
ತುಮಕೂರು.: ನಾನು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಚಿಸಿದ್ದೇನೆ.ಲೋಕಸಭೆಯನ್ನು ಒಮ್ಮೆ ನೋಡುವ ಆಸೆಯಿದೆ. ಹೈಕಮಾಂಡ್ ಒಪ್ಪಿ ಟಿಕೇಟ್ ನೀಡದರೆ ಸ್ಪರ್ಧಿಸುತ್ತೇನೆ.ಮುದ್ದಹನುಮೇಗೌಡ ಕಾಂಗ್ರೆಸ್ಗೆ ಬರುವ ಬಗ್ಗೆ ನನ್ನ ಬಳಿಯೂ ಕೆಲವರು ಚರ್ಚೆ ನಡೆಸಿದ್ದಾರೆ.ಹಾಗೆಯೇ ಡಾ.ಜಿ.ಪರಮೇಶ್ವರ್ ಹತ್ತಿರವೂ ಕೆಲವರು ಪ್ರಾಸ್ತಾಪಿಸಿದ್ದಾರೆ ಎನ್ನಲಾಗಿದೆ.ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಸೇರುವ ವಿಚಾರ ಗೊತ್ತಿಲ್ಲ.ಐದು ರಾಜ್ಯಗಳ ಚುನಾವಣೆ ನಂತರ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಸಹಕಾರಿ ಮಹಾಮಂಡಳದವತಿಯಿಂದ 70ನೇ ರಾಷ್ಟ್ರೀಯ ಸಹಕಾರ ಸಪ್ತಾಹ ಪಂಡಿತ ಜವಹರ್ಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಿಂದ ಒಂದು ವಾರಗಳ ಕಾಲ ನಡೆಯಲಿ ಸುದ್ದಿಗಾರರೊಂದಿಗೆ ಕ್ಯಾತ್ಸಂದ್ರದ ತಮ್ಮ ನಿವಾಸದಲ್ಲಿ ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ ಮತ್ತು ವಿರೋಧಪಕ್ಷ ಸ್ಥಾನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ತಂದಿದ್ದಾರೆ. ಇದರ ಬಗ್ಗೆ ಬಿಜೆಪಿ ಪಕ್ಷದ ಮುಖಂಡರಲ್ಲಿಯೇ ತೀವ್ರ ಅಸಮಾಧಾನವಿದೆ.ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎಂದು ಸರ್ಟಿಪಿಕೇಟ್ ನೀಡಲಾಗದು.ಇತ್ತೀಚಿನ ಬೈ ಎಲೆಕ್ಷನಗಳು ಯಾವ ಆಧಾರದ ಮೇಲೆ ಗೆಲುವುÀ ಪಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ನಂಜನಗೂಡು,ಗುಂಡ್ಲುಪೇಟೆ ಬೈ ಎಲೆಕ್ಷನ್ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ಆರೇ ತಿಂಗಳಿಗೆ ಮತ್ತೆ ಸೋಲಾಯಿತು.ಬಳ್ಳಾರಿ ಲೋಕಸಭಾ ಬೈ ಎಲೆಕ್ಷನ್ 2 ಲಕ್ಷ ಮತಗಳಿಂದ ಗೆದ್ದರೂ,ಸಾವತ್ರಿಕ ಚುನಾವಣೆಯಲ್ಲಿ ಸೋತೆವು. ಬೈ ಎಲೆಕ್ಷನ್ನ್ನೇ ಗೆಲುವೇ ಮಾನದಂಡ ಅಷ್ಟು ಸರಿಯಲ್ಲ.ಮುಂದೆ ದೊಡ್ಡ ಸವಾಲಿದೆ.ಯಡಿಯೂರಪ್ಪ ಅವರಿಗೆ 50 ವರ್ಷದ ಹೋರಾಟ ಇತ್ತು.ಆದರೆ ಇವರಿಗೆ ಯಡಿಯೂರಪ್ಪ ಹೆಸರೇ ಬಲ. ಪಕ್ಷ ಬಲಗೊಳ್ಳದಿದ್ದರೆ ಅಧ್ಯಕ್ಷ ಸ್ಥಾನ ನೀಡಿ ಏನು ಪ್ರಯೋಜನ. ಕಾದು ನೋಡುವ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರ ಪ್ರಸ್ತಾಪಿಸಿದ ಕೆ.ಎನ್.ರಾಜಣ್ಣ, ಡಿಸೆಂಬರ್ 06 ರಂದು ಸಿದ್ದಗಂಗಾ ಮಠದಲ್ಲಿ ಸೋಮಣ್ಣ ದೊಡ್ಡ ಕಾರ್ಯಕ್ರಮ ಮಾಡುತಿದ್ದಾರೆ.ಅದಕ್ಕೆ ನನ್ನನು ಅಹ್ವಾನಿಸಿದ್ದಾರೆ.ಆಧಿವೇಶನದ ಇದೆ.ಆದರೂ ಬಿಡುವು ಮಾಡಿಕೊಂಡು ಬರಲು ಪ್ರಯತ್ನಿಸುತ್ತೇನೆ.ಕಾಂಗ್ರೆಸ್ ಎನ್ನುವುದು ಒಂದು ಮಹಾಸಾಗರ.ಅಲ್ಲಿಗೆ ಗಂಗಾನದಿ ನೀರು ಬರುತ್ತದೆ.ಕಾವೇರಿ ನೀರು ಸೇರುತ್ತದೆ.ಹಾಗೆಯೇ ಕಾಂಗ್ರೆಸ್ ಸಾಮೂಹಿಕ ನಾಯಕತ್ವದ ಪಾರ್ಟಿ.ಕೇಡರ್ ಬೇಸ್ ಪಾರ್ಟಿಯಲ್ಲ ಎಂದರು
ತಳಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕಿದೆ.ಒಂದೇ ಮನೆಯಲ್ಲಿ ನಾನು ಎಂ.ಎಲ್.ಎ,ನನ್ನ ಮಗ ಎಂ.ಎಲ್.ಸಿ.ಅನ್ನುವ ತರ ಆಗಬಾರದು.ದ್ವನಿ ಇಲ್ಲದ ಸಮುದಾಯಗಳ ಕಥೆ ಏನು?.ಸಣ್ಣ ಪುಟ್ಟ ಸಮುದಾಯಗಳಿಗೆ ಅಧಿಕಾರ ಸಿಕ್ಕರೆ ಮಾತ್ರ ಸಾಮಾಜಿಕ ನ್ಯಾಯಕ್ಕೆ ಒಂದು ಬೆಲೆ.ಇಲ್ಲದಿದ್ದರೆ ಅದು ಪುಸ್ತಕಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಶೀಘ್ರದಲ್ಲಿಯೇ ಜಾತಿ ಗಣತಿ ವರದಿಯನ್ನು ಸರಕಾರ ಸ್ವೀಕರಿಸಲಿದೆ.ಅದನ್ನು ಸಾರ್ವಜನಿಕರ ಚರ್ಚೆಗೆ ಬಿಡಲಾಗುವುದು. ಅಲ್ಲಿ ಬರುವ ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ,ಯಾವುದನ್ನು ಬಿಡಬೇಕು.ಯಾವುದನ್ನು ತೆಗೆದುಕೊಳ್ಳಬೇಕು ಎಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾಣ ಕೈಗೊಳ್ಳಲಾಗುವುದು.ವರದಿ ಬಂದಾಕ್ಷಣ ಒಪ್ಪಬೇಕೆಂಬ ನಿಯಮವಿಲ್ಲ. ಬಿಹಾರದಲ್ಲಿ ಬಿಡುಗಡೆಯಾಯಿತು.ಯಾವ ಜನರಿಗೆ ತೊಂದರೆಯಾಯಿತು.ಹಾಗಾಗಿ ಕಾಂತರಾಜು ವರದಿಯನ್ನು ವಿರೋಧಿ ಸುವುದರಲ್ಲಿ ಅರ್ಥವಿಲ್ಲ.ವರದಿ ಸಾರ್ವಜನಿಕ ಚರ್ಚೆಗೆ ಬರದೆ ಅದು ಸರಿಯಿಲ್ಲ.ಇದು ಸರಿಯಿಲ್ಲ ಎಂದು ಹೇಳುವುದು ನ್ಯಾಯವಲ್ಲ.ಮೊದಲು ವರದಿಯನ್ನು ಓದಿ ನಂತರ ಅದನ್ನು ಒಪ್ಪಿಕೊಳ್ಳುವುದು ಬಿಡುವುದರ ಬಗ್ಗೆ ಚರ್ಚೆ ನಡೆಸೋಣ ಎಂದು ಸಲಹೆ ನೀಡಿದರು.
ನವೆಂಬರ್ 14 ರಂದು ಶಿವಮೊಗ್ಗದಲ್ಲಿ ಆರಂಭವಾಗುವ ಸಪ್ತಾಹದ ಕಾರ್ಯಕ್ರಮಗಳು,ನವೆಂಬರ್ 15 ರಂದು ರಾಯಚೂರು,ನ.16ರಂದು ಕಲ್ಲಗಟಗಿ,17ರಂದು ಶಿರಸಿ,18 ರಂದು ಮಂಗಳೂರು, 19 ಬೆಂಗಳೂರು ಮತ್ತು 20ರಂದು ಬಿಜಾಪುರದಲ್ಲಿ ನಡೆಯಲಿದೆ.ಒಂದೊಂದು ದಿನ ಒಂದೊಂದು ವಿಚಾರದ ಬಗ್ಗೆ ಸಹಕಾರ ಕ್ಷೇತ್ರದ ತಜ್ಞರು ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಮತ್ತು ಸಹಕಾರಿ ಕ್ಷೇತ್ರದ ಸದಸ್ಯರುಗಳಿಗೆ ಸಹಕಾರಿ ಆಂದೋಲನದ ಬಗ್ಗೆ ಮಾಹಿತಿ ನೀಡಲಿದ್ದಾರೆ.ನವೆಂಬರ್ 20 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ ಎಂದರು.
ಅವರಿವರನ್ನು ಬೈ ಎಲೆಕ್ಷನ್ ನಲ್ಲಿ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರರಲ್ಲ
ಲೋಕಸಭೆಗೆ ಸ್ಪರ್ಧಿಸುವ ಇಚ್ಚೆ ಕೆ.ಎನ್.ರಾಜಣ್ಣ