ಕೇಂದ್ರ ಸಚಿವ ವಿ.ಸೋಮಣ್ಣ 74ನೇ ಹುಟ್ಟು ಹಬ್ಬ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ

ತುಮಕೂರು- ಸಂಸದ ಹಾಗು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ 74 ನೇ ಹುಟ್ಟು ಹಬ್ಬದ ಅಂಗವಾಗಿ ಜುಲೈ 20 ರಂದು ನಗರಪಾಲಿಕೆ ಆವರಣದಲ್ಲಿ ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ಕನ್ನಡ ಸೇನೆ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಒಗ್ಗೂಡಿ, ರಕ್ತಧಾನ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಇದರ ಜೊತೆಗೆ ಪ್ರೊ.ಸಿದ್ದಪ್ಪ ಅವರ ನೇತೃತ್ವದಲ್ಲಿ 74 ವಿವಿಧ ಜಾತಿಯ ಗಿಡಗಳನ್ನು ಹಾಕಲಾಗುತ್ತಿದೆ ಎಂದರು.

ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಕೆಲವರು ಅವರು ಹೊರಗಿನವರು ಎಂದು ಅಪಪ್ರಚಾರ ಮಾಡಿದ್ದರು, ಅವೆಲ್ಲವನ್ನೂ ಧಿಕ್ಕರಿಸಿ ತುಮಕೂರು ಜಿಲ್ಲೆಯ ಜನತೆ 1.78 ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸಿದ್ದು, ಕೇಂದ್ರದ ಮಂತ್ರಿಯಾಗಿ ಕೇವಲ ಮೂವತೈದು ದಿನಗಳಲ್ಲಿ ಸುಮಾರು 350 ಕೋಟಿ ಅನುದಾನವನ್ನು ಜಿಲ್ಲೆಯ ಐದು ರೈಲ್ವೆ ಮೇಲ್ಸೇತುವೆಗಳಿಗೆ ಬಿಡುಗಡೆ ಮಾಡಿಸಿದ್ದಾರೆ.ಅಲ್ಲದೆ ತುಮಕೂರು ರಾಯದುರ್ಗ ರೈಲ್ವೆ ಹಳಿ ನಿರ್ಮಾಣಕ್ಕೆ 600 ಕೋಟಿ ರೂ. ಅನುದಾನ ಕೊಡಿಸುವ ಮೂಲಕ ನಾನೊಬ್ಬ ಕೆಲಸಗಾರ ಎಂಬುದನ್ನು ಸಾಭೀತು ಪಡಿಸಿದ್ದಾರೆ.ಹಾಗಾಗಿ ಅವರ ಹುಟ್ಟು ಹಬ್ಬವನ್ನು ಕನ್ನಡಪರ ಸಂಘಟನೆಗಳು ಆರೋಗ್ಯ ಶಿಬಿರದಿಂದ ಬಡ ಬಗ್ಗರಿಗೆ ಅನುಕೂಲ ಕಲ್ಪಿಸಲು ಹೊರಟಿದೆ ಎಂದು ಧನಿಯಕುಮಾರ್ ನುಡಿದರು.

ಆರೋಗ್ಯ ಶಿಬಿರದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಮಧುಮೇಹ, ಇ.ಎನ್.ಟಿ.ಕೀಲು ಮತ್ತು ಮೂಳೆ ತಜ್ಣರು, ಸ್ತ್ರೀ ರೋಗ ತಜ್ಞರು, ದಂತ ವೈದ್ಯರು,ಚರ್ಮರೋಗ, ಜನರಲ್ ಫಿಜಿಷಿಯನ್, ಆಯುರ್ವೇದ ತಜ್ಣ ವೈದ್ಯರು ಭಾಗವಹಿಸಲಿದ್ದಾರೆ.

ಜುಲೈ 20 ರಂದು ತುಮಕೂರಿಗೆ ಆಗಮಿಸುವ ಕೇಂದ್ರ ಸಚಿವ ವಿ.ಸೋಮಣ್ಣ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಪಾಲಿಕೆ ಆವರಣಕ್ಕೆ ಬಂದು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು, ಕೇಕ್ ಕತ್ತರಿಸಿ, ತದ ನಂತರ ಚಿತ್ರದುರ್ಗಕ್ಕೆ ತೆರಳಲಿದ್ದಾರೆ ಎಂದರು.

ಪ್ರೊಫೆಸರ್ ಸಿದ್ದಪ್ಪ ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ತುಮಕೂರು ವಿವಿಯೊಂದಿಗೆ ಸೇರಿ ಬಿದರೆಕಟ್ಟೆಯ ಹೊಸ ಕ್ಯಾಂಪಸ್‍ನಲ್ಲಿ 74 ವಿವಿಧ ಜಾತಿಯ ಹಣ್ಣಿನ ಗಿಡಗಳ ಜೊತೆಗೆ, 400 ಗಿಡಗಳನ್ನು ನೆಡಲು ತೀರ್ಮಾನ ಕೈಗೊಂಡಿದ್ದೇವೆ.ಅಲ್ಲದೆ ವೃಕ್ಷ ಮಿತ್ರ ಯೋಜನೆಯಡಿ ನಗರದ ಕೋಡಿ ಬಸವೇಶ್ವರ ದೇವಾಲಯದಿಂದ ಶ್ರೀ ದೇವಿ ಕಾಲೇಜುವರೆಗೆ ರಸ್ತೆಯ ವಿಭಜಕದಲ್ಲಿ ಬೇವಿನ ಗಿಡಗಳನ್ನು ನೆಟ್ಟು ಪೆÇೀಷಿಸಲಾಗುತ್ತಿದೆ. ಅಲ್ಲದೆ ಅಮಾನಿಕೆರೆಯಲ್ಲಿ ಗಿಡಗಳನ್ನು ನಡೆಲಾಗಿದೆ.ಜಿಲ್ಲಾಧಿಕಾರಿ ಅವರಣದಲ್ಲಿರುವ 308 ವಿವಿಧ ಜಾತಿಯ ಮರಗಳನ್ನು ಗುರುತಿಸಿ,ಅವುಗಳ ವಿವರಗಳನ್ನು ಒಳಗೊಂಡ ನಾಮಫಲಕ ಅಳವಡಿಸುವ ಕೆಲಸ ನಡೆದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಕೀಲ ಪಾವಗಡ ಶ್ರೀರಾಮ, ಕನ್ನಡಸೇನೆ ಸಂತೋಷ, ಶಬ್ಬೀರ್ ಅಹಮದ್, ರಾಮಚಂದ್ರರಾವ್, ಕೊಪ್ಪಲ್ ನಾಗರಾಜು, ವೆಂಕಟಾಚಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *