ತುಮಕೂರು: ಸಂಸದ ಜಿ.ಎಸ್.ಬಸವರಾಜು ಅವರು ಜಿಲ್ಲೆಯ ಸಮಸ್ಯೆಯ ಬಗ್ಗೆ ಸಂಸತ್ತಿನಲ್ಲಿ ಒಂದೇ ಒಂದು ಬಾರಿ ಮಾತನಾಡಿರುವುದನ್ನು ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಂದು ಕೆ.ಎಸ್.ಆರ್. ಟಿ.ಸಿ. ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹೇಳಿದರು.
ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳಿಸಿದ್ದೀರಿ ಒಬ್ಬರಾದರೂ ಸಂಸತ್ತಿನಲ್ಲಿ ಮಾತನಾಡಿದ್ದಾರಾ? ಮೋದಿ ಎದುರು ಬಂದ್ರೆ ಉಚ್ಚೇ ಉಯ್ಕೊಂತ್ತಾರೆ ಎಂದು ಬಿಜೆಪಿ ಸಂಸದರನ್ನು ಲೇವಡಿ ಮಾಡಿದರು
ಜಿಲ್ಲೆಯಿಂದ ಬಸವರಾಜು ಗೆಲ್ಲಿಸಿದ್ದೀರಾ ಸಂಸತ್ತಿನಲ್ಲಿ ಒಂದೇ ಒಂದು ಮಾತನಾಡಿಲ್ಲ, ಸಂಸತ್ತಿನಲ್ಲಿ ಅವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದ ಅಚರು, ರಾಜ್ಯದ ಪರವಾಗಿ ಮಾತನಾಡದ ನಪುಂಸಕರನ್ನು ಗೆಲ್ಲಿಸುವುದರಿಂದ ಏನು ಉಪಯೋಗ, ಸೋಮಣ್ಣನ ಮನೆ ಬಾಗಿಲಿಗೆ ಹೋಗಲು 400 ಖರ್ಚು ಮಾಡೋಕು ಹರಿಯುವ ನೀರಿನ ಹಿಂದೆ ಹೋಗದೇ ನಿಂತ ನೀರಾಗಿರುವ ಎಸ್.ಪಿ ಮುದ್ದಹನುಮೇಗೌಡರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಸಿದ್ದಗಂಗಾ ಮಠಕ್ಕೆ ಬಂದು ಸ್ವಾಮೀಜಿ ಕಾಲಿಗೆ ಬಿದ್ದಿರುವುದನ್ನು ಬಿಟ್ಟರೆ ಜಿಲ್ಲೆಗೂ ಸೋಮಣ್ಣನಿಗೂ ಯಾವುದೇ ಸಂಬಂಧವಿಲ್ಲ, ಈ ಚುನಾವಣೆ ಜಿಲ್ಲೆಯ ಪ್ರಶ್ನೆ, ಹೊರಗಿನಿಂದ ಬಂದು ಸ್ಪರ್ಧಿಸಿರುವ ಸೋಮಣ್ಣನವರಿಗೆ ಯಾವುದೇ ಕಾರಣಕ್ಕೂ ಮತ ನೀಡಬಾರದು ಎಂದು ಹೇಳಿದರು.
ಸಭೆಯಲ್ಲಿ ಸಚಿವ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಎಸ್.ಪಿ.ಮುದ್ದಹನುಮೇಗೌಡ, ಶಫೀ ಅಹಮದ್, ಇಕ್ಬಾಲ್ ಅಹ್ಮದ್, ರಫೀಕ್ ಅಹಮದ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುರುಳೀಧರ ಹಾಲಪ್ಪ, ನಿಖೇತರಾಜ್ ಮೌರ್ಯ,ಇತರರಿದ್ದರು.