ಸೆ.12ರಂದು ಎಸ್.ಐ.ಟಿ.ಯಲ್ಲಿ 17ನೇ ಪದವಿ ಪ್ರದಾನ ಸಮಾರಂಭ

ತುಮಕೂರು: ನಗರದ ಸಿದ್ಧಗಂಗಾ ತಾಂತ್ರಿ ಮಹಾವಿದ್ಯಾಲಯದಲ್ಲಿ ಸೆಪ್ಟಂಬರ್ 12ರಂದು ಬೆಳಿಗ್ಗೆ 11 ಗಂಟೆಗೆ 17ನೇ ಪದವಿ ಪ್ರದಾನ ಸಮಾರಂಭ ಏರ್ಪಾಟಾಗಿದೆ. ವಿವಿಧ ಸುಮಾರು 1400ಕ್ಕೂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಡಾ. ಶಿವಕುಮಾರಯ್ಯ ಹೇಳಿದರು.

ಶುಕ್ರವಾರ ಎಸ್‍ಐಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಶ್ರೀಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಪ್ರದವಿ ಪ್ರದಾನ ಸಮಾರಂಭದಲ್ಲಿ ಮಾರ್ವೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಉಪಾಧ್ಯಕ್ಷ ನವೀನ್ ಬಿಷ್ಣೋಯ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದಕ ವಿತರಣೆ ಮಾಡಿ ಪ್ರಧಾನ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಅಕಾಡೆಮಿಕ್ ಕೌನ್ಸಿಲ್.ನ ಸದಸ್ಯರು ಮತ್ತು ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಎಂಬಿಎ 175 ಅಭ್ಯರ್ಥಿಗಳು, ಎಂಸಿಎ 107 ಅಭ್ಯರ್ಥಿಗಳು, ಎಂಟೆಕ್‍ನ 48 ಅಭ್ಯರ್ಥಿಗಳು, ಬಿ.ಇ ವಿಭಾಗಗಳ 1053 ಅಭ್ಯರ್ಥಿಗಳು, ಬಿ.ಆರ್ಕಿಟೆಕ್‍ನ 17 ಅಭ್ಯರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ. ನಮ್ಮ ಸಂಸ್ಥೆ ಮತ್ತು ದಾನಿಗಳಿಂದ 81 ಚಿನ್ನದ ಪದಕಗಳನ್ನು ಸ್ಥಾಪಿಸಲಾಗಿದೆ. ಲಕ್ಷ್ಮೀಪತಿ ಆರ್. (ಬಿ.ಇ. ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗ) ಅವರು ಸಂಸ್ಥೆಯಲ್ಲಿ ಸಿ.ಜಿ.ಪಿ.ಎ. 9.76 ಗಳಿಸಿ ಅಗ್ರಸ್ಥಾನ ಪಡೆದಿದ್ದು ಡಾ. ಶಿವಕುಮಾರ ಸ್ವಾಮೀಜಿ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ. ಇದರ ಜೊತೆಗೆ, ಅವರು ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ಇನ್ನೂ ನಾಲ್ಕು ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ.

ಪ್ಲೇಸ್ ಮೆಂಟ್

ಜಾಗತಿಕ ಆರ್ಥಿಕ ಮಂದಗತಿ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಕ್ಷಿಪ ಬೆಳವಣಿಗೆಯ ಹೊರತಾಗಿಯೂ, ಎಸ್‍ಐಟಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಾಗಿ 230ಕ್ಕೂ ಹೆಚ್ಚು ಕಂಪನಿಗಳನ್ನು ಯಶಸ್ವಿಯಾಗಿ ಆಕರ್ಷಿಸಿತು; ಇದರ ಪರಿಣಾಮವಾಗಿ 2025-26ರ ಬ್ಯಾಚ್‍ನ ವಿದ್ಯಾರ್ಥಿಗಳಿಗೆ 1200ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭಿಸಿದವು. 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪ್ಯಾಕೇಜ್‍ಗಳನ್ನು ಪಡೆದರೆ, 500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ವಾರ್ಷಿಕ 6 ಲಕ್ಷಕ್ಕಿಂತ ಹೆಚ್ಚಿನ ವೇತನವನ್ನು ಹೊಂದಿದ್ದವು. ಜೊತೆಗೆ, 450 ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಿಂದ ವೇತನ ಸಹಿತ ಇಂಟರ್ನ್‍ಶಿಪ್ ಅವಕಾಶಗಳನ್ನು ಪಡೆದಿದ್ದು, ಇವುಗಳಡಿ 15,000 ರೂ. ದಿಂದ 1 ಲಕ್ಷದವರೆಗಿನ ಭತ್ಯೆ ನೀಡಲಾಗಿದೆ ಎಂದು ಡಾ. ಶಿವಕುಮಾರಯ್ಯ ಹೇಳಿದರು.

ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಾದ ಅಮೆಜಾನ್, ಎಎಂಡಿ, ವೀಸಾ ಐಎನ್‍ಕೆ, ಮೈಂತ್ರಾ, ಮಾರ್ಗನ್ ಸ್ಟಾನ್ಸಿ, ಟೆಕ್ಸಾಸ್ ಇನ್ಸುಮೆಂಟ್ಸ್ ಇಂಡಿಯಾ, ಸಿಸ್ಕೊ, ಜೆಪಿ ಮಾರ್ಗನ್ ಚೇಸ್ ಅಂಡ್ ಕಂ., ವೆಸ್ಟರ್ನ್ ಡಿಜಿಟಲ್, ಯುಐಪಾತ್, ಸೇಬರ್ ಕಾಪೆರ್Çರೇಷನ್, ಎಮರ್ಸನ್, ನೈಕ್ ಟೆಕ್ನಾಲಜಿ, ಟ್ಯಾಲಿ ಸೊಲ್ಯೂಷನ್ಸ್, ಸೈಡರ್ ಎಲೆಕ್ನಿಕ್, ಅಪ್ರೈಡ್ ಮೆಟೀರಿಯಲ್ಸ್, ಬ್ರಿಟಿμï ಟೆಲಿಕಾಂ, ಒರಾಕಲ್, ತೋಷಿಬಾ, ರೆಡ್‍ಬಸ್, ಡೈನ್ಸರ್ ಟ್ರಕ್ ಇನ್ನೊವೇಶನ್ ಸೆಂಟರ್ ಇಂಡಿಯಾ, ಜೆಎಸ್‍ಡಬ್ಲ್ಯೂ, ಡಿಶ್ ನೆಟ್ವರ್ಕ್. ನೋಕಿಯಾ ಇಂಡಿಯಾ ಪ್ರೈ. ಲಿಮಿಟೆಡ್, ಹನಿವೆಲ್, ಆಲ್‍ಸ್ಟಾಮ್ ಗ್ರೂಪ್, ಟಿಇ ಕನೆಕ್ಟಿವಿಟಿ, ಟಿಸಿಎಸ್, ಕ್ಯಾಪ್‍ಜೆಮಿನಿ, ಆಕ್ಸೆಂಚರ್, ಕಾಗ್ನಿಜೆಂಟ್, ಎಚ್‍ಸಿಎಲ್‍ಟೆಕ್. ಇನ್ಫೋಸಿಸ್ ಮತ್ತು ಇತರ ಹಲವಾರು ಪ್ರಮುಖ ಜಾಗತಿಕ ಕಂಪನಿಗಳು ಕ್ಯಾಂಪಸ್‍ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ನೇಮಿಸಿಕೊಂಡವು. ಧನುμï ಬಿ. (ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್) ಅವರಿಗೆ ಅಮೆಜಾನ್ ಕಂಪನಿಯಿಂದ 46.38 ರೂ. ಎಲ್‍ಪಿಎ ಅನ್ನು ನೀಡಿದ್ದು, ಇದು ಅತ್ಯಧಿಕ ವೇತನ ಪ್ಯಾಕೇಜ್ ಆಗಿದೆ ಎಂದರು.

ಸೆಮಿಕಂಡಕ್ಟರ್ ಫ್ಯಾಬ್ ಸೌಲಭ್ಯ:

ದೂರಸಂಪರ್ಕ, ರಕ್ಷಣೆ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್‍ಗಳಿಗೆ ಸೆಮಿಕಂಡಕ್ಟರ್‍ಗಳು ಅತ್ಯಗತ್ಯ.

ಎಸ್‍ಐಟಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ದಿನೇಶ್ ಎಸ್.ವಿ ಮಾತನಾಡಿ, ಭಾರತವು ಆರ್ಥಿಕ ಬೆಳವಣಿಗೆ, ತಾಂತ್ರಿಕ ಸಾಮಥ್ರ್ಯ ಮತ್ತು ರಾಷ್ಟ್ರೀಯ ಸ್ಥಿತಿಸ್ಥಾಪಕತ್ವದ ಕಾರ್ಯತಂತ್ರದ ಆಧಾರಸ್ತಂಭವಾಗಿ ತನ್ನ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಎಸ್‍ಐಟಿಯು ಬೆಂಗಳೂರಿನ ಸೆಮ್ಯಾಂಟಿಕ್ ಸ್ಕಿಲ್ಸ್ ಜಂಕ್ಷನ್ ಎಲ್‍ಎಲ್‍ಪಿ (ಸೀಮಿತ ಹೊಣೆಗಾರಿಕೆ ಪಾಲುದಾರಿಕೆ) ಮತ್ತು ಬೆಂಗಳೂರಿನ ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ಆರ್‍ವಿ ಸ್ಕಿಲ್ಸ್‍ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕೌಶಲ್ಯಪೂರ್ಣ ಕಾರ್ಯಪಡೆಗೆ ಕೊಡುಗೆ ನೀಡಲು ಉತ್ತಮ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಜಾಗತಿಕ ಸೆಮಿಕಂಡಕ್ಟರ್ ಇಂಡಸ್ಟ್ರೀಸ್ ಕೌಶಲ್ಯ ಪೂರ್ಣ ಕಾರ್ಯಪಡೆಯ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ 2032ರ ವೇಳೆಗೆ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಹೆಚ್ಚುವರಿ ಕೌಶಲ್ಯಪೂರ್ಣ ವೃತ್ತಿಪರರ ಅವಶ್ಯಕತೆಯಿದೆ. ಇದು ಗುರಿಪಡಿಸಿದ ಉಪಕ್ರಮಗಳ ಮೂಲಕ ಜಾಗತಿಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಭಾರತವನ್ನು ಪ್ರಮುಖ ಕೊಡುಗೆದಾರನನ್ನಾಗಿ ಮಾಡುತ್ತದೆ.

ಹಣಕಾಸಿನ ಪೆÇ್ರೀತ್ಸಾಹಕಗಳು ಮತ್ತು ಭಾರತ ಸರ್ಕಾರದಿಂದ ₹1,27,500 ಕೋಟಿ ಒಟ್ಟು ಬಜೆಟ್ ವೆಚ್ಚದೊಂದಿಗೆ ಹೊಸದಾಗಿ ಅನುಮೋದಿಸಲಾದ ಸೆಮಿಕಾನ್ 2.0 ಒಟ್ಟಾಗಿ ಪ್ರಮುಖ ಕೈಗಾರಿಕಾ ನೀತಿಯ ಪ್ರಚೋದನೆಯನ್ನು ಪ್ರತಿನಿಧಿಸುತ್ತವೆ. ಈ ಉಪಕ್ರಮಗಳು ಮತ್ತು ಹೆಚ್ಚು ಕೌಶಲ್ಯಪೂರ್ಣ ಕಾರ್ಯಪಡೆಯೊಂದಿಗೆ, ಭಾರತವು ಪ್ರಮುಖ ಸೆಮಿಕಂಡಕ್ಟರ್ ವಿನ್ಯಾಸ ಕೇಂದ್ರದಿಂದ ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವಾಗಿ ವಿಕಸನಗೊಳ್ಳುತ್ತದೆ ಎಂದು ನಮ್ಮ ಖಚಿತ ಅಭಿಪ್ರಾಯ ಎಂದು ಪ್ರೊ. ದಿನೇಶ್ ಎಸ್.ವಿ ಹೇಳಿದರು.

ಕಾಲೇಜಿನ ಡೀನ್ ಡಾ. ಕಿಶೋರ್ ಚೌಧರಿ, ಈ ಸಾಲಿನ ಕಾಲೇಜಿನ ಟಾಪರ್ ಲಕ್ಷ್ಮೀಪತಿ ಹಾಜರಿದ್ದರು.

Leave a Reply

Your email address will not be published. Required fields are marked *