ಆಗಸ್ಟ್ 16: “ಸಂಸ್ಮರಣ ಕುಸುಮಾಂಜಲಿ” ಪುಸ್ತಕ ಲೋಕಾರ್ಪಣೆ

ತುಮಕೂರು : ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಜಯಸುವರ್ಣಪುರ ಗ್ರಾಮದಲ್ಲಿ ಗುರುಪ್ರಸಾದ ಬ್ರಹ್ಮಸಮಾಜ ವತಿಯಿಂದ 39ನೇ ವ್ಯಾಸಂಗ ಗೋಷ್ಠಿ ಬೆಳಿಗ್ಗೆ 8.30ಕ್ಕೆ ಮತ್ತು ದಿ||ಜೆ.ಆರ್.ಸದಾಶಿವಪ್ಪನವರ ಸ್ಮರಣಾರ್ಥ ಜೆ.ಎಸ್.ಬಿ.ರಾಮಪ್ಪ ಮತ್ತು ಶಿವಲಿಂಗಮ್ಮನವರ “ಸಂಸ್ಮರಣ ಕುಸುಮಾಂಜಲಿ” ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಆಗಸ್ಟ್ 16 ಭಾನುವಾರ ಮಧ್ಯಾಹ್ನ 8.30ಕ್ಕೆ ಗುರು ಸಮುದಾಯ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನಿಧ್ಯವನ್ನು ಹಾರನಹಳ್ಳಿ ಕೋಡಿಮಠದ ಡಾ||ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ವಹಿಸುವರು, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಕಥಿಫೆ ರಾಜ್ಯಮಟ್ಟದ ಉಪನ್ಯಾಸಕರಾದ ಹೆಚ್.ಸಿ.ಜಗದೀಶ್ ಭಾಗವಹಿಸುವರು.

ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿವಿಧ ಉಪನ್ಯಾಸಗಳು ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಶ್ರೀ ಆಂಜನೇಯ ಗ್ರಾಂಮೀಣ ವಿದ್ಯಾ ಮತ್ತು ತರಬೇರತಿ ದತ್ತಿ ಸಂಸ್ಥೆಯಿಂದ 2025-25ರಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ದಿ||ಜೆ.ಆರ್.ಸದಾಶಿವಪ್ಪನವರ ಸ್ಮರಣಾರ್ಥಜೆ.ಎಸ್.ಬಿ.ರಾಮಪ್ಪ ಮತ್ತು ಶಿವಲಿಂಗಮ್ಮನವರ “ಸಂಸ್ಮರಣ ಕುಸುಮಾಂಜಲಿ ಪುಸ್ತಕವನ್ನು ಡಾ||ಶಿವಾನಂದ ಶಿವಯೋಗಿ ರಾಜೇಂದ್ರೆ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಲಾಗುವುದು. ಶಾಸಕ ಬಿ.ಜಿ.ಗೋವಿಂದಪ್ಪ ಆಧ್ಯಕ್ಷತೆ ವಹಿಸುವರು.

Leave a Reply

Your email address will not be published. Required fields are marked *