ಪತ್ರಕರ್ತ ಟಿ.ಇ.ಧೃವಕುಮಾರ್ ನಿಧನ

ತುಮಕೂರು : ಏಕೇಶ್ ಪತ್ರಿಕೆಯ ಸಹಸಂಪಾದಕರಾಗಿದ್ದ ಟಿ.ಇ.ಧೃವಕುಮಾರ್ (49) ಅವರು ಇಂದು ನಿಧನ ಹೊಂದಿದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನ ಹೊಂದಿದರು, ಇವರು ಚಿ,ನಾ.ಏಕೇಶ್ ಮತ್ತು ರಮಾ ಏಕೇಶ್ ರವರ ಎರಡನೇ ಮಗನಾಗಿದ್ದರು, ಪತ್ರಿಕಾ ವೃತ್ತಿಯಲ್ಲೇ ಗುರುತಿಸಿಕೊಂಡಿದ್ದ ಧೃವಕುಮಾರ್ ಅವರು, ಅಪರೂಪವೆನಿಸಿದ ಕಾಯಿಲೆಯೊಂದಕ್ಕೆ ತುತ್ತಾಗಿ ಹಲವಾರು ಸಲ ಶಸ್ತ್ರ ಚಿಕಿತ್ಸೆಗೆ ಒಳಗಾದರೂ ಆರೋಗ್ಯ ಸುಧಾರಣೆಯಾಗಲಿಲ್ಲ.

ಧೃವಕುಮಾರ್ ಅವರು 2004ರಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು, ಈಗಲೂ ಸಂಘದ ಸದಸ್ಯರಾಗಿದ್ದರು. ಮೃತರು ಪತ್ನಿ, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಗಾರ್ಡನ್ ರಸ್ತೆಯ ಸ್ಮಶಾನದಲ್ಲಿ ನೆರವೇರಿತು.

Leave a Reply

Your email address will not be published. Required fields are marked *