ಐಟಿಗಳನ್ನ ಬಳಸಿಕೊಂಡು ತಮ್ಮಗಳ ವಿರುದ್ಧ ಚಕಾರ ಎತ್ತುವ ರಾಜಕಾರಣಿಗಳನ್ನು ಮೂಲೆಗುಂಪು ಮಾಡುವ ಉದ್ದೇಶವನ್ನು ಬಿಜೆಪಿ ಸರ್ಕಾರ ಹೊಂದಿದ್ದು, ಇದಕ್ಕೆ ಹೆದರಿದ ಅನೇಕ ನಾಯಕರುಗಳು ಬಿಜೆಪಿ ಪಕ್ಷಕ್ಕೆ ಫಲಾಯಾನವಾಗುತ್ತಿದ್ದು ದೇಶದಲ್ಲಿ ಕೋಮುವಾದವನ್ನು ಬಿತುತ್ತಾ ಜನರಿಗೆ ಭಯದ ವಾತಾವರಣ ನಿರ್ಮಿಸಿ ಉದ್ಯೋಗ ಶಿಕ್ಷಣ ಸೇರಿದಂತೆ ಅರಾಜಕತೆಯನ್ನು ಬಿಜೆಪಿ ಸೃಷ್ಟಿಸಿದೆ ಎಂದರು.
ಈಗಾಗಲೇ ನಾನು ಗಮನಿಸಿದಂತೆ ಗ್ರಾಮೀಣ ಭಾಗಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೆಲೆ ಏರಿಕೆ ನಿರುದ್ಯೋಗ ಕಾರ್ಮಿಕ ಕೃಷಿಕ ಸೇರಿದಂತೆ ಮಹಿಳೆಯರು ಹಾಗೂ ಇತರರಿಗೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯ ಹಾಗೂ ಅಸಮಾನತೆಯ ವಿರುದ್ಧವಾಗಿ ಜನರು ಕಂಗೆಟ್ಟಿದ್ದು, ಬಿಜೆಪಿ ಸರ್ಕಾರ ನಮಗೇನು ಮಾಡಿದೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಈ ಎಲ್ಲಾ ಕಾರಣಗಳಿಂದಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಪರ್ಯಾಯವಾಗಿ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಕರೆ ನೀಡಿದರು.
ಪ್ರಗತಿಪರ ಚಿಂತಕ ದಲಿತ ಮುಖಂಡ ಕೆ.ದೊರೈರಾಜು ಮಾತನಾಡಿ ದೇಶದಲ್ಲಿ ಉದ್ಯೋಗ ಇಲ್ಲದ ಯುವಕರು ಬೌದ್ದಿಕ ಸಾಮಥ್ರ್ಯವನ್ನು ಹೊಂದಿದ್ದು ಉದ್ಯೋಗ ಇಲ್ಲದೆ ಹಾಳಾಗುತ್ತಿದ್ದಾರೆ, ಯುವಕರಿಗೆ ಉದ್ಯೋಗ ಕೊಡುತ್ತೇನೆಣದು ಹೇಳಿ ಕೇಂದ್ರ ಸರ್ಕಾರ ಮೋಸ ಮಾಡಿದೆ, ಎಸ್.ಸಿ.ಎಸ್ .ಟಿ ಗೆ ಇರುವ ಮೀಸಲಾತಿ ಹಿಂದುಳಿದ ವರ್ಗದವರು ಅನ್ಯಾಯದ ಹಾದಿಯಲ್ಲಿ ಪಡೆಯಲು ಹಾತೊರೆಯುತ್ತಿದ್ದಾರೆ ಎಂದರು.
ಮೋದಿ ಸರ್ಕಾರ ಎಲ್ಲಾ ವಲಯವನ್ನು ಖಾಸಗೀಕರಣ ಮಾಡಿ ಕೇಂದ್ರದ ಸರ್ಕಾರದ ಅಡಿಯಲ್ಲಿ ಕೆಲಸಗಳು ಇಲ್ಲದಂತೆ ಮಾಡಿ ಕೇಂದ್ರದ ಎರಡು ಲಕ್ಷ ಉದ್ಯೋಗ ಖಾಲಿ ಇದ್ದರೂ ಯುವಕರಿಗೆ ಮಂಕುಬೂದಿ ಎರಚಿ ದೊಡ್ಡ ದ್ರೋಹ ಮಾಡಿದ್ದಾರೆ ಸರ್ಕಾರಿ ಉದ್ಯೋಗದಲ್ಲಿ ಯಾರಿಗೂ ವಿನಾಯಿತಿ ಕೊಡದೆ ಸತಾಯಿಸುತ್ತಿದ್ದು, ಉದ್ಯೋಗ ಇಂದು ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ ಎಂದರು.
ಸರ್ಕಾರ ಕ್ಕೆ ಬರುವ ಆದಾಯ ಆರ್ಥಿಕ ವಿಚಾರಗಳನ್ನು ಜನರಿಗೆ ತಿಳಿಸದೆ ದ್ರೋಹ ಮಾಡಿರುವ ಮೋದಿ ಸರ್ಕಾರ, ವಿವಿಧ ಹಂತಗಳಲ್ಲಿ ಘೋಷಣೆ ಮಾಡಿದ ಉದ್ಯೋಗ ಗಳು ಮಾಯಾ ಮಾಡಿ ಯುವಕ ಯುವತಿಯರಿಗೆ ಬಹು ದೊಡ್ಡ ಮೋಸ ಮಾಡಿದೆ, ಭಾವನಾತ್ಮಕವಾಗಿ ಮಾತನಾಡಿ ಜನರಿಗೆ ಮನರಂಜನೆ ನೀಡಿ ಮಂಕು ಬೂದಿ ಎರಚುತ್ತಿದ್ದಾರೆ,ಆರ್ಥಿಕ ವ್ಯವಸ್ಥೆ ಸ್ಥಬ್ದವಾಗಿದೆ ಬಂಡವಾಳ ಶಾಹಿಗಳ ಕೈಗೆ ಆರ್ಥಿಕ ವ್ಯವಸ್ಥೆ ತಲುಪಿದೆ ಶೆ. 90%ರಷ್ಟು ಅಸಂಘಟಿತ ಕಾರ್ಮಿಕರು ಅವರ ಮಾತು ಕೇಳುವಂತಾಗಿದೆ, ಆರೋಗ್ಯ, ಶಿಕ್ಷಣ, ಉದ್ಯೋಗ, ಮಹಿಳೆಯರು ಸೇರಿದಂತೆ ವಿವಿಧ ವಲಯಗಳಿಗೆ ಕಾನೂನನ್ನು ತಿದ್ದುಪಡಿ ತಂದು ಸುಲಿಗೆ, ಶೋಷಣೆಗೆ ಅವಕಾಶ ಮಾಡಿದೆ ಇದನ್ನು ಕೇಳಲು ಹೋದರೆ ಜೈಲಿಗೆ ಹಾಕುತ್ತೇವೆ ಎಂಬ ಸರ್ವಾಧಿಕಾರಿ ಧೋರಣೆಯನ್ನು ತೋರಿ ಬಂಡವಾಳ ಶಾಹಿ ಆಡಳಿತವನ್ನು ಜಾರಿಗೆ ತರಲು ಯತ್ನಿಸಿದೆ ಎಂದರು.
ಅಲ್ಪಸಂಖ್ಯಾತ, ಹಾಗೂ ಇತರರಿಗೆ ಜಾತಿ, ಧರ್ಮ ಎನ್ನುವ ಹೆಸರಿನಲ್ಲಿ ಅನೇಕ ವಿಚಾರಗಳಲ್ಲಿ ಖಿನ್ನತೆ ಮೂಡಿಸಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡಿದರೆ ಜಾತಿ, ಸಂಘ , ಕೋಮುವಾದ ಎಂಬ ಭೂತ ತೋರಿಸಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಯಾವ ಭಯೋತ್ಪಾದಕನಿಗೂ ಕಡಿಮೆ ಇಲ್ಲದ ಹಾಗೆ ಮಾಡಿದ್ದಾರೆ ಇಂತಹ ಪಕ್ಷಕ್ಕೆ ಅಧಿಕಾರ ನೀಡಬಾರದು ಇವರನ್ನು ಸೋಲಿಸಿ ಇವರ ಸಿದ್ದಾಂತಗಳಿಗೆ ಸೋಲಾಗ ಬೇಕಿದೆ ಜನರಿಗೆ ಮಂಕು ಬೂದಿ ಎರಚಿರುವ ಬಿಜೆಪಿ ವಿರುದ್ದವಾಗಿ ಕಾಂಗ್ರೆಸ್ಗೆ ಮತ ಹಾಕುವ ಮೂಲಕ ಬಿಜೆಪಿ ಸೋಲಿಸಿಬೇಕು ಎಂದರು.
ತುಮಕೂರಿನ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಹೋರಾಟವನ್ನು ಬಿಜೆಪಿ ಸರ್ಕಾರ ಮಾಡಲಿಲ್ಲ ಬೆಂಗಳೂರಿಗೆ ಪರ್ಯಾಯ ನಗರ ತುಮಕೂರು ನಗರದ ಜನರಿಗೆ ಮೊಸವಾಗಿದೆ, ಸ್ಮಾರ್ಟ್ ಸಿಟಿ ಹೆಸರಿಗೆμÉ್ಟೀ ಇದ್ದು, ನಗರ ಸರಿಯಾದ ಅಭಿವೃದ್ಧಿ ಯಾಗಲಿಲ್ಲ ಈಗ ಲೋಕಸಭೆಗೆ ನಿಂತಿರುವ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಬೌದ್ದಿಕವಾಗಿ ಜನರ ಪರ ಹೋರಾಟಕ್ಕೆ ಸಿದ್ದರಿದ್ದು ಅವರಿಗೆ ಮತ ಹಾಕಿ ಜನಪರ ಹೋರಾಟಗಳಿಗೆ ಅರ್ಥ ಕೊಡಬೇಕು, ಕೊಬ್ಬರಿ ಹೋರಾಟಕ್ಕೆ ಮುನ್ನುಡಿ ಬರೆದವರು ಇವರು ಬಡವರು ಪರವಾಗಿ ಧ್ವನಿಯಾಗುವ ಇವರಿಗೆ ಮತ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ||ಬಸವರಾಜು, ನಟರಾಜಪ್ಪ, ಹೈ ಕೋರ್ಟ್ ವಕೀಲರಾದ ಹೆಚ್.ವಿ.ಮಂಜುನಾಥ, ಕೊಳಗೇರಿ ಸಮಿತಿಯ ನರಸಿಂಹಮೂರ್ತಿ ಉಪಸ್ಥಿತರಿದ್ದರು.