ತುಮಕೂರು : ಮೇ1ರ ಕಾರ್ಮಿಕ ದಿನಾಚರಣೆ ಹಾಗೂ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ರವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜಿ.ಬಿ.ಜ್ಯೋತಿಗಣೇಶ್ ಅಭಿಮಾನಿ ಬಳಗದ ವತಿಯಿಂದ ತುಮಕೂರು ಮಹಾನಗರಪಾಲಿಕೆಯ ಆವರಣದಲ್ಲಿ ಹಲವಾರು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 8ಗಂಟೆಗೆ ಮಹಾನಗರಪಾಲಿಕೆಯ ಆವರಣದಲ್ಲಿ ಕೇಂದ್ರದ ಸಶಸ್ತ್ರ ಪಡೆಗಳ ಯುದ್ಧ ಗಾಯಾಳುಗಳ ಕಲ್ಯಾಣ ನಿದಿಗೆ ದೇಣಿಗೆ ನೀಡುವುದು, ಕೃತಕ ಕೈ-ಕಾಲುಗಳ ಜೋಡಣೆ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ಬೀದಿ ಬದಿ ವ್ಯಾಪಾರಿಗಳ ನೆರಳಿಗೆ ಕೊಡೆ ವಿತರಣೆ, ದಿನಪತ್ರಿಕೆ ವಿತರಕರಿಗೆ ಜರ್ಕಿನ್ ವಿತರಣೆ, ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ, ಗೋ ಶಾಲೆಗೆ ಮೇವು ವಿತರಣೆ, ಆಟೋ ಚಾಲಕರು ಹಾಗೂ ಎ.ಪಿ.ಎಂ.ಸಿ ಅಮಾಲಿಗಳಿಗೆ ಸಮವಸ್ತ್ರ ವಿತರಣೆ, ಪೌರಕಾರ್ಮಿಕರಿಗೆ ಗೃಹಬಳಕೆಯ ಅಗತ್ಯ ವಸ್ತು ವಿತರಣೆ ಹಾಗೂ ಪೌರಕಾರ್ಮಿಕರು, ಎ.ಪಿ.ಎಂ.ಸಿ ಕಾರ್ಮಿಕರುಗಳು ಹಾಗೂ ಸಾರ್ವಜನಿಕರಿಗೆ ಬೃಹತ್ ಆರೋಗ್ಯ ಶಿಬಿರ ಮತ್ತು ಇತರ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.