ಹಿರಿಯ ಸಚಿವರ ಬಗ್ಗೆ ಡಿಕೆಶಿ ಉಡಾಫೆ-ಖಾತೆ ಕ್ಯಾತೆಗೆ ಎರಡೇ ದಿನದಲ್ಲಿ ಮೊದಲ ವಿಕೆಟ್ ಫಥನ, ಸ್ಟೇಡಿಯಂಗೆ ಹೆಸರು ಬಿಟ್ಟಿದ್ದೇ ಕಾದ ಕಬ್ಬಿಣದ ಬರೆಯಾಯಿತೆ—! ವಿರೋಧ ಪಕ್ಷಕ್ಕೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ

ಬೆಂಗಳೂರು : ಖಾತೆಯ ಕ್ಯಾತೆಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ಮೊದಲ ವಿಕೆಟ್ ರಾಜೀನಾಮೆ ನೀಡುವುದರ ಮೂಲಕ ಫಥನವಾಗಿದೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಎರಡನೇ ದಿನದಲ್ಲೇ ಖಾತೆಯ ಹಂಚಿಕೆಯಲ್ಲಿ ಹಿರಿಯ ಸಚಿವರುಗಳು ಅಸಮದಾನ ಮತ್ತು ಆಕ್ರೋಶಕ್ಕೆ ಒಳಗಾಗಿದ್ದಾರೆ, ನನಗೆ ವಯಸ್ಸಾಗಿರುವುದರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ ಎಂದು ರಾಮಲಿಂಗರೆಡ್ಡಿ ಮನವಿ ಮಾಡಿದ್ದರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಂದಿನ ಉಡಾಫೆ ಸ್ಟೈಲ್ ನಲ್ಲೇ ನಾನು ಮುಖ್ಯಮಂತ್ರಿ ನಾನು ಕೊಟ್ಟ ಖಾತೆ ತೆಗೆದುಕೊಳ್ಳಬೇಕೆಂದು ಖಡಕ್ಕಾಗಿ ಹೇಳಿದರೆನ್ನಲಾಗಿದೆ, ಇದರಿಂದ ತುಂಬಾ ಬೇಸರಗೊಂಡ ರಾಮಲಿಂಗರೆಡ್ಡಿ ಆತ್ಮಸಾಕ್ಷಿಯನ್ನು ಬಲಿಕೊಟ್ಟು ಸಚಿವನಾಗುವುದಿಲ್ಲ ಎಂದು ಓತಿಕ್ಯಾತದಂತಹ ಖಾತೆ ನನಗೆ ಬೇಡ ಎಂದು ಕ್ಯಾತೆ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನುಂಗಲಾರದ ತುಪ್ಪದಂತೆ ಮುಖ್ಯಮಂತ್ರಿಯಾದ ಎರಡೇ ದಿನದಲ್ಲಿ ಇಂತಹ ಅಹಿತಕರ ಘಟನೆ ನಡೆದಿದೆ.

ಇದರಿಂದ ಡಿ.ಕೆ.ಶಿವಕುಮಾರ್ ಅವರ ಉಡಾಫೆ, ಮುಂದಾಲೋಚನೆ ಮಾಡದೆ ಹುಂಬತನದಿಂದ ನಡೆದುಕೊಂಡಿದ್ದೇ ಈ ಘಟನೆಗೆ ಸಾಕ್ಷಿ ಎನ್ನಲಾಗುತ್ತಿದೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಕೂಡಲೇ ಹಿರಿಯ ಸಚಿವರಿಗೆ ಗೌರವ ನೀಡಿ ಅವರು ನೀಡಿದ ಖಾತೆ ನೀಡಿ, ಅವರ ನೆರಳಲ್ಲಿ ಅವರ ಸಲಹೆ ತೆಗೆದುಕೊಂಡು ಅಧಿಕಾರ ನಡೆಸಬೇಕಾಗಿತ್ತು, ಇದ್ಯಾವುದನ್ನೂ ಮಾಡದೆ ರಾಮಲಿಂಗರೆಡ್ಡಿಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಅವರಿಗೆ ಯಾವ ಖಾತೆ ನೀಡಬೇಕು, ನಿಮ್ಮ ಆಶಯವೇನು ಎಂಬುದನ್ನು ಕೇಳದೆ ಖಾತೆ ಹೊಂಚಿದ್ದೇ ಈ ರಂಪಾಟಕ್ಕೆ ಕಾರಣವೆನ್ನಲಾಗಿದೆ.

ಮುಖ್ಯಂತ್ರಿಯಾದ ಎರಡೇ ದಿನದಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಧಿಮಾಕು, ಗತ್ತು ಹಿರಿಯ ಸಚಿವರಿಗೆ ಒಗ್ಗಲಿಲ್ಲವೆನ್ನಲಾಗುತ್ತಿದೆ, ಹಿರಿಯ ಸಚಿವರ ಅನುಭವ, ಯವಸ್ಸಿಗಾದರೂ ಗೌರವ ಕೊಟ್ಟು ಮೊದಲೇ ಸಿದ್ದರಾಂಯ್ಯನವರನ್ನು ಇಳಿಸಿದ್ದಕ್ಕೆ ಬೋದು ಮುಚ್ಚಿದ ಕೆಂಡದಂತ್ತಿದ್ದ ಸಿಟ್ಟು, ಅಸಮದಾನದಿಂದ ಖಾತೆ ಹಂಚಿಕೆ ರೂಪದಲ್ಲಿ ಭಿನ್ನಮತೆ ಸ್ಫೋಡಗೊಂಡಿದೆ, ಈ ರಾಜೀನಾಮೆ ಶಿವಕುಮಾರ್ ಅವರ ಮೇಲೆ ಎಂತಹ ಬಾಂಬಿನ ದಾಳಿಯಾಗಿ ಪರಿಣಾಮ ಬೀರಳಿದೆ ಎಂದುದನ್ನು ಕಾದು ನೋಡಬೇಕಾಗಿದೆ.


ನನ್ನ ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಬಳಿಯಾಗಲಿ, ಸಿದ್ದರಾಮಯ್ಯನವರ ಬಳಿಯಾಗಲಿ, ಹೈಕಮಾಂಡ್ ಬಳಿಯೂ ಕೇಳಿಲ್ಲ, ನಾನು ಯಾರ ಬಗ್ಗೆಯೂ ನನಗೆ ಬೇಸರವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ನನಗೆ ವಯಸ್ಸಾಗಿರುವುದರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುತ್ತೇನೆ ಡಿ.ಕೆ.ಶೀವಕುಮಾರ್ ಅವರು ಹೇಳಿದ್ದರು, ನಂತರ ಆ ಖಾತೆ ಕೊಡದೆ ನನಗೆ ಜಲಸಂಪನ್ಮೂಲ ಖಾತೆ ಕೊಟ್ಟಿದ್ದಾರೆ ಇದು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ರಾಮಲಿಂಗರೆಡ್ಡಿಯವರು ನನ್ನ ಗೇಟ್ ಪ್ರೆಂಡ್, ನನ್ನ ಸಹೋದ್ಯೋಗಿ, ಹಿರಿಯರು ಅವರ ಜೊತೆ ಮಾತನಾಡಿ, ಸಮಸ್ಯೆಯನ್ನು ಬಗೆ ಹರಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಇತ್ತೀಚೆಗೆ ಆನೇಕಲ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆಯಲ್ಲಿ ರಾಮಲಿಂಗರೆಡ್ಡಿಯವರ ಹೆಸರನ್ನೇ ಕೈ ಬಿಟ್ಟು ಉದ್ಘಾಟನೆ ಮಾಡಿದ್ದು, ಈ ಮೊದಲೇ ರಾಮಲಿಂಗರೆಡ್ಡಿಯವರಿಗೆ ತುಂಬಾ ಬೇಸರ, ಅಸಮಧಾನ ಈಗ ನಾನು ಕೇಳಿದ ಖಾತೆ ಕೊಡಲಿಲ್ಲವೆಂಬುದು ಸ್ಟೇಡಿಯಂ ಉದ್ಘಾಟನೆಗೆ ಹೆಸರು ಹಾಕಿರಲಿಲ್ಲ ಎಂಬುದು ಈಗ ಸಿಡಿಲಾಗಿ ಸ್ಫೋಟಗೊಂಡು ರಾಮಲಿಂಗಾರೆಡ್ಡಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಕಾದ ಕಬ್ಬಿಣದ ಬರೆಯನ್ನು ಈ ಮೂಲಕ ಹಾಕಲಾಗಿದೆ.

ಇದರಿಂದ ವಿರೋಧ ಪಕ್ಷಗಳಿಗೆ ಹಾಗೂ ಸಿದ್ದರಾಂಯ್ಯನವರ ಬೆಂಬಲಿಗರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.

ನಾನು ಯಾರ ಬಳಿಯೂ ಮಂತ್ರಿ ಮಾಡಿ ಎಂದು ಕೇಳಿರಲಿಲ್ಲ. ಹೈಕಮಾಂಡ್ ಭೇಟಿ ಮಾಡಿಲ್ಲ, ಡಿಕೆ ಶಿವಕುಮಾರ್ ಬಳಿ ನಾನು ಮಂತ್ರಿ ಎಂದಿ ಕೇಳಿಲ್ಲ. ಆದರೆ ಇದೀಗ ಎರಡನೇ ಬಾರಿ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುತ್ತೇನೆ ಎಂದು ಎರಡು ಬಾರಿ ಹೀಗೆ ಬೇರೆ ಖಾತೆ ನೀಡಿದ್ದಾರೆ. ಇದು ನೋವು ತಂದಿದೆ ಎಂದಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಕಳುಹಿಸಿದ್ದಾರೆ. ಬೆಂಗಳೂರು ನಗರಾಭಿವೃದ್ದಿ ಖಾತೆ ನೀಡುವುದಾಗಿ ಹೇಳಿ ಬಳಿಕ ಮಾತು ತಪ್ಪಿದಾಗ ನೋವಾಗಿದೆ. ಹೀಗಾಗಿ ಈ ಕುರಿತು ನಡೆಸಿದ ಮಾತುಕತೆಯಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ತೀವ್ರ ನೋವುಂಟಾಗಿರುವುದು ಸ್ಪಷ್ಟವಾಗಿದೆ. ಇದೇ ನೋವು, ಬೇಸರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಖಾತೆ ಹಂಚಿಕೆ, ಬದಲಾವಣೆ ನಡುವೆ ಏನೆಲ್ಲಾ ಆಗಿದೆ ಎಂದು ಹೇಳಲು ಆಗಲ್ಲ. ಹೈಕಮಾಂಡ್ ಜೊತೆ ಮಾತುಕತೆ, ಮನವೊಲಿಕೆ ಮಾತಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನನ್ನ ರಾಜೀನಾಮೆ ನನ್ನ ಕುಟುಂಬಕ್ಕೆ ಗೊತ್ತಿಲ್ಲ. ಯಾರ ಜೊತೆಗೆ ಚರ್ಚಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಈಗೀನ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಸಂಸದ ಸುರೇಶ್ ಅವರು ನಮ್ಮ ಮನೆಗೆ ಬಂದಿದ್ದರು. ಮುಂದೆ ನಾನೇ ಸಿಎಂ ಆಗ್ತೇನೆ ನಿಂಗೆ ಬೆಂಗಳೂರು ನಗರಾಭಿವೃದ್ಧಿ ಕೊಡುತ್ತೇನೆ ಎಂದಿದ್ದರು. ಆದರೆ ಮಾತು ಕೊಟ್ಟು ಪದೇ ಪದೇ ಈ ರೀತಿ ಮಾತು ಬದಲಾಯಿಸಿದಾಗ ಬೇಸರ ಆಗುತ್ತದೆ ಎಂದಿದ್ದಾರೆ.

ನನಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದಕ್ಕೆ ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನನ್ನ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿ ವಿರುದ್ದವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *