ತುಮಕೂರು : ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 1ರಂದು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಸಂಬಂಧ ಗಣ್ಯರ ಭದ್ರತಾ ದೃಷ್ಟಿಯಿಂದ ಮಾರ್ಚ್ 31ರ ರಾತ್ರಿ 12 ಗಂಟೆಯಿಂದ ಏಪ್ರಿಲ್ 1ರ ಮಧ್ಯಾಹ್ನ 1.30 ಗಂಟೆಯವರೆಗೆ ತುಮಕೂರು ನಗರದಲ್ಲಿ ವಾಹನ ನಿಲುಗಡೆ ನಿಷೇಧ ಹಾಗೂ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ.

ತುಮಕೂರು ನಗರದ ಶ್ರೀ ಶಿವಕುಮಾರ್ ಸ್ವಾಮೀಜಿ ಸರ್ಕಲ್ನಿಂದ ಬಟವಾಡಿ ಮಾರ್ಗವಾಗಿ, ಬಟವಾಡಿ ಅಂಡರ್ಪಾಸ್-ಎ.ಪಿ.ಎಂ.ಸಿ ಯಾರ್ಡ್-ಎನ್.ಹೆಚ್-48 ರಸ್ತೆ ಮಾರ್ಗವಾಗಿ ಕ್ಯಾತ್ಸಂದ್ರ ಎನ್.ಹೆಚ್-48 ಸರ್ಕಲ್- ಶ್ರೀ ಸಿದ್ದಗಂಗಾ ಮಠದ ಕಾರ್ಯಕ್ರಮ ಸ್ಥಳದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡದಂತೆ ಆದೇಶಿಸಿದೆ.
ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ಲಘು ವಾಹನಗಳು ನವೀನ್ ರೆಜೆನ್ಸಿ-ಹನುಮಂತಪುರ ಬ್ರಿಡ್ಜ್-ಕೋತಿತೋಪು ರಸ್ತೆ ಮೂಲಕ ಸಾಗಿ, ತುಮಕೂರು ನಗರ ಪ್ರವೇಶಿಸುವುದು.
ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ಭಾರಿ ವಾಹನಗಳು ನವೀನ್ ರೆಜೆನ್ಸಿ ಹನುಮಂತಪುರ ಬ್ರಿಡ್ಜ್-ಸತ್ಯಮಂಗಲ ರಸ್ತೆ ಮೂಲಕ-ಶಿರಾಗೇಟ್ ಸರ್ಕಲ್, ಕೋಡಿ ಸರ್ಕಲ್ ಮೂಲಕವಾಗಿ ತುಮಕೂರು ನಗರ ಪ್ರವೇಶಿಸುವುದು.
ಬೆಂಗಳೂರು ಕಡೆಗೆ ಹೋಗುವ ಭಾರಿ ವಾಹನಗಳು ಅಶೋಕ ರಸ್ತೆ-ಚರ್ಚ್ ಸರ್ಕಲ್-ಕೋಡಿ ಸರ್ಕಲ್ ಶಿರಾಗೇಟ್ ಸರ್ಕಲ್-ಸತ್ಯಮಂಗಲ ರಸ್ತೆ-ಎನ್ಹೆಚ್-48 ರಸ್ತೆ ಮಾರ್ಗವಾಗಿ ಸಂಚರಿಸುವುದು.
ಬೆಂಗಳೂರು ಕಡೆಗೆ ಹೋಗುವ ಲಘು ವಾಹನಗಳು ಅಶೋಕ ರಸ್ತೆ, ಚರ್ಚ್ ಸರ್ಕಲ್, ಕೋಡಿ ಸರ್ಕಲ್ ಮೂಲಕ ಅಮಾನಿಕೆರೆ ರಸ್ತೆ-ಕೋತಿತೋಪು ಸರ್ಕಲ್-ಹನುಮಂತಪುರ ಬ್ರಿಡ್ಜ್–ರಾಷ್ಟ್ರೀಯ ಹೆದ್ದಾರಿ 48 ಮಾರ್ಗವಾಗಿ ಸಂಚರಿಸುವುದು.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿದೆ, ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ವಹಿಸಲು ಪೆÇಲೀಸ್ ಇಲಾಖೆಗೆ ಸೂಚಿಸಲಾಗಿದೆ.