ತುಮಕೂರು (ಮೈತ್ರಿನ್ಯೂಸ್ ಪತ್ರಿಕೆ) : ನಾಳೆ ಈ ರಾಜ್ಯದ 25ನೇ ಮುಖ್ಯಂತ್ರಿಯಾಗಿ ಡಿ.ಕೆ.ಶಿಕುಮಾರ್ ಅವರು ಪ್ರಮಾಣವಚನದ ಜೊತೆಯಲ್ಲಿ ಮೂರು ಹೊಸ ಮುಖಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮತ್ತು ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಐತಿಹಾಸಿಕ ದ್ರೋಹವನ್ನು ರಾಜ್ಯಕ್ಕೆ ನೀಡಿರುವ ಮತ್ತದೇ ಹದಿಮೂರು ಹಳೆ ಮುಖಗಳು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ ಅವರ ಬಿಗಿ ಪಟ್ಟು, ಹಠ, ನನ್ನ ಕೈ ಮೇಲಾಗಬೇಕೆಂಬುದು ಕೈ ಹೈ ಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿ ಕೊನೆಗೆ ಮೂವರು ಹೊಸಬರು ಸೇರಿದಂತೆ ಮತ್ತು ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿದ್ದ 11 ಮಂದಿ ಸಚಿವರಿಗೆ, ಇಬ್ಬರು ಉಪಮುಖ್ಯ ಮಂತ್ರಿಗಳು ಸೇರಿ ನಾಳೆ ರಾಜ್ಯಪಾಲರಾದ ಥ್ಯಾವಾರ್ ಚಂದ್ ಗ್ಲುಹೋಟ್ ಅವರು ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಇಂತಹ ಹಳಬರಿಗೆ ಅವಕಾಶ ನೀಡಿ, ರಾಜ್ಯದ ಅಭಿವೃದ್ಧಿಗೆ ಆಧ್ಯತೆ ನೀಡುವವರಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಸಚಿವರ ಪಟ್ಟಿಯನ್ನು ನೋಡಿದರೆ ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ನಾನು ಹೇಳಿದವರೇ ಸಚಿವರಾಗಬೇಕೆಂದು ಹೈ ಕಮಾಂಡ್ ಬಳಿ ಪಟ್ಟು ಹಿಡಿದು ಸಚಿರವನ್ನಾಗಿ ಮಾಡಿದ್ದು, ತಮ್ಮ ಸಚಿವ ಸಂಪುಟದಲ್ಲಿ ಅವರಿಗೆ ನಿಷ್ಠರಾಗಿದ್ದ ಮಂತ್ರಿಗಳ ಕೈ ಹಿಡಿಯುವಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿದ್ದ ಪ್ರಭಾವಿ ಮಂತ್ರಿಗಳು ಮತ್ತು ಹಿರಿಯರು, ಅನುಭವಿಗಳಾಗಿರುವುದರಿಂದ ಡಿ.ಕೆ. ಶಿವಕುಮಾರ್ ಯಾವುದೇ ಕಾರ್ಯಭಾರ ಮಾಡುವಾಗ ಈ ಸಚಿವರುಗಳ ಸಮ್ಮತಿಯಂತೆ ಮಾಡಬೇಕಾಗಿರುವುದರಿಂದ ಡಿ.ಕೆ ಶಿವಕುಮಾರ್ ಅಂದುಕೊಂಡ ಹೊಸ ಅಭಿವೃದ್ಧಿ ಕೆಲಸಗಳು, ರಾಜ್ಯದ ಜನತೆಗೆ ಹೊಸ ಯೋಜನೆಗಳು ಅಷ್ಟಾಗಿ ದೊರೆಯುತ್ತವೆ ಎಂಬುದು ಓಯಸಿಸ್ ನೆರಳಿನಂತೆಯಾಗಲಿದೆಯೇ ಎಂಬುದನ್ನು ನೋಡಬೇಕಾಗಿದೆ.

ಇದರಿಂದ ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಯಾದರೂ ಸರ್ಕರದ ಹಿಡಿತವನ್ನು ತಮ್ಮ ಕೈಯಲ್ಲೇ ಹಿಡಿದಿಟ್ಟುಕೊಳ್ಳುವಂತಹ ಚಾಣಕ್ಷ್ಯ ತೆಯನ್ನು ಮೆರದಿದ್ದಾರೆನ್ನಲಾಗುತ್ತಿದೆ.
ಇದಲ್ಲದೆ ತಮ್ಮ ಮಗನನ್ನು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವಂತೆ ಪ್ರಭಾವಿ ಖಾತೆ ಕೊಡಿಸುವುದರ ಮೂಲಕ ತಮ್ಮ ನಡೆಯೇನೆಂಬುದನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದಂತಿದೆ.

ಇನ್ನ ಎಪಿಸಿಸಿ ರಾಷ್ಟ್ರಾಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇನೂ ಮಾಜಿ ಮುಖ್ಯಮಂತ್ರಿಗಿಂತ ಭಿನ್ನವೇನಿಲ್ಲ, ಅವರೂ ಸಹ ತಮ್ಮ ಮಗನಿಗೆ ಮಂತ್ರಿ ಸ್ಥಾನ ಕೊಡಿಸುವ ಮೂಲಕ ಪ್ರಭಾವಿ ಖಾತೆ ಸಚಿವರನ್ನಾಗಿ ನೇಮಕವಾಗುವಂತೆ ನೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕುಂತಿಯ ಮಕ್ಕಳಿಗೆ ಅಂತು-ಇಂತು ರಾಜ್ಯಭಾರವಿಲ್ಲ ಎಂಬಂತೆ ಹೈಕಮಾಂಡ್ ಕೃಪೆ, ರಾಜ್ಯಕೀಯದ ಗಾಡ್ ಫಾದರ್‌ಗಳು ಇರದಿದ್ದರೆ ಜೀವನ ಪೂರ್ತಿ ಎಲ್ಲಾ ಪಕ್ಷದ ಪ್ರಭಾವಿ ನಾಯಕರ ಮಕ್ಕಳು, ಮೊಮ್ಮಕ್ಕಳು, ಹೆಂಡಿತಿಯರು, ಸೊಸೆಯರು ಅಧಿಕಾರದ ಗದ್ದಗೆಯಲ್ಲಿ ಭಾಜನಾಗಿರಬೇಕು ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಸಾಮಾನ್ಯ, ಶಾಸಕ, ಕಾರ್ಯಕರ್ತರು ಇವರಿಗೆ ಬೀಸಣಿಕೆ ಬೀಸುತ್ತಾ ಅವರು ಹಾಕುವ ಮೂರು ಕಾಸಿಗೆ ಬಾಯಿ ತೆರದುಕೊಂಡು, ಕೊನೆಗೆ ತಮ್ಮ ಕ್ಷೇತ್ರಕ್ಕೆ ಹೋಗಿ ಜನರಿಂದ ನಿನ್ನ ಮುಸುಡಿಗೆ ಮಂತ್ರಿನೇ ಆಗಲಿಲ್ಲ, ನಿಗಮ ಮಂಡಳಿಗೆ ಅಧ್ಯಕ್ಷನಾಗಲಿಲ್ಲ ಎಂದು ಬೈಸಿಕೊಂಡು, ಚುನಾವಣಾ ಕಾಲದಲ್ಲಿ ಈ ಪ್ರಭಾವಿ ನಾಯಕರುಗಳು ಶಾಸಕ ಸ್ಥಾನದ ಟಿಕೆಟ್‌ಗೆ ಹೈಕಮಾಂಡ್ ಇಷ್ಟು ಫಿಕ್ಸ್ ಆಗಿದೆ ಪೀಕು ಎಂದಾಗ ಕೊಡಲಾಗದೆ ಮನೆ ಕಡೆಗೆ ಸಪ್ಪೆ ಮೋರಿಯಿಂದ ಟವಲ್ಲು ಬೀಸಾಕಿ ನಡೆಯುವುದೊಂದೇ ಬಾಕಿ.

ಈಗಲಾದರೂ ಸರ್ಕಾರದಲ್ಲಿ ಹೊಸ ಮುಖಗಳು ಬಂದು ಸರ್ಕಾದ ಆಲೋಚನೆಗಳು, ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುವಂತಹ ಸಚಿವರು ಡಿ.ಕೆ.ಶಿ. ಸಚಿವ ಸಂಪುಟದಲ್ಲಿ ಇರುತ್ತಾರೆಂದರೆ ಸ್ಥಳೀಯ ಸಂಸ್ಥೆಗಳ ಪಂಚಾಯತ್ ಚುನಾವಣೆ ನಡೆಸಲು ಸುತರಾಂ ಒಪ್ಪದ, ಒಳ ಮೀಸಲಾತಿಗೆ ದ್ರೋಹ ಬಗೆದ, ರಾಜ್ಯದ ಜನತೆಯನ್ನು ಅಬಕಾರಿ, ತೆರಿಗೆ, ರೈತರಿಗೆ ವಿದ್ಯುತ್, ಗೊಬ್ಬರ, ಶಾಲಾ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಲು ಅಸಮರ್ಥರಾದ ಈ ರಾಜ್ಯದ ಜನರ ಆಶೋತ್ತಗಳನ್ನು ಗಾಳಿಗೆ ತೂರಿ ವೈಟ್ ಕಾಲರ್ ಸಂಸ್ಕೃತಿಯ ಮಾಸಲು ಮುಖದ, ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿರುವ ಹಿರಿಯರನ್ನೇ ಮತ್ತೇ ಸಚಿವರನ್ನಾಗಿ ಮಾಡಿರುವುದರಿಂದ ಡಿ.ಕೆ.ಶಿವಕುಮಾರ್ ಅಡಳಿತದಲ್ಲೂ ಹೊಸ ನೀರೀಕ್ಷೆಗಳಿಲ್ಲದೆ ಹೊಸ ವಿವಾದಗಳು, ಅಧಿಕಾರಕ್ಕಾಗಿ ಹಳೆ-ಹುಲಿ, ಹೊಸ ಹುಲಿ ಹೊಡೆದಾಡಿಕೊಂಡು ಚುನಾವಣೆಯ ವೇಳೆಗೆ ಸೋತು ಪಂಜರ ಸೇರಬಹುದೇನೋ ಎನ್ನಲಾಗುತ್ತಿದೆ.
ಇನ್ನೂ ಇಪ್ಪತ್ತ ಮೂರು ಸಚಿವ ಸ್ಥಾನಗಳನ್ನು ಶಾಸಕರಿಗೆ ಬೆದರುಗೊಂಬೆಯಂತೆ ತೋರಿಸಲು ಇಟ್ಟುಕೊಂಡಿದ್ದು, ಹಾಲಿ, ಮಾಜಿ ಮುಖ್ಯಮಂತ್ರಿಗಳು, ಹೈಕಮಾಂಡ್ ತಮ್ಮದೇ ಅಡಿಯಾಳಿಗುವವರೇ ಸಚಿವರಾಗಬೇಕೆಂದು ದಿನ ಬೆಳಗಾದರೆ ದೆಹಲಿ ದಂಡೆಯಾತ್ರಿಯಿಂದ ಆರು ತಿಂಗಳು ಸರ್ಕಾರ ಕೆಲಸ ಮಾಡದೆ ತಳ್ಳಿದರೆ, ಆರು ತಿಂಗಳ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ, ನಂತರ 2017ರಲ್ಲಿ ಚುನಾವಣೆಗೆ ಇನ್ನ ಒಂದು ವರ್ಷವಿದೆ ಎಂದು 30 ಜಿಲ್ಲೆಗಳಲ್ಲಿ ಸಾಧೆನಯ ಸಮಾವೇಶಗಳ ಮೂಲಕ ಗ್ಯಾರಂಟಿ ಗ್ಯಾರಂಟಿ ಎಂದು ಬಾಯಿ ಬಡಿದುಕೊಂಡು ಬರುವುದರಲ್ಲಿ ವಿಧಾನಸಭಾ ಚುನಾವಣೆ ಬಾಗಿಲಿಗೆ ಬಂದಿರುತ್ತದೆ.
ಹಾಗಾದರೆ ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರ, ಹೊಸ ಸಚಿವ ಸಂಪುಟ ಜನರನ್ನು ಮತ್ತಷ್ಟು ಸಂಕಷ್ಠಕ್ಕೆ ದೂಡಿ, ಬಡವ ಬಡವನಾಗಿಯೇ, ನಿರ್ಗತಿಕ ನಿರ್ಗತಿಕನಾಗಿಯೇ, ಅಭಿವೃದ್ಧಿ ಎಂಬುದು ಗಾಳಿ ಗೋಪುರವಾಗಿ, ರೈತ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ, ಯುವಕರು ಉದ್ಯೋಗ ಪಡೆಯದೆ, ದಿನಗೂಲಿ ಕಾರ್ಮಿಕರು ಕೂಲಿ ಸಿಗದೆ, ಕಾರ್ಮಿಕರಿಗೆ ಭದ್ರತೆ, ದುಡಿಯುವ ಸಮಯಕ್ಕೆ ತಕ್ಕ ಸಂಬಳ ಸಿಗದೇ ಹಸಿವು, ಬಾಯಾರಿಕೆ, ಬಡತನವನ್ನು ಶಾಶ್ವತವಾಗಿರುವಂತೆ, ಭ್ರಷ್ಟಚಾರ, ಲಂಚ, ಹೊಡೆಯುತ್ತಾ, ನಾಯಕರ ಮಕ್ಕಳು ನಾಯಕರಾಗುತ್ತಾ ಇರುವುದನ್ನು ಮಕ್ಕಳಿಗೆ ಚಂದಮಾಮ ತೋರಿಸಿ ಊಟ ಮಾಡಿಸಿದಂತೆ ಚುನಾವಣೆಯ ದಿನ ಮತದಾರ ಪ್ರಭುಗಳು ಇದ್ಯಾವುದನ್ನು ಅರ್ಥ ಮಾಡಿಕೊಳ್ಳಲು ಆಗದಂತಹ ಸ್ಥಿತಿಯಲ್ಲಿ ಇರುವಂತೆ ಇಟ್ಟಿರುವುದರಿಂದ ಕೊಟ್ಟ ಐನೂರಕ್ಕೋ, ಸಾವಿರಕ್ಕೂ ತಮ್ಮ ಹಕ್ಕಾಗಿರುವ ಮತವನ್ನು ದುಡ್ಡು ಕೊಟ್ಟವರಿಗೆ ಮೋಸ ಮಾಡಬಾರದು ಎಂದು ಮತ ನೀಡುವಂತೆ ಈ ರಾಜಕೀಯ ಮಹಾರಾಜರುಗಳು ಮಾಡುವುದನ್ನು ಈಗಲಾದರೂ ರಾಜ್ಯದ ಜನ, ಯುವಕರು, ಮಹಿಳೆಯರು ಅರ್ಥ ಮಾಡಿಕೊಳ್ಳದಿದ್ದರೆ, ಮತದಾರ ಪ್ರಭುಗಳೇ ಈ ಮಾಸಲು ಮುಖಗಳ ನಾಯಕರುಗಳ ವಿರುದ್ಧ ಧಂಗೇ ಏಳದಿದ್ದರೆ ನೀವೆಷ್ಟೇ ಬಾಯಿ ಬಡಿದುಕೊಂಡರೂ ಪ್ರಜಾಭಭುತ್ವ ರಾಷ್ಟ್ರ ದಲ್ಲಿ ಪ್ರಜಾ ಸರ್ಕಾರ, ಜನರ ಆಶೋತ್ತರ ಈಡೇರಿಸುವ ಸರ್ಕಾರ ಬರಲು ಸಾಧ್ಯವಿಲ್ಲ, ಜನರೇ ಈಗಲಾದರೂ ಎಚ್ಚೆತ್ತುಕೊಳ್ಳಿ, ನಿಮ್ಮ ಭಾಗ್ಯಗಳನ್ನು ನೀವೇ ನಿಮ್ಮ ಬಂಗಾರದ ತಟ್ಟೆಗಳಲ್ಲಿ ಇಟ್ಟುಕೊಂಡು ಊಟ ಮಾಡಿ, ಯಾರೋ ಕೊಡುವ ನಿರ್ಭಾಗ್ಯ ಭಾಗ್ಯಗಳನ್ನು ತೆಗೆದುಕೊಂಡು ಉಣ್ಣಲು, ಹಾಸಲು, ಕುಡಿಯಲು, ತಿನ್ನಲು ಮಲಗಲು ಸೂರು ಇಲ್ಲದಂತೆ ಇನ್ನೂ ಎಷ್ಟು ದಿನ ಸೂರ್ಯ-ಚಂದ್ರರು ಹುಟ್ಟಿ ನಮ್ಮ ಬದುಕು ಬಂಗಾರವಾಗುವುದೆಂದೆ ಕಾಯುತ್ತೀರ.

ಚುನಾವಣೆ ಸಂಧರ್ಭದಲ್ಲಿ ನಿಮ್ಮ ಮನೆ ಭಾಗಿಲೆಗೆ ಓಟು ಕೇಳಲು ಬಂದ ನುಮ್ಮ ಮತ ನೀಡಿ ಮಹಾರಾಜರನ್ನಾಗಿ ಮಾಡಿದ ಮಹಾಪ್ರಭುಗಳನ್ನು ಎಷ್ಟು ಸರ್ಕಾರಿ ಶಾಲೆ ನೀಡಿದ್ದೀರಿ, ಎಷ್ಟು ಸರ್ಕಾರಿ ಆಸ್ಪತ್ರೆ ನೀಡಿದ್ದೀರಿ, ಉದ್ಯೋಗ ನೀಡಿದ್ದೀರಿ, ರೈತರಿಗೆ ಬೆಳಕಾಗಿದ್ದೀರಿ, ಎಷ್ಟು ಜನ ಬಡವರಿಗೆ ಮನೆ ಕೊಟ್ಟಿದೀರಿ ಎಂದು ಕೊರಳ ಪಟ್ಟಿ ಹಿಡಿದು ಕೇಳಿ.
ಈ ಪ್ರಶ್ನೆಗಳಿಗೆ ಉತ್ತರ ಬರೆದು ಜಸ್ಟ್ ಪಾಸಾಗದಿದ್ದರೆ ಆತನನ್ನು ಫೇಲ್ ಮಾಡಿ ಪ್ರಜಾಪ್ರಭುತ್ವದಡಿ ಪ್ರಜೆಗಳಾದ ನೀವುಗಳೇ ಲಕ್ಷಾಂತರ ಜನ ಚುನಾವಣೆಗೆ ನಿಲ್ಲಿ, ಬದಲಾವಣೆಯ ಕಾಲದಲ್ಲಿ ಬದಲಾವಣೆ ಮಾಡಿ ಜನರ ಕೆಲಸ- ದೇವರ ಕೆಲಸ ಎಂದು ಮೂಕವಾಗಿ ನಿಂತಿರುವ ವಿಧಾನ ಸಭೆ ಎಂಬ ದೇವಸ್ಥಾನದಲ್ಲಿ ನೀವೇ ಪೂಜಾರಿಗಳಾಗಿ.

ಜ್ಯೋತಿಷ್ಯ, ನಾಡಿಮಿಡಿತ, ಮಠಾಧೀಶರು, ಶಾಸ್ತ್ರ ಹೇಳುವವರು, ತಮ್ಮಂದಿರ, ಒಡ್ಡೋಲಗದ ಮೂಲಕ ಇನ್ನು ಮುಂದೆ ಆಡಳಿತ ನಡೆಸುವುದರಿಂದ ಈ ರಾಜ್ಯದ ಅಭಿವೃದ್ಧಿ ಎಂದೂ ಜನಪ್ರತಿನಿಧಿಗಳಿಂದ ಗೆಲ್ಲದ, ಜನರ ಕಷ್ಟ ಸುಖಗಳನ್ನು ಕೇಳದ ಖಾವಿ-ಖಾದಿದಾರರಿಂದ ಈ ನಾಡಿನ ಸಾಮಾನ್ಯ ಮತದಾರ ಪ್ರಭುವಿನ ಕಣ್ಣೀರ ಕೋಡಿ ನದಿಯಾಗಿ ಸಮುದ್ರಕ್ಕೆ ಸೇರುತ್ತಿರುವಾಗ ಎಲ್ಲಿಯ ದೊರೆ, ಎಲ್ಲಿಯ ಮತದಾರ ಎಂಬುದು ಕೆಲವೇ ದಿನಗಳಲ್ಲಿ ರಾಜ್ಯದ ಜನರ ಸಂಕಟ, ನೋವು, ಅವರ ದುಃಖ ದುಮ್ಮಾನಗಳು ಕಾರ್ಮೋಡವಾಗಿ ಕರಿಗಿ ಹೋಗಬಹುದು, ಆದರೆ ರಾಜಕೀಯದ ನಾಯಕರ ನಾಯಕತ್ವ ಬದಲಾಲಾವಣೆಗೆ ಮತದಾರ ಪ್ರಭುವಾದ ನೀವುಗಳು ಸಿಡಿದೇಳಿ, ಕಾರ್ಮೋಡವಾಗಬೇಕಾದ ಅನಿವಾರ್ಯತೆ ಈ ರಾಜ್ಯಕ್ಕಿದೆ.

ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಮಹಿಳೆಯರ ಕೋಟದಲ್ಲಿ ಲಕ್ಷ್ಮೀ ಹೆಬ್ಬಳ್ಕಾಕರ್ ಮಹಿಳಾ ಕೋಟದಲ್ಲಿ ಸಚಿವರಾಗಲಿದ್ದಾರೆ, ಇದರ ಹಿಂದಿನ ಮರ್ಮ ಅರಿಯ ಬೇಕಿದೆ. ಸಚಿವರ ಪಟ್ಟಿಗೆ ಮುದ್ರೆ ಒತ್ತಲು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಪ್ರಮುಖ ಸಭೆ ನಡೆದು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಗಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೊತೆ ಚರ್ಚಿಸಿ ಲಿಸ್ಟ್ ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ರೇಸ್ ನಲ್ಲಿರುವ ಪ್ರಮುಖ ನಾಯಕರು ಯಾರು?

ಈ ಬಾರಿಯ ಸಂಪುಟದಲ್ಲಿ ಪ್ರಾದೇಶಿಕ ಲೆಕ್ಕಾಚಾರಕ್ಕೆ ಮನ್ನಣೆ ಸಿಗಲಿದೆ ಎನ್ನಲಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಎಂ ಬಿ.ಪಾಟೀಲ ಡಾ.ಜಿ.ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ ಯಾಗಿ, ಪ್ರಿಯಾಂಕ್ ಖರ್ಗೆ, , ರಾಮಲಿಂಗರೆಡ್ಡಿ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಸತೀಶ್ ಜಾರಕಿ ಹೊಳಿ, ಕೆ.ಹೆಚ್.ಮುನಿಯಪ್ಪ ಅಥವಾ ಅಥವಾ ಅವರ ಮಗಳು ರೂಪಕಲಾ ಶ್ರೀಧರ್, ಎನ್. ಚೆಲುವರಾಯಸ್ವಾಮಿ, ಕೆ.ಜೆ.ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹೊಸದಾಗಿ ವಿಧಾನ ಪರಿಷತ್ ಸದಸ್ಯರಾದ .ಕೆ.ಹರಿಪ್ರಸಾದ್ ವಿಧಾನ ಸಭಾದ್ಯಕ್ಷರಾಗಿದ್ದ ಯು.ಟಿ. ಖಾರದ್, ಯತೀಂದ್ರ ಸಿದ್ದರಾಮಯ್ಯ ಮೊದಲ ಹಂತದಲ್ಲಿ ಸಚಿವರುಗಳಾಗಲಿದ್ದಾರೆ ಎನ್ನಲಾಗುತ್ತಿದೆ.
ಒಂದು ಸ್ಥಾನ ಲಿಂಗಾಯಿತರಿಗೆ, ಮತ್ತೊಂದು ಸ್ಥಾನ ಪರಿಶಿಷ್ಢ ಜಾತಿಯ ಬಲಗೈ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ, ಅಲ್ಪಸಂಖ್ಯಾತ ರು, ಎಡಗೈ ಸಮುದಾಯವನ್ನು ಮತ್ತೊಮ್ಮೆ ತೀವ್ರ ನಿಕೃಷ್ಠವಾಗಿ ಕಡೆಗಣಿಸಲಾಗಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ್, ನೀಡಿದ 15 ಜನರ ಲಿಸ್ಟ್ನಲ್ಲಿ 13 ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಧ್ಯಕ್ಕೆ ಮೊದಲ ಹಂತದ ಒಡಂಬಡಿಕೆ ಮಾತ್ರ ನಡೆಯಲಿದ್ದು, ಬಾಕಿ ಉಳಿದ ಸಚಿವ ಸ್ಥಾನಗಳನ್ನು ಜೂನ್ 18ರಂದು ನಡೆಯಲಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ನಂತರ ಭರ್ತಿ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಈಗಾಗಲೇ ಮಂಗಳಾವಾರ ತಡ ರಾತ್ರಿ ಖರ್ಗೆ ಮತ್ತು ವೇಣುಗೋಪಾಲ್ ಅವರು ಉಭಯ ನಾಯಕರು ನೀಡಿದ ಲಿಸ್ಟ್ ಅಕೈರುಗೊಳಿಸಿ ರಾತ್ರೋ-ರಾತ್ರಿ ಪ್ರಕಟಿಸಿ ದೇಹಲಿಯಲ್ಲಿರುವ ಶಾಸಕರುಗಳು ಸಪ್ಪೆ ಮೋರಿಯೊಂದಿಗೆ ರಾಜ್ಯಕ್ಕೆ ಹಿಂತಿರುಗಲಿದ್ದಾರೆ ಎನ್ನಲಾಗುತ್ತಿದೆ.
–ರಾಜಕೀಯ ವಿಶ್ಲೇಷಣೆ
-ವೆಂಕಿ, ತುಮಕೂರು

Leave a Reply

Your email address will not be published. Required fields are marked *