ಕೌಶಲ್ಯ – ಸಮಯದ ಸದ್ಭಳಕೆ ಮಾಡಿದರೆ ಭಾರತ ಜಗತ್ತಿನ ಮುಂಚೂಣಿ ರಾಷ್ಟ್ರವಾಗಲಿದೆ – ಡಾ.ಸಿ.ಪಳನಿವೇಲು

ತುಮಕೂರು: ಕೌಶಲ್ಯ ಮತ್ತು ಸಮಯವನ್ನು ಸದುಪಯೋಗಿಸಿಕೊಂಡರೆ ಭಾರತ ವಿಶ್ವದ ಮುಂಚೂಣಿ ರಾಷ್ಟ್ರವಾಗಲಿದೆ ಎಂದು ಭಾರತದ ಖ್ಯಾತ ಲೆಪ್ರೊಸ್ಕೋಪಿಕ್, ರೋಬೋಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಿ.ಪಳನಿವೇಲು ರವರು ಅಭಿಪ್ರಾಯಪಟ್ಟರು.

 ನಗರದ ಶಿರಾರಸ್ತೆಯ ಶ್ರೀ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮತ್ತು ಡಾ.ಎಂ.ಆರ್.ಹುಲಿನಾಯ್ಕರ್ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ಮತ್ತು ಶ್ರೀಮತಿ ಶಾಂತಾದುರ್ಗಾದೇವಿ ಹುಲಿನಾಯ್ಕರ್ “ಜೀವಮಾನ ಸಾಧನಾ ಪುರಸ್ಕಾರ”  ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸಿದ ಡಾ.ಸಿ.ಪಳನಿವೇಲುರವರು ಮಾತನಾಡುತ್ತಾ ಭಾರತೀಯರು ಮೂಲತಃ ಕೌಶಲ್ಯ ಪ್ರಜ್ಞೆಯ ಜನರು. ಬೇಡವಾದ ಕೆಲಸಕ್ಕೆ ಸಮಯ ಕಳೆಯುವುದರಿಂದ ಯಾವ ಸಾಧನೆ ಮಾಡಲಾಗುವುದಿಲ್ಲ. ಶೇಕಡ 80ಕ್ಕೂ ಹೆಚ್ಚು ಜನ ಸಾಮಾಜಿಕ ಮಾಧ್ಯಮ ಮೂಲಕ ಸಮಯವನ್ನು ಪೋಲು ಮಾಡುತ್ತಿದ್ದಾರೆ. ಇದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡರೆ ಎತ್ತರಕ್ಕೆ ಹೋಗಬಹುದು ಮತ್ತು ಸಾಧನೆ ಮಾಡಬಹುದು. ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಬಹುದು ಎಂಬುದಕ್ಕೆ ಸಾಧಕ, ಪ್ರೇರಣಾಶಕ್ತಿ ಡಾ.ಹುಲಿನಾಯ್ಕರ್ ಅವರೇ ಪ್ರತ್ಯಕ್ಷ ಸಾಕ್ಷಿ ಎಂದರು.

ಭಾರತೀಯ ಕೌಟುಂಬಿಕ ಪದ್ಧತಿ ಜಗತ್ತಿಗೆ ಮಾದರಿಯಾಗಿದೆ, ಜಪಾನ್ ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳು ನಮ್ಮ ಕೌಟುಂಬಿಕ ಪದ್ಧತಿಯನ್ನು ಅನುಸರಿಸುತ್ತಿವೆ ಎಂದರೆ ‘ಭಾರತದ ಕೌಟುಂಬಿಕ ಮತ್ತು ಧಾರ್ಮಿಕ ಮೌಲ್ಯದ ಶಕ್ತಿ ಎಷ್ಟು’ ಎಂಬುದು ಅರ್ಥವಾಗುತ್ತದೆ. ಇಂಗ್ಲೀಷ್ ಸಂಪರ್ಕ ಭಾಷೆ. ದೊಡ್ಡ-ದೊಡ್ಡ ವೇದಿಕೆಯಲ್ಲಿ ಇಂಗ್ಲೀಷ್ ಮಾತನಾಡಿದರೆ ಗೌರವ ಸಿಗುತ್ತದೆ ಎಂಬ ಭಾವನೆ ಸಲ್ಲದು ಬದಲಾಗಿ ತಾಯಿ ಭಾಷೆಯನ್ನು ಪ್ರೀತಿಸಿ ಎಂದು ಅದು ನಿಮ್ಮ ವ್ಯಕ್ತಿತ್ವದ ಶೋಭೆ ಹೆಚ್ಚಿಸುತ್ತದೆ ಎಂದು ಹೇಳಿದರು. ಸುಮಾರು 18 ಸಾವಿರಕ್ಕೂ ಲ್ಯಾಪ್ರೋಸ್ಕೋಪಿಕ್ ಮತ್ತು ರೋಬೋಟಿಕ್ ಸರ್ಜರಿ ಮಾಡಿರುವುದರಿಂದ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸನ್ಮಾನ ಪ್ರಶಸ್ತಿ ದೊರಕಿದೆ ಅದೆಲ್ಲಕ್ಕಿಂತಲೂ ಶ್ರೀದೇವಿ ಸಂಸ್ಥೆಯ ಸಂಸ್ಥಾಪಕ ಡಾ. ಹುಲಿನಾಯ್ಕರ್ ಪ್ರತಿಷ್ಠಾನ ವತಿಯಿಂದ ನೀಡಿರುವ ಪ್ರಶಸ್ತಿ ಮುಖ್ಯವಾಗಿದ್ದು ಕರ್ತವ್ಯ ಪ್ರಜ್ಞೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಓರ್ವ ವೈದ್ಯನಿಗೆ ರೋಗಿಗಿಂತ ದೊಡ್ಡವರು ಯಾರು ಇಲ್ಲ.ರೋಗಿಯನ್ನು ಉಪಚರಿಸಲು ನಮಗೆ ದೇವರೇ ನೀಡಿದ ಅವಕಾಶ ಎಂದು ತಿಳಿದು ಸೇವೆ ಮಾಡಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಈಶ್ವರ ಆರ್ ಹೊಸಮನಿರವರು ಮಾತನಾಡಿ, ಡಾ.ಸಿ.ಪಳನಿವೇಲು ಅವರೊಂದಿಗೆ ಕಳೆದ 30 ವರ್ಷದ ಒಡನಾಟ ಸ್ಮರಿಸಿದರು. ಡಾ.ಸಿ.ಪಳನಿವೇಲು ಅವರ ಸಾಧನೆಯಿಂದಾಗಿ ಕೊಯಮತ್ತೂರು ಜಗತ್ತಿನ ಶಸ್ತ್ರಚಿಕಿತ್ಸೆಯ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ್ ಪರಿಷತ್ ಅಧ್ಯಕ್ಷ ಬಸವರಾಜ ಪಾಟೀಲ್‍ರವರು ಮಾತನಾಡಿ, ಪಳನಿವೇಲುರವರು ದೇವರ ಕೃಪೆ, ಆಶೀರ್ವಾದದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ್ದಾರೆ ಎಂದರು
.
ಕಾರ್ಯಕ್ರಮದಲ್ಲಿ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಂ.ಆರ್ ಹುಲಿನಾಯ್ಕರ್‍ರವರು ಮಾತನಾಡಿ, ವೈದ್ಯಕೀಯ ಜಗತ್ತಿನ ಧ್ರುವತಾರೆ ಎನಿಸಿಕೊಂಡ ಡಾ.ಸಿ.ಪಳನಿವೇಲು ಅವರಿಗೆ ಪ್ರಶಸ್ತಿ ನೀಡುವ ಮೂಲಕ ಶ್ರೀದೇವಿ ಸಂಸ್ಥೆ ಗೌರವ-ಘನತೆ ಹೆಚ್ಚಾಗಿದೆ. ಈ ಸಂಸ್ಥೆಯನ್ನು ಪ್ರತಿಭಾವಂತರ ತಾಣವನ್ನಾಗಿಸುವಲ್ಲಿ ಎಲ್ಲರೂ ಪರಿಶ್ರಮವಿದೆ ಹೀಗಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆ ಒಂದು ಕುಟುಂಬದ ಒಬ್ಬ ವ್ಯಕ್ತಿಯ ಆಸ್ತಿಯಲ್ಲ ಸಮಾಜದ ಆಸ್ತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಗ್ಗಲಿಪುರ ಹಾರೋಹಳ್ಳಿ ತಾಲ್ಲೂಕಿನ ಸುವರ್ಣಮುಖಿ ಸಂಸ್ಕøತಿಧಾಮದ ಸಂಸ್ಥಾಪಕರು ಹಾಗೂ ಗ್ಯಾಸ್ಟ್ರೋಎಂಟರಲಾಜಿಸ್ಟ್‍ರಾದ ಡಾ.ಆಚಾರ್ಯ ಎಂ. ನಾಗರಾಜ್‍ರವರು ಮಾತನಾಡುತ್ತಾ ಸಮಾಜ ಸೇವೆಯೇ ವ್ಯೆದ್ಯರ ಪರಮ ಗುರಿ ಎಂಬುದಕ್ಕೆ ಡಾ. ಪಳನಿವೇಲು ಡಾ.ಎಂ ಆರ್ ಹುಲಿನಾಯ್ಕರ್ ಬದುಕು ಸಾಕ್ಷಿಯಾಗಿದೆ. ಅನುಕರಿಣೀಯವಾಗಿದೆ ಎಂದರು.

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಂ. ರಮಣ್ ಹುಲಿನಾಯ್ಕರ್ ಸ್ವಾಗತಿಸಿದರು.
ಶ್ರೀದೇವಿ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನರೇಂದ್ರ ವಿಶ್ವನಾಥ್ ಭಿನ್ನವತ್ತಳೆ ಮಂಡಿಸಿದರು. ಇದೇ ಸಂದರ್ಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿ ಹಾಗೂ ನೇತ್ರತಜ್ಞೆ ಡಾ.ಲಾವಣ್ಯ ರಮಣ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *