ಶೈನಾ ಅಧ್ಯಯನ ಕೇಂದ್ರದಿಂದ ಬಸವ ಪ್ರಶಸ್ತಿ ಪ್ರದಾನ

ತುಮಕೂರು:ನಗರದ ಶೈನಾ ಅಧ್ಯಯನ ಕೇಂದ್ರ, ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ವತಿಯಿಂದ ಬಸವ ಜಯಂತಿ ಆಚರಣೆ ಹಾಗೂ ಬಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಿಜಯ ನಗರದ ಶೈನಾ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಡಾ.ಬಿ.ಸಿ.ಶೈಲಾ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಂಶೋಧಕ ಹಾಗೂ ಇತಿಹಾಸ ಉಪನ್ಯಾಸಕ ಡಾ.ಡಿ.ಎನ್. ಯೋಗೀಶ್ವರಪ್ಪ ಅವರು ದ್ವೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶೈನಾ ಅಧ್ಯಯನ ಬಳಗದ ದೊಂಬರನಹಳ್ಳಿ ನಾಗರಾಜು ಆಶಯ ನುಡಿಗಳನ್ನಾಡಿ,ಶೈನಾ ಅಧ್ಯಯನ ಸಂಸ್ಥೆ ಸಾಹಿತ್ಯ, ಸಂಸ್ಕøತಿ, ಮಹಿಳಾ ಸಬಲೀಕರಣ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.ಮಹಿಳಾ ಸಂಘಟನೆಯ ಮೂಲಕ ಆಯೋಜಿಸುತ್ತಿದ್ದ ದೇಶಿ ಉತ್ಸವ ಬಹಳ ಹೆಸರು ಮಾಡಿದೆ.ಇಂದಿನ ಪರಿಸ್ಥಿತಿಯಲ್ಲಿ ಬಸವತತ್ವ ಎಲ್ಲರನ್ನು ಆಶ್ರಯಿಸಿದ್ದಾರೆ.

ಕೂಡಲ ಸಂಗಮದಲ್ಲಿ ಇಂದಿಗೂ ಬಸವಣ್ಣನವರು ನಮಗೆಲ್ಲರಿಗೂ ಮಾರ್ಗದರ್ಶನ ನೀಡುತ್ತಾ ಬಂದಿದೆ. ವಚನ ಸಾಹಿತ್ಯ ನಮ್ಮೆಲ್ಲರಿಗೂ ಇಂದಿಗೂ ಆದರ್ಶ ಪ್ರಾಯವಾಗಿದೆ.ಬಸವಣ್ಣ ಲೋಕ ಕಂಡ ವಿಸ್ಮಯ. ಅಂಗ ಲಿಂಗಾಂಗಗಳ ಜೋಡಣೆ, ಇಂತಹ ಬಸವಣ್ಣನವರ ಬಗ್ಗೆ ಮತ್ತಷ್ಟು ಬೆಳಕು ಚಲ್ಲುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ಬಸವ ಪ್ರಜ್ಞೆಯನ್ನು ಎಲ್ಲರಲ್ಲಿಯೂ ಮೂಡಿಸುವ ನಿಟ್ಟಿನಲ್ಲಿ ಇಂದೊಂದು ಮಹತ್ವದ ಕಾರ್ಯಕ್ರಮ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ,ಶೈಲಾ ನಾಗರಾಜು ತಮ್ಮ ಬದುಕನ್ನೇ ಸಾಹಿತ್ಯ ಕ್ಷೇತ್ರಕ್ಕೆ ಆರ್ಪಿಸಿಕೊಂಡಿದ್ದಾರೆ.12 ನೇ ಶತಮಾನದ ಬಸವಣ್ಣನನ್ನು ಎರಡು ಹಂತದಲ್ಲಿ ನೋಡಬಹುದು. ಚಾರಿತ್ರಕ್ಕೆ ಮತ್ತು ಪೌರಾಣಿಕ ಬಸವಣ್ಣ. ವರ್ಣಕ ಬಸವಣ್ಣ ಚಿತ್ರಿಸಿದವರು ಪಾಲಕ್ಕುರಿಕೆ ಸೋಮನಾಥ. ಬಸವಣ್ಣನನ್ನ ನೋಡದಿದ್ದರೆ, ಅವರ ಬಗ್ಗೆ ಓದಿ ತಿಳಿದುಕೊಂಡು ಶ್ರೀಶೈಲಕ್ಕೆ ಹೋದ ಸಂದರ್ಭದಲ್ಲಿ ಅವರನ್ನು ಬಗ್ಗೆ ಮತ್ತಷ್ಟು ತಿಳಿದು,ಬಸವೇಶ್ವರ ಪುರಾಣ ಎಂಬ ಕೃತಿಯನ್ನು ಪೌರಾಣಿಕ ಶೈಲಿಯಲ್ಲಿ ತೆಲುಗಿನಲ್ಲಿ ರಚಿಸುತ್ತಾನೆ. ಅದರಂತೆ ಬಸವಣ್ಣ ಎಂದರೆ ಶಿವನ ವಾಹನ ನಾಲ್ಕು ಕಾಲಿನ ಎತ್ತು ಎಂಬ ಪರಿಕಲ್ಪನೆಯಲ್ಲಿ ಇಂದಿಗೂ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ.ಇದರ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಹರ್ಡೇಕರ್ ಮಂಜಪ್ಪ ಅವರು 1914ರಲ್ಲಿ ಮೊದಲ ಬಾರಿಗೆ ಜಗಜೋತಿ ಬಸವೇಶ್ವರ ಅಜಯಂತಿಯನ್ನು ಅಕ್ಷಯ ತೃತೀಯ ದಿನದಂದು ಆಚರಿಸಲಾಯಿತು ಎಂದರು.

ಜಾತಿ ವಿನಾಶದ ಕಡೆಗೆ ಮೊಟ್ಟ ಮೊದಲಿಗೆ ಗಮಹರಿಸಿದ ಬಸವಣ್ಣ,ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ, ಸಮ ಸಮಾಜದ ಕನಸು ಕಂಡವರು.ಇವನ್ಯಾರವ, ಇವನ್ಯಾರವ ಎನ್ನದೆ, ಇವ ನಮ್ಮವ ಎಂಬ ಹೇಳಿಕೆ,ಅಪ್ಪನು ಮಾದಾರ ಚನ್ನಯ್ಯ, ಬೊಪ್ಪನ ನಮ್ಮ ದೋಹಾರ ಕಕ್ಕಯ್ಯ ಎಂಬ ಮಾತು,ನೆಲವೊಂದ ಹೊಲಗೇರಿ ಶಿವಾಲಯಕ್ಕೆ,ಜಲವೊಂದೆ ಶೌಚಾ ಶಮನಕ್ಕೆ ಎಂಬ ವಚನ ಶೋಷಿತ ಸಮುದಾಯಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ಆಡಿದ ಮಾತುಗಳಾಗಿವೆ.ದೇವಾಲಯಕ್ಕೆ ಬರುವ ಆದಾಯವನ್ನು ರಾಜ ಮತ್ತು ಪುರೋಹಿತರಿಗೆ ಮೀಸಲಿರುವುದನ್ನು ಕಂಡು, ಭೌತಿಕ ದೇವಾಲಯಕ್ಕೆ ಬದಲಾಗಿ, ದೇಹಾಲಯ ದೇವರಿಗೆ ಒತ್ತು ನೀಡಿದರು.ಸಮಾನತೆಯ ಸಂಕೇತವಾಗಿ ಇಷ್ಟಲಿಂಗ ಧಾರಣೆ ಪ್ರತಿಪಾದಿಸಿದರು.ಧರ್ಮದಿಂದ ಶೋಷಣೆಗೆ ಒಳಗಾಗಿದ್ದ ಲಕ್ಷಾಂತರ ಜನರು ಬಸವಣ್ಣನವರ ಅನುಯಾಯಿಗಳಾಗಿ ಲಿಂಗಾಯಿತರಾದರು.ಆದರೆ ಇಂದು ಲಿಂಗಾಯಿತರೇ ಜಾತಿಯ ಹೆಸರಿನಲ್ಲಿ ವಿಘಟನೆಗೊಂಡಿರುವುದು ವಿಷಾದಕರ ಸಂಗತಿ ಎಂದು ಡಾ.ಡಿ.ಎನ್. ಯೋಗೀಶ್ವರಪ್ಪ ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ಧ್ಯಾನಾ ಶಿವಬಸಪ್ಪ ಮಾತನಾಡಿ, ಜಾತಿ, ವರ್ಗ, ವರ್ಣ, ಲಿಂಗ ರಹಿತ ಸಮ ಸಮಾಜದ ಕನಸು ಕಂಡವರು ಬಸವಣ್ಣ.ಲಿಂಗಾಯಿತ ಧರ್ಮದಲ್ಲಿರುವ ಪ್ರಗತಿಪರ ಆಲೋಚನೆಯನ್ನು ಬೇರೆ ಧರ್ಮದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.ಅಂತರಜಾತಿಯ ವಿವಾಹದ ಮೂಲಕ ಸಮಾಜ ಸುಧಾರಣೆಯ ಜೊತೆಗೆ,ಮಣ್ಣು, ಕಲ್ಲಿನ ದೇವರ ನಿರಾಕರಿಸಿ,ಆಡಂಬರದ ಪೂಜೆಗಳನ್ನು ಧಿಕ್ಕರಿಸಿ,ಧರ್ಮ ಸುಧಾರಣೆ ಮಾಡಿದರು.ಕಲ ಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರಗಳು ಕೇವಲ ಲಿಂಗಾಯಿತ ಧರ್ಮಕ್ಕೆ ಸಿಮೀತವಲ್ಲ. ಇದು ವಿಶ್ವವಾಪ್ತಿ.ಇದರ ಪ್ರಕಾರ ನಡೆದುಕೊಂಡರೆ ದೇಶ ಸುಭೀಕ್ಷವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಬಸವಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಟಿ.ಎಸ್.ಕಲ್ಪನಾ ಉಮೇಶ್ ಅವರಿಗೆ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈನಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ಬಿ.ಸಿ.ಶೈಲಾ ನಾಗರಾಜು ವಹಿಸಿದ್ದರು.ನಿರ್ಮಲ ಗೂಳರಿವೆ, ಎಸ್.ಆರ್.ಪ್ರಮೀಳಾ, ಉಷಾರಾಣಿ, ಎಸ್.ಲಕ್ಷ್ಮಿದೇವಮ್ಮ, ಲೇಖಕಿ ಪಿ.ಜಿ.ಶಕುಂತಲ ಉಪಸ್ಥಿತರಿದ್ದರು. ಎಸ್.ರಾಜಶೇಖರ್, ಮುತ್ಯಾಲಮ್ಮ, ಸಾವಿತ್ರಮ್ಮ, ಪಲ್ಲವಿ ಮತ್ತು ವೀಣಾ ಅವರಿಂದ ವಚನ ಗಾಯನ ನಡೆಯಿತು.

Leave a Reply

Your email address will not be published. Required fields are marked *