ದಿನಪತ್ರಿಕೆ ಕೊಳ್ಳಲಾಗದ ಶೋಷಿತರು ಮಾಧ್ಯಮ ಕ್ಷೇತ್ರದಲ್ಲಿ ಸಂಪಾದಕರಾಗಿರುವುದೇ ಆಶ್ಚರ್ಯ: ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್

ತುಮಕೂರು:-  ಪತ್ರಿಕೋದ್ಯಮದಲ್ಲಿ ಕ್ಷೇತ್ರದಲ್ಲಿ ಜಾಗತಿಕವಾಗಿ ಹಲವಾರು ಬದಲಾವಣೆ ಕಾಣುತ್ತಿದ್ದು ಯಾವ ವರ್ಗದವರು ಬೇಕಾದರೂ ಪತ್ರಿಕೋದ್ಯಮದಲ್ಲಿ ತೋಡಗಿಕೊಳ್ಳಬಹುದಾಗಿದ್ದು ಅದರಲ್ಲೂ ದಿನಪತ್ರಿಕೆಯನ್ನು ಕೊಂಡು ಓದಲಾಗದ ಸ್ಥಿತಿಯಲ್ಲಿರುವ ಶೋಷಿತರು‌ ಇಂದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪರ‌ ಸಾಧನೆ ಹಾಗೂ ಸಂಪಾದಕರಾಗಿ ಬೆಳೆಯುತ್ತಿರುವುದು ಆಶ್ಚರ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆದ ಅಮೃತವಾಣಿ 40ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಸಚಿವರು

ಯಾವ ಸಮುದಾಯ ಸಮಾಜದಲ್ಲಿ ಪತ್ರಿ ನಿತ್ಯ ಬದಕಲು ಹೋರಾಟ ನಡೆಸುತ್ತಿದೆ ಅಂತಹ ಸಮುದಾಯದ ವ್ಯಕ್ತಿ ಶಾಸಕರಾಗಿ ಪತ್ರಿಕೆಯೊಂದನ್ನ ಈ ಮಟ್ಟಕ್ಕೆ ಕಟ್ಟಿಬೆಳಸಿರೊವುದು ಶ್ಲಾಘನೀಯ ಎಂದರು.

   ಪತ್ರಿಕೆ ಕೊಂಡು ಓದಲು‌ ಸಾಧ್ಯವಿಲ್ಲದ‌ ಸಮುದಾಯದವರು  ಪತ್ರಿಕೆ ಮಾಡುವುದು ಸುಲಭದ ಮಾತಲ್ಲ  ಪತ್ರಿಕೆ ಉಳಿಸಿ ಬೆಳಸುವುದು ಅಂತಹ ಏಳು ಬೀಳು ಕಂಡ ಪತ್ರಿಕೋದ್ಯಮ‌ ಕ್ಷೇತ್ರ ಇಂದು ಆಶ್ಚರ್ಯ ಕ್ಷೇತ್ರವಾಗಿ ಬೆಳೆದಿದೆ ಪತ್ರಿಕೋದ್ಯಮ ಪ್ರಸ್ತುತ ಸಮಾಜದಲ್ಲಿ ಕಠಿಣವಾಗಿದ್ದು ಎಲೆಕ್ಟ್ರಾನಿಕ್ ಮಾಧ್ಯಮ ಯುಗದಲ್ಲಿ ಪತ್ರಿಕಾ ರಂಗ ಸಾಹಸ ಮಾಡುತ್ತಿದೆ ಈಗಿನ ಡಿಜಿಟಲ್ ಮಾಧ್ಯಮದ ಪ್ರಕಾರದಲ್ಲಿ ಪತ್ರಿಕೆ ಗಳು ಮಾಯಾವಾಗಿವೆ ಅದರಲ್ಲೂ ಪತ್ರಕರ್ತರು ನೈಜ್ಯ ಪತ್ರಿಕೋದ್ಯಮ ಬಿಟ್ಟು ಒಂದು ವರ್ಗ ಸಮುದಾಯದ ಸಮಾಜದ ಪರವಾಗಿರುವುದು ದುರದೃಷ್ಟಕರ ಸಂಗತಿ ಪತ್ರಕರ್ತರು ಪ್ರಶ್ನೆ ಮಾಡಿ ನೈಜವಾಗಿರುವ ಮಾಹಿತಿಯನ್ನು ಪಸರಿಸಬೇಕು ಎಂದರು.

ಅಂತಹದರಲ್ಲಿ ಗಂಗಹನುಮಯ್ಯ ಶೋಷಿತರಾಗಿ ಪತ್ರಿಕೆಯ ಜೊತೆ ಜೊತೆಗೆ ಜನ ಸಂಪಾದನೆ‌ ಮಾಡಿದ್ದರೆ

ದೇಶದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ

ಮಾಧ್ಯಮ ಕ್ಷೇತ್ರ ರಾಜಕೀಯ, ಸೇರಿದಂತೆ ಸಮಾಜವನ್ನು 

 ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಹೀಗಾಗಿ ಪತ್ರಕರ್ತರು ನೈಜತೆಯ ಜೊತೆಗೆ  ವಸ್ತುನಿಷ್ಠ ವಿಶ್ವಾಸಾರ್ಹ ಸುದ್ದಿಗಳನ್ನು ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

 ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ  ದೆಹಲಿ ವಿಶೇಷ ಪ್ರತಿನಿಧಿ ಮಾಜಿ ಸಚಿವ ಜಯಚಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಅಮೃತವಾಣಿ ದಿನಪತ್ರಿಕೆಯ ಸಂಪಾದಕ ಗಂಗಾ ಹನುಮಯ್ಯ ಉಪಸಂಪಾಧಕರಾದ ಕಮಲ ಗಂಗಾ ಹನುಮಯ್ಯ ಪತ್ರಿಕೆಯ ಮೇಲ್ವಿಚಾರಕರಾದ ಮಾರುತಿ ಗಂಗಾ ಹನುಮಯ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಅಮೃತವಾಣಿ ದಿನಪತ್ರಿಕೆ ಬಳಗದ ವತಿಯಿಂದ ಸಾಧನೆಗೈದ ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *