ಹೃದಯಾಘಾತ, ಹೃದಯ ಸ್ಥಂಬನ, ಹೃದಯ ಮಾಂಸಖಂಡ ಕೊಳೆಯುವಿಕೆ ಯಾಕೆ ಆಗುತ್ತದೆ..?..!

ಈಗ್ಗೆ ಮೂರು ದಿನಗಳ ಹಿಂದೆ ಚಿತ್ರ ನಟರೊಬ್ಬರು, ವೈದ್ಯರೊಬ್ಬರು ಹೃದಯ ಬಡಿತ ತಕ್ಷಣ ನಿಂತು ಸಾವನ್ನಪ್ಪಿದ್ದು ಮತ್ತೆ ಜನರನ್ನು ಭಯಕ್ಕೆ ದೂಡಿತು.

ಹೃದಯ ಸ್ಥಂಬನದಿಂದ ಕೆಲವೇ ನಿಮಿಷಗಳಲ್ಲಿ ಅಪ್ಪು ಎಂದು ಕರೆಯಲ್ಪಡುತ್ತಿದ್ದ ಪುನೀತ್ ರಾಜಕುಮಾರ್ ಮರಣ ಹೊಂದಿದ್ದು ಇಡೀ ದೇಶಕ್ಕೆ ಒಂದು ತರಹ ಬರ ಸಿಡಿಲು ಬಡಿದಂತಾಯಿತು. ಯಾವುದೇ ಕಾಯಿಲೆ ಇಲ್ಲದ, ಮಧುಮೇಹ, ಬಿಪಿಯಂತಹ ಕಾಯಿಲೆ ಇರದೆ ಆರೋಗ್ಯವಾಗಿದ್ದ ಪುನೀತ್ ರಾಜಕುಮಾರ್ ಬೆಳಿಗ್ಗೆ ತಮ್ಮ ಫ್ಯಾಮಿಲಿ ವೈದರ ಬಳಿ ಇಸಿಜಿ ಮಾಡಿಸಿದಾಗ ಹೃದಯ ಬಡಿತ ಸಾಮಾನ್ಯವಾಗಿಯೇ ಇತ್ತು, ಸುಸ್ತು ಎಂದು ಕಾರಿಗೆ ಬಂದು ತಮ್ಮ ಪತ್ನಿಯ ತೊಡೆಯ ಮೇಲೆ ಮಲಗಿದ ಅಪ್ಪು ವಿಕ್ರಮ್ ಆಸ್ಪತ್ರೆಗೆ ಬರುವ ಹೊತ್ತಿಗೆ ಹೃದಯ ಸ್ಥಂಬನದಿಂದ ಮರಣ ಹೊಂದಿದ್ದರು.

ಪುನೀತ್ ರಾಜಕುಮಾರ್ ಹತ್ತಿರ ಹಣವಿತ್ತು, ಆರೋಗ್ಯವೂ ಇತ್ತು, ಆದರೆ ಸಮಯವೇ ಇರಲಿಲ್ಲ ಎಂದು ಅವರ ಅಣ್ಣನವರಾದ ರಾಘವೇಂದ್ರ ರಾಜಕುಮಾರ್ ಹಲವಾರು ಸಲ ಹೇಳಿದ್ದಾರೆ.

ಇದಕ್ಕೂ ಮೊದಲು ಚಿರಂಜೀವಿ ಸರ್ಜಾ ತಮ್ಮ ತುಂಬು ಗರ್ಭಿಣಿ ಪತ್ನಿಯನ್ನು ಬಿಟ್ಟು ಇದ್ದಕ್ಕಿದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದರು, ಪುನೀತ್ ರಾಜ್ಕುಮಾರ್ (46): ಕನ್ನಡದ ಜನಪ್ರಿಯ ನಟ, ಸಿದ್ಧಾರ್ಥ್ ಶುಕ್ಲಾ (40): ಜನಪ್ರಿಯ ಬಾಲಿವುಡ್ ನಟ ಮತ್ತು ಬಿಗ್ ಬಾಸ್ ವಿಜೇತ.ಕೆ.ಕೆ. (ಕೃಷ್ಣಕುಮಾರ್ ಕುನ್ನತ್) (53): ಖ್ಯಾತ ಗಾಯಕ, ಲೈವ್ ಪ್ರದರ್ಶನದ ನಂತರ ನಿಧನರಾದರು.ರಾಜು ಶ್ರೀವಾಸ್ತವ (58): ಹಾಸ್ಯನಟ, ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು.ಚಿರಂಜೀವಿ ಸರ್ಜಾ (39): ಕನ್ನಡದ ಯುವ ನಟ, ಹೃದಯಾಘಾತದಿಂದ ಅಕಾಲಿಕ ನಿಧನ.ಸೌಂದರ್ಯ (40): ಖ್ಯಾತ ನಟಿ, ವಿಮಾನ ಅಪಘಾತಕ್ಕೂ ಮುನ್ನ ಹೃದಯಾಘಾತ.ರಿತುರಾಜ್ ಸಿಂಗ್: ಬಾಲಿವುಡ್ ನಟ.ದಿಲೀಪ್ ರಾಜ್ ಮತ್ತು ರಾಕೇಶ್ ಪೂಜಾರಿ: ಕನ್ನಡ ಧಾರಾವಾಹಿ ನಟರು.ಕವಿತಾ ಚೌಧರಿ: ಇವರೆಲ್ಲಾ ಜನಪ್ರಿಯತೆಯನ್ನು ಸೆಲೆಬ್ರಿಟಿಯ ಮೂಲಕ ಗಳಿಸಿದ್ದವರು. ದಿಲೀಪ್ ರಾಜ್ ಮರಣ ಹೊಂದಿದ ದಿನವೇ ತುಮಕೂರಿನ ಹೆಸರಾಂತ ಸ್ತ್ರೀ ರೋಗ ತಜ್ಞೆಯಾಗಿದ್ದ ನಾಗಪುಷ್ಪ ಹೃದಯ ಕಾಯಿಲೆಯಿಂದ ಮೃತ ಪಟ್ಟರು.

ಇದೇ ರೀತಿ ಸಾಮಾನ್ಯ ಜನರು ಅಲ್ಲಲ್ಲಿ ಬದುಕುವ ವಯಸ್ಸಿನಲ್ಲೇ ಹೃದಯಾಘಾತ, ಹೃದಯ ಸ್ಥಂಬನದಿಂದ ಹಠಾತನೆ ಮರಣ ಹೊಂದುತ್ತಿದ್ದಾರೆ. ಇವರಿಗೆ ಕಾಯಿಲೆಯಾಗಲಿ, ಕುಡುತವಾಗಲಿ, ಧೂಮಪಾನ, ದುಶ್ಚಟಗಳಾಗಲಿ ಇರಲಿಲ್ಲ.

ಯಾವಾಗಲೂ ಜನಪ್ರಿಯತೆ ಇವರ ಸುತ್ತ ಸುತ್ತುತಲೇ ಇತ್ತು, ಸಮಾಜದ ಒಳಿತಿಗೂ ಇವರು ಸಹಾಯ ಮಾಡುತ್ತಿದ್ದರು, ಯಾವುದೇ ವಿವಾದಗಳಿಲ್ಲದೆ ತಮ್ಮ ಪಾಡಿಗೆ ತಮ್ಮ ವೃತ್ತಿಪರತೆಯಲ್ಲಿ ತೊಡಗಿದ್ದವರು, ಒಂದು ತಿಂಗಳಿಗೆ, ಎರಡು ತಿಂಗಳಿಗೆ ತಮ್ಮ ಬಾಡಿಯನ್ನು ಐಟೆಕ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಸರ್ಟಿಫಿಕೇಟ್ ತಗೊಂಡು ನಗುತ್ತಾ ಬರುತ್ತಿದ್ದರು, ಇನ್ನೂ ಐವತ್ತು ದಾಟದ ಯುವಕರು ದಿಢೀರನೇ ಸಾವನ್ನಿಪ್ಪಿದ್ದು ಜನ ಸಾಮಾನ್ಯರನ್ನು, ಮಧ್ಯಮ ವರ್ಗದ ಜನರನ್ನು ತೀವ್ರ ಚಿಂತೆ ಮತ್ತು ತಮ್ಮ ಆರೋಗ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ.

ಯಾಕೆ ಹೀಗೆ ಆಗುತ್ತಾ ಇದೆ ಎಂದು ಜನ ಸಾಮಾನ್ಯರನ್ನು ಕೇಳಿದರೆ ಕೊರೋನಾ ಇಂಜಕ್ಷನ್ ಪರಿಣಾಮ ಸಾರ್, ಆ ಇಂಜಕ್ಷನ್ ತೆಗೆದುಕೊಂಡ ಮೇಲೆ ಇಲ್ಲದ ಕಾಯಿಲೆಗಳು ಬಂದವು, ಕೈ ಎತ್ತಲಾಗುವುದಿಲ್ಲ, ಕಾಲು ನೋವು, ಮಂಡಿ ನೋವು ಪ್ರಾರಂಭದ ಜೊತೆಗೆ ಬಿಪಿ, ಶುಗರ್ ಬಂದವು ಎಂದು ಹೇಳುತ್ತಾರೆ.

ವೈದರ ಪ್ರಕಾರ ಕೊರೋನಾ ಇಂಜೆಕ್ಷನ್‍ಗೂ ಈಗ ಹಠಾತ್ ಹೃದಯಾಘಾತಕ್ಕೂ ಸಂಬಂಧವಿಲ್ಲ, ಪ್ರಕೃತಿಯ ಮೇಲೆ ನಾವು ಅಂದುಕೊಂಡಿದಕ್ಕಿಂತ ಘಾಸಿಯನ್ನು ಮಾಡಿದ್ದೇವೆ, ಹಾಳು ಮಾಡಿದ್ದೇವೆ. ಯಾರಿಗೂ ಬಿಡುವು ಎಂಬುದೇ ಇಲ್ಲಾ, ಎಲ್ಲರೂ ಧಾವಂತ ಒತ್ತಡ, ಬೇಗ ಹಣ ಗಳಿಸಬೇಕು, ಆಧುನಿಕತೆಯನ್ನು ರೂಢಿಸಿಕೊಂಡು ನಾವು ಎಲ್ಲರಿಗೂ ಕಡಿಮೆ ಇಲ್ಲ ಎಂಬಂತ ಐಶರಾಮಿ ಜೀವನ ನಡೆಸಲು ಮುಂದಾಗ ನಮ್ಮ ಬದುಕಿನ ಮಿತಿಗಿಂತ ಗಳಿಸಲು ಮಾನಸಿಕ, ದೈಹಿಕವಾಗಿ ಹೆಚ್ಚು ಒತ್ತಡ ಕೊಡುತ್ತಿದ್ದು, ಮನುಷ್ಯನು ಕಲಿಷಿತಗೊಂಡಿರುವುದಲ್ಲದೆ, ಗಾಳಿ, ನೀರು, ಭೂಮಿ, ಆಹಾರವನ್ನು ಕಲುಷಿತಗೊಳಿಸಿರುವುದರಿಂದ ಮಾನಸಿಕ-ದೈಹಿಕ ಆರೋಗ್ಯ ನಮಗೆ ಗೊತ್ತಿಲ್ಲದೆ ಹದಗೆಡುತ್ತಾ ಇದೆ ಎನ್ನುತ್ತಾರೆ.

ಇದಲ್ಲದೆ ಮನುಷ್ಯನು ಮಾನವೀಯತೆ ಮತ್ತು ಒಳಿತಗಾಗಿ ಯೋಚಿಸದೆ ನೈತಿಕತೆ ಅಧಃಪತನದತ್ತ ನಮ್ಮ ಆಲೋಚನೆಗಳು ಆಧುನಿಕ ಜಗತ್ತಿನಿಂದ ಕಲಿತು ಎಲ್ಲವನ್ನೂ ನನ್ನದೇ ಎಂಬುದಲ್ಲದೆ ಪ್ರತಿಯೊಂದನ್ನು ಕಲುಷಿತಗೊಳಿಸಿ ತಾನು ಕಲುಷಿತಗೊಂಡಿರುವುದರಿಂದ ಬೆಳಕಿನ ವೇಗಕ್ಕಿಂತಲೂ ಆಧುನುಕತೆಯನ್ನು ರೂಢಿಸಿಕೊಳ್ಳಲು ಭ್ರಷ್ಟಚಾರ, ಲಂಚ, ಯುದ್ಧ ನೀತಿಗಳನ್ನು ಅನುಸರಿಸುತ್ತಿರುವುದಲ್ಲದೆ. ಪ್ರಪಂಚ ವಿಶಾಲವಾಗಿದ್ದರೂ ಈಗ ಜಾಲತಾದ ಮೂಲಕ ಅಣುವಿಗಿಂತಲೂ ಚಿಕ್ಕಾದಾಗಿ ಕ್ಷಣ ಮಾತ್ರದಲ್ಲಿ ವೇಗೋತ್ಕರ್ಷಕ್ಕೆ ಒಳ ಪಡುತ್ತಿರುವುದರಿಂದ ಆ ವೇಗಕ್ಕೆ ತಾನು ಚಲಿಸಬೇಕೆಂಬ ದುರಾಸೆ ಈಗ ಹೆಚ್ಚಾಗಿದೆ.

ಇಂತಹ ವೇಗೋತ್ಕರ್ಷ ಮಾನವನ ಹೃದಯ ಬಡಿತ ಹೆಚ್ಚಿಸುವುದಲ್ಲದೆ. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದಲ್ಲದೆ, ನಾನು ಅದನ್ನು ಗಳಿಸಲು ಏನು ಮಾಡಬೇಕು, ಹೇಗೆ ಗಳಿಸಬೇಕೆಂಬ ಒತ್ತಡಕ್ಕೆ ಸಿಲುಕಿ, ಊಟ, ನಿದ್ರೆಗಳನ್ನು ಕಳೆದುಕೊಂಡು ನಗು ಮತ್ತು ಅಳುವನ್ನು ಮರೆತು ಮನುಷ್ಯ-ಮನುಷ್ಯನ ಜೊತೆ, ತನ್ನ ಸುತ್ತಲ ಮರ-ಗಿಡ, ಪ್ರಾಣಿ-ಪಕ್ಷಿಗಳ ಜೊತೆ ಒಡನಾಟ, ಮಾತು, ಸಲುಗೆಯನ್ನು ಬಿಟ್ಟು ಸಿಟ್ಟು ಸೆಡವು ಮಾಡಿಕೊಂಡು ಆಲೋಚನಾ ಕ್ರಮವನ್ನು ಬದಲಾಯಿಸಿಕೊಂಡು ಭೂಮಿಯ ಜೊತೆಗಿನ ಸಂಬಂಧವನ್ನು ಕಳೆದುಕೊಂಡು ಆಧುನಿಕ ವಾಹನಗಳಲ್ಲಿ ಓಡಾಟ, ಆಧುನಿಕ ಸಲಕರಣೆಗಳು, ಮೊಬೈಲ್ ವೇಗಕ್ಕೆ ಮತ್ತು ಭೂಮಿ, ಚಂದ್ರ, ಸೂರ್ಯನ ತಿರುಗುವಿಕಗೆ ವಿರುದ್ಧವಾಗಿ ಚಲನೆಯನ್ನು (Velcity) ತಾನೇ ಸೃಷ್ಠಿಸಿಕೊಂಡಿರುವಾಗ ಮಾಂಸಖಂಡ ಹೊಂದಿರುವ ಹೃದಯಕ್ಕೆ ಮತ್ತು ಮೆದುಳಿಗೆ ಸಂದೇಶದ ಸಂಪರ್ಕವೇ ಇಲ್ಲದಂತಹ ಚಲನೆ ಈಗ ಸೃಷ್ಠಿಯಾಗಿದೆ.

ಯಾವಾಗ ಹೃದಯ ಮತ್ತು ಮನಸ್ಸಿಗೆ ಸಂಪರ್ಕ ಕಡಿತವಾಗುತ್ತದೋ ಆಗ ಹೃದಯ ತನ್ನ ಕಾರ್ಯವನ್ನು ಹೆಚ್ಚು ಮಾಡಿಕೊಳ್ಳಲು ಪ್ರಾರಂಭಿಸುತ್ತದೆ, ಮನಸ್ಸು ನೋಡು ಏನೋ ಆಗುತ್ತಾ ಇದೆ ಎಂದು ಸಿಗ್ನಲ್ ನೀಡಿದರೂ ಹಸಿರು ಸಿಗ್ನಲ್ ಬರುವುದನ್ನು ಕಾಯದೆ ರೆಡ್ ಸಿಗನಲ್ ನಲ್ಲೆ ಮುನ್ನುಗಿದಾಗ ಹೃದಯವು ಒತ್ತಡ ತಡೆಯಲಾರದೆ ಅದು ತನ್ನ ಕಾರ್ಯ ನಿಲ್ಲಿಸುವ ಮುನ್ನ ದೇಹಕ್ಕೆ ಸುಸ್ತು, ಎದೆಯಲ್ಲಿ ಉರಿ, ಆಗಾಗ ಎಡಗೈಯಲ್ಲಿ ನೋವು, ಎದೆಯಲ್ಲಿ ಛಳುಕು ಕಾಣಿಸಿಕೊಂಡರೂ ನಮ್ಮ ಮನಸ್ಸು ಅದಕ್ಕೆ ಸ್ಪಂದಿಸದೇ ನೀನು ನಾಳೆ ಕೋಟಿ ಗಳಿಸಬೇಕು, ದೊಡ್ಡ ಮನುಷ್ಯನಾಗಬೇಕು ಎಂಬ ಹುಮ್ಮಸಿನಲ್ಲಿ ಹೃದಯ ಹೇಳಿದನ್ನು ಮನಸ್ಸು ಕೇಳಿಸಿಕೊಳ್ಳುವಿದಿಲ್ಲ.

ಆಗ ಹೃದಯ ತನ್ನ ಕೆಲಸವನ್ನು ತಕ್ಷಣವಾದರೂ ನಿಲ್ಲಿಸಿ, ಹೃದಯ ಸ್ಥಂಬನಕೊಳಗಾಗಬಹುದು, ಹೃದಯಾಘಾತವಾಗಿ ಗೋಲ್ಡನ್ ಟೈಮ್ ಸಿಕ್ಕರೆ, ಆಸ್ಪತ್ರೆ ಸಿಕ್ಕರೆ ಉಳಿಯಬಹುದು, ಮೂರನೆಯದು ಹೃದಯದ ಸ್ನಾಯುಗಳು ನಮಗೆ ಗೊತ್ತಿಲ್ಲದೆ ಸಾಯುತ್ತಾ ಬರುತ್ತವೆ, ಈ ರೀತಿಯಾಗುವುದಕ್ಕೂ ಮನ್ಸೂಚೆ ಸಿಕ್ಕರೂ ಗ್ಯಾಸ್ಟ್ರಿಕ್, ಒತ್ತಡಕ್ಕೆ, ಖಾರದ ಪದಾರ್ಥ ತಿಂದಿದ್ದಕ್ಕೆ ಅಂತ ದುಡ್ಡು, ಐಶರಾಮಿ ಕಡೆ ಯೋಚಿಸಿದಾಗ ಹೃದಯದ ಸ್ನಾಯುಗಳು ಸತ್ತು ಹೋಗುತ್ತವೆ ಆಗ ಮನುಷ್ಯನ ಸಾವು ಖಂಡಿತವಾಗುತ್ತದೆ.

ಈಗ ನಗುವನ್ನು ಮರೆತು ಬಿಗುಮಾನವಾಗಿ ಗಾಳಿ, ನೀರು, ಭೂಮಿ, ಮನುಷ್ಯ ಎಲ್ಲವೂ ಕಲುಷಿತವಾಗಿರುವಾಗ ಒಳ್ಳೆಯತನ, ಒಳ್ಳೆಯ ಮನಸ್ಸು ಇಲ್ಲದಿರುವಾಗ ನಕ್ಕು ನಲಿಯಲು ಸಮಯವೇ ಇಲ್ಲ, ನನ್ನ ಮಕ್ಕಳು, ಹೆಂಡತಿ, ಗೆಳೆಯರು ಕೂತು ಮಾತನಾಡುವುದಿರಲ್ಲಿ ಕಷ್ಟು-ಸುಖ ಕೂಡ ಹೇಳಿಕೊಳ್ಳದಷ್ಟು ಹೃದಯ ಹೀನರಾಗಿರುವಾಗ ಹೃದಯ ಸಹ ಎಷ್ಟು ಅಂತ ಶಾಂತವಾಗಿರುಲು ಸಾಧ್ಯ ಅದಕ್ಕೂ ಮಾತು ಬೇಕು, ಪ್ರೀತಿ ಬೇಕು, ನಗು ಬೇಕು, ಅದರ ಸಂಕಟ ಏನು ಎಂಬುದನ್ನು ಅರಿಯಲು ಮನಸ್ಸು ಹೃದಯ ಮಾತನಾಡಬೇಕು ಇದು ಯಾವುದೂ ಆಗದೆ ವರ್ಕ್ ಔಟ್, ವ್ಯಾಯಾಮ, ಆರೋಗ್ಯದಿಂದ ಇದ್ದೇನೆ, ಕುಡಿಯುವುದಿಲ್ಲ, ತಿನ್ನುವುದಿಲ್ಲ, ದುಶ್ಚಟಗಳಿಲ್ಲ ಎಂದುಕೊಂಡು ಹೃದಯ ಮರೆತಾಗ ನನ್ನನ್ನೇ ಮರೆತಿದ್ದೀಯ ನಾನೇಕೆ ನಿನ್ನ ಜೊತೆ ಇರಬೇಕೆಂದು ಒಡೆದು ಹೋಗುಬಹುದು, ಕೊಳೆತು ಹೋಗುವುದು, ನಿಂತು ಹೋಗುವುದು ಮಾಡುತ್ತದೆ.

ನಮ್ಮ ಹಿರಿಯರು ನೂರಾರು ವರ್ಷಗಳಿಂದ ಕಾಡು, ಬೆಟ್ಟ, ಸೂರ್ಯ, ಚಂದ್ರ, ಭೂಮಿಯನ್ನು ದೇವರೆಂದು ಪೂಜಿಸುತ್ತಾ ಸಂರಕ್ಷಿಸುತ್ತಾ ಬಂದಿದ್ದರು. ಅವರೂ ದುಶ್ಚಟಗಳಿಗೆ ಬಲಿಯಾಗಿದ್ದೂ ಒಳ್ಳೆಯ ಆಹಾರ, ನೀರು, ಗಾಳಿ ಇದ್ದುದರಿಂದ ನೂರಾರು ವರ್ಷ ಬದುಕುತ್ತಿದ್ದರು, ನಗುತ್ತಿದ್ದರು.

ಈಗ ಅವುಗಳನ್ನೆಲ್ಲಾ ದಿಕ್ಕರಿಸಿ ಎಲ್ಲಾವನ್ನು ಕಳೆದುಕೊಂಡು ನ್ಯೂಕ್ಲಿಯರ್ ಬಾಂಬ್‍ನತ್ತ ಮುಖ ಮಾಡಿ ಇಡೀ ಜಗತ್ತನ್ನು ಆಳಬೇಕೆಂಬ ದುರಾಸೆಯಿಂದ ಮನುಷ್ಯ ತನ್ನ ಕ್ರೂರತನವನ್ನು ಪ್ರದರ್ಶಿಸಲು ಹೊರಟು ಸಾವನ್ನು ತಾನೆ ತಂದುಕೊಂಡು ಗಾಳಿ, ನೀರು, ಭೂಮಿ, ಸೂರ್ಯ, ಚಂದ್ರರನ್ನು ನಾವೇ ಸೃಷ್ಠಿಸಲ್ಲೆವು ಎಂಬ ಆಹಂ ಈಗ ಹೃದಯ ಹೊಡೆದು ಹೋಗುವುದರಿಂದ ಯಾವುದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ನೈತಿಕ ಹದಃಪತನಗೊಂಡಿರುವಾಗ ಕ್ಷಣ ನಗಬೇಕು, ಸಾಧ್ಯವಾದರೆ ಮನುಷ್ಯ-ಮನುಷ್ಯ ಸಂಬಂಧಗಳು ವೃತ್ತಿಪರತೆ ಬಿಟ್ಟು ನೈತಿಕತೆಯತ್ತ ಮುಖವಾಡಿ ಅಳು-ನಗುವನ್ನು ಸಮ ಚಿತ್ತದಿಂದ ಸ್ವೀಕರಿಸಿದಾಗ ಒಂದಷ್ಟು ದಿನ ಹೃದಯ ಒಡೆದು ಹೋಗದಂತೆ ಬುದ್ಧನಂನತೆ ನಗು ಕಾಣಲು ಸಾಧ್ಯವೇ ಎಂಬುದನ್ನು ಆಲೋಚನೆ ಮತ್ತು ಆರೋಗ್ಯಕ್ಕೆ ಒತ್ತು ನೀಡಲಿ ಎಂಬುದೆ ಒಂದು ಪ್ರೀತಿಯ ಮಗುವಿನಂತಹ ಜೋಗುಳದ ನಿದ್ದೆ ಎಲ್ಲರದೂ ಆಗಲಿ, ಇರುವಷ್ಟು ದಿನ ಇದ್ದುದರಲ್ಲಿ ಸಂತೋಷ ಪಡಿ, ದುಃಖ ಮರೆಯಿರಿ ಇಲ್ಲವೆಂಬುದನ್ನು ಮರೆತು, ಎಲ್ಲಾ ಇದೆ ಎಂಬುದನ್ನು ಹೃದಯಕ್ಕೆ ಹೇಳಿ ಹೃದಯ ಒಡೆದು ಹೋಗದಂತೆ ನೋಡಿಕೊಳ್ಳಿ ಹಿರಿಯ-ಕಿರಿಯ ಗೆಳೆಯರೆ, ಸೋದರರೆ, ಸೋದರಿಯರೆ ನನ್ನೆಲ್ಲಾ ಮಾನವ ಕುಲದ ಮನುಷ್ಯರೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *