ತುಮಕೂರು: ನಗರದ ಹೊರವಲಯದ ಶ್ರೀ ಅಹಿತಯ ಕ್ಷೇತ್ರ ಮಂದಾರಗಿರಿಯಲ್ಲಿ ಭಾರತದಲ್ಲೇ ಪ್ರಥಮವಾದ ವಿಶಿಷ್ಟ ವಾಸ್ತು ರಚನೆಯೊಂದಿಗೆ ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವ ಶರಣ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ ಮಾ. 8 ರಿಂದ 13 ರವರೆಗೆ 6 ದಿನಗಳ ಕಾಲ ನಡೆಯಲಿದೆ ಎಂದು ಶ್ರೀ ದಿಗಂಬರ ಜೈನ ಶ್ರೀ ಡಾ. ಪಾಶ್ರ್ವನಾಥಸ್ವಾಮಿ ಜಿನ ಮಂದಿರ ಸಮಿತಿಯ ಅಧ್ಯಕ್ಷ ನಾಗರಾಜು ಎಸ್.ಜೆ. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 8 ರಿಂದ ಆರಂಭವಾಗಲಿರುವ ಪಂಚಕಲ್ಯಾಣ ಮ ಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯ ರಂದ ಕೃಪೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಹಿಸುವರು. ಶ್ರೀ ಅಶೋಕ್ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಅಮೋಘ ಮಹಾರಾಜ್ ಮತ್ತು ವಿವಿಧ ಮಠಗಳ ಭಟ್ಟಾರಕ ಪಟ್ಟಾಚಾರ್ಯರು ಸಾನ್ನಿಧ್ಯ ವಹಿಸುವರು, ಭಾರತೀ ಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಸುರೇಂದ್ರ ಕುಮಾರ್, ಮುಂಬೈನ ರಾಕೇಶ್ ಜೈನ್, ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಎಸ್. ಜಿ. ನಾಗರಾಜ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾ.9ರಂದು ಗರ್ಭಕಲ್ಯಾಣ ಮಹೋತ್ಸವ, ಮಾ.10ರಂದು ಜನ್ಮ ಕಲ್ಯಾಣ ಮಹೋತ್ಸವ, ಮಾ.11ರಂದು ದೀಕ್ಷಾ ಕಲ್ಯಾಣ ಮಹೋತ್ಸವ, ಮಾ.12ರಂದು ಕೇವಲಜ್ಞಾನ ಕಲ್ಯಾಣ, ಮಾ.13ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿ ಕಾರ್ಯಕ್ರಮ ಜರುಗಲಿವೆ ಎಂದರು.
ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಅಜಿತ್ ಮಾತನಾಡಿ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿತವಾಗಿರೋ ಈ ಸಮವಶರಣವು 22500 ಚದರಡಿ ವಿಸ್ತೀಣ ಹೊಂದಿದೆ ಬಿಳಿ ಬಣ್ಣದ ಗ್ರಾನೈಟ್ ಶಿಲೆಯಲ್ಲಿ ನಿರ್ಮಾಣಗೊಂಡಿರುವ ಮೊದಲ ಸಮವಸರಣವಾಗಿದೆ. ಇದರ ಮಧ್ಯದಲ್ಲಿ ಆಶೋಕ ವೃತ್ತದ ಮೂಲಕಾಂಡವನ್ನು ಮೊದಲು ಸಿಮೆಂಟ್ನಲ್ಲಿ ನಿರ್ಮಿಸಿ, ಅನಂತರ ಇದರ ಕೊಂಬೆ ರೆಂಬೆಗಳನ್ನು ಉಕ್ಕಿನ ಪೈಪ್ ಮತ್ತು ತಗಡುಗಳನ್ನು ಬಳಸಿ ನಿರ್ಮಿಸಲಾಗಿದೆ. ಅಶೋ ವ್ಯಕ್ತದ ಪ್ರತಿ ಎಲೆಯ ದಪ್ಪ ಸುಮಾರು 2 ಮಿಲಿಮೀಟರ್ ಇದ್ದು ಸೇ ಪೇಯಂಟ್ ಮಾಡಿ, ಅದರ ಮೇಲೆ ಅರಗಿನ ಕೋಟಿಂಗ್ ಮಾಡಲಾಗಿದೆ, ಇದರಿಂದಾಗಿ ಈ ಎಲೆಗಳ ಬಣ್ಣ, ಸಾಕಷ್ಟು ವರ್ಷಗಳ ಕಾಲ ಹಾಗೆಯೇ ಇರುತ್ತದೆ ಎಂದು ತಿಳಿಸಿದರು.
ಪ್ರತಿ ಮಾನಸ್ತಂಭದ ಎತ್ತರ ಇಪ್ಪತ್ತೊಂದು ಅಡಿ, ಇದರ ಮೇಲೆ ಸುಂದರ ಕೆತ್ತನೆಗಳಿವೆ. ಅಶೋಕ ವೃತ್ತದ ಬುಡದಲ್ಲಿರುವ ನಾಲ್ಕು ಮಹಾವೀರ ತೀಥರ್ಂಕರರ ಪ್ರತಿಮೆಗಳು ಪ್ರತಿಯೊಂದು ಏಳು ಅಡಿ ಎತ್ತರವಿದೆ. ಈ ಸಮವಶರಣದ ಆವರಣದ ವ್ಯತ್ತಾಕಾರದ ಭಾಗದಲ್ಲಿ 250 ಇಂದ್ರ, ಇಂದ್ರಾಣಿ (ದೇವಂದ್ರ, ಅಣಿಂದ್ರ, ಬ್ರಹ್ಮ, ಇಂದ್ರ, ಸೌಧಮೇರ್ಂದ್ರ, ಕುಬೇರ ಇಂದ್ರ ಮಾತಾ ಪಿತಾ, ಶುಕ್ರ ಇಂದು 20 ವನ್ಯ ಪ್ರಾಣಿಗಳ ಪ್ರತಿಮೆಗಳು ಶೋತೃಗಳ ರೂಪದಲ್ಲಿವೆ ಎಂದರು.
ಎಂಟು ಭೂಮಿಗಳಂದ್ರ ಪರಿಗಣಿಸಲಾಗಿದ್ದು, ಅದ್ರಲ್ಲಿ ಚೈತ್ರ ಭೂಮಿ- ದೇವಸ್ಥಾನಗಳು, ಜಲ ಭೂಮಿ- ಕರೆಗಳು, ಲತಾ ಭೂಮಿ ಬಳ್ಳಿಗಳು, ಧ್ವಜ ಭೂಮಿ ಧ್ವಜಗಳು, ಮಂಟಪ ಭೂಮಿ ಮಂಟವಗಳು ಕಲ್ಪವೃಕ್ಷ ಭೂಮಿ- ವ್ಯಕ್ತಗಳು, ಭವನ ಭೂಮಿ-ಭವನಗಳು ಒಳಗೊಂಡಿವೆ. ಸಮವಶರಣದಲ್ಲಿ 12 ಸಭೆಗಳನ್ನು ಸ್ಥಾಪಿಸಲಾಗಿದ್ದು, ಅದ್ರಲ್ಲಿ ನಾಲ್ಕು, ಇಂದ್ರರ ಸಭೆ, ನಾಲ್ಕು ಇಂದ್ರಾಣಿ, ಒಂದು ಮುನಿಗಳ ಸಭೆ, 1 ಪ್ರಾಣಿಗಳ ಸಭೆ,1 ಆರ್ಯಿಕಾ ಮಾತಾಜಿಗಳ ಸಭೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಪಾಶ್ರ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಎಸ್. ಜೆ ನಾಗರಾಜ್, ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಆರ್ ಜಿ. ಸುರೇಶ್ ಇತರರಿದ್ದರು.