ಕೈ ಗಳಿಗೆ ಮುತ್ತಿಡಲೇ -ನಿಮ್ಮವ ನಲ್ಲ ರೂಪು

ನನ್ನ (ಯಜಮಾನತಿಯ ತಮ್ಮನ ಹೆಂಡತಿ) sister in law ಅವರಿಗೆ ತೆರೆದ ಹೃದಯ ಚಿಕಿತ್ಸೆ (open heart surgery) ಆಗಿ, ಆಸ್ಪತ್ರೆಯಿಂದ ಬಿಡುಗಡೆ/discharge ಆಗಿ, ಅವರಿಗೆ ವಿರಾಮ ಮಾಡಲು, ಅವರ ೨.೫ವರುಷದ ಪುಟ್ಟ ಮಗಳು ನಮ್ಮ ಜೊತೆ ಎರಡು ವಾರ ಇದ್ದಳು. ನಾ ಅವಳನ್ನು “ಕ್ಯೂಟಿ ಪಾರು” ಅಂತ ಕರೆಯೋದು. ಅಷ್ಟು ದಿನ ಅವಳು ನಮ್ಮ ಮನೆ ಬೆಳಗಿದಳು. ನಿನ್ನೆ (08-02-2022)ಅವಳನ್ನು , ಅವಳ ತಂದೆ ತಾಯಿಯವರಲ್ಲಿ ಬಿಟ್ಟು ಬರಲು ವಿದ್ಯುನ್ಮಾನ ನಗರ /Electronic City ಹೋಗುತ್ತಿದ್ದೆ. ಇದಕ್ಕಿದ್ದಂತೆ ನಮ್ಮ ಹಿರಿಯ ಪ್ರೊಫೆಸರರು Surya Prakash ರು “ನಾಳೆ ಫ್ರೀನಾ…. ಒಂದು ತುಮಕೂರು ಪಕ್ಕ ಕೆ ಬಿ ಕ್ರಾಸು ವರೆಗೂ….” ಅಂದ್ರು. ನಾನು ವಿಷಯ‌ ತಿಳಿಸುತ್ತಾ ಹೇಳಿದೆ …. “ಈವಾಗ ಎಲೆಕ್ಟ್ರಾನಿಕ್ ಸಿಟಿ ಇದ್ದೀನಿ. ರಾತ್ರಿ ಮರಳಿ ಕರೆ ಮಾಡುವೆ ” ಎಂದೆ.

ರಾತ್ರಿ ಮನೆಗೆ ಮರಳಿದಾಗ 8.00ಗಂಟೆ , ಸೂರ್ಯ ಪ್ರಕಾಶ್ ಸಾರ್ ಗೆ ಕರೆ ಮಾಡಿದೆ ” ಅಗಲ್ಲ” ಅಂದೆ.
“ಸಾರ್ ನಿಮ್ಮ ಕಾರು ಡೀಸೆಲ್ ಅದಕ್ಕೆ… ಕರ್ದೆ, ದಯವಿಟ್ಟು ಬನ್ನಿ ನನಗೆ ರಾಹುಲ್ ಗಾಂಧಿನ ಕಾಣ್ಬೇಕು” ಅಂದ್ರು.
” ಅಯ್ಯೋ…. ಬಸ್ಸಲ್ಲಿ ಹೋಗಿ … ಸುಸ್ತಾಗಿದಿನಿ, ಬೇಕಿದ್ರೆ ಕಾರು ಕೊಡ್ತೀನಿ,ನೀವೇ ಓಡಿಸಿ ಹೋಗ್ಬನ್ನಿ ನನ್ನ …… ಬಿಡಿ…. Sorry…. ” ಎಂದೆ. ಅವರು ಹಠ ಬಿಡಲಿಲ್ಲ ..

ಕೊನೆಗೆ ಹಿರಿಯರಾದ ಅವರ ಮಾತಿಗೆ ಮಣಿದು, ಅವರು ಹೇಳಿದ್ದು confirm ಮಾಡಲು, ಪರಿಚಯದ Niketh Raj Mourya ಹಾಗೂ Suddakar Reddy , Nataraj Gowda ಮುಂತಾದ ಸಾಮಾಜಿಕ ಜಾಲತಾಣದ , ಕಾಣದ ಮಿತ್ರರನ್ನು ಕೇಳಿದೆ. ಜೊತೆಗೆ ನನ್ನನ್ನು ಗುರುಗಳೆಂದು ಗೌರವಿಸುವ ಪತ್ರಕರ್ತ ಕೆಲಸ ಮಾಡುವ Amith C.g ಕೇಳಿದೆ. “ಅವರು ಬೆಳಿಗ್ಗೆ 6.30 ಗೆ K B Circle ನಿಂದ ಹೊರಡುತ್ತಾರೆ. ರಾಹುಲರು ಬಹಳಾ ಸಮಯಕ್ಕೆ ಬೆಲೆ ಕೊಡುವವರು ಸಾರ್. ಒಂಚೂರು ಲೇಟಾದರೂ ನಿಮಗೆ ಅವರನ್ನು ನೋಡಕ್ಕೆ ಆಗಲ್ಲ” ಅಂದ್ರು ಅಮಿತ್.

09-10-2022,}{ ಬೆಳಿಗ್ಗೆ 2.30ಗೆ ಎದ್ದು, ಸೂರ್ಯಪ್ರಕಾಶ ಸಾರ್ ಮನೆಗೆ 3.30 ತಲುಪಿದೆ, ಅವರು 4.10ಕ್ಕೆ ರೆಡಿಯಾಗಿ ಬಂದರು. ಮೌರ್ಯ ರವರು ತುಮಕೂರಿನಿಂದ ನಮ್ಮ ಜೊತೆ ಬರಲಿದ್ದಾರೆ ಎಂದು ಎರಡ್ಮೂರು ಕರೆ ಮಾಡಿದಿವಿ, ಆದರೆ ಅದಕ್ಕೆ response ಬಾರದೇ ಇದ್ದಾಗ ನಾವು ಹೊರಟೆವು. 5.30ಗೆ ತುಮಕೂರು ತಲುಪಿದೆವು. ಮೌರ್ಯರಿಗೆ ರಣ-ಕಾಲ್ ಮಾಡಿ ಸುಸ್ತಾದೆವು, ಅವರು ಫೋನು ಕರೆ ಸ್ವೀಕರಿಸಲೇ ಇಲ್ಲ. ಅವರಿಗಾಗಿ ಕಾದು, ನೋಡಿದರೆ ಸಮಯ 5.50ಇನ್ನು KB cross ಗೆ ಅಂದಾಜು 60ಕಿಮಿ!!!!

ಮೌರ್ಯ ನನ್ನು ಮರೆತು ನಾವು ತುಮಕೂರು ಬಿಟ್ಟು 15ಕಿಮಿ ಮುಂದೆ ಹೋಗಿರಬೇಕು. ಯಾವುದೋ ಮಂತ್ರಿಯ escort car ನಮ್ಮ ಮುಂದೆ ಸಾಗಿತು, ಅದನ್ನೇ ಹಿಂಬಾಲಿಸಿ ಅತಿ ವೇಗದಲ್ಲಿ ಹೋಗಿ KB cross ತಲುಪಿದಾಗ 6.36, ” ಜಸ್ಟ್ ರಾಹುಲ್ ಗಾಂಧಿ ಹೊರಟು ಹೋದರು ಇಲ್ಲೇ ನಿಲ್ಸಿ ಗಾಡಿ ” ಎಂದು ಪೋಲಿಸರು ತಡೆದರು. ಎಸ್ಕರ್ಟ್ ಕಾರು ನಮ್ಮಿಂದ ಮುಂದೆ ತಡೆಯಿಲ್ಲದೆ ಮುಂದೆ ಹೋಯಿತು.

ನನ್ನ ಕಾರಿನೊಳಗಿದ್ದವರು ಬಾಗಿಲು ತೆರೆದು ಓಡುತ್ತಾ ನನ್ನಲ್ಲಿ ” ಸಾರ್ ಗಾಡಿ ಎಲ್ಲಾದರೂ (ಬಿಸಾಕಿ ಎಂಬಂತೆ) ನಿಲ್ಸಿ ಬನ್ನಿ ” ಎಂದು ವೇಗದಲ್ಲಿ ನಡೆಯತೊಡಗಿದರು. ರಾಹುಲ್ ಗಾಂಧಿಯ ತನಕ ಬಿಡಲು ನಾನೂ ನನ್ನ ಕಾರು ಬೇಕು….ಅವರನ್ನು ಕಾಣಲು ನಾನು ಬೇಡವೇ…. ಎಂದು ಒಂದು ಕಡೆ ಕಾರು ನಿಲ್ಲಿಸಿ ನಾನು ಓಡೋಡಿ ಅವರ ಜೊತೆ ಸೇರಿದೆ.

ರಾಹುಲ್ ಗಾಂಧಿಯನ್ನು ಹಿಂಬಾಲಿಸುವವರು ಎಷ್ಟು ಜನಸ್ತೋಮ ಇತ್ತೆಂದರೆ ನಾವು ರಾಹುಲರಿಗಿಂತ ನಾಲ್ಕು ಕಿ.ಮೀ ದೂರದಲ್ಲಿ!!!

ಅಷ್ಟೊತ್ತಿಗೆ ಕಾರುಗಳನ್ನು ಮುಂದಿನಿಂದಲೂ ಹಿಂದಿನಿಂದಲೂ ಬಿಡ ತೊಡಗಿದರು, ವೈರ್ಲೆಸ್ಸಿನಲ್ಲಿ ಮಾತನಾಡುವ ಆರಕ್ಷಕ ನಲ್ಲಿ ವಿಚಾರಿಸಿದಾಗ ” ರಾಹುಲರು ನಮ್ಮ ಸಾಹೇಬ್ರಿಗೆ ಹೇಳಿದ್ರಂತೆ ರಸ್ತೆಯ ಒಂದು ಬದಿ ಊರಿನ ಜನರಿಗೆ ಓಡಾಡಲು ಬಿಟ್ಟು ಸೌಕರ್ಯ ಮಾಡಿ. ನನ್ನ ನಡಿಗೆಯಿಂದ ಊರಿನ ಜನರಿಗೆ ಓಡಾಡಲು ತೊಂದರೆ ಆಗಬಾರದು ಅಂತ ಅದಿಕ್ಕೆ ಬಿಡ್ತಿದ್ದೀವಿ” ಇದನ್ನು ಕೇಳಿದ ಉಳಿದ ಉಪನ್ಯಾಸಕರು ಸೂರ್ಯಪ್ರಕಾಶ ರೊಂದಿಗೆ ” ನೀವು ಹೋಗಿ ಕಾರು ತೆಗೊಂಬನ್ನಿ” ಎಂದು ನಿರ್ದಾಕ್ಷಿಣ್ಯವಾಗಿ ನನಗೆ ಒತ್ತಾಯ ಮಾಡಿದರು. ನಾನು ಪುನಃ ನಡೆಯುತ್ತಾ ಓಡುತ್ತಾ ಮರಳಿ ಮೂರು ಕಿ.ಮಿ ಹೋಗಿ ಕಾರನ್ನು ತಂದೆ. (3+3 ಕಿಮಿ ನಡೆದೆ)

ಆ ಸಮಯದಲ್ಲಿ ರಸ್ತೆಯ ಒಂದು ಬದಿ ವಾಹನ ಓಡಾಡಲು ಬಿಟ್ಟಿದ್ದರಿಂದ , ಸಾಲು ಉದ್ದವಾಯಿತು. ಎಲ್ಲರನ್ನು ಕಾರಲ್ಲಿ ಹತ್ತಿಸಿ ಸುಮಾರು ಕಿಮಿ ನಿಧಾನ ನಿಧಾನ ಓಡಿಸಿದೆ. ಎರಡು ಕಿಮಿ ಆಗಿರಬೇಕು ವಾಹನ ದಟ್ಟಣೆಯಿಂದ, ವಾಹನ ಸಂಚಾರ ಸಂಪೂರ್ಣ ಓಡಾಟ ಸ್ಥಗಿತ(Traffic Jam)ವಾಯಿತು. ಗಾಡಿಯನ್ನು ರಸ್ತೆ ಬದಿಯ ಒಂದು ಗದ್ದೆಗೆ ತಂದು ನಿಲ್ಲಿಸಿದೆ. ವಾಹನದ ಒಳಗಡೆಯಿಂದ ಬಾಗಿಲು ತೆರೆದು, ಮರಳಿ ಹಾಕದೆ ಅವರೆಲ್ಲಾ ಧುಮುಕಿ ಓಡಿ ಆಗಿತ್ತು.

ನಾನು ಗಾಡಿಯ ಬಾಗಿಲು ಕಿಟಕಿ ಮುಚ್ಚಿ, ಪಾದಯಾತ್ರೆಯ ನೋಟ ನೋಡ ತೊಡಗಿದೆ. ಇಪ್ಪತ್ತು ನಿಮಿಷ ಆಗಿರಬಹುದು. ….ಜಾಥಾದ ಹಿಂದೆ ಪಾದಯಾತ್ರೆಯವರಿಗೆ ವಾಹನದಲ್ಲಿ ಹಣ್ಣು- ನೀರು ತರತ್ತಿದ್ದವರಿಂದ ನೀರು ಪಡೆದು ಕುಡಿಯುಲು ಒಂದೆರಡು ಹೆಜ್ಜೆ ಇಡುತ್ತಿದ್ದಂತೆ ….. ನಮ್ಮ ಜೊತೆ ಬಂದ ಒಬ್ಬ ಉಪನ್ಯಾಸಕ ಬೆವೆತು, ಮೊಣಕಾಲಿಗೆ ಕೈ ಊರಿ ಕುಂಟಿ ಮರಳಿ ಬರುತ್ತಿದ್ದಾರೆ.!!!!

ಪಾರ್ಟಿಯ ಫಸ್ಟ್ ಏಡ್ / ಪ್ರಥಮ ಚಿಕಿತ್ಸಾ ಸೇವಕರು ಅವರನ್ನು ಕರೆತಂದು , ನನ್ನ ಕಾರಿನಿಂದ ತೂಸು ದೂರದ ಒಂದು ಟೆಂಟಿನಲ್ಲಿ ಕುಳ್ಳಿರಿಸಿದರು. ನಾನು ಓಡಿ ಹೋಗಿ ಅವರನ್ನು ವಿಚಾರಿಸಿದೆ. ” ಆ ಯಪ್ಪ ರಾಹುಲು ಏನ್ ನಡೀತನಪ್ಪೋ…. ನನಗೆ ಅವ್ರನ್ನ ನೋಡೋಕೆ ಆಗಿಲ್ಲ… ಉಳಿದವರು ತಿರ್ಗಿ ಬರ್ತಾರೆ ನೋಡು… ಇಷ್ಟು ದೂರ .. ಬೆಳಿಗ್ಗೆ ಎದ್ದು ಬಂದು ನೋಡೋಕೇ ಆಗಿಲ್ವಲ್ಲಾ ಥತ್ ಥೇರಿ…!!!!” ಎಂದು ಮುಖ ಸುಡುಕಿ ಕೂತರು.

ಅವರು ಹೇಳಿದುದು ಸತ್ಯ ಕೂಡಾ, ಬೆಳಗ್ಗೆ 2ಗಂಟೆಗೆ ರಾಹುಲಿಗೋಸ್ಕರ ಹೊರಟು… ಇಷ್ಟು ಕಷ್ಟ ಪಟ್ಟು, ಏನೂ ಆಗಲಿಲ್ಲವಲ್ಲ !!!!!!

ಈ ಕಾಲ್ನಡಿಗಾ ಸಮುದ್ರದ ಮುಂದೆನಡೆಯುವ ರಾಹುಲ್ ರನ್ನು ನೋಡಲೇ ಬೇಕು ಎಂದು ನಿರ್ಧರಿಸಿದೆ. ಹಿಂದೆ ಚಿಕ್ಕವನಿದ್ದಾಗ ಅಪ್ಪನ ಹೆಗಲ ಮೇಲೆ ನಿಂತು ರಣ ಬಿಸಿಲಿನಲ್ಲಿ, ಪುತ್ತೂರಿನ ಸಂತ ಫಿಲೋಮಿನಾ ಗ್ರೌಂಡಿನಲ್ಲಿ ಒಂದು ಚುಕ್ಕಿಯಂತೆ ದೂರದಲ್ಲಿ ಇಂದಿರಾ ಗಾಂಧಿಯನ್ನು ನೋಡಿದ್ದೆ. ನಂತರ ಮಂಗಳೂರಿನಲ್ಲಿ ಒಂದು ಶಾಲು ಬೀಸಿ ಮಿಂಚಿನಂತೆ ಹೋದ ರಾಜೀವ್ ಗಾಂಧಿಯನ್ನು ನನ್ನ ಕಣ್ಣಿನ ಸಂಧು ಒಂಚೂರು ಹೀರುವ ಮೊದಲೇ ದೂರಹೋಗಿದ್ದರು. ನೋಡೋಣ ಈ ರಾಹುಲರು ಸಿಗುತ್ತಾರೋ ನೋಡೋಕೆ ಅಂತ ನಾನು ಆ ಸಾಗರಕ್ಕೆ ಧುಮುಕಲು ನಿರ್ಧರಿಸಿದೆ.

ಸುಮಾರು ನಾಲ್ಕು ಕಿಮಿ ದೂರದಲ್ಲಿ ರಾಹುಲರು.
ಹಿಂದುಗಡೆ ನಡಿಗೆಯಲ್ಲಿ ಸೇರಿದವರಿಗೆ ಉಚಿತವಾಗಿ ಕೊಡಲು ಹಣ್ಣು ಹಂಪಲಿನ ಮಿನಿ ಲಾರಿ, ಫಸ್ಟ್ ಏಡ್ ವಾಹನ, ಕುಡಿಯುವ ನೀರಿನ ವಾಹನ , ಪೋಲಿಸರ ವ್ಯಾನು, ಅದರ ಹಿಂದೆ ಎರಡ್ಮೂರು ಲಾರಿ– ಆ ಲಾರಿಯಲ್ಲಿ ಜನರು ಬಿಸಾಡಿದ ಕಸ ಶೇಖರಣೆ, ಫ್ಲೆಕ್ಸ್, ಬ್ಯಾನರುಗಳನ್ನು ತೆಗೆದು ಶೇಖರಿಸುವ ಲಾರಿ.

ನಾನು ಅವುಗಳ ಬಲಬದಿಯಿಂದ ಕೆಲವೊಮ್ಮೆ ವೇಗವಾಗಿ ನಡೆದು ಮತ್ತೆ ಓಡುತ್ತಾ ಮುಂದುವರಿದೆ. ಆದರೆ ಇನ್ನೇನು ಒಂದು ಕಿಮಿ ದೂರದಲ್ಲಿ ರಾಹುಲರು ಎಂದು ತಲೆ ಎತ್ತಿ ನೋಡುತ್ತಾ ಮುಂದುವರಿಯಲು ನೋಡಿದರೆ…. ಪ್ರವೇಶಿಸದಂತೆ ಪೋಲಿಸರು ವ್ಯೂಹ ರಚಿಸಿದ್ದರು. ಹೇಗೆಂದರೆ …

ಪಾದಯಾತ್ರೆಯ ಎರಡೂ ಕಡೆ ಒಂದು ಮುಷ್ಟಿಯಷ್ಟು ದಪ್ಪದ ಪಾಲಿಮರ್(ಪ್ಲಾಸ್ಟಿಕ್) ಹಗ್ಗವನ್ನು ಒಂದು-ಕೈ ದೂರದ ಅಂತರದಲ್ಲಿ ಪೋಲಿಸರು ಹಿಡಿದು ನಡೆಯುತ್ತಿದ್ದಾರೆ. ಆ ಹಗ್ಗದ ವ್ಯೂಹದೊಳಗೆ ನಮಗೆ ಹೋಗಲು ಅಸಾಧ್ಯ. ಏನ್ಮಾಡೋದು ಗೊತ್ತಗುತ್ತಲೇ ಇಲ್ಲವಾಯಿತು. …..

ಬಾಯಿ ಸಂಪೂರ್ಣ ನೀರಿಲ್ಲದೆ ಬರಡಾಗಿತ್ತು. ಆದರೂ ಹಗ್ಗದ ವ್ಯೂಹದ ಹೊರವಲಯದಿಂದ , ಒಂದು ಝಲಕ್ ರಾಹುಲ್ ರನ್ನು ನೋಡುವವರ ಮಧ್ಯೆ ಸೇರಿ ನಡೆದೆ…. ಮುಂದೆ ಬಂದೆ … ರಾಹುಲರು!!!

ಯಾರು ಕರೆದರೂ ರಾಹುಲರು ನಗು ಮುಖದಿಂದ ಕೈಯನ್ನು ಆಡಿಸುತ್ತಿದ್ದಾರೆ. ರಾಹುಲರು ತನ್ನನ್ನು ಕರೆಯುವ ಜನರನ್ನು ಬನ್ನಿ ಎಂದು ಕರೆದರೂ, ಯಾರಾದರೂ ಒಳಗೆ ಹೋಗಲು ನೋಡಿದರೂ , ಪೋಲಿಸರು ಬಿಡುತ್ತಿರಲಿಲ್ಲ. ಕೆಲವರನ್ನು ಪೋಲಿಸರು ದೂಡಿದಾಗ ರಾಹುಲ್ ನೊಂದು ” Don’t do… they are innocent people… ಐಸಾ ಮತ್ ಕರೋ ಯಾರ್ …. (ಹಾಗೆ ಮಾಡಬೇಡ ಮಿತ್ರರೇ) ” ಎಂದು ಪೋಲೀಸರಿಗೆ ಹೇಳುತ್ತಿದ್ದರು. ಅವರನ್ನು “ರಾಹುಲ್ ಜೀ, ರಾಹುಲ್ ಗಾಂಧಿ ಬಾಯ್, ರಾಹುಲ್ ನೇತಾಜಿ…. ” ಎಂದೆಲ್ಲಾ ಇಕ್ಕಲೆಯಿಂದ ಗಂಡಸರು, ಮುದುಕರು, ಹೆಂಗಸರು, ಮಕ್ಕಳು ಅವರ ಒಂದು ಗಮನಕ್ಕಾಗಿ ಕಿರುಚುತ್ತಿದ್ದರು. ಆ ಶಬ್ದ ಕೇಳಿದ ಕಡೆ ತಿರುಗಿ ರಾಹುಲರು ತಪ್ಪದೆ ಹಾರೈಸಿ ವಂದಿಸುತ್ತಿದ್ದರು.

” ರಾಹುಲ್ ಸಾರ್ ಸ್ಮೈಲ್ ಪ್ಲೀಸ್… ಐ ವಾಂಟು ಟೇಕ್ ಯುವರ್ ಫೋಟೋ” ಅಂದೆ……

ಕೂಡಲೇ ತಿರುಗಿ ಒಂದು ನಗು ಬೀರಿದರು. ಫೋಟೋ ತೆಗೆಯುವಾಗ ನನ್ನ ಕೈಯಲ್ಲಿ ಬೆವರು ಬರುವುದು ಬಾಸವಾಯಿತು. ಅಷ್ಟು ದೂರ ಓಡಿ ನಾನು ಸಂಪೂರ್ಣ ಬೆವತ್ತಿದ್ದು ನನಗೇ ಗೊತ್ತಿರಲಿಲ್ಲ. ಹಾಂ ಇನ್ನು ಮರಳೋಣ ಅಂದರೆ ಉಫ್ ಈ ಜನಸಾಗರ ದಾಟುವುದು ಹೆಂಗೆ? ಎಂದು ರಾಹುಲರ ಕೆಲ ಸಾಲಿನ ಹಿಂದೆ ನನ್ನ “#ಪರಿಚಯದಹಿರಿಯರೊಬ್ಬರು” ,(ಪಹಿ) ನಾನು ಅವರನ್ನು ಕಿರುಚಿ ಕರೆದೆ….ನೋಡಲಿಲ್ಲ,
ಅವರ ಹೆಸರು ಮಾತ್ರ ಕರೆದೆ…. ನೋಡಲೇ ಇಲ್ಲ.
ನಂತರ ಮಲಯಾಳಂ ಭಾಷೆಯಲ್ಲಿ ಕರೆದಾಗ
” ಆರಾಣ್….(ಯಾರೆಂದು)” ಎಂದು ಕೇಳಿದರು..

ನಾನು ಜನಗಳೊಳಗೆ, ಹಗ್ಗದ ಆ ಕಡೆ ಇದ್ದುದರಿಂದ ಅವರಿಗೆ ನನ್ನ ಸದ್ದು/ಶಬ್ದ ಮಾತ್ರ ಕೇಳುತ್ತಿತ್ತು …
” ನಾ ಮಾಧವಿಯಮ್ಮನ ಮೊಮ್ಮಗ…. ಜನಣ್ಣನ ಮಗ….” ಎಂದೆ. ಅವರು ಹಗ್ಗದವ್ಯೂಹದ ಹತ್ತಿರ ಬಂದು ನನ್ನ ನೋಡಿ , ಪೋಲಿಸರಲ್ಲಿ ಅವನನ್ನು ಒಳಗೆ ಬಿಡಿ ಎಂದರು. ಮೊದಲು ಪೋಲಿಸರು ನನ್ನ ಬಿಡಲಿಲ್ಲ ನಂತರ ಪಹಿ “…₹&#@+..” ಎಂದು ಆಂಗ್ಲಭಾಷೆಯಲ್ಲಿ ಪೋಲಿಸರಿಗೆ ವಂದಿಸಿದರು. ಒಳಗೆ ಸೇರಿದ್ದೇ ಒಂದು ಸಾಧನೆ ತರಹ ಅನುಭವವಾಯಿತು. ಅವರ ಜೊತೆ ಹೆಜ್ಜೆ ಇಟ್ಟು ಒಂದು ಸೆಲ್ಫಿ ತೊಗೊಂಡು ” ನಿನ್ನಪ್ಪನಿಗೆ ಕಳುಹಿಸಿ ಕೊಡುತ್ತೇನೆ” ಎಂದರು.

ಸ್ವಲ್ಪ ಹೊತ್ತು ಅವರ ಜೊತೆ ಕೆಲ ದೂರ ನಡೆದು, ನಾನು ಮರಳುವೆ ಎಂದು ಹೇಳಿ ತಿರುಗಿದೆ. ತಕ್ಷಣ ಅಲ್ಲೇ ನಿಂತು “ನನಗೆ ರಾಹುಲ್ ರೊಂದಿಗೆ ….” ಎಂದೆ.
“ಅದಕ್ಕೇನು… ನೋಡು ಮುಂದೆ ಡಿಕೆ ಶಿವಕುಮಾರ್ ಇದ್ದಾರೆ ಅವರ ಬಲಭಾಗದಲ್ಲಿ ನಡೆ….. ರೋಪು (ಹಗ್ಗ) ಹೊರಗೆ ಹೋಗಬೇಡ. ರಾಹುಲ್ ಡಿಕೆಶಿ ಕಡೆ ತಿರುಗಿದಾಗ, ನೀನು ಕೈಯಲ್ಲಿ ಒಂದು ನಿಮಿಷ ಎಂಬ ಸನ್ನೆ ತೋರು.. ಬಾಕಿ ನಾನು ಹ್ಯಾಂಡಲ್ ಮಾಡ್ತೀನಿ” ಅಂದ್ರು.
ಪಹಿ ಹೇಳಿದಂತೆ ನಾನು ಮಾಡಿದೆ. ರಾಹುಲರು ನನ್ನ ಸನ್ನೆ ನೋಡಿದಂತೆ ಹಿಂದಿನಿಂದ ಪಹಿ ಹೇಳಿದರು ” ರಾಹುಲ್ ಜೀ ವೋ ಮೇರಾ ಬಾಯೀ ಕಾ ಬೇಟಾ ಹೇ… ಪ್ರೋಫೆಸರ್ ಕಾ ಕಾಮ್ ಕರ್ತಾ ಹೈ ( ಅವನು ನನ್ನ ಸಹೋದರನ ಮಗ, ಉಪನ್ಯಾಸಕ ಕೆಲಸ ಮಾಡುತ್ತಿದ್ದಾನೆ) ” ಕೂಡಲೇ ರಾಹುಲ್ ನನ್ನ ಪಕ್ಕಕ್ಕೆ ಕರೆದರು. ಅವರು ಮುಂದಕ್ಕೆ ವೇಗವಾಗಿ ನಡೆಯುತ್ತಿದ್ದುದರಿಂದ ನನಗೆ ಮುಂದೆ ನಡೆದು ಹಿಂದಕ್ಕೆ(Diagonally) ಅವರ ಮುಖಾಮುಖಿಯಾಗಿ ಹೋಗಬೇಕಾಗಿ ಬಂತು. ತುಂಬಾ ಹೊತ್ತು ಮಾತನಾಡಿದೆ.

“ಸಾರ್ ನನಗೆ ಒಂದು ಸೆಲ್ಫಿ ಬೇಕು” ಎಂದಾಗ, ತನ್ನದೇ ಕ್ಯಾಮೆರಾ ಇದೆ ಅಂತ ಅವರಲ್ಲಿ ನಡೆಯುತ್ತಾ ಫೋಟೋ ತೆಗೆಸಿದರು. ನನ್ನ ಕೈಗಳನ್ನು ಬಲವಾಗಿ ಹಿಡಿದು ನಡೆದರು. ” Call me Rahul ” ಅಂದರೂ … ನನಗೆ ಏನು ಮಾಡಬೇಕೆಂದು ತೋರಲಿಲ್ಲ.
” ಸಾರ್ ….ಮೇ ಆಪ್ಕೇ (ನಾನು ತಮ್ಮ)
ಹಾತ್ ಚೂಂ ಲೂಂ (ಕೈ ಗಳಿಗೆ ಮುತ್ತಿಡಲೇ)”
” why not ….” ….
ಎಲ್ಲಾ ಮರೆತು ನಾನು ಆ ಕೈಗಳನ್ನು ಚುಂಬಿಸಿದೆ…..
ಮರಳುವಾಗ ಫೋಟೋಗ್ರಾಫರಿಗೆ ನನ್ನ ನಂಬ್ರ ಕೊಟ್ಟು ವಾಟ್ಸಾಪ್ ಮಾಡಲು ಹೇಳಿದೆ.

ಒಬ್ಬ ನಾಯಕ ಅವನ ಹಿಂದೆ ಇಂದಿರುವ ಜನವೆಷ್ಟು????… ಬಿಡಿ ಅವರನ್ನು ನೆನೆದು ಕೊಳ್ಳುವ ಮೆದುಳುಗಳೆಷ್ಟು?????… ಎಂದು ಹುಚ್ಚನಂತೆ ನಾನು ನಾಲ್ಕು ಕಿಮಿ ಗಿಂತಲೂ ವಿಸ್ತರಿಸಿದ ಪಾದಯಾತ್ರೆಗೆ ವಿರುದ್ದ ನಡೆದು ಜನಸಂದಣಿಯಿಂದ ಹೊರಬಂದು. ಮೊಬೈಲಿನಲ್ಲಿ KB cross ಹಾಕಿದರೆ ನಾನಿರುವುದು 15ಕಿಮಿ ದೂರದಲ್ಲಿ!!!!!! ಕಾರಿನ ಕೀ ನನ್ನ ಕೈಯಲ್ಲಿ !!!

ಉಳಿದವರಿಗೆ ಕರೆ ಮಾಡಿ ” ರಾಹುಲ್ ಗಾಂಧಿ ನೋಡಿದ್ದೂ ಅಲ್ಲದೆ ಅವರ ಜೊತೆ ಹೆಜ್ಜೆ ಇಟ್ಟಿದ್ದೂ ಅಲ್ಲದೆ ಫೋಟೋ ತೆಗೆದೆ” ಎಂದಾಗ ಜೊತೆ ಬಂದವರು ಸುಮಾರು ಹೊತ್ತಿನಿಂದ ನನ್ನನ್ನೇ ಕಾಯುತ್ತಿರುವರೆಂದೂ, ಅವರಲ್ಲಿ ಯಾರೂ ರಾಹುಲ್ ಗಾಂಧಿ ನೊಡಿಲ್ಲವೆಂದೂ ತಿಳಿಯಿತು.

ಇಪ್ಪತ್ತು ನಿಮಿಷದಷ್ಟು ನಡೆಯುತ್ತಲೇ ಇದ್ದೆ. ಒಬ್ಬ ರೈತ TVS champ ನಲ್ಲಿ ಹೋಗುತ್ತಿದ್ದವನನ್ನು ತಡೆದು ನನ್ನ ಸ್ಥಿತಿ ವಿವರಿಸಿದೆ. ಅವನೂ ರಾಹುಲ್ ಗಾಂಧಿಯನ್ನು ಕಾಣದೆ ಮರಳುತ್ತಿದ್ದವ. ನಂತರ ನನಗೆ ಕಾರು ನಿಲ್ಲಿಸಿದ ಸ್ಥಳದವರೆಗೆ ಒಂದು ಡ್ರಾಪ್ ಕೊಟ್ಟ.

ಎಲ್ಲರೂ ” ರಾಹುಲ್ ಗಾಂಧಿ ಜೊತೆಗಿದ್ದ ಪ್ರೂಫ್ ತೋರಿ ಸಾರ್…” ಎಂದು ಒತ್ತಾಯ ಮಾಡಿ….
ನನ್ನಲ್ಲಿ ಯಾವುದೇ ಪುರಾವೆ ಇಲ್ಲದೆ ಸೋತು
” ಸಾರ್… ಫೋಟೋಗ್ರಾಫರು ಬಡವರೊಂದಿಗಿರುವ ಫೋಟೋಗಳನ್ನು ಮಾತ್ರ , ದೇಶದ ಸ್ಥಿತಿ ಅರಿಯಲು ಕ್ಲಿಕ್ಕಿಸುತ್ತಿರಬೇಕು…. ನನ್ನ ವೇಷಭೂಷಣ ಹಾಗಿರಲಿಲ್ಲವಾದುದರಿಂದ ನನ್ನ ಫೋಟೋ ತೆಗೆದಿರಲಿಕ್ಕಿಲ್ಲ.” ಎಂದಾಗ…
ಎಲ್ಲರೂ ನಕ್ಕು ಹೇಳಿದರು ” ಸಾರ್ ಸುಳ್ಳು ಹೇಳಿ ಸಿಕ್ಕಾಕೊಂಡ್ರಿ” ಎಂದು ನಗತೊಡಗಿದರು. ಅವರ ಪ್ರಕಾರ ನಾನೂ ರಾಹುಲ್ ಗಾಂಧಿಯನ್ನು ಬಿಲ್ಕುಲ್ ನೋಡೇ ಇಲ್ಲ!!!!

ಗಾಡಿ ಓಡಿಸುತ್ತಾ ಬೆಂಗಳೂರಿನ ನಾಗರಬಾವಿ ತಲುಪಿದ್ದೆ. ಡ್ರೈವಿಂಗ್ ಮಾಡಲು ಸೂರ್ಯಪ್ರಕಾಶ ಸಾರ್ ಕೂತರು. ಅಲ್ಲಿ ತನಕ ನಾನೇ ಕಾರು ಚಲಾಯಿಸುತ್ತಿದ್ದುದರಿಂದ ಮೊಬೈಲ್ ನೋಡಿರಲಿಲ್ಲ.
ನೋಡಿದರೆ ಫೇಸ್ ಬುಕ್ಕಿನಲ್ಲಿ R & R (Rahul – Roopesh ನಡಿಗೆಯ ಫೋಟೋ ಹಾಕಿ ನನ್ನ ಟ್ಯಾಗ್ ಮಾಡಿದ್ದಾರೆ ಪುತ್ತೂರಿನ ಸಹೃದಯಿ Ravi Prasad Shetty ಯವರು

ಜೀವನದ ಕೊನೆಯ ಉಸಿರಿನವರೆಗೂ ವಿವರಿಸಲಾಗಿದ ಮರೆಯಲಾಗದ ಒಂದು ಕ್ಷಣ..,
ನನ್ನ ಪಾಲಾಗಿದ್ದು ಯಾಕೆ? ಎಂದು ಗೊತ್ತಿಲ್ಲದ….

ನಿಮ್ಮವ ನಲ್ಲ
ರೂಪು

Leave a Reply

Your email address will not be published. Required fields are marked *