ತುಮಕೂರು: ಕೈಗಾರಿಕೆಗಳನ್ನು ಸ್ಥಾಪಿಸಲು ತುಮಕೂರು ಜಿಲ್ಲೆಯಲ್ಲಿ ಉತ್ತಮ ಅವಕಾಶಗಳಿವೆ. ವಿದೇಶಿ ಕಂಪನಿಗಳೂ ಇಲ್ಲಿ ಉದ್ದಿಮೆ ಸ್ಥಾಪನೆಗೆ ಮುಂದೆ ಬರುತ್ತಿವೆ. ಇಲ್ಲಿ ಆರಂಭಿಸುವ ಕೈಗಾರಿಕೆಗಳಿಗೆ ಸರ್ಕಾರದಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಹೆಚ್ಚಿನ ಪ್ರಮಾಣದಲ್ಲಿ ಉದ್ದಿಮೆದಾರರು ಇಲ್ಲಿ ಕೈಗಾರಿಕೆ ಆರಂಭಿಸಲು ಬನ್ನಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆಹ್ವಾನ ನೀಡಿದರು.
ನಗರದ ಹೊರವಲಯದ ಹೆಗ್ಗೆರೆಯ ಹೆಚ್.ಎಂ. ಗಂಗಾಧರಯ್ಯ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ವಾಣ ಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸಹಕಾರದಲ್ಲಿ ತುಮಕೂರು ಜಿಲ್ಲಾ ವಾಣ ಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಟಿಡಿಸಿಸಿಐ ಮಾಜಿ ಅಧ್ಯಕ್ಷರು ಹಾಗೂ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಡಾ.ಪರಮೇಶ್ವರ್, ಬೆಂಗಳೂರಿನ ಉಪನಗರದಂತಿರುವ ತುಮಕೂರು ನಗರ ವಾಣ ಜ್ಯ ಮತ್ತು ಕೈಗಾರಿಕೆಗಳ ಬೆಳವಣ ಗೆಗೆ ಅನುಕೂಲಕಾರಿಯಾಗಿದೆ ಎಂದರು.

ದೇಶದ ಆರ್ಥಿಕ ಬೆಳವಣ ಗೆ ಮತ್ತು ಉದ್ಯೋಗ ಸೃಷ್ಟಿ ಮೂಲಕ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಾ ಅಭಿವೃದ್ಧಿಗೆ ಸಹಕರಿಸುತ್ತಿವೆ. ಎಫ್ಕೆಸಿಸಿಐ ಸಲಹೆಗಳನ್ನು ಅಳವಡಿಸಿಕೊಂಡು ರಾಜ್ಯ ಸರ್ಕಾರ ಕೈಗಾರಿಕಾ ನೀತಿಗಳನ್ನು ರೂಪಿಸುತ್ತದೆ. ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ಅಧಿಕ ತೆರಿಗೆ ಪಾವತಿಯಲ್ಲಿ ಕೈಗಾರಿಕೋದ್ಯಮಿಗಳ ಪಾಲು ಹೆಚ್ಚಿನದಾಗಿದೆ. ಈ ಮೂಲಕ ಕೈಗಾರಿಕೆಗಳು ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ ಎಂದು ಹೇಳಿದರು.
ವಾಣ ಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರಮುಖ ಬೇಡಿಕೆಯಾದ ಇ ಖಾತಾ, ಕೆಎಐಎಡಿಬಿ ಹಾಗೂ ವಿದ್ಯುತ್ ಸಮಸ್ಯೆ ನಿವಾರಣೆಗೆ ಸರ್ಕಾರದ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದ ಡಿಸಿಎಂ ಡಾ. ಪರಮೇಶ್ವರ್, ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ನೆರವಾಗುತ್ತಿರುವ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕೈಗಾರಿಕೆಗಳ ಉತ್ತೇಜನಕ್ಕೆ ಪೂರಕ ಕ್ರಮ ಕೈಗೊಳ್ಳುತ್ತದೆ ಎಂದರು.
ಸಿದ್ಧಗAಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ತುಮಕೂರು ಜಿಲ್ಲಾ ವಾಣ ಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಸಾರ್ಥಕ 25 ವರ್ಷ ತುಂಬಿದೆ. ಮನುಷ್ಯನಿಗೆ 25 ವರ್ಷವಾದರೆ ಆಯುಷು ಕಡಿಮೆಯಾಗುತ್ತಿದೆ ಎನ್ನುವ ಆತಂಕ. ಆದರೆ ಸಂಸ್ಥೆಗೆ ವರ್ಷಗಳು ಹೆಚ್ಚಾದಂತೆ ಅದರ ಬೆಳವಣ ಗೆಯಾಗುತ್ತದೆ. ತುಮಕೂರು ಸಂಸ್ಥೆ ಸದೃಢವಾಗಿ ಬೆಳೆದು ತುಮಕೂರಿನ ವಿವಿಧ ಕ್ಷೇತ್ರಗಳ ಬೆಳವಣ ಗೆಗೆ ದೊಡ್ಡ ಕೊಡುಗೆ ನೀಡಿದೆ ಎಂದರು.
ಕೈಗಾರಿಕೆಗಳನ್ನು ಬೆಳೆಸಬೇಕು ಎನ್ನುವ ಕಾರಣಕ್ಕೆ ಮೈಸೂರು ಮಹಾರಾಜರ ಸಹಕಾರದಿಂದ ಸರ್ ಎಂ. ವಿಶ್ವೇಶ್ವರಯ್ಯ ಅವರು ಎಫ್ಕೆಸಿಸಿಐ ಸ್ಥಾಪನೆ ಮಾಡಿದರು. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಕೈಗಾರಿಕಾ ಸಂಸ್ಥೆಗಳು ಸಮಾಜಕ್ಕೆ ನೆರವಾಗಿವೆ ಎಂದ ಸ್ವಾಮೀಜಿ, ಯಾವುದೇ ಸರ್ಕಾರ ಮಾಡಲಾಗದ ಅನೇಕ ಜನಹಿತ, ಅಭಿವೃದ್ಧಿ ಕಾರ್ಯ ಮಾಡಿರುವ ಮೈಸೂರು ಒಡೆಯರು, ಪ್ರಭುತ್ವದ ಆಡಳಿತದಲ್ಲೂ ಪ್ರಜಾಪ್ರಭುತ್ವದ ತತ್ವಗಳನ್ನು ಅನುಸರಿಸಿದ್ದರು ಎಂದರು.
ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 25 ವರ್ಷ ಪೂರೈಸಿರುವ ತುಮಕೂರು ಜಿಲ್ಲಾ ವಾಣ ಜ್ಯ ಮತ್ತು ಕೈಗಾರಿಕಾ ಸಂಸ್ಥೆ ತನ್ನ ಬೆಳವಣ ಗೆ ಜೊತೆಯಲ್ಲಿ ತುಮಕೂರಿನ ಬೆಳವಣ ಗೆಗೂ ಸಹಕಾರಿಯಾಗಿದೆ. ಉದ್ಯೋಗ ಸೃಷ್ಟಿ ಮಾಡಿ ಸಾವಿರಾರು ಜನರಿಗೆ ಬದುಕು ಕೊಟ್ಟು ಆ ಕುಟುಂಬಗಳಿಗೆ ಅನ್ನ ಹಾಕುವಂತಹ ಮಹತ್ಕಾರ್ಯವನ್ನು ಕೈಗಾರಿಕಾ ಸಂಸ್ಥೆಗಳು ಮಾಡುತ್ತಿವೆ. ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಮೂಲಕ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲೂ ಕೈಜೋಡಿಸಿವೆ ಎಂದು ಶ್ಲಾಘಿಸಿದರು.
ಕರ್ನಾಟಕ ವಾಣ ಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷೆ ಉಮಾ ರೆಡ್ಡಿ ಮಾತನಾಡಿ, ಕೈಗಾರಿಕೆ, ವಾಣ ಜ್ಯ ಸಂಸ್ಥೆಗಳಿಗೆ ಇ-ಖಾತಾ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಖಾತಾ ಪಡೆಯಲು ವಿಳಂಬವಾಗಿ ಅನೇಕ ಕೈಗಾರಿಕೆಗಳು ನೋಂದಣ ಆಗುತ್ತಿಲ್ಲ. ಅನೇಕರು ಉದ್ಯಮಕ್ಕಾಗಿ ಸಾಲ ಪಡೆದು ಪ್ರಕ್ರಿಯೆ ವಿಳಂಬದಿAದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತೆರಿಗೆಯಲ್ಲೂ ಕಾನೂನು ಉಲ್ಲಂಘನೆ ಆಗುತ್ತಿದೆ. ಹಾಗೂ ಕೈಗಾರಿಕೆಗಳ ಮೂಲಭೂತ ಸೌಕರ್ಯದ ಅಭಿವೃದಿಗೆ ಹೆಚ್ಚು ಒತ್ತು ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎ. ಅಶೋಕ್, ಟಿಡಿಸಿಸಿಐ ಅಧ್ಯಕ್ಷ ಪಾಂಡುರAಗ ಕರಂದವಾಡ, ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್, ಎಫ್ಕೆಸಿಸಿ ಹಿರಿಯ ಉಪಾಧ್ಯಕ್ಷರಾದ ಟಿ.ಸಾಯಿ ರಾಮ್ಪ್ರಸಾದ್, ಉಪಾಧ್ಯಕ್ಷ ಬಿ.ಪಿ.ಶಶಿಧರ್, ಮಾಜಿ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ತುಮಕೂರು ಸಂಸ್ಥೆ ಉಪಾಧ್ಯಕ್ಷ ಸಿ.ಎಸ್. ಸಂಜಯ್, ಕಾರ್ಯದರ್ಶಿ ಟಿ.ಎನ್. ಶ್ರೀಕಂಠಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ಎಸ್. ಉಮೇಶಯ್ಯ, ಖಜಾಂಚಿ ಜಿ.ಆರ್.ಎಸ್. ರವಿಶಂಕರ್, ನಿಕಟಪೂರ್ವ ಅಧ್ಯಕ್ಷರೂ ರಜತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಟಿ.ಜೆ. ಗಿರೀಶ್, ಸಂಯೋಜಕ ಜಿ.ಆರ್. ಸುರೇಶ್, ನಿಕಪೂರ್ವ ಅಧ್ಯಕ್ಷರಾದ ಸುರೇಂದ್ರ ಎ. ಶಾ, ಆರ್. ಶಿವಕುಮಾರ್, ಸೇರಿದಂತೆ ನಿಕಟಪೂರ್ವ ಅಧ್ಯಕ್ಷರು, ನಿರ್ದೇಶಕರು, ಸಮನ್ವಯ ಸಮಿತಿ ಸದಸ್ಯರು ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳ ವಾಣ ಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.