“ಬಿಗ್ ಬ್ರೇಕಿಂಗ್ ನ್ಯೂಸ್” ಭಿನ್ನಮತ ಸ್ಫೋಟದ ಭಯ, ರಾಹುಲ್ ಸಚಿವರ ಪಟ್ಟಿ, 3 ಗಂಟೆಯ ನಂತರ ರಾಜ್ಯಪಾಲರಿಗೆ ಸಲ್ಲಿಕೆ

ಬೆಂಗಳೂರು : ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ಪಟ್ಟಿ ಇದೀಗ ಬೆಂಗಳೂರಿಗೆ ಬಂದಿಳಿದ ರಾಹುಲ್ ಗಾಂಧಿ ಬಳಿ ಇದ್ದು, ಭಿನ್ನಮತದ ಸ್ಫೋಟದ ಭಯವೂ ಕಾಡುತ್ತಾ ಇದೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ತಡ ರಾತ್ರಿ ಸಚಿವರ ಪಟ್ಟಿ ಕೊನೆಗಳಿಸಿದ್ದು, ಈ ಹಿನ್ನೆಲೆಯಲ್ಲಿ ಖುದ್ದಾಗಿ ರಾಹುಲ್ ಗಾಂಧಿಯವರೇ ಪಟ್ಟಿಯನ್ನು ತಂದಿದ್ದಾರೆ ಎನ್ನಲಾಗಿದೆ.

ಹೊಸ ಮುಖಗಳು, ಹಳೆ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕಾಗಿರುವುದರಿಂದ ಭಿನ್ನಮತ ಸ್ಫೋಟಗೊಳ್ಳಬಹುದೆಂದು ಎಂದು ಪಟ್ಟಿಯನ್ನು ರಾಜ್ಯಪಾಲರಿಗೆ 3ಗಂಟೆಗೆ ನೀಡಲಾಗುದು ಎನ್ನಲಾಗುತ್ತದೆ.

ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಬರುತ್ತಿರುವ ಸಚಿವರ ಪಟ್ಟಿ ಊಹ-ಪೋಹ ಸಚಿವರ ಪಟ್ಟಿಯನ್ನು ಇದೂವರೆಗೆ ಹೊರಗೆ ಎಲ್ಲಿಯೂ ಲೀಕ್ ಮಾಡಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸಚಿವ ಪಟ್ಟಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ನೀಡಿರುವ ಪಟ್ಟಿಯನ್ನು ಸಮದೂಗಿಸಿ ಸಚಿವರ ಪಟ್ಟಿ ಮಾಡಲಾಗಿದ್ದು, ಇಬ್ಬರಿಗೂ ಸಮಾದಾನ ಆಗಲಿದೆ ಎನ್ನಲಾಗುತ್ತಿದೆ.

ಇನ್ನೊಂದು 2 ಗಂಟೆಯಲ್ಲಿ ಸಚಿವರ ಪಟ್ಟಿಯು ಬಿಡುಗಡೆ ಮಾಡಲಾಗುವುದು ಎನ್ನಲಾಗುತ್ತಿದೆ.

ಟಿವಿ ಮಾಧ್ಯಗಳಲ್ಲಿ ಸಚಿವ ಸ್ಥಾನ ಸಿಕ್ಕಿದೆ ಎಂದು ಖುಷಿ ಪಡುತ್ತಿರುವವರು 3 ಗಂಟೆಯ ನಂತರ ಖಿನ್ನತೆಗೊಳಪಡುಲಾಗುತ್ತಿದೆ ಎನ್ನಲಾಗುತ್ತಿದೆ. ಹಲವಾರು ಹಿರಿಯ ಸಚಿವರು ನಿರಾಸೆಗೊಳ್ಳಲಾಗುವರು ಎನ್ನಲಾಗಿದೆ.

ಇನ್ನೊಂದು ಮೂಲದ ಪ್ರಕಾರ ರಾಹುಕಾಲ ಕಳೆದ ನಂತರ ರಾಜಯಪಾಲರಿಗೆ ಪಟ್ಟಿ ನೀಡಲಾಗುದು ಎಂಬ ಸುದ್ದಿ ಇದೀಗ ಬಂದಿದೆ.

Leave a Reply

Your email address will not be published. Required fields are marked *