ಕೆ.ಎನ್.ರಾಜಣ್ಷನವರನ್ನು ತೇಜೋವಧೆ, ಅವಹೇಳನಕಾರಿ ಮಾಡುವುದನ್ನು ಕೂಡಲೆ ನಿಲ್ಲಿಸದಿದ್ದರೆ ಅಹಿಂದ ವರ್ಗಗಳು ಸುಮ್ಮನಿರುವುದಿಲ್ಲ ಎಂದು ತುಮಕೂರು ಹಿಂದುಳಿದ ವರ್ಗಗಳ ಒಕ್ಕೂಟ ಎಚ್ಚರಿಸಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ನಾಯಕರು, ಆಕಸ್ಮಿಕವಾಗಿ ಆಡಿದ ಮತೊಂದನ್ನು ಒಂದು ವರ್ಗ ಹಿಂದುಳಿದ ವರ್ಗಗಳ ನಾಯಕರಾದ ಕೆ.ಎನ್.ರಾಜಣ್ಷನವರನ್ನು ನಿಂದಿಸುವುದು, ಅಸಭ್ಯ ಮಾತುಗಳಿಂದ ಮಾತನಾಡುವುದು ಶೋಭೆ ತರವಂತಹವುದಲ್ಲ, ಇದನ್ನು ಹೀಗೆಯೆ ಮುಂದುವರೆಸಿದರೆ ಹಿಂದುಳಿದ ವರ್ಗಗಳ ಶಕ್ತಿಯೇನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜಣ್ಣನವರು ತಮ್ಮ ಆಕಸ್ಮಿಕ ಮಾತಿನಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ವಿಷಾದ ವ್ಯಕ್ತಪಡಿಸಿದ ನಂತರವೂ ಒಂದು ವರ್ಗವು ಕೆ.ಎನ್.ರಾಜಣ್ಣನವರನ್ನು ತೋಜೋವಧೆ ಮಾಡಲು, ರಾಜಕೀಯವಾಗಿ ಮುಗಿಸುವವುದಾಗಿ ಪ್ರತಿಭಟನೆ, ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಶೋಭೆ ತರುವುದಿಲ್ಲ ಎಂದರು.
ಕೆ.ಎನ್.ರಾಜಣ್ಣನವರು ಎಲ್ಲಾ ಸಮುದಾಯದ ನಾಯಕರಾಗಿ ಹೊರ ಹೊಮ್ಮಿರುವುದು ಸಹಿಸದ ಕೆಲವರು ರಾಜಕೀಯವಾಗಿ ಮುಗಿಸುತ್ತೇವೆ ಎನ್ನುತ್ತಿರುವವರಿಗೆ ಹಿಂದುಳಿದ ವರ್ಗಗಳು ಇದ್ದಾವೆ ಎಂಬುದನ್ನು ಮಾಡಿ ತೋರಿಸಬೇಕಾಗುತ್ತದೆ ಎಂದರು.
ಇಷ್ಟೇ ಅಲ್ಲದೆ ದೇವೇಗೌಡರ ಕುಟುಂಬ ವರ್ಗದವರು ಸಹ ಕೆ.ಎನ್.ರಾಜಣ್ಣನವರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಬಾರದು, ಈ ಜಿಲ್ಲೆಯಿಂದ ಹಿಂದುಳಿದ ವರ್ಗಗಳ ಬೆಂಬಲದಿಂದ 1994ರಲ್ಲಿ 9 ಜನ ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದರಿಂದ ದೇವೇಗೌಡರು ಮುಖ್ಯಮಂತ್ರಿಯಾದರು, ಅದೇ ರೀತಿ 1996 ರಲ್ಲಿ ತುಮಕೂರಿನಿಂದ ಸಿ.ಎನ್.ಭಾಸ್ಕರಪ್ಪ, ಚಿತ್ರದುರ್ಗದಿಂದ ಕೋದಂಡರಾಮಯ್ಯ, ಚಿಕ್ಕಬಳ್ಳಾಪುರದಿಂದ ಆರ್.ಎಲ್.ಜಾಲಪ್ಪನವರನ್ನು ಗೆಲ್ಲಿಸಿದ್ದರಿಂದ ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಈ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಸಹಾಕಾರವಿಲ್ಲದೆ ರಾಜಕೀಯ ಇಲ್ಲ ಎಂಬುದನ್ನು ಅರ್ಥೈಸಿಕೊಳಲಿ ಎಂದ ನಾಯಕರು, ಇನ್ನು ಮುಂದೆ ಕೆ.ಎನ್.ರಾಜಣ್ಣನವರು ದೇವೇಗೌಡರ ಕ್ಷಮೆಯಾಚಿಸಿರುವುದರಿಂದ ಕೆ.ಎನ್.ಆರ್.ಅವರನ್ನು ತೇಜೋವಧೆ, ಅವಹೇಳನ, ಮಾಡಬಾರದು ಎಂದರು.
ಇಷ್ಟು ದಿನ ನಿಮ್ಮನ್ನು ಫಲ್ಲಂಘದಲ್ಲಿ ಹೊತ್ತಿದ್ದೇವೆ, ಈಗ ನಮಗೂ ಫಲ್ಲಂಘದಲ್ಲಿ ಕೂರವ ಆಸೆ ಬಂದಿದೆ, ಅದನ್ನು ಕೇಳುವುದು ತಪ್ಪೆ, ನಮಗೂ ಸಂವಿಧಾನ ಅವಕಾಶಗಳನ್ನು ನೀಡಿ ಎಂದು ಕೇಳುತ್ತಿದ್ದೇವೆ.
ನಮ್ಮ ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದರೆ ಬೀದಿಗೆ ಇಳಿಯ ಬೇಕಾದಿತು ಎಂದು ಹಿಂದುಳಿದ ವರ್ಗ ಎಚ್ಚರಿಸಿತು.
ಪತ್ರಿಕಾಗೋಷ್ಠಿಯಲ್ಲಿ ಆಡಿಟರ್ ಆರ್.ಸಿ.ಆಂಜಿನಪ್ಪ, ಧನಿಯಾಕುಮಾರ್, ಸಿಂಗದಹಳ್ಳಿ ರಾಜಕುಮಾರ್, ಹೆಚ್.ಎಂ.ಟಿ.ರೇವಣ್ಣಸಿದ್ದಯ್ಯ, ಕೊಟ್ಟಶಂಕರ್, ಪಿ.ಎನ್.ರಾಮಯ್ಯ, ಗಂಗಣ್ಣ, ಮಲ್ಲಿಕಾರ್ಜುನ ಯ್ಯ, ಪ್ರತಾಪ್, ನಾಗರಾಜು, ಮುಂತಾದವರಿದ್ದರು.