ತುಮಕೂರು : ಕೆ.ಬಿ.ಸಿದ್ದಯ್ಯ ಪ್ರತಿಷ್ಠಾನ ವತಿಯಿಂದ ಕವಿ ದಿ|| ಕೆ.ಬಿ.ಸಿದ್ದಯ್ಯನವರ 72ನೇ ಹುಟ್ಟು ಹಬ್ಬವನ್ನು ಉಪ್ಪಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ ವಿತರಿಸುವ ಮೂಲಕ ಆಚರಿಸಲಾಯಿತು.
ಕೆ.ಬಿ.ಸಿದ್ದಯ್ಯನವರ ಮೊಮ್ಮಗಳಾದ ಸಂಹಿತಾ.ಸಿ. ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ತಾತತನವರು ಸಾಂಸ್ಕøತಿಕ ಲೋಕಕ್ಕೆ ನೀಡಿದ ಕೊಡಿಗೆಯನ್ನು ಅವರ ಹುಟ್ಟಿದ ದಿನದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಮೂಲಕ ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ.
ನಮ್ಮ ತಾತನವರು ಪ್ರತಿಯೊಬ್ಬರಿಗೂ ಅಕ್ಷರವೆಂಬುದು ದಕ್ಕಬೇಕೆಂದು ಅವರ ಕಾವ್ಯದ ಮೂಲಕ ಹೇಳಿದ್ದಾರೆ, ಮುಟ್ಟಬಾರದವನಾದ ನಾನು ಅಕ್ಷರವನ್ನು ಮುಟ್ಟಿ ಬಿಟ್ಟೆ ಎಂದು ಅವರೇ ಹೇಳಿದ್ದಾರೆ, ಇಂದಿಗೂ ಬಡ ಮಕ್ಕಳು ಅಕ್ಷರ ಕಲಿಯಲು ಅವರ ಬಡತನ ಕಾಡುತ್ತಿದ್ದು, ನಮ್ಮ ತಾತನವರು ಅಕ್ಷರ ಎಲ್ಲರೂ ಕಲಿಯಬೇಕೆಂಬ ಒತ್ತಾಸೆ ಈಡೇರಲಿ ಎಂದು ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೆ.ಬಿ.ಸಿದ್ದಯ್ಯನವರ ಮಗಳಾದ ಪಲ್ಲವಿ, ಡಾ||ಚನ್ನಂಜಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ ಮತ್ತು ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.