ತುಮಕೂರು: ಅರುಣೋದಯ ಗ್ರಾಮೀಣಾಭಿವೃದ್ದಿ ಟ್ರಸ್ಟ್, ತುಮಕೂರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಆಕೃತಿ ಪ್ರಕಾಶನ ಜಲಜಂಬೂ ಲಿಂಕ್ಸ್ ತುಮಕೂರು ಇವರ ಸಹಯೋಗದಲ್ಲಿ ಜುಲೈ 19ರ ಭಾನುವಾರ ಬೆಳಗ್ಗೆ 10:30 ಗಂಟೆಗೆ ಡಾ.ರವಿಕುಮಾರ್ ನೀಹ ಅವರ “ನಿಗೋನಿ” ಕಾದಂಬರಿ ಹಾಗೂ ಮೂರ್ತಿ ತಿಮ್ಮನಹಳ್ಳಿ ಅವರ “ಕರುಪ್ಡಿ” ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ್ ಬಿಳಿಮಲೆ ಅವರು ಉದ್ಘಾಟಿಸಲಿದ್ದಾರೆ.ಕೃತಿಗಳನ್ನು ಸಂಸ್ಕøತಿ ಚಿಂತಕರಾದ ಪ್ರೊ.ರಾಜಪ್ಪ ದಳವಾಯಿ ಅವರು ಬಿಡುಗಡೆ ಮಾಡಲಿದ್ದು, ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ವಹಿಸಲಿದ್ದಾರೆ. ಕೃತಿಗಳ ಕುರಿತು ಸಮಾಜ ವಿಜ್ಞಾನಿಗಳಾದ ಡಾ.ಸಿ.ಜಿ.ಲಕ್ಷ್ಮಿಪತಿ, ಕಾದಂಬರಿಕಾರರಾದ ಮೋದೂರು ತೇಜು,ಕಥೆಗಾರರಾದ ಡಾ.ಗೋವಿಂದರಾಜು.ಎಂ.ಕಲ್ಲೂರು ಅವರುಗಳು ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಶಾಖೆಯ ಅಧ್ಯಕ್ಷೆ ಡಾ.ಆಶಾರಾಣಿ ಬಗ್ಗನಾಡು, ನೀಗೋನಿ ಕಾದಂಬರಿಯ ಕತೃ ಡಾ.ರವಿಕುಮಾರ್ ನೀ.ಹ, ಕರುಪ್ಡಿ ಕೃತಿಯ ಕತೃ ಮೂರ್ತಿ ತಿಮ್ಮನಹಳ್ಳಿ,ಆಕೃತಿ ಪ್ರಕಾಶನದ ಪ್ರಕಾಶಕರಾದ ಗುರುಪ್ರಸಾದ್ ಹೆಜ್ಜಾಜಿ ಅವರುಗಳು ಉಪಸ್ಥಿತರಿರುವರು.ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಡಾ.ರವಿಕುಮಾರ್ ನೀಹ ಮನವಿ ಮಾಡಿದ್ದಾರೆ.