ಅಭ್ಯರ್ಥಿಗಳಿಗೆ ಸುಡು ಬಂಡೆಯಾದ ಬಿಡುಗಡೆಯಾಗದ ಬಿಜೆಪಿ ಪಟ್ಟಿ – ಅಕಾಂಕ್ಷಿಗಳ ಎದೆಬಡಿತ ಏರುಪೇರು!

ತುಮಕೂರು : ಬಿಜೆಪಿಯು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದೆ ಟಿಕೆಟ್ ಅಕಾಂಕ್ಷಿಗಳನ್ನು ಬೇಸಿಗೆ ಸುಡು ಬಂಡೆ ಮೇಲೆ ಕೂರಿಸಿ, ಬಿ.ಪಿ.ಯನ್ನು(ರಕ್ತದೊತ್ತಡ) ಏರುಪೇರು ಮಾಡಿ, ನಿದ್ದೆಗೆಡಿಸಿದೆ ಎನ್ನಲಾಗುತ್ತಿದೆ.

ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯು ಇದುವರೆವಿಗೂ ಟಿಕೆಟ್ ಅಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡದೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಟಿಕೆಟ್ ಘೋಷಣೆ ಮಾಡಿದ ನಂತರ ಟಿಕೆಟ್ ವಂಚಿತರು ಆ ಪಕ್ಷಗಳಿಂದ ಗೆಲ್ಲುವಂತಹ ಅಭ್ಯರ್ಥಿಗಳಾರಾದರು ಇದ್ದರೆ ಟಿಕೆಟ್ ನೀಡ ಬಹುದೆ ಎಂಬ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಾ ಇದೆ.

ಈ ಮಧ್ಯೆ ಗುಜರಾತಿನಂತೆಯೆ ಕರ್ನಾಟಕಲ್ಲೂ ಹಾಲಿ ಶಾಸಕರಿಗೆ 20ರಿಂದ 30 ಜನರಿಗೆ ಟಿಕೆಟ್ ಸಿಗುವುದು ಕಷ್ಟ ಎಂದು ಹೇಳುತ್ತಿರುವುದರಿಂದ ಕೆಲ ಶಾಸಕರ ಎದೆ ಬಡಿತ ಏರಿಳಿಕ್ಕೆ ಕಾರಣವಾಗಿದ್ದು, ಬೇಸಿಗೆ ಬಿಸಿಲು ಕಾದ ಬಂಡೆಯಂತೆ ಕಾಯುತ್ತಿರುವುದಕ್ಕೂ ಟಿಕೆಟ್ ತಪ್ಪುತ್ತದೆ ಅಣ್ಣ ಎಂದು ತಮ್ಮ ಬೆಂಬಲಿಗರೆ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಕೆಲವರಂತು ಕೆರಳಿ ವ್ಯಗ್ರರಾಗಿ ಯಾರು ಬರಬೇಡಿ ಹೋಗ್ರಿ ಪಿಶಾಚಿಗಳ ಎಂದು ರೇಗಾಡುತ್ತಿದ್ದಾರಂತೆ.

ಬೇರೆ ಪಕ್ಷದವರಂತೆ ಹೈಕಮಾಂಡ್ ಬಳಿಗೆ ಸಲೀಸಾಗಿ ಹೋಗಲು ಆಗದೆ, ಕೆಲ ನಾಯಕರ ಮೇಲೆ ತಮ್ಮ ಬೆಂಬಲಿಗರಿಂದ ಒತ್ತಡವನ್ನು ತಂದು ನಮಗೆ ಟಿಕೆಟ್ ಸಿಗುವಂತೆ ಹೈಕಮಾಂಡ್ ಬಳಿ ಒತ್ತಡ ತರಬೇಕೆಂದು ಹೇಳಿಸಲು ನಾಯಕರು ಯಾರ ಕೈಗೂ ಸಿಗದೆ ನೇರವಾಗಿ ದೆಲ್ಲಿ ನಾಯಕರ ಕಡೆ ಬೆರಳು ತೋರುತ್ತಿರುವುದರಿಂದ ಇಕ್ಕಳದಲ್ಲಿ ಸಿಕ್ಕಿ ನಲುಗುವಂತಾಗಿದೆ ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ ಬೇರೆ ಪಕ್ಷದಂತೆ ಸೂಟ್‍ಕೇಸ್, ಇನ್‍ಪ್ಲೂಯೆನ್ಸ್ ನಡೆಯದ ಕಾರಣ ಅಭ್ಯರ್ಥಿಗಳ ಬಿಪಿ ಏರಿಳಿತ ಕಂಡು ಬೇಸಿಗೆಯಲ್ಲಿ ತಣ್ಣಗಿರುವ ನೀರು ಸಹ ಬಿಸಿ ಎನ್ನುವಂತಾಗಿದೆಯಂತೆ.

ತುಮಕೂರು ಜಿಲ್ಲೆಯ ತುರುವೇಕೆರ, ಚಿ.ನಾ.ಹಳ್ಳಿ, ತುಮಕೂರು ಗ್ರಾಮಾಂತರ ಮತ್ತು ತಿಪಟೂರು ಹೊರತು ಪಡಿಸಿದರೆ ಉಳಿದ ಕಡೆ ಅಭ್ಯರ್ಥಿಗಳು ಟಿಕೆಟ್‍ಗೆ ತೀವ್ರ ಪೈಪೊಟಿ ನಡೆಯುತ್ತಿದ್ದು, ಇದರಲ್ಲಿ ಹಾಲಿ ಮತ್ತು ಪರಾಜಿತಗೊಂಡವರು ಇದ್ದು, . ಒಬ್ಬರಿಗಿಂತ ಒಬ್ಬರು ಟಿಕೆಟ್‍ಗೆ ಪೈಪೋಟಿ ನಡೆಸಿರುವುದರಿಂದ ಹೊಸ ಮುಖಗಳಿಗೆ ಹೆಚ್ಚು ಟಿಕೆಟ್ ನೀಡಲು ವರಿಷ್ಠರು ತೀರ್ಮಾನಿಸಿರುವುದರಿಂದ ಜಿಲ್ಲೆಯ ಕೆಲ ಹಾಲಿ ಮತ್ತು ಪರಾಜಿತರಿಗೆ ಟಿಕೆಟ್ ಸಿಗುವ ಸಂಭವ ಕಡಿಮೆ ಹಲವಾರು ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಟಿಕೆಟ್ ನೀಡುವ ಸಂಭವವಿದೆ ಎನ್ನಲಾಗುತ್ತಿದೆ.

ಇದರಿಂದ ಕೆಲವರ ಎದೆ ಬಡಿತ ಏರಿಳಿತವಾಗುತ್ತಿದ್ದು, ನಾಳೆ ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ಪರಿಶೀಲನೆಯ ನಂತರ ಏಫ್ರಿಲ್ 10ರಂದು ಸಂಜೆಯ ವೇಳೆಗೆ ಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
-ವೆಂಕಿ

Leave a Reply

Your email address will not be published. Required fields are marked *