ತುಮಕೂರು : ಮಧ್ಯ ಮದ್ಯ ಪ್ರಾಚ್ಯದ ದೇಶಗಳ ನಡೆಯುತ್ತಿರುವ ಯುದ್ದದ ಪರಿಣಾಮ ಭಾರತದಲ್ಲಿ ಉಂಟಾಗಿರುವ ಅಡುಗೆ ಅನಿಲದ ಕೊರತೆ, ಪೆಟ್ರೋಲ್, ಡಿಸೇಲ್ ಸೇರಿದಂತೆ ಇಂಧನಗಳ ಬೆಲೆ ಹೆಚ್ಚಳ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ರೈತರು, ಕಾರ್ಮಿಕರು, ಹೊಟೇಲ್ ಉದ್ದಿಮೆದಾರರು,ಗೃಹಣಿಯರು ಸೇರಿದಂತೆ ಹಲವಾರು ವಲಯಗಳ ಜನರು ಅನುಭವಿಸುತ್ತಿರುವ ಸಂಕಟಗಳನ್ನ ಕ್ರೂಢೀಕರಿಸಿ, ಸರಕಾರ ಈ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ಮಧ್ಯ ಅವಲೋಕನ ನಡೆಸಿ ದೀರ್ಘವಾದ ಚರ್ಚೆಯ ನಂತರ ಅಧಿಕಾರಿಗಳಿಗೆ-ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈ ಬಗ್ಗೆ ಮನದಟ್ಟು ಮಾಡಲು ಕೊಂಡಿಯಾಗಿ ಕೆಲಸ ಮಾಡಲು ನಿರ್ಣಯಿಸಲಾಯಿತು ಎಂದು ಇಂದು ನಗರದ ಮಿಡಿಯಾ ಪಾರ್ಕ್ ಆವರಣದಲ್ಲಿ ವಿಶೇಷ ಸಭೆ ಕರೆಯಲಾಗಿತ್ತು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಮೀಡಿಯಾ ಪಾರ್ಕ್ ಆವರಣದಲ್ಲಿ ತುಮಕೂರು ನಾಗರಿಕ ವೇದಿಕೆ ಹಾಗೂ ಹಾಲಪ್ಪ ಪ್ರತಿಷ್ಠಾನದವತಿಯಿಂದ ದೇಶದ ಜನರು, ಅದರಲ್ಲಿಯೂ ಮಹಿಳೆಯರು ಎದುರಿಸುತ್ತಿರುವ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಹಾಗೂ ಎಲ್.ಪಿ.ಜಿ, ಸಿಎನ್ಜಿ ಕೊರತೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಜನರು ಆಗಮಿಸಿ, ತಮಗಾಗುತ್ತಿರುವ ತೊಂದರೆಯನ್ನು ವಿವರಿಸಿದ್ದಾರೆ.ವಾಣಿಜ್ಯ ಮತ್ತು ಮನೆ ಬಳಕೆ ಎರಡು ಸಹ ದೊರೆಯದಿರುವ ಬಗ್ಗೆ ಹೆಚ್ಚು ದೂರುಗಳು ಬಂದಿದ್ದು, ಇದಕ್ಕೆ ಸ್ಥಳದಲ್ಲಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು, ಅಯಿಲ್ ಕಂಪನಿಗಳ ಅಧಿಕಾರಿಗಳು ಸಹ ನಿಜಾಂಶವನ್ನು ಜನರಿಗೆ ತಿಳಿಸಿ,ನಾಗರಿಕರ ಸಹಕಾರ ಕೋರಿದ್ದಾರೆ.ಜನರಲ್ಲಿ ಉಂಟಾಗಿರುವ ಆತಂಕ ನಿವಾರಿಸುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದೆ ಎಂದರು.
ಬಹುತೇಕ ನಾಗರಿಕರು ಇಂಧನಗಳ ಕೊರತೆ ನೀಗಿಸಲು ಹಾಗೂ ಇದರ ಬಗ್ಗೆ ಇರುವ ಜನರ ಗೊಂದಲ ನಿವಾರಿಸಲು ಒಂದು ಸಹಾಯವಾಣಿಯ ಅಗತ್ಯವಿದೆ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.ಅಲ್ಲದೆ ಇಂಧನ ಬೆಲೆಗಳ ಹೆಚ್ಚಳದಿಂದ ಹೆಚ್ಚು ತೊಂದರೆಗೆ ಒಳಗಾಗುವ ಸಾಮಾನ್ಯ ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸಹಾಯವಾಣಿ ನೆರವಿಗೆ ಬರಲಿದೆ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ.ಈ ನಿಟ್ಟಿನಲ್ಲಿ ಆಯಿಲ್ ಕಂಪನಿಗಳು ಕಾರ್ಯಪ್ರವೃತ್ತರಾಗಬೇಕಾಗಿದೆ.ಅಡುಗೆ ಅನಿಲ ಸೇರಿದಂತೆ ಇಂಧನಗಳ ಕೊರತೆ ಕೇಂದ್ರ ಮತ್ತು ರಾಜ್ಯ ಸರಕಾರ ಎರಡು ಕೂಡ ಕಾರಣ ಎನ್ನುವಂತಹ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಿದ್ದೂ, ಸರಕಾರಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ತುಮಕೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸುಮತಿ ಮಾತನಾಡಿ,ಹಾಲಪ್ಪ ಪ್ರತಿಷ್ಠಾನದವತಿಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಮುಂಜಾಗ್ರತಾ ಕ್ರಮವಾಗಿ ಇಂತಹ ಸಂವಾದ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಚಾರವಾಗಿದೆ.ಜನರ ಗೊಂದಲಗಳನ್ನು ದೂರ ಮಾಡುವ ಮತ್ತು ಅಧಿಕಾರಿಗಳಿಗೆ ಜನರಿಗೆ ಜವಾಬ್ದಾರಿಯಾಗಿರಬೇಕೆಂಬ ಎಚ್ಚರಿಕೆ ಗಂಟೆ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು ಮೇಗಾ ಗ್ಯಾಸ್ ಎಜೆನ್ಸಿ ಯ ಪ್ರತಿನಿಧಿಗಳು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಗಂಗಹನುಮಯ್ಯ,ಎಸ್.ಷಪಿಅಹಮದ್, ಷಣ್ಮುಖಪ್ಪ,ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಗುರು ಪ್ರಸಾದ್, ಮತ್ತು ಬೀದಿಬಿದಿ ಅಹಾರ ಮಳಿಗೆಗಳ ಅಧ್ಯಕ್ಷರಾದ ರಾಜಶೇಖರ್,ಕೈಗಾರಿಕೆಗಳ ಸಂಘದ ಅಧ್ಯಕ್ಷ ಚಂದ್ರಶೇಖರ್, ಆಹಾರ ಮತ್ತು ನಾಗರಿಕ ಇಲಾಖೆಯ ದಿನೇಶ,ಕೃಷಿ ಅಧಿಕಾರಿ ಪುಟ್ಟರಂಗಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯ, ಸೇವಾದಳದ ಕಿರಣ್, ಗೋವಿಂದರಾಜು, ಕಾರ್ಯಕ್ರಮದ ಸಂಯೋಜಕರಾದ ದಿಲೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.