ಡಾಕ್ಟರೇಟ್ ಪದವಿ ನೀಡಿಕೆಯಲ್ಲಿ ತುಮಕೂರು ಸಾಧಕರ ಕಡೆಗಣನೆ-ಉನ್ನತ ಶಿಕ್ಷಣ ಸಚಿವರ ತಾಳಕ್ಕೆ ಸೈ ಎಂದಿರುವ ತುಮಕೂರು ವಿ.ವಿ.


ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಿಂದ ನೀಡುವ ಗೌರವ ಡಾಕ್ಟರೇಟ್ ಪದವಿಯನ್ನು ತುಮಕೂರು ಜಿಲ್ಲೆಯವರನ್ನು ಹೊರತು ಪಡಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿರುವುದು ತುಮಕೂರು ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತುಮಕೂರಿನ ಪ್ರಜ್ಞಾವಂತರು, ಚಿಂತಕರು ವಿ.ವಿ. ಎಲ್ಲಾ ಸಮಸ್ಯೆಗಳಿಗೆ ಟೊಂಕ ಕಟ್ಟಿ ನಿಂತಿದ್ದರು, ತುಮಕೂರು ವಿಶ್ವವಿದ್ಯಾನಿಲದ ಅಭಿವೃದ್ಧಿಗೆ, ಶೈಕ್ಷಣಿಕ ಪ್ರಗತಿ ಸೇರಿದಂತೆ ಎಲ್ಲಾದಕ್ಕೂ ಟೊಂಕ ಕಟ್ಟಿ ನಿಂತಿದ್ದರು ಸಹ ತುಮಕೂರು ಜಿಲ್ಲೆಯ ಸಾಧಕರನ್ನು ಕಡೆಗಣಿಸಿರುವುದು ತುಮಕೂರು ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣ ಸಚಿವರ ಅಣತಿಯಂತೆ ರಾಜ್ಯಪಾಲರಿಗೆ ಗೌರವ ಡಾಕ್ಟರೇಟ್ ನೀಡಿದೆ ಎಂಬ ಅನುಮಾನವಿದೆ ಎಂದು ತುಮಕೂರಿನ ಚಿಂತಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ
ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಪ್ರೊ.ಕೇಶವ ಅವರು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡವರ ಹೆಸರುಗಳನ್ನು ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಲಾಗಿತ್ತು, ಕುಲಾಧಿಪತಿಗಳು ಆಯ್ಕೆ ಮಾಡಿದ್ದಾರೆ ಎನ್ನುತ್ತಾರೆ.

ಯಾರು ಡಾಕ್ಟರೇಟ್ ಪದವಿಗೆ ಅರ್ಜಿ ಸಲ್ಲಿಸಿರುತ್ತಾರೋ ಅವರ ಹೆಸರುಗಳನ್ನು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾಸಿ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಕುಲಪತಿಗಳು ತಿಳಿಸುತ್ತಾರೆ.


ಗೌರವ ಡಾಕ್ಟರೇಟ್ ಪದವಿಯನ್ನು ಸಂಗೀತ ಕ್ಷೇತ್ರಕ್ಕೆ ಕರ್ನಾಟಕದ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಛತ್ತೀಸ್‍ಗಡದ ಮಹಾತ್ಮ ಗಾಂಧಿ ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರ್ & ಫಾರೆಸ್ಟ್ರಿ ಡ್ರಗ್ ಇದರ ಕುಲಪತಿಗಳಾಗಿರುವ ಡಾ. ರಾಮ್ ಶಂಕರ್ ಕುರೀಲ್ ಮತ್ತು ಸಮಾಜ ಸೇವೆಗಾಗಿ ಮೇಲುಕೋಟೆಯವರಾದ ಹಾಗೂ ಯದುಗಿರಿ ಯತಿರಾಜ ಮಠದ ಮುಖ್ಯಸ್ಥರಾಗಿರುವ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ ಅವರುಗಳಿಗೆ ನೀಡಿದ್ದು, ಡಾಕ್ಟರೇಟ್ ಪದವಿ ನೀಡುವಿಕೆಯಲ್ಲಿ ತುಮಕೂರು ಜಿಲ್ಲೆಯ ಸಾಧಕರು ಒಬ್ಬರೂ ಇಲ್ಲದಿರುವುದಕ್ಕೆ ತೀವ್ರ ಆಕ್ರೋಶ ಮತ್ತು ಟೀಕೆಗೆ ಗುರಿಯಾಗಿರುವ ತುಮಕೂರು ವಿಶ್ವವಿದ್ಯಾಲಯವು, ಘಟಿಕೋತ್ಸವ ನಡೆಯುವ ಒಂದು ದಿನ ಮುಂಚೆ ಈ ಡಾಕ್ಟರೇಟ್ ನೀಡಿರುವವರ ಹೆಸರು ಪ್ರಕಟಿಸಿರುವುದು ಹಲವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *