ಜನಪದ ಪೂರ್ವಜರು ನೀಡಿರುವ ದೊಡ್ಡ ಕೊಡುಗೆ-ನಾಹಿದಾ ಜಮ್ಹ್, ಜಮ್ಹ್

ತುಮಕೂರು: ಜನಪದವೆಂಬುದು ನಮ್ಮ ಪೂರ್ವಜರು ನಮಗೆ ನೀಡಿರುವ ಬಹುದೊಡ್ಡ ಕೊಡುಗೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತುಮಕೂರು ಉಪವಿಭಾಗಾಧಿಕಾರಿ ಶ್ರೀಮತಿ ನಾಹಿದಾ ಜಮ್ಹ್, ಜಮ್ಹ್ ತಿಳಿಸಿದರು.

ನಗರದ ಎಸ್.ಎಸ್.ಪುರನ ಶ್ರೀವಾಸವಿ ದೇವಾಲಯದ ಆವರಣದಲ್ಲಿರುವ ಶ್ರೀವಾಸವಿ ಸುಜ್ಞಾನ ಕೇಂದ್ರದ ಸಭಾಂಗಣದಲ್ಲಿ ಸ್ವರ ಸಿಂಚನ ಸುಗಮ ಸಂಗೀತ ಜನಪದ ಕಲಾಸಂಸ್ಥೆ, ತುಮಕೂರು, ಇವರು ಜ್ಞಾನಬುತ್ತಿ ಸತ್ಸಂಗ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಕೊರಳ ಕೊಳಲ ದನಿಗೆ ಗೆಜ್ಜೆಯ ನಾದವಾಲಿಸೇ..ಓ ಮನಸೇ ಎಂಬ ಸಾಂಸ್ಕøತಿಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಜಾನಪದದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಶಸ್ತವಿದೆ. ಎಲ್ಲದಕ್ಕೂ ಹೆಣ್ಣೆ ಮೊದಲು ಎಂಬುದನ್ನು ನಮ್ಮ ಪುರಾಣಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ ಇಂತಹ ಪ್ರಮುಖ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.

ಸುಗಮ ಸಂಗೀತ ಕಲಾವಿದರಾದ ಕೆಂಕೆರೆ ಮಲ್ಲಿಕಾರ್ಜುನ್ ಬಹಳ ಸ್ವಾಭಿಮಾನದ ಕಲಾವಿದ. ಶ್ರೇಯಸ್ಸಿಗಾಗಿ ಅಡ್ಡದಾರಿ ಹಿಡಿದವರಲ್ಲ. ಅವರು ಜನಪದ ಆಕಾಡೆಮಿ ಸದಸ್ಯರಾದ ನಂತರ ತುಮಕೂರು ಜಿಲ್ಲೆಗೆ ಹೆಚ್ಚಿನ ಪ್ರಶಸ್ತಿಗಳು ಸಂದಿವೆ. ಇಂದಿನ ಯುವಪೀಳಿಗೆಗೆ ಪರಿಚಯವೇ ಇಲ್ಲದ ಅನೇಕ ಕಲೆಗಳು ಹಾಗೂ ಕಲಾವಿದರನ್ನು ಗುರುತಿಸಿ, ವೇದಿಕೆ ನೀಡುವುದರ ಜೊತೆಗೆ, ಅವರಿಗೆ ಪ್ರಶಸ್ತಿ ನೀಡಿ, ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಅಧುನಿಕತೆಯ ಹೆಸರಿನಲ್ಲಿ ಪ್ರಾಶ್ಚಿಮಾತ್ಯ ಪರಂಪರೆಯನ್ನು ಅನುಸರಿಸುತ್ತಾ ಬಂದಿರುವ ನಮಗೆ,ನಮ್ಮ ಸಂಸ್ಕøತಿ, ಪರಂಪರೆಯನ್ನು ಬಿಂಬಿಸುವ ಜನಪದದ ಮಹತ್ವವನ್ನು ಅರಿತು, ಅದನ್ನು ಉಳಿಸಿ, ಬೆಳೆಸುವತ್ತ ಕಾರ್ಯೋನ್ಮುಖರಾಗಬೇಕಿದೆ ಎಂದು ಶ್ರೀಮತಿ ನಾಹಿದಾ ಜಮ್ಹ್, ಜಮ್ಹ್ ನುಡಿದರು.

ನಗರಪಾಲಿಕೆ ಉಪ ಆಯುಕ್ತರಾದ ಶ್ರೀಮತಿ ಸುಪ್ರಿಯ ಬಾಣಗಾರ್ ಮಾತನಾಡಿ, ಜನಸಾಮಾನ್ಯರು ತಮ್ಮ ಮನದ ನೋವು, ನಲಿವುಗಳನ್ನು ವ್ಯಕ್ತಪಡಿಸಲು ಕಂಡುಕೊಂಡ ದಾರಿಯೇ ಜನಪದ. ಉತ್ತರ ಕರ್ನಾಟಕದಲ್ಲಿ ಜನಪದ ಬಹಳ ಉತ್ತುಂಗದಲ್ಲಿದೆ.ದೇವರ ಚರಿತ್ರೆಗಳು ಸಹ ಜನಪದವನ್ನೇ ಅವಲಂಬಿಸಿವೆ. ಸರಕಾರ ಒಂಭತ್ತನೇ ತರಗತಿಯಲ್ಲಿ ಜನಪದ ಕುರಿತು ಪಠ್ಯ ನೀಡಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿರುವುದು ಸ್ವಾಗತಾರ್ಹ ಎಂದರು.

ನಿವೃತ್ತ ಎಇಇ ಜಿ.ಹೆಚ್.ಷಣ್ಮುಗಪ್ಪ ಮಾತನಾಡಿ,ಸಾಹಿತಿ ಡಾ.ಎನ್.ನಾಗಪ್ಪ ಅವರಿಂದ ಪರಿಚಯವಾದ ಕೆಂಕೆರೆ ಮಲ್ಲಿಕಾರ್ಜುನ್ ಒಬ್ಬ ಒಳ್ಳೆಯ ಸುಗಮ ಸಂಗೀತ ಕಲಾವಿದ. ನಾಡಿನ ಹೆಸರಾಂತ ಕಲಾವಿದರೊಂದಿಗೆ ಪ್ರಸಿದ್ದ ವೇದಿಕೆಗಳಲ್ಲಿ ಹಾಡಿರುವುದಲ್ಲದೆ, ತನ್ನಂತೆಯೇ ಹತ್ತಾರು ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟಿದ್ದಾರೆ.ಜನಪದ ಅಕಾಡೆಮಿ ಸದಸ್ಯರಾಗಿರುವ ಅವರು ಇನ್ನೂ ಹೆಚ್ಚಿನ ಹುದ್ದೆಯನ್ನು ಅಲಂಕರಿಸುವಂತಾಗಲಿ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕು ಮುರ್ಜಿ ಮಾತನಾಡಿ, ಎಲೆಮರೆಯ ಕಾಯಿಯಂತೆ ಸಂಗೀತ, ನೃತ್ಯ, ಲಲಿತ ಕಲೆಗಳ ಸೇವೆಯಲ್ಲಿ ತೊಡಗಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಇಲಾಖೆ ಮಾಡುತ್ತಾ ಬಂದಿದೆ. ತುಮಕೂರಿನ ಕಲಾ ಲೋಕದಲ್ಲಿ ಕೆಂಕೆರೆ ಮಲ್ಲಿಕಾರ್ಜುನ ಒಳ್ಳೆಯ ಹೆಸರು ಮಾಡಿದ್ದಾರೆ. ಸ್ಥಳೀಯ ಕಲಾವಿದರ ಜೊತೆಗೆ, ರಾಜ್ಯದ ಪ್ರಸಿದ್ದ ಕಲಾವಿದರ ಕಾರ್ಯಕ್ರಮಗಳು ಇವರ ಸಂಸ್ಥೆಯ ಅಡಿಯಲ್ಲಿ ನಡೆದಿವೆ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ವರಸಿಂಚನ ಸುಗಮ ಸಂಗೀತ ಜನಪದ ಕಲಾ ಸಂಸ್ಥೆಯ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್, ಇಂದಿಗೆ ನಮ್ಮ ಸಂಸ್ಥೆ ಪ್ರಾರಂಭವಾಗಿ 25 ವಸಂತಗಳನ್ನು ಕಂಡಿದೆ. ಆರಂಭದಲ್ಲಿ ಕಲಾವಿದ ಟಿ.ಹೆಚ್.ಸುರೇಶ್ ಮತ್ತು ಇತರರೊಂದಿಗೆ ಸೇರಿ 300 ರೂಗಳಿಗೆ ಒಂದು ಕಾರ್ಯಕ್ರಮ ನೀಡುತ್ತಿದ್ದೆವು. ನಮ್ಮಲ್ಲಿರುವ ಕಲೆಯನ್ನು ಗುರುತಿಸಿ, ಅನೇಕರು ಪ್ರೋತ್ಸಾಹ ನೀಡಿ,ಇಲ್ಲಿಯವರೆಗೆ ಬೆಳೆಸಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಮ್ಮಂತಹ ಕಲಾವಿದರಿಗೆ ತಾಯಿ ಇದ್ದಂತೆ, ನಿಮ್ಮೆಲ್ಲರ ಪ್ರೋತ್ಸಾಹ ಹೀಗೆಯೇ ಸಂಸ್ಥೆಯ ಮೇಲಿರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರುಳಿಕೃಷ್ಣಪ್ಪ ವಹಿಸಿದ್ದರು.ವೇದಿಕೆಯಲ್ಲಿ ಜ್ನಾನ ಬುತ್ತಿ ಸತ್ಸಂಗ ಕೇಂದ್ರದ ಆರ್.ಎಲ್. ರಮೇಶ್ ಬಾಬು, ನಾರಾಯಣ್, ವಿ.ಪಿ. ಕೃಷÀಮೂರ್ತಿ,ಸಾಮಾಜಿಕ ಚಿಂತಕ ಸಾ.ಚಿ.ರಾಜಕುಮಾರ್, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟಾರ್ ಶ್ರೀಮತಿ ನೀಲಮ್ಮ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಪದ ದೇವರಾಜು, ರಾಜ್ಯಮಟ್ಟದ ಕಲಾವಿದರಾದ ಕೋಲಾರ ರಮೇಶ್, ಗಾಯಕರಾದ ಬಾಣಸಂದ್ರ ರವಿಕುಮಾರ್ ಇತರರುಉಪಸ್ಥಿತರಿದ್ದರು.

ಕೊರಳ ಕೊಳಲ ದ್ವನಿಗೆ ಗೆಜ್ಜೆಯ ನಾದವಾಲಿಸೇ ಓ ಮನವೇ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪ್ರಸಿದ್ದ ಅಂತರರಾಷ್ಟ್ರೀಯ ನೃತ್ಯ ಕಲಾವಿದರಾದ ವಿದ್ವಾನ್ ಕೋಲಾರ ರಮೇಶ್ ಮತ್ತು ತಂಡದಿಂದ ಜಾನಪದ ನೃತ್ಯ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯರಾದ ಪದ ದೇವರಾಜು, ಶ್ರೀಮತಿ ವನಿತ ಹಿರೇಮಠ, ವೈ.ಎನ್.ಶಶಿಕುಮಾರ್ ತಂಡದಿಂದ ಗೀತ ವೈವಿದ್ಯ ಹಾಗೂ ಜನಪದ ಗಾಯನ, ಬೆಂಗಳೂರಿನ ಸಮೃದ್ದಿ ಸಂಗೀತ ಶಾಲೆಯ ಶ್ರೀಮತಿ ಮಂಜುಳ ಮತ್ತು ತಂಡದಿಂದ ಸುಗಮ ಸಂಗೀತ ಗಾಯನ, ಚಿಕ್ಕನಾಯಕನಹಳ್ಳಿ ತಾಲೂಕು ಎಳನಡುವಿನ ಶ್ರೀಗುರು ರಾಜಯೋಗಿ ಸಾಂಸ್ಕøತಿಕ ಕಲಾ ಸಂಸ್ಥೆಯ ರಘು ಪೂಜಾರ್ ಮತ್ತು ತಂಡದಿಂದ ತತ್ವಪದಗಳ ಗಾಯನ ನಡೆಯಿತು. ಪಂಡಿತ್ ನಾಗರಾಜ ಶ್ಯಾವಿ ಕೊಪ್ಪಳ ಇವರ ಕೊಳಲು ನಾದನ ಪ್ರೇಕ್ಷಕರ ಮನ ಸೂರೆಗೊಂಡಿತು.

ಹಿನ್ನೆಲೆ ಸಂಗೀತದ ವಾದ್ಯ ಸಹಕಾರÀದಲ್ಲಿ ಕೀಬೋರ್ಡ್ ಗಣೇಶ್ ಪ್ರಸಾದ್, ತಬಲ ಲೋಕೇಶ್ ಬಾಬು, ಡೋಲಕ್ ರಾಜೇಶ್ ರಂಗನಾಥ್, ರಿದಮ್ ಪ್ಯಾಡ್ ನಿರಂಜನ್,ಕೊಳಲು ವಾದ ಪಂಡಿತ್ ನಾಗರಾಜ ಶ್ಯಾವಿ ಕೊಪ್ಪಳ ಅವರುಗಳು ಸಾಥ್ ನೀಡಿದರು. ಜನಪದ ಮತ್ತು ಭಾವಗೀತೆಗಳು ನೋಡುಗರ , ಕೇಳುಗರ ಮೈ ಮನಸ್ಸಗಳನ್ನು ಸೂರೆಗೊಂಡವು.

Leave a Reply

Your email address will not be published. Required fields are marked *