ಸುವರ್ಣ ಪ್ರಗತಿ ಪತ್ರಿಕೆ ಸಂಪಾದಕ ಪರಮೇಶ್ ಗೆ ರಾಜ್ಯೋತ್ಸವ ಪ್ರಶಸ್ತಿ

ಸುವರ್ಣ ಪ್ರಗತಿ ಪತ್ರಿಕೆ ಸಂಪಾದಕ ಪರಮೇಶ್ ಅವರು ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತುಮಕೂರು ಜಿಲ್ಲೆ ಹೆಬ್ಬೂರು ಗ್ರಾಮದ ಶಿವಣ್ಣ ಮತ್ತು ಪುಟ್ಟಸಿದ್ದಮ್ಮ ದಂಪತಿ ಪುತ್ರರಾಗಿ ಜನಿಸಿದ ಹೆಚ್.ಎಸ್.ಪರಮೇಶ್ ಅವರು ಪ್ರಾಥಮಿಕ ಮತ್ತು ಪೌಡ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತುಮಕೂರಿಗೆ ಆಗಮಿಸಿ ತುಮಕೂರಿನಲ್ಲಿಯೇ ನಲೆ ನಿಂತರು.
ಇವರು ಪದವಿ ಓದುತ್ತಿದ್ದಾಗ ತನ್ನ ವಿದ್ಯಾಬ್ಯಾಸದ ಖರ್ಚಿಗಾಗಿ ಆಗಿನ ತುಮಕೂರು ವಾರ್ತೆ ಸಂಪಾದಕರಾಗಿದ್ದ ಹೆಚ್.ಎಸ್.ರಾಮಣ್ಣನವರ ಪತ್ರಿಕೆಯಲ್ಲಿ ಫ್ರೂಪ್ರ್ ರೀಡರ್ ಆಗಿ ಪತ್ರಿಕಾ ಕ್ಷೇತ್ರ ದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು,ನಂತರದಲ್ಲಿ ಪತ್ರಿಕಾ ಕ್ಷೇತ್ರದ ಎಲ್ಲಾ ವಿಭಾಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು

Leave a Reply

Your email address will not be published. Required fields are marked *