ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಕೆರೆ ಗ್ರಾಮದ ಹಕ್ಕಿಪಿಕ್ಕಿ ಮತ್ತು ಹಂದಿಜೋಗ ಜನಾಂಗದ ಜನರಿಗೆ ನಿವೇಶನ ಕೊಟ್ಟು ಮನೆ ಕಟ್ಟಿಸಿಕೊಡುವ ಸಂಬಂಧ ಶಾಸಕ ಬಿ. ಸುರೇಶ್ಗೌಡರು ಸ್ಥಳ ಪರಿಶೀಲನೆ ಮಾಡಿದರು.
ಶಾಸಕರ ಒತ್ತಾಯದ ಮೇರೆಗೆ ಸರ್ಕಾರ ಹಕ್ಕಿಪಿಕ್ಕಿ ಹಾಗೂ ಹಂದಿಜೋಗಿ ಜನಾಂಗದವರಿಗೆ ತಲಾ 1.5 ಎಕರೆ ಜಾಗ ಮಂಜೂರು ಮಾಡಿದ್ದು ಜಾಗ ಪರಿಶೀಲನೆ ಮಾಡಿದರು. ಈ ವಿಚಾರವನ್ನು ಸುರೇಶ್ಗೌಡರು ವಿಧಾನಸಭೆಯಲ್ಲಿಯೂ ಪ್ರಸ್ತಾಪ ಮಾಡಿ ಈ ಬಡವರಿಗೆ ಮನೆ ಕಟ್ಟಿಸಿ ಕೊಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದರು.
ಜಾಗ ಪರಿಶೀಲನೆ ವೇಳೆ ಶಾಸಕ ಸುರೇಶ್ಗೌಡರ ಜೊತೆ ತಹಶಿಲ್ದಾರ್ ರಾಜೇಶ್ವರಿ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮೀನಾರಾಯಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು. ಈ ಗ್ರಾಮದ ಕೆಲವರು ರೈತರಿಗೆ ಪಡಿತರ ಚೀಟಿ ಇಲ್ಲದೆ ಇರುವ ವಿಚಾರ ಗಮನಕ್ಕೆ ಬಂದು ತಕ್ಷಣ ಅವರಿಗೆ ಪಡಿತರ ಚೀಟಿ ಕೊಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಆದೇಶ ಮಾಡಿದರು.