ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಅಮೂಲ್ಯ ಪುಸ್ತಕ ಪ್ರಕಾಶನದ ಸಹಯೋಗದಲ್ಲಿ ಡಾ.ನಾಗರಾಜು ಜಿ.ಬಿ ಬೈರೇನಹಳ್ಳಿ ಅವರ ‘ತಲೆಗೆ ಬಿದ್ದ ಏಟು’ ಕೃತಿ ಬಿಡುಗಡೆ ಸಮಾರಂಭವನ್ನು ಜು.5ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಕೃತಿ ಬಿಡುಗಡೆಗೊಳಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಹಾಗೂ ಲೇಖಕ ಚ.ಹ.ರಘುನಾಥ್, ಜಿಲ್ಲಾ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜ ಕೃತಿಯ ಕುರಿತು ಮಾತನಾಡುವರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾರಾಣಿ ಬಗ್ಗನಡು, ಅಮೂಲ್ಯ ಪುಸ್ತಕ ಪ್ರಕಾಶನದ ಕೃಷ್ಣ ಚೆಂಗಡಿ, ತಲೆಗೆ ಬಿದ್ದ ಏಟು ಕೃತಿಯ ಲೇಖಕ ಡಾ.ನಾಗರಾಜು ಜಿ.ಬಿ ಬೈರೇನಹಳ್ಳಿ