ತುಮಕೂರು : ಕೃಷಿ ಇಲಾಖೆಯು ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರವನ್ನು ಖರೀದಿಸುವ ಕುರಿತು ರೈತರಿಗೆ ಮಾಹಿತಿ ನೀಡಿದೆ.ರೈತರು ತಾವಿರುವ ಸ್ಥಳದಿಂದಲೇ “ಫ್ರೇಮ್ವರ್ಕ್ ಫಾರ್ ಫರ್ಟಿಲೈಸರ್ ಸೇಲ್ (FFS)’ ಮೊಬೈಲ್ ಆ್ಯಪ್ (ಆಂಡ್ರಾಯ್ಡ್) ಮೂಲಕ ರಸಗೊಬ್ಬರವನ್ನು ಕಾಯ್ದಿರಿಸುವ ವಿನೂತನ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಆಯ್ದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.
ರಸಗೊಬ್ಬರ ಖರೀದಿ ಪ್ರಕ್ರಿಯೆ ಸರಳವಾಗಿಸಲು ಕೇಂದ್ರ ಸರ್ಕಾರ “ಫರ್ಟಿಲೈಸರ್ಸ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್” (FSAS) ಎಂಬ ವಿನೂತನ ವ್ಯವಸ್ಥೆ ಜಾರಿಗೊಳಿಸಿ, “ಫ್ರೇಮ್ವರ್ಕ್ ಫಾರ್ ಫರ್ಟಿಲೈಸರ್ ಸೇಲ್ (FFS)' ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅನುμÁ್ಠನಗೊಳಿಸುತ್ತಿದ್ದು, ಪ್ರತಿ ರಾಜ್ಯದ ಎರಡು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, 17 ಜೂನ್ 2026 ರಿಂದ ಮೊಬೈಲ್ ಆ್ಯಪ್ ಬಳಕೆಗೆ ಅಧಿಕೃತ ಚಾಲನೆ ದೊರೆಯಲಿದೆ.
ರೈತರು ತಮ್ಮೆಲ್ಲ ಕೆಲಸ ಬಿಟ್ಟು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಆ್ಯಪ್ ಮೂಲಕ ರೈತರು ಹತ್ತಿರದ ಗೊಬ್ಬರದ ಅಂಗಡಿಗೆ ಬುಕ್ ಮಾಡಿದಾಗ ಮೊಬೈಲ್ ಆ್ಯಪ್ನಲ್ಲಿ QR CODE Genarate ಆಗುತ್ತದೆ. ಸದರಿ QR CODE ಬಳಸಿ 3 ದಿನದೊಳಗೆ ರೈತರು ಗೊಬ್ಬರ ಖರೀದಿಸಬಹುದು. ಇದರಿಂದ ರೈತರಿಗೆ ದೊರೆಯುವ ಗೊಬ್ಬರ ಅನ್ಯರ ಪಾಲಾಗುವುದಿಲ್ಲ. ಕೈಗಾರಿಕೆ ಉದ್ದೇಶ ಸೇರಿ ಯೂರಿಯಾ ಮತ್ತಿತರ ಗೊಬ್ಬರಗಳ ದುರ್ಬಳಕೆ, ಕಾಳಸಂತೆ ಮಾರಾಟಕ್ಕೆ ಈ ವ್ಯವಸ್ಥೆ ಕಡಿವಾಣ ಹಾಕುತ್ತದೆ.
.
ರೈತರು ಕಾಮನ್ ಸರ್ವಿಸ್ ಸೆಂಟರ್ (ಸಿಎಸ್ಸಿ) ಮುಖಾಂತರ ರಸಗೊಬ್ಬರವನ್ನು ಕಾಯ್ದಿರಿಸಬಹುದು. ರಸಗೊಬ್ಬರ ಅಂಗಡಿ ಮಾಲೀಕರು ಸಹ ಸ್ವಯಂಪ್ರೇರಿತವಾಗಿ ರಸಗೊಬ್ಬರಗಳನ್ನು ಮೊಬೈಲ್ ಆ್ಯಪ್ ಮೂಲಕ ಬುಕ್ ಮಾಡಲು ಸಹಕರಿಸುತ್ತಾರೆ.
ದೇಶಾದ್ಯಂತ ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಗೊಬ್ಬರಕ್ಕೆ ಇರುವ ಬೇಡಿಕೆ ಈ ವ್ಯವಸ್ಥೆಯಡಿ ಸರ್ಕಾರಗಳ ಗಮನಕ್ಕೆ ಬರಲು ಈ ಮೊಬೈಲ್ ಆ್ಯಪ್ ಸಹಕಾರಿಯಾಗಲಿದೆ. ಇದರಿಂದ ಯೋಜಿತ ಬೇಡಿಕೆಯನ್ವಯ ದೇಶಾದ್ಯಂತ ಗೊಬ್ಬರದ ಸುಸ್ಥಿರ ಪೂರೈಕೆ ಸಾಧ್ಯವಾಗಲಿದ್ದು, ಆಹಾರ ಭದ್ರತೆಗೂ ಇದು ನೆರವಾಗಲಿದೆ. ಗೊಬ್ಬರದ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಲು ಅನುವಾಗಲಿದೆ. ಪ್ರತಿ ವಹಿವಾಟು ಡಿಜಿಟಲೀಕರಣ ರೂಪದಲ್ಲಿದ್ದು, ಪಾರದರ್ಶಕತೆ ಮತ್ತು ಮಾರಾಟದ ನಿಖರ ಲೆಕ್ಕ ಸಿಗಲಿದೆ. ಅರ್ಹ ರೈತರ ಮಾಹಿತಿ ಇರುವುದರಿಂದ ಅನಗತ್ಯ ವಿವಾದಗಳಿಗೆ ಕಡಿವಾಣ ಹಾಕಬಹುದಾಗಿದೆ.
ಮೊಬೈಲ್ ಆ್ಯಪ್ ಬಳಸುವ ವಿಧಾನ (ಫ್ರೇಮ್ವರ್ಕ್ ಫಾರ್ ಫರ್ಟಿಲೈಸರ್ ಸೇಲ್- (FFS)
ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ನಲ್ಲಿ ಆಧಾರ್ ಸಂಖ್ಯೆ ಅಥವಾ ಎಫ್ಐಡಿ ನಮೂದಿಸಿದಾಗ ಆಧಾರ್ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ತದನಂತರ ಮೊಬೈಲ್ ಆ್ಯಪ್ನಲ್ಲಿ ಹಿಡುವಳಿ ವಿಸ್ತೀರ್ಣದ ಮಾಹಿತಿ ಲಭ್ಯವಾಗುತ್ತದೆ.“My Farm” tab ಬಟನ್ ಒತ್ತಿದಾಗ ಬೆಳೆ ವಿವರ ಲಭ್ಯವಾಗುತ್ತವೆ. ಬೆಳೆ ವಿವರ ದಾಖಲಿಸಿದ ನಂತರApply for fertilizer ಬಟನ್ ಒತ್ತಿದಾಗ ಗ್ರೇಡ್ ವಾರು ರಸಗೊಬ್ಬರದ ವಿವರ ಲಭ್ಯವಾಗುತ್ತದೆ. ರಸಗೊಬ್ಬರದ ವಿವರವನ್ನು ದಾಖಲಿಸಿದ ನಂತರ ಹತ್ತಿರದ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಯನ್ನು ಆಯ್ಕೆ ಮಾಡುವುದು. ಆಯ್ಕೆ ಮಾಡಿದ ನಂತರ Submit ಬಟನ್ ಒತ್ತಿದಾಗ QR CODE Genarate ಆಗುವುದರ ಮುಖಾಂತರ ರಸಗೊಬ್ಬರವನ್ನು ಕಾಯ್ದಿರಿಸಲಾಗುತ್ತದೆ.
ಬುಕಿಂಗ್ ಬಳಿಕ ಬರುವ ಕ್ಯೂಆರ್ ಕೋಡ್ ಅನ್ನು ಗೊಬ್ಬರದ ಅಂಗಡಿಯವರು ಸ್ಕ್ಯಾನ್ ಮಾಡಿ ಗೊಬ್ಬರ ನೀಡುತ್ತಾರೆ. ರೈತರು ಖುದ್ದಾಗಿ ಹೋಗಲು ಆಗದಿದ್ದರೆ ರೈತರ ಪರ ಬೇರೊಬ್ಬ ವ್ಯಕ್ತಿ ಹೋಗಬಹುದು. ಆ ಬೇರೊಬ್ಬ ವ್ಯಕ್ತಿ ಒಟಿಪಿ, ಕ್ಯೂಆರ್ ಕೋಡ್ ಹಾಗೂ ತನ್ನ ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ಯುಪಿಐ ಮೂಲಕ ರಸಗೊಬ್ಬರ ಮಾರಾಟಗಾರರಿಗೆ ಹಣ ಪಾವತಿಸಿ ರಸಗೊಬ್ಬರವನ್ನು ಪಡೆಯಬಹುದು. Farmer ID ಹೊಂದದೆ ಇರುವ ರೈತರು (Share croppers, Tenant, Forest Right Patta holder, Temple land, Government land/ KVK/Institutional land) ಸಹ ರಸಗೊಬ್ಬರ ಖರೀದಿಸಲು ಪ್ರಸಕ್ತ ಸಾಲಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.