ಸ್ವರಗಳಿಗೆ ಕುಲ.ನೆಲದ ಸೋಂಕಿಲ- ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ

ತುಮಕೂರು:ಸಪ್ತ ಸ್ವರಗಳಿಗೆ ಕುಲ.ನೆಲದ ಸೋಂಕಿಲ್ಲ.ಶಿಕ್ಷಣ,ಸಂಗೀತ, ಕ್ರೀಡೆ ಇವುಗಳನ್ನು ಎಲ್ಲರೂ ದಕ್ಕಿಸಿಕೊಳ್ಳಲು ಸಾಧ್ಯ ಎಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸಿದ್ದಾರ್ಥ ಪ್ರರ್ಥಮ ದರ್ಜೆ ಕಾಲೇಜಿನಲ್ಲಿ ರಂಗಕೀರ್ತನ ಸಂಪದ,ಮಲ್ಲಸಂದ್ರ ಇವರು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದಲ್ಲಿ ಆಯೋಜಿಸಿದ್ದ “ಸಾಂಸ್ಕೃತಿಕ ಸಂಜೀವಿನಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಪಿ.ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ,ಸಿ.ಅಶ್ವಥ್ ಅವರುಗಳು ಕುಲ.ನೆಲದ ಆಚಗೂ ಮೀರಿ ಸಂಗೀತವನ್ನು ತೆಗೆದುಕೊಂಡು ಹೋಗಿದ್ದಾರೆ.ಪುರಂದರದಾಸರು,ಕನಕದಾಸರ ಕೀರ್ತನೆಗಳನ್ನು ಹಾಡುವ ಮೂಲಕ ದಾಸ ಸಾಹಿತ್ಯವನ್ನು ಉಜ್ವಲಗೊಳಿಸಿದ್ದಾರೆ ಎಂದರು.

ಯುವಜನತೆ ಇಂದು ಹೆಚ್ಚಾಗಿ ಸಿನಿಮಾ ಹಾಡುಗಳ ಕಡೆಗೆ ಹೆಚ್ಚು ಒಲವು ತೋರುತ್ತಿದೆ.ಆದರೆ ಅದಕ್ಕಿಂತಲೂ ಮಿಗಿಲಾದ ಭಾವಗೀತೆ,ಜಾನಪದ ಗೀತೆ,ವಚನಗಳ ಕಡೆಗು ಗಮನ ಹರಿಸಬೇಕಿದೆ.ಸುಗಮ ಸಂಗೀತ ಇಂದು ಬಹುಜನರು ಅನುಭವಿಸು ತ್ತಿರುವ ಮಧುಮೇಹ,ಅಧಿಕ ರಕ್ತದೊತ್ತಡದಂತಹ ಖಾಯಿಲೆಗಳಿಗೆ ಚಿಕಿತ್ಸಾ ರೂಪಕವಾಗಿ ಕೆಲಸ ಮಾಡಲಿದೆ ಎಂದು ಡಾ.ಕೆ.ಶೀನಿವಾಸಮೂರ್ತಿ ತಿಳಿಸಿದರು.

ತುಮಕೂರು ವಿವಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್ ಮಾತನಾಡಿ,ಕಲೆ,ಸಾಹಿತ್ಯ,ಸಂಗೀತ ಇವುಗಳನ್ನು ಕೇವಲ ಮನರಂಜನಾ ದೃಷ್ಟಿಯಿಂದ ನೋಡುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ.ಆದರೆ ಚಿಕಿತ್ಸಕ ದೃಷ್ಟಿಯಿಂದ ಹೆಚ್ಚು ಉಪಯೋಗವಿದೆ. ವಿದೇಶಗಳಲ್ಲಿ ಸಂಗೀತ ತರಪಿಯ ಬಹುದೊಡ್ಡ ಕೋರ್ಸುಗಳೇ ಇವೆಮಕ್ಕಳ ಚಿಕಿತ್ಸೆ,ಮನೋರೋಗ, ಕ್ಯಾನ್ಸರ್,ಹೃದ್ರೋಗ ಸಂಬಂದಿ ಹಾಗೂ ಹದಿ ಹರೆಯದ ಮಕ್ಕಳ ಚಿಕಿತ್ಸೆ ವೇಲೆ ಸಂಗೀತ ತರಪಿಗೆ ಹೆಚ್ಚಿನ ಮಹತ್ವ ನೀಡಲಾಗು ತ್ತದೆ.ಸಂಗೀತ ಮತ್ತು ಶಿಕ್ಷಣಕ್ಕೆ ನಿಕಟವಾದ ಸಂಬಂಧವಿದೆ.ಯಾರು ಸಂಗೀಸಾಕ್ತರಾಗಿರುತ್ತಾರೋ,ಅವರ ಬೌದ್ಧಿಕ ಮಟ್ಟವೂ ಚನ್ನಾಗಿರುತ್ತದೆ.ಮನುಷ್ಯನಲ್ಲಿ ಧನಾತ್ಮಕ ಚಿಂತನೆಗಳನ್ನು ಮೂಡಿಸಿ,ಆಹ್ಲಾದಕರ ಸಾಂಸಾರಿಕ ಜೀವನಕ್ಕೆ ಸಂಗೀತ ಸಹಕಾರಿ ಯಾಗಲಿದೆ. ಹಾಗಾಗಿ ಸಂಗೀತವನ್ನು ಮನರಂಜನೆಯಾಗಿ ಗ್ರಹಿಸದೆ, ಚಿಕ್ಸಿಕ ವಿಧಾನವಾಗಿ ಗ್ರಹಿಸಿದರೆ ಒಳ್ಳೆಯದೆಂದರು.

ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ,ಸಂಗೀತದಲ್ಲಿ ಜೀವದ್ರವ್ಯವಿದೆ.ಸಂಗೀತ ಮನಸ್ಸಿಗೆ ಆನಂದ ನೀಡುತ್ತದೆ.ಇದರಿಂದ ಮನುಷ್ಯನ ದೈಹಿಕ ಬೆಳೆವಣಿಗೆಯೂ ಸರಿಯಾಗಿ ಆಗಲಿದೆ. ರಂಗಕೀತನ ಸಂಸ್ಥೆಯ ಡಾ.ಲಕ್ಷ್ಮಣದಾಸ್ ಜನ ಕಥಾ ಕೀರ್ತನ ಎಂಬ ಹೊಸ ಪ್ರಕಾರವನ್ನೇ ಹುಟ್ಟು ಹಾಕುವ ಮೂಲಕ ಈ ಸಮಾಜದ ಸುಧಾರಣೆಗಾಗಿ ಹೋರಾಡಿದ ಅನೇಕರನ್ನು ಯುವಜನರಿಗೆ ಪರಿಚಯಿಸಿದ್ದಾರೆ ಎಂದರು.

ಸ್ವರಸಿಂಚನ ಸುಗಮಸಂಗೀತ, ಜನಪದ ಕಲಾ ಸಂಘದ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ,ಸ್ವರಸಿಂಚನ ಮತ್ತು ರಂಗಕೀರ್ತನ ಸಂಪದ ಎರಡು ಸಂಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸುತ್ತಿವೆ.ಬೇರೆಲ್ಲಾ ಉದ್ಯೋಗಗಳಲ್ಲಿ ಆಯಾಯ ವರ್ಗದವರು ಗೌರವಿಸಿದರೆ ಕಲಾವಿದನಿಗೆ ಎಲ್ಲ ವರ್ಗದವರಿಂದಲೂ ಗೌರವ ಸಲ್ಲುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತಾ ಮಾತನಾಡಿ, ಒರ್ವ ವ್ಯಕ್ತಿಯ ಬೆಳವಣಿಗೆಯಲ್ಲಿ ಸಂಗೀತ ಮಹತ್ವದ ಪಾತ್ರವನ್ನು ವಹಿಸುತ್ತದೆ.ಮನಸ್ಸಿನ ಏಕಾಗ್ರತೆ, ನೆನಪಿನ ಶಕ್ತಿಯನ್ನು ಹೆಚ್ಚಿಸುವ ಸಂಗೀತವನ್ನು ನಾವೆಲ್ಲರೂ ಆಸ್ವಾದಿಸುವ ಗುಣ ಬೆಳೆಸಿಕೊಳ್ಳೋಣ ಎಂದರು.

ರಂಗಕೀರ್ತನ ಸಂಪದ(ರಿ).ಮಲ್ಲಸಂದ್ರ ಇದರ ಅಧ್ಯಕ್ಷ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ,ನಾನು ನಂಬಿದ ಸಂಗೀತ ನನಗೆ ಎಲ್ಲವನ್ನು ತಂದುಕೊಟ್ಟಿದೆ.ನನ್ನ ಹಲವಾರು ಕಾರ್ಯಕ್ರಮಗಳಿಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಅವಕಾಶ ನೀಡಿ,ಪ್ರೋತ್ಸಾಹಿಸಿದೆ. ಇಂದಿನ ಕಾರ್ಯಕ್ರಮಕ್ಕೆ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಆಗಮಿಸಿ, ಮಹಾಭಾರತದ ಕರ್ಣದ ಹಾಡೊಂದನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ.ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಾಂಸ್ಕøತಿಕ ಸಂಜೀವಿನಿ ಕಾರ್ಯಕ್ರಮದಲ್ಲಿ ದಿಬ್ಬೂರು ಮಂಜು ಮತ್ತು ತಂಡದವರಿಗೆ ಗೀತ ಗಾಯನ, ಶ್ರೀಮತಿ ಜಿ.ಶೀಲಾ ನಾಯ್ಡು ಮತ್ತು ತಂಡದವರಿಂದ ಸಂಕೀರ್ತನ ಗಾಯನ, ಬಿ.ಎಸ್.ಶ್ರೀನಿವಾಸಮೂರ್ತಿ ಮತ್ತು ವೃಂದದವರಿಂದ ಭಕ್ತಿಗೀತೆಗಳ ನಾಯನ ನಡೆಯಿತು.

ವೇದಿಕೆಯಲ್ಲಿ ಶ್ರೀಮತಿ ಶೀಲಾ ನಾಯ್ಡು,ಶ್ರೀಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ರಮೇಶ್ ಮಣ್ಣೆ,ಉಪನ್ಯಾಸಕರಾದ ಶ್ರೀನಿವಾಸಮೂರ್ತಿ,ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *