ತುಮಕೂರು : ಸಿಸಿ ಕ್ಯಾಮರ ಜೊತೆಗೆ ಬೋರ್ ವೆಲ್ ಸ್ಟಾರ್ಟರ್ ಕಳ್ಳತನ ಮಾಡುತ್ತಿದ್ದ ಖದೀಮ ಕಳ್ಳನನ್ನು ಬಂಧಿಸಿ ಅಂದಾಜು ಬೆಲೆ 9,50,000 ( ಒಂಬತ್ತುವರೆ ಲಕ್ಷ ) ರೂಗಳ 66 ವಿವಿಧ ಕಂಪನಿಯ ಸ್ಟಾರ್ಟರ್ ಗಳನ್ನು ವಶ ಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಗಿರಿ ತಾಲ್ಲೂಕು ಕಸಬಾ ಹೋಬಳಿಯ ಪೆಮ್ಮಯ್ಯನ ಪಾಳ್ಯದ ಲೋಕೇಶ್ಎಂಬುವವರು ಪೊಲೀಸ್ ಠಾಣೆಗೆ ಹಾಜರಾಗಿ ನಮ್ಮ ತಂದೆ ವೀರಣ್ಣ ರವರ ಹೆಸರಿನಲ್ಲಿರುವ ಮಧುಗಿರಿ ತಾಲ್ಲೂಕು ಕಸಬಾ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಸರ್ವೇ ನಂ 42/25 ರ ಜಮೀನಿನಲ್ಲಿ ಬೋರ್ ವೆಲ್, ಪ್ಯಾನಲ್ ಬೋರ್ಡ್, ಒಂದು ಸ್ಟಾರ್ಟರ್ ಕಾವಲಿಗೆ ಅಳವಡಿಸಿದ್ದ ರೊಟೇಟಿಂಗ್ ಸೈರನ್ ಸಿ.ಸಿ ಕ್ಯಾವ್ಮೆರಾವನ್ನು ಜುಲೈ 6ರಂದು ರಾತ್ರಿ ಕಳ್ಳನತವಾvರುವ್ಯದಾಗಿ ಮಧುಗಿರಿ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಆರೋಪಿ ಮಧುಗಿರಿ ಪಟ್ಟಣದಲ್ಲಿ ವಾಸವಾಗಿರುವ ಮರಿತಿಮ್ಮನಹಳ್ಳಿಯ ಮಹೇಶ ಎಂಬುವನನ್ನು ವಶಕ್ಕೆ ಪಡೆದು ಆತನು ಕಳ್ಳತನ ಮಾಡಿದ್ದ ಜಮೀನುಗಳಲ್ಲಿ ಬೋರ್ ವೆಲ್ ಗೆ ಅಳವಡಿಸುವ ಒಂಬತ್ತುವರೆ ಲಕ್ಷ ರೂಗಳು 66 ವಿವಿಧ ಕಂಪನಿಯ ಸ್ಟಾರ್ಟರ್ ಗಳು, ಇಪ್ಪತ್ತೈದು ಸಾವಿರ ರೂಗಳ ಒಂದು ರೊಟೇಟಿಂಗ್ ಸಿ.ಸಿ ಕ್ಯಾಮೆರಾ, ಎರಡು ಲಕ್ಷದ ಓಮಿನಿ ಕಾರ್ ಮತ್ತು 50ಸಾವಿರ ರೂ.ಗಳ ಹೀರೋ ಸ್ಲೆಂಡರ್ ಸೇರದಂತೆ 12,25ಲಕ್ಷರೂ.ಗಳ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಕಳ್ಳನ ಬಂಧಿಸಿದ ಸಿಬ್ಬಂದಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಗಾಂಜಾ ಸಪ್ಲೈ ಮಾಡುತ್ತಿದ್ದ ಗ್ಯಾಂಗ್ನ ಬಂಧನ :
ತಿಲಕ್ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನ ಶೇಷಾದ್ರಿಪುರಂ ಕಾಲೇಜು ಸಮೀಪದ ರಸ್ತೆಯಲ್ಲಿ ಆರೋಪಿಗಳು ಮಾದಕ ವಸ್ತು ಗಾಂಜಾ ಸೊಪ್ಪನ್ನು ಹಾಗೂ ಇನ್ನಿತರೆ ಮತ್ತು ಭರಿಸುವ ವಸ್ತುವನ್ನು ಮಾರಾಟ ಮಾಡಲು ಒಂದು ಬಿಳಿ ಬಣ್ಣದ ಫಾರ್ಚೂನರ್ ಕಾರಿನಲ್ಲಿ ಬಂದು ಮಾದಕ ವಸ್ತುವಾದ ಗಾಂಜಾ ಸೊಪ್ಪನ್ನು ಯಾರಿಗೋ ಮಾರಾಟ ಮಾಡುತ್ತಿದ್ದ ತುಮಕೂರಿನ ಸತೀಶ್ ಸಿ.,ಪ್ರಮೋದ್ ಕುಮಾರ್, ದಿಶಾಂತ್, ದರ್ಶನ್, ಅಮೋಘ ನಾಗಭೂಷಣ್, ಮತ್ತು ಬೇಂಗಳೂರಿನ ಮಂಜುನಾಥ ಅವರುಗಳನ್ನು ತಿಲಕ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ 44,30.000/-ರೂಗಳ ಬೆಲೆ ಬಾಳುವ ಮಾದಕ ವಸ್ತುಗಳನ್ನು ಹಾಗೂ ಇನ್ನಿತರೆ ಮತ್ತು ಬರಿಸುವ ವಸ್ತುಗಳನ್ನು ವಶ ಪಡಿಸಿಕೊಂಡಿರುವುದಾಗಿ ತಿಳಿಸಿದರು.
ಒಂಟಿ ಮನೆಯಲ್ಲಿ ಸುಲಿಗೆ ಮಾಡಿದ ಆರೋಪಿಗಳ ಬಂಧನ.
ತುಮಕೂರು ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್.28ರಂದು ಮಧ್ಯಾಹ್ನ ತಿಮ್ಮಲಾಪುರ ತೋಟದ ಮನೆಯಲ್ಲಿ ಇದ್ದ ಶಿಕ್ಷಕರಾದ ಶ್ರೀಮತಿ ಚಂದ್ರಮ್ಮ ರವರ ಮನೆಯ ಬಳಿ ಬುರ್ಕಾ ಧರಿಸಿದ ಮಹಿಳೆ ಊಟವನ್ನು ಕೇಳುವ ನೆಪದಲ್ಲಿ ಹೋಗಿ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕೊರಳಿನಲ್ಲಿದ್ದ 4,00,000/- ರೂ ಮೌಲ್ಯದ 73 ಗ್ರಾಂ 480 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು, ಹೊರಗೆ ಬೈಕ್ ಚಾಲನೆಯಲ್ಲಿ ಇಟ್ಟುಕೊಂಡು ನಿಂತಿದ್ದ ಬೈಕ್ ಸವಾರನೊಂದಿಗೆ ಪರಾರಿಯಾಗಿದ್ದರು.

ತುಮಕೂರು ಗ್ರಾಮಾಂತರ, ಬೆಳ್ಳಾವಿ, ಮತ್ತು ಕೋರಾ ಪೆÇಲೀಸ್ ಠಾಣೆಗಳ ಪೊಲೀಸರು ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿಯ ದೊಡ್ಡಸಾಗ್ಗೆರೆ ಗ್ರಾಮದ ರಂಗನಾಥನ ಹೆಂಡತಿ ನಾಗರತ್ನ, ಕೊರಟಗೆರೆ ತಾಲ್ಲೂಕು ತುಂಬಗಾನಹಳ್ಳಿ ಗಾರ್ಮೆಂಟ್ಸ್ ನಲ್ಲಿ ಡ್ರೈವರ್ ಆಗಿರುವ ಶಿವಕುಮಾರ್ ಎಂಬುವರನ್ನು ಬಂಧಿಸಿ ಸುಲಿಗೆ ಮಾಡಿದ್ದ 73 ಗ್ರಾಂ 480 ಮಿಲಿ ತೂಕದ 4,00,000/- ರೂ ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಹಾಗೂ ಬುರ್ಕಾವನ್ನು ವಶಪಡಿಸಿಕೊಂಡಿರುವುದಾಗಿ ಎಸ್.ಪಿ. ಅಶೋಕ್.ಕೆ.ವಿ.ತಿಳಿಸಿದರು.
ಹೆದ್ದಾರಿಯಲ್ಲಿ ಮಾಡಿದ್ದ ಸುಲಿಗೆ ಆರೋಪಿ ಬಂಧನ :
ತುಮಕೂರು ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿ ದೂರಿನ ಮೇರೆಗೆ 2026ರ ಮೇ 16ರಂದು ಕೋರ ಪೆÇಲೀಸ್ ಠಾಣಾ ವ್ಯಾಪ್ತಿಯ ವಿ.ಆರ್.ಎಲ್ ಹೋಟೆಲ್ ಸಮೀಪ ಸಿರಾ ತುಮಕೂರು ಎನ್.ಹೆಚ್ 48 ರಸ್ತೆಯ ಬದಿಯಲ್ಲಿ ಸಿಂಧು ರವರು ಆಕೆಯ ಗಂಡನೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದಾಗ ಕಾರನ್ನು ರಸ್ತೆಯ ಬದಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿರುವಾಗ, ಅಲ್ಲಿಗೆ ಬಂದ ಇಬ್ಬರು ಆರೋಪಿಗಳು ಸಿಂಧು ರವರ ಕೊರಳಿನಲ್ಲಿದ್ದ 1,80,000/- ರೂ ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಸಂಬಂಧ ಕೋರ ಪೆÇಲೀಸ್ ಠಾಣೆಯ ಪ್ರಕರಣ ದಾಖಲಿಸಲಾಗಿತ್ತು.
ಕೋರ ಪೆÇಲೀಸರು, ಬೆಳ್ಳಾವಿ ಪೆÇಲೀಸ್ ಠಾಣೆಯ ಪೊಲೀಸರು ತಂಡವನ್ನು ರಚಿಸಿ ದೊಡ್ಡಬಳ್ಳಪುರದ ಸೈಯದ್ ಉಸ್ಮಾನ್ ಬಿನ್ ಸೈಯದ್ ಸೈಪುಲ್ಲಾ ಎಂಬುವನನ್ನು ಬಂಧಿಸಿ ಸುಲಿಗೆ ಮಾಡಿಕೊಂಡು ಹೋಗಿದ್ದ 10 ಗ್ರಾಂ 300 ಮಿಲಿ ತೂಕದ 1,80,000/- ರೂ ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಬ್ಬ ಆರೋಪಿ ಆಕಾಶ್ ಆರ್ ತಲೆ ಮರೆಸಿಕೊಂಡಿರುವುದಾಗಿ ಎಸ್ಪಿ ಅಶೋಕ್.ಕೆ.ವಿ. ತಿಳಿಸಿದರು.
ಆರೋಪಿಗಳ ಬಂಧನಕ್ಕೆ ಶ್ರಮಿಸಿದ ಸಿಬ್ಬಂದಿಗೆ ಬಹುಮಾನ ನೀಡಿ ಅಭಿನಂದಿಸಿದರು.