ಬೆಂಗಳೂರು : ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಇದರೊಂದಿಗೆ ಕಳೆದ ಐದು ದಶಕದ ಕನಸು ನನಸಾಗಿದೆ. ಸದ್ಯದ ಮಾಹಿತಿ ಪ್ರಕಾರ ಐದು ಗುಂಪುಗಳ ಬದಲಾಗಿ ಮೂರು ವರ್ಗವನ್ನು ಮಾಡುವುದಕ್ಕೆ ಸಚಿವ ಸಂಪುಟ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಆದರೆ ಅಲೆಮಾರಿ ಸಮುದಾಯಗಳನ್ನು ಸ್ಪರ್ಶ ಜಾತಿಗೆ ಸೇರಿಸಿ ಅವರನ್ನು ಬೀದಿಗೆ ತಳ್ಳಿ ತಬ್ಬಲಿ ಮಾಡಲಾಗಿದೆ. ಇದರಿಂದ ಬಾಂಡಲಿಯಿಂದ ಬೆಂಕಿಗೆ ಬಿದ್ದು ಸುಟ್ಟು ಹೋದ ಸ್ಥಿತಿ ಅಲೆಮಾರಿ ಜಾತಿಗಳದ್ದಾಗಿದೆ.
ಅಲೆಮಾರಿಗಳಿಗೆ ಅನ್ಯಾಯ ಮಾಡುವ ಮೂಲಕ ‘ಸಾಮಾಜಿಕ ನ್ಯಾಯ’ಕ್ಕೆ ಎಳ್ಳು ನೀರು ಬಿಟ್ಟ ಮುಖ್ಯಮಂತ್ರಿಗಳು.
ಬಲಾಢ್ಯರ ಮುಂದೆ ಮಂಡಿಯೂರಿ ಅತ್ಯಂತ ಶೋಷಿತ ಸಮುದಾಯಗಳಿಗೆ ಐತಿಹಾಸಿಕ ಅನ್ಯಾಯ ಮಾಡಿದ ಕಾಂಗ್ರೆಸ್.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಕಳೆದ ಐದು ದಶಕದ ಕನಸು ನನಸಾಗಿದೆ. ಸದ್ಯದ ಮಾಹಿತಿ ಪ್ರಕಾರ ಐದು ಗುಂಪುಗಳ ಬದಲಾಗಿ ಮೂರು ವರ್ಗವನ್ನು ಮಾಡುವುದಕ್ಕೆ ಸಚಿವ ಸಂಪುಟ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಮಾದಿಗ -6, ಹೊಲೆಯ-6, ಮತ್ತು ಸ್ಪರ್ಶ ಜಾತಿಗಳಿಗೆ -5 ಎಂದು ವಿಂಗಡನೆ ಮಾಡಿ ಅಲೆಮಾರಿಗಳಿಗೆ ಮೋಸ ಮಾಡಿ, ಬೀದಿ ಪಾಲು ಮಾಡಿದ್ದಾರೆ.
ವರದಿ ಸಲ್ಲಿಕೆ ಬಳಿಕ ಸೇರಿದದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಭೆ ಸೇರುವುದಕ್ಕೆ ಸಚಿವ ಸಂಪುಟ ಸಂಪುಟ ನಿರ್ಧಾರ ಮಾಡಿತ್ತು, ಅದರಂತೆ ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ ಎನ್ನಲಾಗಿದೆ. ಕೆಲವು ಮಂದಿ ಶಾಸಕರು ವರದಿಯನ್ನು ತಿರಸ್ಕಾರ ಮಾಡಿ ಮತ್ತೆ ಸರ್ವೆ ನಡೆಸುವುಂತೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಎರಡು ಕಡೆಯವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಹಲವು ಸಮುದಾಯದವರು ಮೀಸಲಾತಿಯನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೆ ಹೋಗುತ್ತಿದ್ದಾರೆ. ಮೀಸಲಾತಿಯ ಲಾಭವನ್ನು ಒಂದೇ ವರ್ಗದವರು ಉಣ್ಣುತ್ತಿದ್ದಾರೆ ನೈಜ ದಲಿತರಿಗೆ ಸರಿಯಾಗಿ ಮೀಸಲಾತಿ ಸಿಗುತ್ತಿಲ್ಲ, ದಲಿತರಲ್ಲದವರು ಕೂಡ ಪ.ಜಾತಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ ಅಂತಹವರನ್ನು ಪ.ಜಾತಿಯಿಂದ ಕೈಬಿಡಬೇಕು ಅಂತ ಮೂಲ ದಲಿತರ ಕಳೆದ ಐದು ದಶಕಗಳಿಂದ ಹಲವು ರೀತಿಯ ಹೋರಾಟವನ್ನು ನಡೆಸುತ್ತಿದ್ದರು, ಅದರಂಥೆ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಅಂದ ಹಾಗೇ ಸುಪ್ರಿಂಕೋರ್ಟ್ ಕೋರ್ಟ್ ಕೂಡ ಒಳಮೀಸಲಾತಿಯನ್ನು ಜಾರಿ ತರುವುದು ಆಯಾ ರಾಜ್ಯಗಳ ಕರ್ತವ್ಯ ಅಂತ ಹೇಳಿತ್ತು, ಆದಾದ ಬಳಿಕ ರಾಜ್ಯದಲ್ಲಿ ಒಳಮೀಸಲಾತಿಯ ಹೋರಾಟ ಇನ್ನೂ ಹೆಚ್ಚಾಗಿತ್ತು, ಇದಲ್ಲದೇ ಒಳಮೀಸಲಾತಿಯನ್ನು ಜಾರಿ ಮಾಡದೇ ಯಾವುದೇ ಸರ್ಕಾರಿ ನೇಮಕಾತಿಯನ್ನು ಮಾಡಿಕೊಂಡಿರಲಿಲ್ಲ. ಈಗ ಒಳಮೀಸಲಾತಿ ಜಾರಿಗೆ ತಂದಿರುವುದರಿಂದ ಇನ್ನೊಂದು ತಿಂಗಳಿನಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದ್ದಗಳ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ