ಒಂದಲ್ಲ ಒಂದು ದಿನ ಬೆಂಗಳೂರು ತುಮಕೂರು ಒಂದಾಗುವ ಸಾಧ್ಯತೆಗಳಿವೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ತುಮಕೂರು : ತುಮಕೂರು ಬೆಂಗಳೂರಿಗೆ ಕನೆಕ್ಟ್ ಆಗುವಷ್ಟು ಬೆಳೆದಿದೆ, ತುಮಕೂರು-ಬೆಂಗಳೂರು ಹೈವೆಯಲ್ಲಿ ಒಂದು ಎಕರೆ ಜಮೀನು ಸಿಗುತ್ತಿಲ್ಲ ಎಲ್ಲಾ ಮನೆಗಳಾಗಿವೆ, ಕೈಗಾರಿಕೆಗಳು ಆಗಿವೆ, ಒಂದಲ್ಲ ಒಂದು ದಿನ ಬೆಂಗಳೂರು ತುಮಕೂರು ಒಂದಾಗುವ ಸಾಧ್ಯತೆಗಳಿವೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರು ನಗರವು ಉದ್ಯಾನನಗರಿ ಬೆಂಗಳೂರಿನಂತೆಯೇ ವೇಗವಾಗಿ ಬೆಳೆಯುತ್ತಿದೆ, ತುಮಕೂರನ್ನು ಗ್ರೇಟರ್ ಬೆಂಗಳೂರು ಅಥವಾ ಗ್ರೇಟರ್ ತುಮಕೂರು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಎಂದು ಹೇಳಿದರು.

ನಗರದ ಮಹಾನಗರಪಾಲಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ನೇರ ಪಾವತಿ ಪೌರಕಾರ್ಮಿಕರಿಗೆ
ನೇರ ಪಾವತಿ ಆದೇಶ ಪತ್ರ ವಿತರಣೆ, ಪಿಪಿಪಿ ಎಲ್‍ಇಡಿ ಯೋಜನೆಯಡಿ ಹೆಚ್ಚುವರಿ ಬೀದಿ ದೀಪ
ಅಳವಡಿಸುವ ಕಾಮಗಾರಿ, ಯುಜಿಡಿ-ನಮಸ್ತೆ ಕಿಟ್ಸ್ ಪರಿಕರಗಳ ಹಾಗೂ ಪರಿಹಾರ ವಿತರಣೆ, ಪೌರ
ಕಾರ್ಮಿಕರ ಮಕ್ಕಳಿಗೆ ಲ್ಯಾಪ್‍ಟಾಪ್ ವಿತರಣೆ ಹಾಗೂ ಶಾಲಾ ಶುಲ್ಕ ಮರುಪಾವತಿ, ಕಾರ್ಯನಿರತ
ಪತ್ರಕರ್ತರಿಗೆ ನಗದು ರಹಿತ ಆರೋಗ್ಯ ವಿಮೆ ಸೌಲಭ್ಯ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಆದೇಶ ಪತ್ರವನ್ನು ವಿತರಿಸಿ ಮಾತನಾಡಿದ ಅವರು ಇಡೀ ನಗರವನ್ನು ಸುಂದರ ಹಾಗೂ ಹಸಿರಾಗಿಸಲು ಗಿಡಗಳನ್ನು ನೆಡಬೇಕು ಎಂದರಲ್ಲದೆ, ಮೈಸೂರು ಇಡೀ ದೇಶದಲ್ಲೇ ಸ್ವಚ್ಚತೆಯಲ್ಲಿ ಮೊದಲ ಸ್ಥಾನದಲ್ಲಿದೆ, ತುಮಕೂರನ್ನು ಸ್ವಚ್ಛತೆಯಲ್ಲಿ ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸೋಣಎಂದ ಅವರು, ಜಿಲ್ಲೆಯ 14 ಪಂಚಾಯ್ತಿಗಳನ್ನು ಸೇರಿಸಿ ಗ್ರೇಟರ್ ತುಮಕೂರನ್ನಾಗಿ ಮಾಡುವ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ಬುಧವಾರ 175 ನೇರಪಾವತಿ
ಪೌರಕಾರ್ಮಿಕರಿಗೆ ನೇರಪಾವತಿ ಆದೇಶ ಪತ್ರವನ್ನು ವಿತರಿಸಿದರು.

ಪೌರಕಾರ್ಮಿಕರ ಕುಟುಂಬದ ಹಿತ ದೃಷ್ಟಿಯಿಂದ ಅವರ ನೇಮಕಾತಿಯನ್ನು ಖಾಯಂ ಮಾಡಲಾಗಿದೆ. ಪೌರ ಕಾರ್ಮಿಕರ ಯೋಗ ಕ್ಷೇಮಕ್ಕಾಗಿ ಪಾಲಿಕೆಯು ಜೊತೆಗಿರುವುದರೊಂದಿಗೆ ವಿವಿಧ ಸೌಲಭ್ಯಗಳನ್ನು ನೀಡಲಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಪೌರ ಕಾರ್ಮಿಕರೂ ಸಹ ಸ್ವಚ್ಛ ನಗರವನ್ನಾಗಿ ನಿರ್ಮಿಸಲು ಪ್ರಯತ್ನಿಸಬೇಕು.

ಪಾಲಿಕೆಗೆ MGY ಯೋಜನೆಯಡಿ 200 ಕೋಟಿ ರೂ.ಗಳು ಮಂಜೂರಾಗಿದ್ದು, ಇದರಲ್ಲಿ ಬೀದಿ ದೀಪ, ಉದ್ಯಾನ ಇತ್ಯಾದಿ
ಕೆಲಸಗಳನ್ನು ಕೈಗೊಳ್ಳಲಾಗುವುದು. ನಗರದಲ್ಲಿ ಈಗಾಗಲೇ ಸಿಸಿಎಂಎಸ್ ಬೀದಿ ದೀಪಗಳನ್ನು
ಅಳವಡಿಸಲಾಗಿದೆ. ಪ್ರಗತಿಯಲ್ಲಿರುವ ತುಮಕೂರು ನಗರದ ಕುಡಿಯುವ ನೀರಿನ ಯೋಜನೆಗಳಿಗೂ ಈ
ಹಣವನ್ನು ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಕೇತ್ ರಾಜ್
ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ
ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ. ಶುಭ, ನಗರಾಭಿವೃದ್ಧಿ ಕೋಶದ ಯೋಗಾನಂದ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *