ತುಮಕೂರು : ಯಾವ ವಿಭಾಗವೇ ಆಗಲಿ ತನ್ನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ದೃಷ್ಟಿಕೋನ ಅಳವಡಿಸಿಕೊಳ್ಳದಿದ್ದರೆ, ಆ ವಿಭಾಗ ಹಳ್ಳ ಹಿಡಿದಂತೆಯೇ ಸರಿ. ಇತ್ತೀಚಿನ ಟ್ರಂಪ್, ನ್ಯಾತನಾನೋ ಅವರ ಆಡಳಿತವೇ ಇದಕ್ಕೆ ಸಾಕ್ಷಿ.165 ಜನ ಮುಗ್ಧ ಮಕ್ಕಳನ್ನು ಕೊಲೆ ಮಾಡಿದಾಗ, ಕನಿಷ್ಠ ಪಾಪ ಪ್ರಜ್ಞೆ ಕಾಡದಿರುವುದು ದುರಂತವೇ ಸರಿ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸಾಹಿತ್ಯ ಪರಿಷತ್, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಿದ್ದಗಂಗಾ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನವರ ಬದುಕು-ಬರಹ ಮತ್ತು ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮನಸ್ಸುಗಳು ಅಧಿಕಾರದಲ್ಲಿ ಇದ್ದರೆ, ಯುದ್ದದಂತಹ ಮನುಷ್ಯ ವಿರೋಧಿ ಕೃತ್ಯಗಳಿಗೆ ಅವಕಾಶ ಇರುವುದಿಲ್ಲ.ಇಂದಿನ ಮದ್ಯ ಪ್ರಾಚ್ಯ ಬಿಕ್ಕಟ್ಟಿಗೆ ಅಮೇರಿಕಾ, ಇಸ್ರೇಲ್ ಮತ್ತಿತರರ ರಾಷ್ಟçಗಳಲ್ಲಿ ಇರುವ ತಾಯಿ ಹೃದಯದ ಮನಸ್ಸುಗಳು ಇಲ್ಲದಿರುವುದೇ ಕಾರಣ ಎಂದರು.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಡಾ.ಶ್ರೀಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಕನ್ನಡ ಸಾಹಿತಿಯಾಗಿ,ವಿಮರ್ಶಕರಾಗಿ,ಆಡಳಿತಾಧಿಕಾರಿಯಾಗಿ,ಉಪನ್ಯಾಸಕರಾಗಿ ಬಹುಮುಖ್ಯ ವ್ಯಕ್ತಿತ್ವದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ತಾಯಿಯ ಅಂತಃಕರಣ ಹೊಂದಿದ್ದವರು.ಕ್ರಿಯೆ ಇಲ್ಲದ ಅರಿವು ಪ್ರಯೋಜನಕ್ಕೆ ಬಾರದು. ಆದರೆ ನಿರಂತರ ಅಧ್ಯಯನ ಶೀಲರಾಗಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಭಾಷಾ ಪಾಂಡಿತ್ಯ, ವಿದ್ವತ್, ಆಧ್ಯಾಪನ ಕ್ರಮ ಎಲ್ಲವೂ ಇಂದಿನವರಿಗೆ ಮಾದರಿ.ಈ ಮಾದರಿ ವ್ಯಕ್ತಿತ್ವವನ್ನು ಯುವ ಪಿಳೀಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತಿ ವತಿಯಿಂದ ಆಯೋಜಿಸಲಾಗಿದೆ ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಕಸಾಪ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಪರಿಕಲ್ಪನೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಚುನಾವಣೆ ಎಂಬ ಭೂತ ಇನ್ನಿಲ್ಲದಂತೆ ಜಾತಿ,ಧರ್ಮ, ಭ್ರಷ್ಟಾಚಾರ ಎಲ್ಲವನ್ನು ಸಹ ಸಾಹಿತ್ಯ ಪರಿಷತ್ತಿಗೆ ತಂದಿದೆ.ಇದರ ಪರಿಣಾಮ ಸಾಹಿತಿಗಳಲ್ಲದವರು ಅಧಿಕಾರ ಹಿಡಿದು,ಪರಿಷತ್ತನ್ನು ಅದೋಗತಿಯತ್ತ ತೆಗೆದುಕೊಂಡು ಹೋಗುತಿದ್ದಾರೆ.ಹಾಗಾಗಿ ಸಾಹಿತ್ಯ ಪರಿಷತ್ತಿಗೆ ಚುನಾವಣೆಯನ್ನು ತಪ್ಪಿಸಿ,ಪರ್ಯಾಯ ದಾರಿಯನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ಕಾವ್ಯಾವಲೋಕನ ಕುರಿತು ಮಾತನಾಡಿದ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಕಾವ್ಯಕ್ಕೆ ಎಲ್ಲಾ ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುವ ಶಕ್ತಿ ಇದೆ. ಇಡೀ ಜಗತ್ತೇ ಪ್ರಕ್ಷÄಬ್ದ ವಾತಾವರಣದಲ್ಲಿ ಇರುವ ಸಂದರ್ಭದಲ್ಲಿ ಕಾವ್ಯದ ಅಗತ್ಯತೆ ಇದೆ. ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರದ್ದು ಬಹುಮುಖ ವ್ಯಕ್ತಿತ್ವ. ಕಾವ್ಯ, ಗದ್ಯ, ವಚನ, ಆಡಳಿತಾಧಿಕಾರಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು.”ಆ ದೇವರೇ ಕೂಡ ನನ್ನ ಭ್ರಷ್ಟಗೊಳಿಸಲಾರ” ಎಂದು ತಾವು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನೇಮಕವಾದ ದಿನ ನುಡಿದ ಮಾತಿಗೆ ಕೊನೆಯವರೆಗೂ ಬದ್ದರಾಗಿಯೇ ಕೆಲಸ ಮಾಡಿದವರು.ಅವರ ಎಂಟು ಕವನ ಸಂಕಲನಗಳು ಒಂದು ವಿಷಯಕ್ಕೆ ಸಿಮೀತವಾಗದೆ,ಪ್ರಕೃತಿ, ಗಂಡು, ಹೆಣ್ಣಿನ ಸಂಬAಧ ಕುರಿತ ಕಾವ್ಯಗಳು ಇಂದಿಗೂ ಜನರಲ್ಲಿ ಜೀವನೋತ್ಸವವನ್ನು ತುಂಬುತ್ತವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸ್ವ ವಿಮರ್ಶಕನಾಗಿ, ತನ್ನ ಬರಹದಲ್ಲಿ ನೈತಿಕತೆಯನ್ನು ಉಳಿಸಿಕೊಂಡವರು.ನೈತಿಕತೆ ಮತ್ತು ಪ್ರಾಮಾಣಿಕತೆಯಲ್ಲಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಪ್ರಶ್ನಾತೀತರು ಎಂದು ನುಡಿದರು.
ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನವರ ಬದುಕು ಮತ್ತು ಆಡಳಿತಾಗಾರರಾಗಿ ಎಂಬ ವಿಷಯ ಕುರಿತು ಮಾತನಾಡಿದ ಸಾಹಿತಿ ಪ್ರೊ. ಲಕ್ಷಿö್ಮನಾರಾಯಣ,ಶಾಸ್ತç,ಕಾವ್ಯ,ವಿಮರ್ಶೆ,ವಚನಗಳ ಅವಲೋಕನ ಹಾಗೂ ಆಡಳಿತಗಾರರಾಗಿಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅಪರೂಪದ ವ್ಯಕ್ತಿತ್ವ ಹೊಂದಿದ್ದವರು.ಉಪನ್ಯಾಸಕರಾಗಿ,ವಿವಿಧ ಕಾಲೇಜುಗಳ ಪ್ರಾಂಶುಪಾಲರಾಗಿ,ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಯಾರ ಮುಲಾಜಿಗೂ ಒಳಗಾಗದೆ ಅಧ್ಯಾಪಕ ಸ್ನೇಹಿ ಆಡಳಿತ ನೀಡಿದವರು.ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ತಮ್ಮದೆ ರೀತಿಯಲ್ಲಿ ಪರಿಹಾರ ಒದಗಿಸಿದವರು.ಅವರ ಕಾಲದಲ್ಲಿ ಹಿರಿತನಕ್ಕೆ ಹೆಚ್ಚಿನ ಅದ್ಯತೆ ನೀಡಿ, ಕಾಲೇಜು ಶಿಕ್ಷಣ ಆಡಳಿತ ಸುಧಾರಿಸಲು ಕಾರಣರಾದರು ಎಂದು ಹಲವಾರು ದೃಷ್ಟಾಂತಗಳ ಮೂಲಕ ವಿವರಿಸಿದರು.
ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ವಚನ ಸಾಹಿತ್ಯ ಕುರಿತು ಮಾತನಾಡಿದ ಪ್ರಾಧ್ಯಾಪಕರಾದ ಪ್ರೊ.ನಾಗಭೂಷಣ್.ಸಿ, ಸಂಶೋಧಕರಾಗಿ ನಡುಗನ್ನಡದ ಸಾಹಿತ್ಯಕ್ಕೆ ಹೆಚ್ಚಿನ ಬೆಳಕು ಚಲ್ಲಿದವರು.ವಚನ ಸಾಹಿತ್ಯದಲ್ಲಿ, ಅದರಲ್ಲಿಯೂ ಶೂನ್ಯ ಸಂಪಾದನೆಯ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಭೌದ್ಧಿಕ ಪರಂಪರೆಯನ್ನು ಹುಟ್ಟು ಹಾಕಿದರು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ತುಮಕೂರಿನಲ್ಲಿ ಸೊಂದಲಗೆರೆ ಲಕ್ಷಿö್ಮಪತಿ ಅವರು ತಮ್ಮ ಪೋಷಕರ ಹೆಸರಿನಲ್ಲಿ ಸ್ಥಾಪಿಸಿರುವ ಶ್ರೀಮತಿ ಮಲ್ಲಮ್ಮ ಶ್ರೀ ಪಟೇಲ್ ನಾರಸೇಗೌಡ ದತ್ತಿ ಪ್ರಶಸ್ತಿಯನ್ನು ಸಾಹಿತಿಗಳಾದ ಯಲಚಗೆರೆ ಉಮೇಶ್, ಶ್ರೀಮತಿ ರೇಖಾ ಹಿಮಾನಂದ್ ಮತ್ತು ಶ್ರೀಮತಿ ಕೆ.ಬಿ.ನೇತ್ರಾವತಿ ಅವರುಗಳಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು.ವೇದಿಕೆಯಲ್ಲಿ ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ, ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಎಂ.ದಕ್ಷಿಣಮೂರ್ತಿ,ಕಸಾಪ ಕಾರ್ಯದರ್ಶಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷರಾದ ಎಂ.ಹೆಚ್.ನಾಗರಾಜು, ಸಿದ್ದಗಂಗಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪದ್ಮಜ.ವೈ.ಎಂ, ಡಾ.ಸಿ.ವಿ.ಶಕುಂತಲ ಹಾಗೂ ಅಧ್ಯಾಪಕರುಗಳು ಉಪಸ್ಥಿತರಿದ್ದರು.