ರಾಜಕೀಯ ವಿಶ್ಲೇಷಣೆ
ಜೂನ್ 3ಬುಧವಾರ ಸಂಜೆ 4.15ರ ಅಮೃತ ಗಳಿಗೆಯಲ್ಲಿ ಅಜ್ಜಯ್ಯನ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಡಿ.ಕೆ ಶಿವಕುಮಾರ್ ಯುವ ಪಡೆ ಕಟ್ಟಿ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರುವ ವಿಷನ್ (VIssion) ಇಟ್ಟಿಕೊಂಡಿದ್ದು, ಹಿರಿಯರು, ವಯಸ್ಸಾದವರ ಬೆದರಿಕೆಗೆ, ಗೊಡ್ಡು ರಾಜೀನಾಮೆಗೆ ಸೊಪ್ಪಾಗುವುದಿಲ್ಲವೆಂದು ಅವರ ಆಪ್ತರ ವಲಯವು ಹಿರಿಯ, ವಯಸ್ಸಾದ ಸಚಿವರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಅವರು ಹಣ ಬಲ-ತೋಳ್ಬಲದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ, ಮುಖ್ಯಮಂತ್ರಿಯಾಗಿಲ್ಲ, ಕೋಟ್ಯಾಂತರ ಯುವಕರ, ಕಾಂಗ್ರೆಸ್ ಕಾರ್ಯಕರ್ತರ ಬೆವರಿನಿಂದ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದಿರುವುದರಿಂದ ಡಿ.ಕೆ.ಶಿವಕುಮಾರ್ ಅವರ ಮೊದಲ ಆಧ್ಯತೆ ಪಕ್ಷದ ಕಾರ್ಯಕರ್ತರು, ಯುವಕರಾಗಿದ್ದಾರೆ ಎಂದು ಶಿವಕುಮಾರ್ ಆಪ್ತರು ಕಟುವಾಗಿ ಸಂದೇಶವನ್ನು ರವಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್,ಯುವಕರಿಗೆ ಉದ್ಯೋಗದ ಭರವಸೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ‘ಭಾರತ ಜೋಡೋ ಯುವಕರ ಪಡ’ ಕಟ್ಟುವುದನ್ನು ಘೋಷಿಸಿ ಈಗಾಗಲೇ ಹೊಸ ಆಲೋಚೆನೆಯನ್ನು ಯುವ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಶಕ್ತಿಯನ್ನು ನೀಡಿದ್ದಾರೆ.
ನಲವತ್ತು ವರ್ಷಕ್ಕಿಂತ ಹೆಚ್ಚು ಅಧಿಕಾರ ಅನುಭವಿಸಿದ ಈ ಹಿರಿಯರು ಪಕ್ಷಕ್ಕೆ ಮತ್ತು ಅಧಿಕಾರಕ್ಕಾಗಿ ಮಾಡಿದ ಹೋರಾಟ, ಬೆಳವಣಿಗೆಯನ್ನಿಟ್ಟುಕೊಂಡು ಮಾತನಾಡಬೇಕು, ಹಿರಿಯುರು ಹೇಳುವ ಓಬಿರಾಯನ ಕಾಲದ ಭರವಸೆಗಳು, ಯೋಜನೆಗಳು 5ಜಿ ತಲೆಮಾರಿನ ಯುವಕರಿಗೆ, ವಿದ್ಯಾರ್ಥಿಗಳಿಗೆ ಗೇಲಿಯ ಮಾತುಗಳಂತೆ ಕಾಣಿಸುತ್ತಿದ್ದು, ಯಾರು ಯುವಕರ ಆಲೋಚನೆಗಳಿಗೆ ಉತ್ತೇಜನ, ಪ್ರೋತ್ಸಾಹ, ತಬ್ಬಿಕೊಳ್ಳುತ್ತಿದ್ದಾರೋ ಅವರನ್ನು ಬಾಚಿ ತಬ್ಬಿಕೊಳ್ಳಲು ಆಸೆಗಣ್ಣಿನಿಂದ ಹಾತೋರೆಯುತ್ತಿರುವಾಗ, ಮುದಕರು, ಕುರುಡರು, ಓಡಲಾಗದವರನ್ನು ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲೂ ಆಗುವುದಿಲ್ಲ, ಪಕ್ಷವನ್ನೂ ಕಟ್ಟಲಾಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಆಪ್ತರು, ಹಿತೈಶಿಗಳು ಖಡಕ್ಕಾದ ಸಂದೇಶವನ್ನು ಈಗಾಗಲೇ ರವಾನೆ ಮಾಡಿ ಎಚ್ಚರಿಸಿದ್ದಾರೆ.
ದೇಶದಲ್ಲಿ ಯುವ ಪಡೆಯನ್ನು ಕಟ್ಟಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕೈ ಪಕ್ಷದ ಹೈ-ಕಮಾಂಡ್ ಆಗಿರುವ ರಾಹುಲ್ ಗಾಂಧಿಯವರ ಕನಸ್ಸಿಗೆ ನೀರೆರದು ಬೆಳಸಲು ದೇಶದ ತುಂಬೆಲ್ಲಾ ಯುವಕರ ಪಡೆ, ಯುವಕರ ಚಿಂತನೆಗಳನ್ನು ಕಟ್ಟಬೇಕಾಗಿರುವುದರಿಂದ ವಯಸ್ಸಾದವರಿಗೆ ಗೌರವದಿಂದ ನಡೆಸಿಕೊಂಡಿದ್ದೇವೆ, ಸ್ಥಾನ ಮಾನಗಳನ್ನು ಕೊಟ್ಟಿದ್ದೇವೆ, ಈಗ ಅವರಿಗೆ ವಯಸ್ಸಾಗಿರುವುದರಿಂದ ವಿಶಾಂತ್ರಿ ಬೇಕಾಗಿರುವುದರಿಂದ ಕೊಟ್ಟಿರುವ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ರಾಜೀನಾಮೆಯೊಂದು ನೆಪವಾಗಿದೆ ಅಷ್ಟೇ, ಅವರು ಹೋಗುವುದಾದರೆ ಸಂತೋಷದಿಂದ, ಖುಷಿಯಾಗಿ ಕಳಿಸುತ್ತೇವೆಂದು ಡಿ.ಕೆ.ಶಿವಕುಮಾರ್ ಅವರ ಮನದಾಳವಾಗಿದೆ ಎಂದು ಅವರ ಆಪ್ತ ಸಚಿವರ, ಶಾಸಕರ ಮಾತುಗಳಾಗಿವೆ ಎನ್ನಲಾಗಿದೆ.
ವಿರೋಧ ಪಕ್ಷದವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ಪಕ್ಷಗಳು ಯುವ ಪಡೆಯಿಲ್ಲದೆ ಮಣ್ಣು ಮುಕ್ಕಲಿವೆ ಎಂಬುದನ್ನು ಮನಗಂಡು ಮತಿ ಭ್ರಮಣೆಗೊಳಗಾಗಿ ರಾಜ್ಯದಲ್ಲಿ ಗಲಭೆ ಎಬ್ಬಿಸಿಲು, ಪ್ರತಿಭಟನೆಗಳಿಗೆ, ವೀರೋಧ ಪಕ್ಷಗಳು ಅಧಿಕಾರಕ್ಕೆ ಬರಬೇಕೆಂಬುದಕ್ಕೆ ಡಿ.ಕೆ.ಶಿವಕುಮಾರ್ ಸರ್ಕಾರ ತಕ್ಕ ಪಾಠ ಕಲಿಸಲಿದೆ ಎಂಬ ಸಂದೇಶದಿಂದಲೇ ಮುಖ್ಯಮಂತ್ರಿಯಾಗಿರುವುದು ಎನ್ನಲಾಗುತ್ತದೆ.
ಈ ಭಯವಿರುವುದರಿಂದಲೇ ಯಾವ ಮುಖ್ಯಮಂತ್ರಿಗೂ ಶುಭಾಶಯ ಕೋರದ ಪ್ರಧಾನಿ ನರೇಂದ್ರ ಮೋದಿಯವರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿದಂತೆ ಕನ್ನಡದಲ್ಲೆ ಶುಭಾಶಯ ಕೋರುವ ಮೂಲಕ ಯುವ ಪಡೆ ನಮಗೂ ಒಂದಷ್ಟು ಇರಲಿ ಎಂದು ಕೇಳಿಕೊಂಡಂತಿದೆ ಎಂದು ಡಿ.ಕೆ.ಶಿ. ಆಪ್ತರು ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಂದೂ ಅಧಿಕಾರದ ಹಿಂದೆ ಬಿದ್ದವರಲ್ಲ, ಪಕ್ಕಕ್ಕಾಗಿ ಜೈಲಿಗೆ ಹೋಗಿದ್ದಾರೆ, ತಮ್ಮ ಶಾಸಕರಿಗಾಗಿ ಮುಂಬೈ ಬೀದಿಯಲ್ಲಿ ಕೈ ಕಟ್ಟಿ ನಿಂತಿದ್ದಾರೆ, ತನ್ನ ಪಕ್ಷವನ್ನು ಉಳಿಸುವುದಕ್ಕಾಗಿ ತಮ್ಮ ಕಡು ವಿರೋಧಿ ಹೆಚ್.ಡಿ.ಕುಮಾರಸ್ವಾಮಿಯವರ ಕೈ ಹಿಡಿದು ಕರೆ ತಂದು ಮುಖ್ಯಮಂತ್ರಿ ಮಾಡಿದ್ದಾರೆ, ಈಗ ರಾಜೀನಾಮೆ ನಾಟಕವಾಡುತ್ತಿರುವ ಹಿರಿಯರು ಪಕ್ಷಕ್ಕಾಗಿ, ಯುವಕರಿಗಾಗಿ ಯಾವ ತ್ಯಾಗ ಮಾಡಿದ್ದಾರೆಂದು ಬಹಿರಂಗ ಚರ್ಚೆಗೆ ಬರಲಿ, ಡಿ.ಕೆ.ಶಿವಕುಮಾರ್ ಅವರು ರಾಜಕೀಯದಿಂದ ನಿವೃತ್ತಿಯಾಗಿ ಮನೆಯಲ್ಲಿ ಇರಲಿದ್ದಾರೆಂದು ಡಿ.ಕೆ.ಶಿವಕುಮಾರ್ ಆಪ್ತರು ಸಾವಲಾಕಿದ್ದಾರೆ.
ಪಕ್ಷಕ್ಕಾಗಿ ಪ್ರಾಣವನ್ನೇ ಬಲಿ ಕೊಟ್ಟ ಇಂದಿರಾಗಾಂಧಿ, ರಾಜೀವ್ ಗಾಂಧಿ ಈ ದೇಶದ ಜನರ ಕಣ್ಣ ಮುಂದೆ ಇರುವಾಗ, ಡಿ.ಕೆ.ಶಿವಕುಮಾರ್ ಅವರೂ ಸಹ ಪಕ್ಷವನ್ನು ಅಧಿಕಾರಕ್ಕೆ ತರಲು ತಮ್ಮ ಪ್ರಾಣವನ್ನೇ ಬಲಿ ಕೊಡಲು ಸಿದ್ದಾರಿದ್ದಾರೆಂದು ಕಟು ಸಂದೇಶವನ್ನು ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಹಿರಿಯ ಸಚಿವರಿಗೆ, ಹಿರಿಯ ಶಾಸಕರಿಗೆ ಸಂದೇಶವನ್ನು ಪ್ರೀತಿಯಿಂದ ರವಾನಿಸಿದ್ದೇವೆ, ಇಷ್ಟಕ್ಕೂ ಅವರುಗಳು ಕತ್ತಿ-ಗುರಾಣಿ ಹಿಡಿದು ಬಂದರೆ ಯುದ್ಧ ಇನ್ನೇನಿದ್ದರೂ ರಣರಂಗದಲ್ಲಿ ನಡೆಯಲಿದೆ ಕಾಂಗ್ರೆಸ್ ಪಕ್ಕಕಾಗಿ, ಯುವಕರ ಪಡೆ ಕಟ್ಟಲು, ಯುವಕರಿಗೆ ಉದ್ಯೋಗ ನೀಡಲಿ, ರೈತರ, ಬಡವರ, ದಲಿತರ, ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರ ಹೊರೆಸಲು ಎಂದು ವಿನಮ್ರದ ಕೋರಿಕೆ ಎಂದು ತಮ್ಮ ಸಂದೇಶವನ್ನು ರವಾನಿಸಿದ್ದಾರೆನ್ನಲಾಗಿದೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಎಂದೂ ಯಾರಿಗೂ ದ್ರೋಹ ಬಗೆದಿಲ್ಲ, ಕನಕಪುರದ ಬಂಡೆಗೆ ಅಪ್ಪಳಿಸಿದವರು ಚೂರು ಚೂರಾಗಿ ಹೋಗಿದ್ದಾರೆ, ಅಧಿಕಾರ ಮುಖ್ಯವಲ್ಲ, ಪಕ್ಕಕ್ಕಾಗಿ ತ್ಯಾಗ ಮಾಡಲಿದ್ದಾರೆಂದು ಪ್ರೀತಿಯಿಂದ ಈ ಮನವಿ ಎಂದು ಅವರ ಆಪ್ತರು ಸಂದೇಶ ರವಾನಿಸಿರುವುದು ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದನ್ನು ಕಾದು ನೋಡ ಬೇಕಾಗಿದೆ.

-ವೆಂಕಟಾಚಲ.ಹೆಚ್.ವಿ.