ತುಮಕೂರು: ಮಾರ್ಚ್ 27ಕ್ಕೆ ಒಳ ಮೀಸಲಾತಿ ಚರ್ಚೆಯನ್ನ ಸಂಪುಟ ಸಭೆಯಲ್ಲಿ ಮಂಡಿಸಲು ಹೊರಟಿದ್ದು ಅಂದು ಮಾದಿಗ ಸಮುದಾಯಕ್ಕೆ ಸಂಪೂರ್ಣ ಒಳ ಮೀಸಲಾತಿಯನ್ನು ಜಾರಿ ಮಾಡದೆ ಹೋದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾದಿಗರು ದಂಗೆ ಏಳುತ್ತಾರೆ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿ ಜಾಂಬವ ಬೃಹನ್ ಮಠದ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿಗಳವರು ತಿಳಿಸಿದರು.
ದಸಂಸ ಸಂಸ್ಥಾಪಕರಾದ ಪೆÇ್ರಫೆಸರ್ ಬಿ ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಪಾದಯಾತ್ರೆ ಕೈಗೊಂಡು ತುಮಕೂರು ನಗರಕ್ಕೆ ಆಗಮಿಸಿ ಟೌನ್ ಹಾಲ್ ಸರ್ಕಲ್ ನ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಜನೆ ನಂತರ ನಂತರ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ಬಹು ಸಂಖ್ಯಾತರೆನಿಸಿಕೊಂಡಿರುವ ಮಾದಿಗ ಸಮುದಾಯವು 30-40 ವರ್ಷಗಳಿಂದ ಒಳ ಮೀಸಲಾತಿ ಜಾರಿಗಾಗಿ ಅನೇಕ ಹೋರಾಟ ಪ್ರತಿಭಟನೆಗಳನ್ನ ನಡೆಸಿದ ಪರಿಣಾಮ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನ ಆದೇಶದಂತೆ ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನ ಘೋಷಣೆ ಮಾಡಿಕೊಳ್ಳಬಹುದು. ಎಂದು ತಿಳಿಸಿದ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಏನು ಘೋಷಣೆ ಮಾಡಿತು, ಆದರೆ ನ್ಯಾಯಾಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಅನುಸಾರ ಒಳ ಮೀಸಲಾತಿ ಜಾರಿ ಮಾಡದೆ ರಾಜ್ಯ ಸರ್ಕಾರ ಯಾರದೋ ಒತ್ತಡಕ್ಕೆ ಮಣಿದು ಅವೈಜ್ಞಾನಿಕವಾಗಿ 52,4 32 ಹುದ್ದೆಗಳನ್ನು ಮಾದಿಗರಿಗೆ ಅನ್ಯಾಯ ಮಾಡಿ ತುಂಬಲು ಹೊರಟಿದ್ದ ಬೆನ್ನಲ್ಲೇ ಬೃಹತ್ ಪ್ರತಿಭಟನೆ ನಡೆದ ಕಾರಣ ಮಾರ್ಚ್ 27ರಂದು ಸಚಿವ ಸಂಪುಟದಲ್ಲಿ ತೀಮಾನಿಸುವುದಾಗಿ ತಿಳಿಸಲಾಗಿದೆ.
ಸಿದ್ದರಾಮಯ್ಯ ನವರ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ ಹಸಿದವರಿಗೆ ಅನ್ನ ನೀಡುವ ಬದಲು ಪಟ್ಟಭದ್ರರ ಮಾತಿನಂತೆ ಸಿದ್ದರಾಮಯ್ಯನವರು ಒತ್ತಡಕ್ಕೆ ಮಣಿದು, ಮಾದಿಗರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಮುಖ್ಯಮಂತ್ರಿಯಾದ ಇವರಿಗೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವ ಅಧಿಕಾರವಿದ್ದರೂ, ಒಳ ಮೀಸಲಾತಿಯ ವಿರೋಧಿಗಳ ಮಾತನ್ನು ಆಲಿಸುತ್ತಿದ್ದಾರೆ 35 ವರ್ಷಗಳಿಂದ ಮೀಸಲಾತಿ ಜಾರಿಗಾಗಿ ಹಸಿದಿರುವ ಮಾದಿಗರಿಗೆ ಅನ್ನ ನೀಡುವ ಸಿದ್ದರಾಮಯ್ಯನವರು ಮಾರ್ಚ್ 27ಕ್ಕೆ ಸಂಪೂರ್ಣ ಒಳ ಮೀಸಲಾತಿಯ ಘೋಷಣೆ ಮಾಡದೇ ಹೋದಲ್ಲಿ ಮುಂದಿನ ದಿನದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸ್ವಾಮೀಜಿಯವರು ಎಚ್ಚರಿಕೆ ನೀಡಿದರು.
ಒಳ ಮೀಸಲಾತಿ ಜಾರಿಯಾಗದೆ ಹೋದರೆ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರುಗಳೇ ಕಾರಣವಾಗುತ್ತಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸಿತ್ತು ಇದರಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿಕೊಂಡಿತ್ತು ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯ ವಿಚಾರವನ್ನು ಧಿಕ್ಕರಿಸಿದ್ದು ರಾಜ್ಯ ಸರ್ಕಾರದಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿದ್ದಾರೆ, ಹೀಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ಬಹುಸಂಖ್ಯಾತರು ಮತ್ತು ಶೋಷಣೆ ಒಳಗಾದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ನಿರ್ದೇಶನ ನೀಡಬಹುದಿತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಆಡಳಿತ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬಹುದಿತ್ತು ಆದರೆ ಎಲ್ಲೋ ಒಂದು ಕಡೆ ಸಮುದಾಯದ ಮತಗಳನ್ನು ಪಡೆದ ಇವರು ಹಿಂದೂ ಸಮುದಾಯವನ್ನು ಮರೆತಿದ್ದಾರೆ, ರಾಜ್ಯದಲ್ಲಿ ಸಂಪೂರ್ಣ ಒಳ ಮೀಸಲಾತಿ ಜಾರಿಯಾಗದೆ ಹೋದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾಕ್ಟರ್ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮೈಸೂರಿನ ಹಿರಿಯ ವಕೀಲ ಅರುಣ್ ಕುಮಾರ್ ಅವರು ಮಾತನಾಡಿ ಸಾಮಾಜಿಕ ನ್ಯಾಯದ ಪರವಾಗಿರುವ ಸಿದ್ದರಾಮಯ್ಯನವರು ಅವರ ಬಗ್ಗೆ ಮಾದಿಗ ಸಮುದಾಯಕ್ಕೆ ಅಪಾರವಾದ ಗೌರವವಿದೆ ಅನೇಕ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯನವರನ್ನು ಪಳಮಿಸಲಾತಿಯನ್ನು ಜಾರಿ ಮಾಡುತ್ತದೆ ಎಂದು ನಂಬಿದೆ ಬರುವ ಮಾರ್ಚ್ 27ಕ್ಕೆ ಸಿದ್ದರಾಮಯ್ಯನವರು ಮಾದಿಗ ಅಥವಾ ವಲಯ ಸಂಬಂಧಿತ ಸಚಿವರು ಮುಖಂಡರನ್ನ ಹೊರತು ಪಡಿಸಿ ಅಡ್ವಕೇಟ್ ಜನರಲ್ , ನಿವೃತ್ತ ನ್ಯಾಯಾಧೀಶ ರು ಸೇರಿದಂತೆ ನಾಗಮೋಹನ್ ದಾಸ ಅವರನ್ನ ಕರೆದು ಒಳ ಮೀಸಲಾತಿ ಜಾರಿಗೆ ಇರುವ ಕಾನೂನಾತ್ಮಕ ಚರ್ಚೆಗಳನ್ನು ತಿಳಿದು ಜಾರಿ ಮಾಡುವುದು ಒಳಿತು ಇಲ್ಲವಾದರೆ ಮುಂಬರುವ ನಾವು ತಗಳಿಗೆ ಮುಖ್ಯಮಂತ್ರಿಗಳು ಕಾರಣರಾಗುತ್ತಾರೆ ಎಂದು ತಿಳಿಸಿದರು.
ಪಾದಯಾತ್ರೆ ಸಂದರ್ಭದಲ್ಲಿ ಮಾಜಿ ಸಚಿವ ಸೂಗಡು ಶಿವಣ್ಣ, ಸಮುದಾಯದ ಮುಖಂಡರು ನಾಯಕರು ಇತರರು ಭಾಗಿಯಾಗಿದ್ದರು.
ಪಾದಯಾತ್ರೆ ವೇಳೆ ಅಸ್ವಸ್ಥರಾದ ಸ್ವಾಮೀಜಿ : ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಮುದಾಯದ ಮುಖಂಡ ಪೆÇ್ರೀ.ಬಿ.ಕೃಷ್ಣಪ್ಪ ಸ್ಮಾರಕ ಸ್ಥಳದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಆರಂಭಿಸಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಆದಿ ಜಾಂಭವ ಮಠದ ಪೀಠಾಧ್ಯಕ್ಷ ಷಡಕ್ಷರೀ ಸ್ವಾಮೀಜಿ ತುಮಕೂರು ನಗರದಲ್ಲಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ವೇಳೆ ತೀವ್ರ ಅಸ್ವಸ್ಥಗೊಂಡ ಘಟನೆ ನಡೆಯಿತು.
ಸ್ವಾಮೀಜಿಯವರನ್ನು ಸಂತೈಸಿದ ಹೋರಾಟಗಾರರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಸಿದ್ಧಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.

ಆಸ್ಪತ್ರೆಗೆ ಎಸ್ಪಿ ಭೇಟಿ ಆರೋಗ್ಯ ವಿಚಾರಣೆ
ಪಾದಯಾತ್ರೆ ಯಿಂದ ಬಳಲಿ ಅಸ್ಚಸ್ಥರಾದ ಸ್ವಾಂಇಜಿಯವರನ್ನ ಸಿದ್ದಗಂಗಾ ಖಾಸಗಿ ಆಸ್ಪತ್ರೆ ದಾಖಲಿಸಿದ ನಂತರ ತುಮಕೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ವಿ.ಆಶೋಕ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸ್ವಾಮೀಜಿ ಆರೋಗ್ಯ ವಿಚಾರಣೆ ಮಾಡಿದರು.