ಬಿಗ್ ಬ್ರೇಕಿಂಗ್ ನ್ಯೂಸ್-ರಾಜೀನಾಮೆಗೆ ಮುಂದಾಗಿರುವ ಸಚಿವ ಕೆ.ಹೆಚ್.ಮುನಿಯಪ್ಪ….!…?

ಬೆಂಗಳೂರು : ಖಾತೆಯ ಕ್ಯಾತೆಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ಮೊದಲ ವಿಕೆಟ್ ರಾಜೀನಾಮೆ ನೀಡುವುದರ ಮೂಲಕ ಫಥನವಾದ ಬೆನ್ನೆಲ್ಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸಹ ನಾನು ಕೇಳಿದ ಖಾತೆ ನೀಡಿಲ್ಲವೆಂದು ರಾಜೀನಾಮೆ ನೀಡಲು ಮುಂದಾಗಿದ್ದಾರೆನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಎರಡನೇ ದಿನದಲ್ಲೇ ಖಾತೆಯ ಹಂಚಿಕೆಯಲ್ಲಿ ಹಿರಿಯ ಸಚಿವರುಗಳು ಅಸಮದಾನ ಮತ್ತು ಆಕ್ರೋಶಕ್ಕೆ ಒಳಗಾಗಿದ್ದಾರೆ, ಹಿರಿಯ ಸಚಿವರುಗಳಿಗೆ ವಯಸ್ಸಾಗಿರುವುದರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ ಎಂದು ರಾಮಲಿಂಗರೆಡ್ಡಿ ಮನವಿ ಮಾಡಿದ್ದರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಂದಿನ ಉಡಾಫೆ ಸ್ಟೈಲ್ ನಲ್ಲೇ ನಾನು ಮುಖ್ಯಮಂತ್ರಿ ನಾನು ಕೊಟ್ಟ ಖಾತೆ ತೆಗೆದುಕೊಳ್ಳಬೇಕೆಂದು ಖಡಕ್ಕಾಗಿ ಹಿರಿಯ ಸಚಿವರುಗಳಿಗೆ ಹೇಳಿದರೆನ್ನಲಾಗಿದೆ, ಇದರಿಂದ ತುಂಬಾ ಬೇಸರಗೊಂಡ ಹಿರಿಯ ಸಚಿವರುಗಳು ಆತ್ಮಸಾಕ್ಷಿಯನ್ನು ಬಲಿಕೊಟ್ಟು ಸಚಿವರಾಗುವುದಿಲ್ಲ ಎಂದು ಓತಿಕ್ಯಾತದಂತಹ ಖಾತೆ ನಮಗೆ ಬೇಡ ಎಂದು ಕ್ಯಾತೆ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನುಂಗಲಾರದ ತುಪ್ಪದಂತೆ ಮುಖ್ಯಮಂತ್ರಿಯಾದ ಎರಡೇ ದಿನದಲ್ಲಿ ಇಂತಹ ಅಹಿತಕರ ಘಟನೆ ಘಟನೆಗಳು ನಡೆಯುತ್ತಿವೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಕೂಡಲೇ ಹಿರಿಯ ಸಚಿವರಿಗೆ ಗೌರವ ನೀಡಿ ಅವರು ನೀಡಿದ ಖಾತೆ ನೀಡಿ, ಅವರ ನೆರಳಲ್ಲಿ ಅವರ ಸಲಹೆ ತೆಗೆದುಕೊಂಡು ಅಧಿಕಾರ ನಡೆಸಬೇಕಾಗಿತ್ತು, ಇದ್ಯಾವುದನ್ನೂ ಮಾಡದೆ ರಾಮಲಿಂಗರೆಡ್ಡಿಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಅವರಿಗೆ ಯಾವ ಖಾತೆ ನೀಡಬೇಕು, ನಿಮ್ಮ ಆಶಯವೇನು ಎಂಬುದನ್ನು ಕೇಳದೆ ಖಾತೆ ಹಂಚಿದ್ದೇ ಈ ರಂಪಾಟಕ್ಕೆ ಕಾರಣವೆನ್ನಲಾಗಿದೆ ಎನ್ನಲಾಗಿದೆ.

 ನಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಬಳಿಯಾಗಲಿ, ಸಿದ್ದರಾಮಯ್ಯನವರ ಬಳಿಯಾಗಲಿ, ಹೈಕಮಾಂಡ್ ಬಳಿಯೂ ಕೇಳಿಲ್ಲ, ನಾನು ಯಾರ ಬಗ್ಗೆಯೂ ನನಗೆ ಬೇಸರವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ನನಗೆ ವಯಸ್ಸಾಗಿರುವುದರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುತ್ತೇನೆ ಡಿ.ಕೆ.ಶೀವಕುಮಾರ್ ಅವರು ಹೇಳಿದ್ದರು, ನಂತರ ಆ ಖಾತೆ ಕೊಡದೆ ನನಗೆ ಜಲಸಂಪನ್ಮೂಲ ಖಾತೆ ಕೊಟ್ಟಿದ್ದಾರೆ ಇದು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ಹಿರಿಸಚಿವರುಗಳು ನನ್ನ ಗೇಟ್ ಪ್ರೆಂಡ್ಸ್, ನನ್ನ ಸಹೋದ್ಯೋಗಿಗಳು, ಹಿರಿಯರು ಅವರ ಜೊತೆ ಮಾತನಾಡಿ, ಸಮಸ್ಯೆಯನ್ನು ಬಗೆ ಹರಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಕೆ.ಹೆಚ್.ಮುನಿಯಪ್ಪನವರು ನನಗೆ ಕೃಷಿ ಖಾತೆ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಅಸಮದಾನ ಹೊರ ಹಾಕಿದ್ದಾರೆನ್ನಲಾಗಿದೆ.

ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಎಐಸಿಸಿ ಅಧ್ಯಕ್ಷರು, ಹೈಕಮಾಂಡ್ ನಮ್ಮಂತಹ ಹಿರಿಯ, ಅನುಭವ ಇರುವವರನ್ನು ಸಚಿವರನ್ನಾಗಿ ಮಾಡುವಾಗ ನಿಮಗೆ ಸಚಿವರಾಗಲು ಒಪ್ಪಿಗೆ ಇದೆಯೇ, ಯಾವ ಖಾತೆ ಬೇಕು ಎಂಬುದನ್ನು ಸೌಜನ್ಯಕ್ಕಾದರೂ ಕೇಳಿಲ್ಲ.

ನನಗೆ ವಯಸ್ಸಾಗಿದೆ, ಆಹಾರ ಇಲಾಖೆಯಂತಹ ಇಕಾಖೆಯನ್ನು ನಿಭಾಯಿಸುವುದು ಸ್ವಲ್ಪ ಕಠಿಣ ಎಂಬುದನ್ನು ಸಿದ್ದರಾಮಯ್ಯ ನವರ ಸಚಿವ ಸಂಪುಟದಲ್ಲಿ ಆಹಾರ ಸಚಿವನಾದಾಗ ಗೊತ್ತಾಗಿದೆ. ಸದಾ ಜನರಿಗೆ ಸ್ಪಂದಿಸಬೇಕು, ಇದಕ್ಕೆ ನಮ್ಮ ವಯಸ್ಸು ಅಷ್ಟು ಸ್ಪಂದಿಸುವುದಿಲ್ಲ ಖಾತೆ ಬದಲಾಯಿಸದಿದ್ದರೆ ರಾಜೀನಾಮೆ ನೀಡುವುದಾಗಿ ಸುದ್ದಿಗಗೋಷ್ಠಿಯಲ್ಲಿ ತಿಳಿಸಿದರು.

ಇದರಿಂದ ವಿರೋಧ ಪಕ್ಷಗಳಿಗೆ ಹಾಗೂ ಸಿದ್ದರಾಂಯ್ಯನವರ ಬೆಂಬಲಿಗರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.

Leave a Reply

Your email address will not be published. Required fields are marked *