ತುಮಕೂರು : ನಾನೊಬ್ಬ ಶ್ರೇಷ್ಠ ಪತ್ರಕರ್ತ’ ಎನ್ನುವ ಅಹಂ ಅನ್ನು ಬದಿಗಿಡಬೇಕು. ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆಯೇ ಎಂದು ಹಿರಿಯ ಪತ್ರಕರ್ತ ಹೆಚ್.ವಿ.ವೆಂಕಟಾಚಲ ಮಾರ್ಮಿಕವಾಗಿ ಎಚ್ಚರಿಸಿದರು.
ಅವರಿಂದು ಅಗಲಿದ ಪತ್ರಕರ್ತ ಈಶ್ವರ್ ಅವರ ನುಡಿನಮನ ಮಾತುಗಳನ್ನಾಡಿ ಅವರು ಸಾವಿನ ಸಂದರ್ಭದಲ್ಲಿ ‘ಶ್ರದ್ಧಾಂಜಲಿ’ಗಿಂತ ‘ನುಡಿನಮನ’ ಸೂಕ್ತ, ಮಾಧ್ಯಮ ಮಿತ್ರರು ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯತೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿ ದ ಅವರು, “ಯಾರೇ ವ್ಯಕ್ತಿ ಮರಣ ಹೊಂದಿದಾಗ ‘ಶ್ರದ್ಧಾಂಜಲಿ’ ಎನ್ನುವ ಪದಕ್ಕಿಂತ ‘ನುಡಿನಮನ’ ಎಂದು ಬಳಸುವುದು ಹೆಚ್ಚು ಗೌರವಪೂರ್ವಕ ಮತ್ತು ಅರ್ಥಪೂರ್ಣ. ಇವೆರಡರ ಅರ್ಥಗಳೇ ಬೇರೆಯಾಗಿರುವುದರಿಂದ, ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಿಗೆ ಶ್ರದ್ಧಾಂಜಲಿ ಎಂದು ಬಳಸಬೇಡಿ” ಎಂದು ಗೆಳೆಯರಲ್ಲಿ ವಿನಂತಿಸಿದರು.

ಅಲ್ಲದೆ, ಈಶ್ವರ್ ಅವರ ಜೊತೆಗೆ ಇತ್ತೀಚೆಗೆ ಅಗಲಿದ ಇತರೆ ಪತ್ರಕರ್ತರನ್ನೂ ನೆನೆದು ನುಡಿನಮನ ಸಲ್ಲಿಸಿದ್ದರೆ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣವಾಗುತ್ತಿತ್ತು ಎಂದರು.
ಪತ್ರಕರ್ತರಲ್ಲಿ ಇರಬೇಕಾದ ಸಾಮಾನ್ಯ ಪ್ರಜ್ಞೆ
ತಮ್ಮ ಸುದೀರ್ಘ ಪತ್ರಿಕೋದ್ಯಮದ ದಿನಗಳಲ್ಲಿ ತಮ್ಮ ಒಡನಾಡಿ ಪತ್ರಕರ್ತರ ನ್ನು ನೆನೆದ ಅವರು, “ಪತ್ರಕರ್ತ ಎಂಬ ಹಣೆಪಟ್ಟಿ ಕಣ್ಣಿಗೆ ಬಿದ್ದ ತಕ್ಷಣ ನಮ್ಮಲ್ಲಿ ಒಂದು ರೀತಿಯ ಅಹಂಕಾರ ಅಥವಾ ಕೊಂಬು ಬಂದಂತಹ ಮನೋಭಾವ ಮೂಡುತ್ತದೆ. ನಾನು ದೊಡ್ಡ ಪತ್ರಕರ್ತ, ಮಂತ್ರಿಗಳು-ಡಿಸಿಗಳು ನನಗೆ ಬೆಲೆ ಕೊಡುತ್ತಾರೆ, ವಿಧಾನಸೌಧಕ್ಕೆ ಬಿರುಗಾಳಿಯಂತೆ ಹೋಗಿ ಬರುತ್ತೇನೆ ಎನ್ನುವ ಭ್ರಮೆಯಲ್ಲಿ ಮುಳುಗುತ್ತೇವೆ” ಎಂದು ಪತ್ರಕರ್ತರ ಮನಸ್ಥಿತಿಯನ್ನು ವಿಶ್ಲೇಷಿಸಿದರು.
ಇದೇ ಮನೋಭಾವದಿಂದಾಗಿ ಪತ್ರಕರ್ತರು ತಮ್ಮ ಆರೋಗ್ಯ, ಸಂಸಾರ ಹಾಗೂ ಮಕ್ಕಳ ಕಡೆಗೆ ಗಮನ ಹರಿಸುವುದನ್ನೇ ಮರೆತುಬಿಡುತ್ತಾರೆ. ಪತ್ರಿಕೋದ್ಯಮಕ್ಕೆ ಬರುವ ಮುನ್ನ ಪ್ರತಿಯೊಬ್ಬರಿಗೂ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕು. ಬದುಕು, ಸಂಸಾರ ಮತ್ತು ಮಕ್ಕಳ ಜವಾಬ್ದಾರಿಯ ಅರಿವಿದ್ದಾಗ ಮಾತ್ರ ತಪ್ಪು ಹಾದಿಯಲ್ಲಿ ಸಾಗುವುದನ್ನು ತಡೆಯಬಹುದು.
ಈ ಸಂಜೆ ಕುಮಾರ್, ಇಂದುಕುಮಾರ್ ಹಾಗೂ ಈಗ ಈಶ್ವರ್ ಸೇರಿದಂತೆ ಸಾಲು ಸಾಲು ಯುವ ಪತ್ರಕರ್ತರ ಅಕಾಲಿಕ ಮರಣಕ್ಕೆ ಕಾರಣಗಳನ್ನು ಹುಡುಕಬೇಕಿದೆ ಎಂದ ಅವರು, ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
“ನಮ್ಮ ಗೆಳೆಯರು ಕೇವಲ ಹೊಗಳು ಭಟರಾಗಿರದೆ, ನಾವು ತಪ್ಪು ದಾರಿಯಲ್ಲಿ ಸಾಗುತ್ತಿದ್ದಾಗ ‘ನೀನು ಮಾಡುತ್ತಿರುವುದು ತಪ್ಪು’ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುವ ನಿಕೃಷ್ಟ (ನಿಷ್ಟುರ) ಗೆಳೆಯರಾಗಿರಬೇಕು. ಕುಟುಂಬಸ್ಥರು ಹಾಗೂ ತಂದೆ-ತಾಯಿಗಳು ಪತ್ರಕರ್ತರಿಗೆ ತಪ್ಪುಗಳನ್ನು ಮನವರಿಕೆ ಮಾಡಿಕೊಡಬೇಕು” ಎಂದು ಅವರು ಒತ್ತಿ ಹೇಳಿದರು.
ಒಂದು ಜೀವ ಹೋದ ಮೇಲೆ ಅದರ ನಷ್ಟವನ್ನು ಯಾರು ತುಂಬಿಕೊಡಲು ಸಾಧ್ಯವಿಲ್ಲ. ಪತ್ರಕರ್ತರೆಲ್ಲರೂ ದಿನ ನಿತ್ಯ ಬದುಕಿನ ಸಂಕೋಲೆಗಳನ್ನು ಎದುರಿಸುವ ಜ್ಞಾನ ಪಡೆದುಕೊಳ್ಳಬೇಕು, ಓದಬೇಕು ಮತ್ತು ಗೆಳೆಯರೊಂದಿಗೆ ಮುಕ್ತವಾಗಿ ಚರ್ಚಿಸಬೇಕು. ನಮಗೆ ಕಷ್ಟ ಬಂದಾಗ ವೈದ್ಯರು, ಆಸ್ಪತ್ರೆ ಮತ್ತು ನಮ್ಮ ಕಷ್ಟವನ್ನು ಹಂಚಿಕೊಳ್ಳುವ ದೋಸ್ತ್ಗಳ ಹತ್ತಿರ ಹೋಗಬೇಕೇ ಹೊರತು, ‘ನಾನೊಬ್ಬ ಶ್ರೇಷ್ಠ ಪತ್ರಕರ್ತ’ ಎನ್ನುವ ಅಹಂ ಅನ್ನು ಬದಿಗಿಡಬೇಕು. ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆಯೇ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.
ಈಶ್ವರ್ ಅವರ ಅಕಾಲಿಕ ಅಗಲಿಕೆಯಿಂದ ಅವರ ಮಗುವಿಗೆ ಹಾಗೂ ಕುಟುಂಬಕ್ಕೆ ಆಗಿರುವ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಹಾರೈಸುತ್ತಾ, ಇನ್ನಾದರೂ ಪತ್ರಕರ್ತರು ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆಗೆ ಗಮನ ಹರಿಸಲಿ ಎಂದು ವೆಂಕಟಾಚಲ.ಹೆಚ್.ವಿ. ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾದ ಎಲ್.ಯೋಗೀಸ್ ಮಾತನಾಡಿ ಅಗಲಿದ ನಮ್ಮ ಗೆಳೆಯ ಈಶ್ವರ್ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಸುವ ಇಂತಹ ಕಾರ್ಯಕ್ರಮಗಳು ಇನ್ನು ಮುಂದೆ ಯಾವತ್ತೂ ಆಗಬಾರದು. ಸಂಕಷ್ಟದ ಸಂದರ್ಭದಲ್ಲಿ ಇಂತಹ ಆಚರಣೆಗಳನ್ನು ಮಾಡುವ ಪರಿಸ್ಥಿತಿ, ಅಕಾಲಿಕ ಮರಣಗಳು ಯಾರಿಗೂ ಕೂಡ ಬರಬಾರದು ಎಂದು ತೀವ್ರ ವಿμÁದ ವ್ಯಕ್ತಪಡಿಸಿದರು.
ಇವತ್ತು ಕೋಟಿಗಟ್ಟಲೆ ಹಣವಿದ್ದರೂ ಕೆಲವೊಮ್ಮೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಶ್ವರ್ ವಿಚಾರದಲ್ಲೂ ಅμÉ್ಟೀ, ನಾವು ಎμÉ್ಟೀ ಪ್ರಯತ್ನಪಟ್ಟರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ” ಎಂದು ಕಂಬನಿ ಮಿಡಿದರು.
ಗಂಗವಾಹಿನಿ ಪತ್ರಿಕೆ ಸಂಪಾದಕರಾಜ್ ಕಾಮರಾಜ್ ಅವರು ಮಾತನಾಡಿ, “ಈಶ್ವರ್ ಅವರು ಯಾರ ಬಗ್ಗೆಯೂ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಂಡವರಲ್ಲ. ಅವರ ಸೂಕ್ಷ್ಮ ಮಾತುಗಳಲ್ಲಿ ಒಂದಿಷ್ಟು ಸಂದೇಶಗಳಿದ್ದವು. ಆ ಸಂದೇಶಗಳನ್ನು ಇಂದಿನ ಯುವ ಪೀಳಿಗೆಯ ಪತ್ರಕರ್ತರು ಹಾಗೂ ಬೇರೆ ಬೇರೆ ವರ್ಗದ ಜನರು ಮನನ ಮಾಡಿಕೊಳ್ಳಬೇಕಾಗಿದೆ. ಮನುಷ್ಯನ ಜೀವನ ಬಹಳ ಸಾರ್ಥಕವಾದದ್ದು. ಎಲ್ಲಾ ಜೀವಕೋಟಿಯಲ್ಲಿ ಮನುಷ್ಯ ಜೀವಿ ಅತ್ಯಂತ ಉತ್ತಮವಾದದ್ದು. ಈ ಜೀವನವಿರಬೇಕಾದರೆ ನಮಗೊಂದಿಷ್ಟು ಜವಾಬ್ದಾರಿಗಳು, ಚಿಂತನೆಗಳು ಹಾಗೂ ಭಾವನೆಗಳು ಇರಬೇಕಾಗುತ್ತದೆ” ಎಂದರು.
ಜೆಡಿಎಸ್ ಎಸ್ಸಿ-ಎಸ್ಟಿ ಜಿಲ್ಲಾಧ್ಯಕ್ಷ “ಬೆಳಗುಂಬ ವೆಂಕಟೇಶ್ ಮಾತನಾಡಿ ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ತಳಮಟ್ಟದಿಂದ ಬೆಳೆಸಿ, ಸಮಾಜದಲ್ಲಿ ಒಂದು ಹೆಸರು ಮಾಡಿಕೊಡುವಲ್ಲಿ ಪತ್ರಕರ್ತರ ಕೊಡುಗೆ ದೊಡ್ಡದಿದೆ. ಅದರಲ್ಲೂ ವಿಶೇಷವಾಗಿ ಅಗಲಿದ ಯುವ ಪತ್ರಕರ್ತ ಈಶ್ವರ್ ನನಗೆ ಅಪಾರವಾಗಿ ಬೆಂಬಲ ನೀಡಿದ್ದರು” ಎಂದು ತುಮಕೂರು ಜಿಲ್ಲಾ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಅವರು ಭಾವುಕರಾಗಿ ನುಡಿದರು.
ಪತ್ರಕರ್ತರ ಒಳಿತಿಗಾಗಿ ನಿಧಿ ಸ್ಥಾಪಿಸಲು 50,000 ರೂಪಾಯಿ ಧನಸಹಾಯವನ್ನು ಪತ್ರಕರ್ತರ ಸಂಘದ ಅಧ್ಯಕ್ಷರ ಹಸ್ತಾಂತರಿಸುವುದಾಗಿ ಹೇಳಿದರು.
“ನನ್ನ ಪತಿ ಈಶ್ವರ್ ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದ ಹಿಡಿದು ಇವತ್ತಿನವರೆಗೂ ಪ್ರತಿಯೊಂದು ದಿನವೂ ನೀವೆಲ್ಲರೂ ನನಗೆ ಬೆಂಬಲವಾಗಿ ನಿಂತಿದ್ದೀರಾ. ನಿಮ್ಮೆಲ್ಲರ ಈ ಪ್ರೀತಿ, ವಿಶ್ವಾಸದಲ್ಲಿಯೇ ನಾನು ನನ್ನ ಪತಿಯನ್ನು ಕಾಣುತ್ತಿದ್ದೇನೆ” ಎಂದು ಅಗಲಿದ ಪತ್ರಕರ್ತ ಈಶ್ವರ್ ಅವರ ಪತ್ನಿ ಅನಿತಾ ಅವರು ತೀವ್ರ ಭಾವುಕರಾಗಿ ನುಡಿದರು.
ತಮ್ಮ ಪತಿಯ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಣ್ಣೀರು ಹಾಕುತ್ತಲೇ ಮಾತನಾಡಿದ ಅವರು, ಈಶ್ವರ್ ಅವರ ಕಠಿಣ ದಿನಗಳಲ್ಲಿ ಹಾಗೂ ಅವರ ಅಗಲಿಕೆಯ ನಂತರ ಇಡೀ ಮಾಧ್ಯಮ ಮಿತ್ರರು ಮತ್ತು ಸ್ನೇಹಿತರ ಬಳಗ ನೀಡಿದ ಬೆಂಬಲಕ್ಕೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.
ನುಡಿನಮನ ಕಾರ್ಯಕ್ರಮದಲ್ಲಿ ಜಯಣ್ಣ ಬಿಳಿಗೆರೆ, ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾದ ದೇವರಾಜು,ವಿಜಯವಾಣಿ ಪತ್ರಿಕೆ ವರದಿಗಾರರಾದ ಜಗನ್ನಾಥ ಕಾಳೇನಹಳ್ಳಿ, ಸತ್ಯದರ್ಶಿನಿ ಪತ್ರಿಕೆ ಸಂಪಾದಕ ಕರುಣಾಕರ್, ¸ ಹಿರಿಯ ಪತ್ರಕರ್ತ ರಂಗರಾಜು, ಸಾಚಿ ರಾಜಕುಮಾರ್, ಸುರೇಶ್ ವತ್ಸಾ, ಸೂರ್ಯಪ್ರಗತಿ ಸಂಪಾದಕ ರವಿಕುಮಾರ್, ಸುವರ್ಣಪ್ರಗತಿ ಸಂಪಾದಕ ಪರಮೇಶ್, ಜಯನುಡಿ ಜಯಣ್ಣ, ಪ್ರಜಾಕಹಳೆ ಸಂಪಾದಕ ರಘು.ಎ.ಎನ್., ಸ್ನೇಹಿತ ಹರೀಶ್, ಪ್ರಸ್ಕ್ಲಬ್ ಅಧ್ಯಕ್ಷ ಮನೋಹರ್ (ದೋಣಿಹಕ್ಲು) ಮಾತನಾಡಿದರು. ಕಾರ್ಯಕ್ರಮವನ್ನು ಪ್ರಧಾನಕಾರ್ಯದರ್ಶಿ ಟಿ.ಇ.ರಘುರಾಮ್ ಏಕೇಶ್ ನೀರೂಪಿಸಿದರು.