ಹಂದಿಜೋಗೀಸ್ ಜನಾಂಗದ ಶ್ರೇಯಸ್ಸು ಶಿಕ್ಷಣ ಪಡೆಯುವುದರಲ್ಲಿದೆ-ರಾಜ್ಯಾಧ್ಯಕ್ಷ ರಾಜೇಂದ್ರ ಕುಮಾರ್ ಅಭಿಮತ

ತುಮಕೂರು : ಹಂದಿಜೋಗೀಸ್ ಸಮುದಾಯವು ಪರಿಶಿಷ್ಚ ಜಾತಿಯ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾಗಿದ್ದು ಶಿಕ್ಷಣ ಪಡೆಯುವುದು ಸಾಧ್ಯವಾಗದೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಒಂದು ಕಡೆ ನೆಲೆನಿಂತು ಶಿಕ್ಷಣ ಪಡೆದರೆ ಮಾತ್ರ ನಮ್ಮ ಸಮುದಾಯದ ಬೆಳವಣಿಗೆಯಾಗಲು ಸಾಧ್ಯ ಇಲ್ಲವಾದರೆ ಇತರೆ ಸಮುದಾಯದವರು ನಮ್ಮ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ ಎಂದು ಅಖಿಲ ಕರ್ನಾಟಕ ಹಂದಿಜೋಗಿಸ್ ಜನಾಂಗದ ರಾಜ್ಯಾಧ್ಯಕ್ಷ ರಾಜೇಂದ್ರಕುಮಾರ್ ಅಭಿಪ್ರಾಯಪಟ್ಟರು.

ಮೇ 11ರಂದು ಜಿಲ್ಲಾ ಹಂದಿಜೋಗೀಸ್ ಜನಾಂಗದ ಕೋರ್ ಕಮಿಟಿ ಸಭೆಯನ್ನು ತುಮಕೂರಿನ ಮುರಘರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಮಾತನಾಡಿದರು.

ತುಮಕೂರು ಜಿಲ್ಲಾಧ್ಯಕ್ಷ ಮುಕುಂದರವರು ಮಾತನಾಡಿ ನಮ್ಮ ಜನಾಂಗದ ಜಾತಿಪ್ರಮಾಣಪತ್ರಗಳನ್ನು ಇತರೆ ಸಮುದಾಯದವರು ಪಡೆದುಕೊಂಡು ನಮ್ಮ ಸಮುದಾಯದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಈ ಬಗ್ಗೆ ತುಮಕೂರು ಜಿಲ್ಲಾಧಿಕಾರಿಗಳಿಗೆ ಮತ್ತು ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮತ್ತು ಪೆÇಲೀಸ್ ಇಲಾಖೆಗೆ ದೊರು ನೀಡಿರುತ್ತದೆ ನಮ್ಮ ಸಮುದಾಯದವರಿಗೆ ನೀಡಿರುವ ವಸತಿ ಸೌಲಭ್ಯಗಳನ್ನು ಇತರೆ ಸಮುದಾಯದವರು ಪಡೆಯುತ್ತಿರುವುದನ್ನು ಸಹ ಅಧಿಕಾರಿಗಳ ಗಮನಕ್ಕೆ ತಂದಿರುತ್ತದೆ ಎಂದರು.

ಜಿಲ್ಲಾ ಸಂಘದ ಗೌರವ ಅಧ್ಯಕ್ಷರಾದ ಡಾ. ಹೆಚ್.ವಿ.ರಂಗಸ್ವಾಮಿರವರು ಮಾತನಾಡಿ ತಾಲ್ಲೂಕು ಮಟ್ಟದಲ್ಲಿ ಸಂಘವನ್ನು ಬಲಪಡಿಸಿ ಸಮುದಾಯವನ್ನು ಬಲಪಡಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್ ಖಜಾಂಚಿ ಶ್ರೀಕಂಠ ಮತ್ತು ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ಯಲ್ಲಪ್ಪ ಮಂಜುನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಚಂದ್ರಶೇಖರ್ ಸದಸ್ಯರಾದ ಹರೀಶ್ ಜಗದೀಶ್ ಸೋಮಶೇಖರ್ ಮೊಹನ್ ಕುಮಾರ್ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಹಂದಿಜೋಗಿ ಜನಾಂಗಕ್ಕೆ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡುವಂತೆ ತುಮಕೂರು ಜಿಲ್ಲಾ ಹಂದಿಜೋಗಿ ಸಂಘ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ರವರಿಗೆ ಮನವಿ ಸಲ್ಲಿಸಿದರು ಜಿಲ್ಲಾ ಹಂದಿಜೋಗಿಸ್ ಸಂಘದ ಅಧ್ಯಕ್ಷರಾದ ಮುಕುಂದ, ಉಪಾಧ್ಯಕ್ಷ ಶ್ರೀನಿವಾಸ್ , ಯಲ್ಲಪ್ಪ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ , ಸದಸ್ಯರುಗಳಾದ ಜಗದೀಶ್ ಸೋಮಶೇಖರ್ , ಜೈಕುಮಾರ್ ಪರಮೇಶ್ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *